Monday, November 7, 2022

10. ಮೊಗ್ಗಲಾನರ ಕೊನೆಯ ದಿನಗಳು

 10. ಮೊಗ್ಗಲಾನರ ಕೊನೆಯ ದಿನಗಳು



ಭಗವಾನರಿಗೆ ಆರೋಗ್ಯ ಅಸ್ವಸ್ಥತೆ ವೈಶಾಖ ಮಾಸದಲ್ಲಿ ಆರಂಭವಾಗುತ್ತದೆ .ಆದಾದ ಆರು ತಿಂಗಳಲ್ಲೇ ಸಾರಿಪುತ್ತ ಹಾಗೂ ಮೊಗ್ಲಾಲಾನ ಇಬ್ಬರು ಕಾತರ್ಿಕ ಮಾಸದಲ್ಲಿ ಪರಿನಿಬ್ಬಾಣವನ್ನು ಪಡೆಯುತ್ತಾರೆ.ಅಂದರೆ ಕಾತರ್ಿಕ ಹುಣ್ಣಿಮೆಯಂದು ತಮ್ಮ 84ನೇಯ ವಯಸ್ಸಿನಲ್ಲಿ ಸಾರಿಪುತ್ತರು ಹಾಗೂ ಕಾತರ್ಿಕ ಅಮವಾಸೆಯಂದು ಮೊಗ್ಗಲಾನರು ಪರಿನಿಬ್ಬಾಣವನ್ನು ಪಡೆಯುತ್ತಾರೆ. ಅದಾದ 6 ತಿಂಗಳಲ್ಲೆ ಭಗವಾನರು ವೈಶಾಖ ಶುದ್ಧ ಪೌರ್ಣಮಿಯಂದು ತಮ್ಮ 80ನೇಯ ವಯಸ್ಸಿನಲ್ಲಿ ಪರಿನಿಬ್ಬಾಣವನ್ನು ಪಡೆಯುತ್ತಾರೆ.  ಅದರಲ್ಲಿ ಸಾರಿಪುತ್ತರು ತಾವು ಜನಿಸಿದ ಮನೆಯಲ್ಲಿಯೇ ಪರಿನಿಬ್ಬಾಣ ಪಡೆದರೆ ಮೊಗ್ಗಲಾನರು ದುರಂತಕ್ಕೆ ಒಳಗಾಗಿ ನಂತರ ಭಗವಾನರ ಸಮ್ಮುಖದಲ್ಲಿ ಪರಿನಿಬ್ಬಾಣ ಪಡೆಯುತ್ತಾರೆ. ಜೀವನದಲ್ಲಿ ಅವರಿಬ್ಬರು ಅಗಲದೇ ಇದ್ದರೂ ಪರಿನಿಬ್ಬಾಣದ ಸಮಯ, ಪ್ರದೇಶ, ಭಿನ್ನವಾಗಿತ್ತು.

    ಸಾರಿಪುತ್ತರ ಪರಿನಿಬ್ಬಾಣದ ನಂತರ ಮೊಗ್ಗಲಾನರು  ಭಗ್ಗರ ನೆಲದಲ್ಲಿ, ಮೊಸಳೆಯ ಬೆಟ್ಟದ ಪಕ್ಕದಲ್ಲಿನ ಭೇಸಕಾಲ ಅರಣ್ಯದಲ್ಲಿನ ಮೃಗದಾವದಲ್ಲಿ (ಜಿಂಕೆಗಳ ಧಾಮ) ನಡಿಗೆಯ ಧ್ಯಾನದಲ್ಲಿ ತೊಡಗಿದ್ದರು. 

ಆ ಸಮಯದಲ್ಲಿ ಮಾರನು ಮೊಗ್ಗಲಾನರ ಹೊಟ್ಟೆಯಲ್ಲಿ ಪ್ರವೇಶಿಸಿದನು, ಇದು ಮೊಗ್ಗಲಾನರಿಗೆ ತಿಳಿದು ಆತನಿಗೆ ಹೊರಬರುವಂತೆ ಅಜ್ಞಾಪಿಸಿದರು. ಆತನಿಗೆ ಇದು ಆಶ್ಚರ್ಯವಾಯಿತು. ಏಕೆಂದರೆ ಸಾಧಾರಣ ಜನರಿಗೆ ಮಾರನು ಹೊಕ್ಕರೇ ತಿಳಿಯುತ್ತಿರಲಿಲ್ಲ.ನಂತರ ಆತನು ಅವರ ಬಾಯಿಯ ಬಳಿ ಬಂದು ನಿಂತನು ಆಗಲೂ ಸಹಾ ಮೊಗ್ಗಲಾನರು ಇದನ್ನು  ತಿಳಿದು ಆತನಿಗೆ ಹೊರಬರುವಂತೆ ಆಜ್ಞಾಪಿಸಿದರು. ಆಗ ಆತನು ಹೊರ ಬಂದು ಬಾಗಿಲ ಬಳಿ ನಿಂತನು. ಮೊಗ್ಗಲಾನರು ಆತನ ಮನಸ್ಸನ್ನು ಓದುವುದು ತಿಳಿದು ಆತನಿಗೆ ಆಶ್ಚರ್ಯವಾಯಿತು ಸಾಧಾರಣವಾಗಿ ಬೇರ್ಯಾರು ಆತನ ಮನಸ್ಸನ್ನು ಓದಲು ಆಗುತ್ತಿರಲಿಲ್ಲ. ಆಗ ಮೊಗ್ಗಲಾನರು ಆತನಿಗೆ ಹೀಗೆ ಹೇಳಿದರು. ಓ ಮಾರನೇ ಹಿಂದಿನ ಜನ್ಮಗಳ ಭಾಂಧವ್ಯದಲ್ಲಿ ನೀನು ನನ್ನ ತಂಗಿಯ ಮಗನಾಗಿರುವೇ. ನಾನು ನಿನ್ನ ತಾಯಿಯ ಅಣ್ಣ ದೂಸಿ ಮಾರನಾಗಿದ್ದೆನು ಎಂದು ಹೇಳಿ ತಮ್ಮ ಹಿಂದಿನ ಜನ್ಮದ ಚರಿತ್ರೆಯನ್ನು ವಿವರಿಸಿದರು. 

ಆ ಜನ್ಮವೂ ಕಕುಸಂಧ ಬುದ್ಧ ಭಗವಾನರ ಕಾಲದಾಗಿತ್ತು. ಆಗ ಮೊಗ್ಗಲಾನರೇ ಮಾರನಾಗಿದ್ದರು. ಆಗ ಅವರ ಹೆಸರು ದೂಸಿಮಾರನೆಂದು ಆಗಿತ್ತು. ಅವರ ತಂಗಿಯ ಹೆಸರು ಕಾಳಿ ಎಂದಾಗಿತ್ತು. ಆಕೆಯ ಮಗನೇ ಈಗಿನ ಮಾರನು. ಆ ಜನ್ಮದಲ್ಲಿ ದೂಸಿ ಮಾರನು ಸಂಘಕ್ಕೆ ಆಪಾರ ಕಿರುಕುಳ ನೀಡಿದ್ದನು. ಜನರಿಂದ ತೆಗಳಿಕೆ ಮಾಡಿಸುವುದು ಅಥವಾ ಹೊಗಳಿಕೆ ಮಾಡಿಸುವುದು ಇತ್ಯಾದಿ. ಅದರೆ ಭಗವಾನರ ಸಲಹೆಯಂತೆ ಮೆತ್ತ ಉಪೇಕ್ಖಗಳ ಪಾಲನೆಯಿಂದ ಸಂಘದಲ್ಲಿ ಎಲ್ಲ ಸರಿಹೋಯಿತು. ಆಗ ಕ್ರುದ್ಧನಾದ ದೂಸಿಮಾರನು ಒಮ್ಮೆ ಆಗಿನ ಅಗ್ರಶ್ರಾವಕರಾದ  ವಿಧುರರಿಗೆ ಹೊಡೆಯಲು ನಿರ್ಧರಿಸಿ ಒಬ್ಬ ಬಾಲಕನಲ್ಲಿ ಆವಾಹಿಸಿ ವಿಧುರರನ್ನು ಕಲ್ಲಿನಿಂದ ಅವರ ತಲೆಗೆ ಹೊಡೆದನು. ಅಗ್ರಶ್ರಾವಕರಾದ ವಿಧುರರ ತಲೆಗೆ ಗಾಯವಾಗಿ ರಕ್ತ ಹರಿಯಿತು. ಆಗ ಭಗವಾನರು ಹಿಂತಿರುಗಿ ಹೀಗೆ ಹೇಳಿದರು  ಈ ಮಾರನಿಗೆ ಮಿತಿಯೇ ತಿಳಿದಿಲ್ಲ. ಹಾಗೆ ನುಡಿದ ಕ್ಷಣವೇ ಮಾರನ ಅಸುರ ದೇಹವು ಕರಗಿ ಆ ಕ್ಷಣದಲ್ಲೆ ಆತನು ಭೀಕರವಾದ ನರಕದಲ್ಲಿ ಉತ್ಪನ್ನನಾದನು. ಆ ಒಂದು ನಿಮಿಷದ ಹಿಂದೆ ಆತನ ಅಡಿಯಲ್ಲಿ ಎಲ್ಲಾ ನರಕಗಳು ಸೇರುತ್ತಿದ್ದವು ಆತನು ಆ ಎಲ್ಲಾ ಕೀಳು ಲೋಕಗಳಿಗೆ ಅಧಿಪತಿಯಾಗಿದ್ದನು. ಅದರೆ ಈಗ ಅದೇ ನರಕದಲ್ಲಿ ಆತನು ಸಹಾ ಶಿಕ್ಷೆ ಅನುಭವಿಸುವವನಾದನು. ಹೀಗೆಯೇ ಸಹಸ್ರಾರು ವರ್ಷಗಳಷ್ಟು ಕಾಲ ಅತನು ಆ ನರಕದಲ್ಲಿದ್ದು ನಂತರ ಆತನು ದಶಸಹಸ್ರ ವರ್ಷಗಳ ಕಾಲ ಮಾನವಶರೀರ ಹಾಗೂ ಮೀನಿನ ಶಿರವುಳ್ಳವನಾಗಿ ಮತ್ತೆ ನರಕದ ದುಃಖಗಳನ್ನು ಅನುಭವಿಸಿದನು. 

ಹೀಗೆ ಅಗ್ರಶ್ರಾವಕರಿಗೆ ಕಿರುಕುಳ ನೀಡಿದರೆ ಏನಾಗುವುದು ಎಂದು ತಿಳಿಸಿ ಆತನಲ್ಲಿ ಭಯವನ್ನು ಹುಟ್ಟಿಸಿ ಕಳುಹಿಸಿದರು.


- ಂ0ಂ  

No comments:

Post a Comment

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...