9. ಮೊಗ್ಗಲಾನರ ಅಗಾಧ ಜ್ಞಾನ
9.1. ಮೊಗ್ಗಲ್ಲಾನ ಸುತ್ತ
ನಂತರ ಪರಿವ್ರಾಜಕ ವಚ್ಚಗೊತ್ತನು (ಗೊತ್ತ) ಪೂಜ್ಯ ಮೊಗ್ಗಲ್ಲಾನರ ಬಳಿಗೆ ಬಂದನು ಹಾಗು ಕುಶಲ ಕ್ಷೇಮಗಳ ವಿನಿಯಮ ಮಾಡಿಕೊಂಡನು. ನಂತರ ಒಂದಡೆ ಕುಳಿತು ಹೀಗೆ ಮಹಾಮೊಗ್ಗಲಾನರ ಬಳಿಯಲ್ಲಿ ಪ್ರಶ್ನಿಸಿದನು:
ಮಹಾ ಮೊಗ್ಗಲ್ಲಾನರೇ, ಇದು ಹೇಗೆ ಈ ಲೋಕವು ಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಮಹಾಮೊಗ್ಗಲಾನರೇ, ಈ ಲೋಕವು ಅಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಅಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕಕ್ಕೆ (ಅಂತ್ಯವಿದೆಯೇ) ಸೀಮಿತವಿದೆಯೇ? ವಚ್ಚ, ಭಗವಾನರು ಈ ಲೋಕವು ಸೀಮಿತವಾಗಿದೆ ಎಂದೂ ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕವೂ ಅನಂತವೇ? ವಚ್ಚ, ಭಗವಾನರು ಈ ಲೋಕವನ್ನು ಅನಂತವೆಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ಜೀವ (ಆತ್ಮ) ಹಾಗು ಶರೀರವೂ ಒಂದೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರ ಒಂದೇ ಎಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲ್ಲಾನರೇ, ಹಾಗಾದರೆ ಜೀವ ಮತ್ತು ಶರೀರ ಬೇರೆ ಬೇರೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರವು ಬೇರೆ ಬೇರೆ ಎಂದು ಘೋಷಿಸಿಲ್ಲ. ಸರಿ, ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವರೇ? ವಚ್ಚ, ಭಗವಾನರು ಮರಣದ ನಂತರ ತಥಾಗತರು ಇರುವರೆಂದು ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲವೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲ ಇದು ಸತ್ಯವೇ? ವಚ್ಚ, ಭಗವಾನರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲ ಮತ್ತು ಇಲ್ಲದೆಯೂ ಹೋಗುವುದಿಲ್ಲ ಎಂಬುದು ಸರಿಯೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ ಎಂದು ಸಹಾ ಘೋಷಿಸಿಲ್ಲ.
ಮತ್ತೆ ಮಹಾಮೊಗ್ಗಲಾನರೇ, ಯಾವ ಕಾರಣದಿಂದಾಗಿ ಹಾಗು ಯಾವ ಉದ್ದೇಶದಿಂದಾಗಿ ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ಉದಾಹರಿಸುವುದಾದರೆ, ಲೋಕವು ಶಾಶ್ವತ ಅಥವಾ ಅಶಾಶ್ವತ ಅಥವಾ ಅಂತ ಅಥವಾ ಅನಂತವೆಂದೂ ಅಥವಾ ಜೀವ ಶರೀರವೊಂದೇ ಅಥವಾ ಬೇರೆ ಬೇರೆ ಅಥವಾ ತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಮತ್ತು ಇರುವುದಿಲ್ಲ/ಇರುವುದಿಲ್ಲ ಇಲ್ಲದೇಯೂ ಇಲ್ಲ ಇಂತಹ ಪ್ರಶ್ನೆಗಳಿಗೆ ಏತಕ್ಕಾಗಿ ಸಮಣ ಗೋತಮರು ಉತ್ತರಿಸುತ್ತಿಲ್ಲ. ಯಾವ ಕಾರಣದಿಂದಾಗಿ ಯಾವ ಉದ್ದೇಶದಿಂದಾಗಿ ಹೀಗೆ ಅಘೋಷಿತವಾಗಿದ್ದಾರೆ?
ವಚ್ಚ, ಬುದ್ಧರ ಹೊರತು ಪರ ಪಂಗಡದವರ ಕಣ್ಣಿಗೆ ಹೀಗೆ ಅಭಿಪ್ರಾಯರಾಗುತ್ತಾರೆ. ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮ. ಹಾಗೆಯೇ ಕಿವಿಗೆ... ನಾಲಿಗೆಗೆ... ಮೂಗಿಗೆ... ಶರೀರಕ್ಕೆ... ಮನಸ್ಸಿಗೆ ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅನ್ಯ ಪಂಗಡದವರು ಈ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ... ಆದರೆ ವಚ್ಚ, ಯಾವಾಗ ತಥಾಗತರು ಅರಹಂತರು ಹಾಗು ಸಮ್ಮಾಸಂಬುದ್ಧರು ಕಣ್ಣಿನ ಬಗ್ಗೆ ಕಿವಿಗೆ ಮನಸ್ಸಿನ ಬಗ್ಗೆ ಅಭಿಪ್ರಾಯ ತಾಳುತ್ತಾರೆ. ಹೇಗೆಂದರೆ, ಇದು ನಾನಲ್ಲ, ಇದು ನನ್ನದಲ್ಲ ಹಾಗು ಇದು ನನ್ನ ಆತ್ಮವಲ್ಲ. ಆದ್ದರಿಂದಲೇ ತಥಾಗತರಿಗೆ ಈ ಬಗೆಯ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರಿಸಲಾರರು.
ಆಗ ಪರಿವ್ರಾಜಕ ವಚ್ಚಗೊತ್ತನು ತನ್ನ ಆಸನದಿಂದೆದ್ದು ಅಲ್ಲಿಂದ ಹೊರಟು ಭಗವಾನರ ಬಳಿಗೆ ಬಂದನು. ಅಲ್ಲಿ ಪರಸ್ಪರ ಕುಶಲ ಕ್ಷೇಮ ವಿನಿಮಯ ಮಾಡಿಕೊಂಡು ಭಗವಾನರೊಂದಿಗೆ ಹೀಗೆ ಕೇಳಿದನು: ಇದು ಹೇಗೆ ಗೋತಮರೇ, ಈ ಲೋಕವು ಶಾಶ್ವತವೇ? (ಇಲ್ಲಿ ಬರುವ ಸಂಭಾಷಣೆಯೆಲ್ಲವೂ ಮೊಗ್ಗಲಾನ ಹಾಗು ವಚ್ಚರೊಂದಿಗೆ ನಡೆದ ಸಂಭಾಷಣೆಯಂತೆಯೇ ಇರುತ್ತದೆ).
ವಚ್ಚ, ನಾನು ತಥಾಗತರು ಇರುವುದಿಲ್ಲ ಹಾಗೆಯೇ ಇಲ್ಲದೆಯೂ ಇಲ್ಲ ಎಂದು ಘೋಷಿಸಲಾರೆನು. ಏತಕ್ಕಾಗಿ ಗೋತಮಶಾಸ್ತ್ರರೇ, ಯಾವ ಕಾರಣಕ್ಕಾಗಿ ಹಾಗು ಯಾವ ಉದ್ದೇಶಕ್ಕಾಗಿ, ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸುವುದಿಲ್ಲ. ಉದಾಹರಿಸುವುದಾದರೆ ಈ ಲೋಕವು ಶಾಶ್ವತವೇ / ಅಶಾಶ್ವತವೇ? ಇತ್ಯಾದಿ... ವಚ್ಚ, ಪರಪಂಗಡದವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅವರಲ್ಲಿ ಅಂತಹ ಪ್ರಶ್ನೆಗಳಿರುತ್ತದೆ. ಹಾಗೆಯೇ ಅಂತಹುದು ಉತ್ತರಗಳು ಅವರಲ್ಲಿರುತ್ತದೆ. ಉದಾಹರಿಸುವುದಾದರೆ, ಈ ಲೋಕವು ಶಾಶ್ವತ, ಈ ಲೋಕವು ಅಶಾಶ್ವತ ಇತ್ಯಾದಿ. ಆದರೆ ವಚ್ಚ ತಥಾಗತರು ಸಮ್ಮಾಸಂಬುದ್ದರು ಅರಹಂತರಾಗಿರುವ ಅವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪರಿಗಣಿಸುತ್ತಾರೆ. ಆದ್ದರಿಂದಲೇ ತಥಾಗತರಲ್ಲಿ ಅಂತಹ ಪ್ರಶ್ನೆಗಳಾಗಲಿ ಅಥವಾ ಅಂತಹ ಉತ್ತರಗಳಾಗಿ ಉದಯಿಸುವುದಿಲ್ಲ.
ಆಶ್ಚರ್ಯಕರ ಗೋತಮ ಶಾಸ್ತ್ರರೇ, ಅದ್ಭುತಮಯ ಗೋತಮರೇ, ತಮ್ಮ ಶಿಷ್ಯನ ಹಾಗು ತಮ್ಮ ಹೇಳಿಕೆಯಲ್ಲಿ ಅರ್ಥದಲ್ಲಿಯಾಗಲಿ, ವ್ಯಂಜನದಲ್ಲಿಯಾಗಲಿ, ವಾಕ್ಯರಚನೆಯಲ್ಲಾಗಲಿ ಸ್ವಲ್ಪವೂ ವ್ಯತ್ಯಾಸವಿಲ್ಲ. ಹೇಗೆ ಅದ್ಭುತವಾದ ಗುರುವೋ ಹಾಗೆಯೇ ಪರಮಕುಶಲಿ ಶಿಷ್ಯನೂ ಸಹಾ. ತಮ್ಮಿಬ್ಬರಲ್ಲಿ ಯಾವುದೇ ಬೇಧವಿಲ್ಲದೆ ಒಂದೇರೀತಿಯಲ್ಲಿಯೇ ನುಡಿದಿದ್ದೀರಿ. ಈಗ ತಾನೇ ಗೋತಮರೆ, ನಾನು ಸಮಣ ಮಹಾಮೊಗ್ಗಲಾನರಲ್ಲಿಗೆ ಹೋಗಿದ್ದೆನು. ಅವರಲ್ಲಿಯೂ ಇದೇ ಪ್ರಶ್ನೆಗಳನ್ನು ಕೇಳಿದಾಗ ಅವರು ತಮ್ಮಂತೆಯೇ ಅಕ್ಷರ, ವಾಕ್ಯ, ಅರ್ಥ ವ್ಯತ್ಯಾಸವಿಲ್ಲದೆ ಇದೇ ರೀತಿಯಲ್ಲಿಯೇ ಉತ್ತರಿಸಿದ್ದರು. ಇದು ಆಶ್ಚರ್ಯಕರ, ಅದ್ಭುತಮಯ. ಹೇಗೆ ಅದ್ಭುತವಾದ ಶಾಸ್ತ್ರರೋ ಹಾಗೆಯೇ ಕುಶಲಿಯಾದ ಶಿಷ್ಯನೂ ಸಹಾ ಇದ್ದಾನೆ. ಯಾವುದೇ ರೀತಿಯಲ್ಲಿಯೂ ವಿರೋದಾಭಾಸವಿಲ್ಲದೆ ತಮ್ಮಂತೆಯೇ ತದ್ರೂಪಿಯಾಗಿ ಉತ್ತರಿಸಿದ್ದರು. ನಂತರ ವಚ್ಚನು ಅಲ್ಲಿಂದ ಹೊರಟನು.
9.2 ಅಸಾತ್ವಿಕರಿಗೆ ಉಪದೇಶ ಅಪ್ರಿಯವಾಗಿರುತ್ತದೆ
ಭಿಕ್ಖು ಅಸ್ಸಜಿ ಮತ್ತು ಪುನಭಾನುಕ ಮತ್ತು ಅವರ ಶಿಷ್ಯರು ಕಿಟಾಗಿರಿಯಲ್ಲಿ ತಂಗಿದ್ದರು. ಅವರು ಅಲ್ಲಿದ್ದಾಗ ಸ್ವಾರ್ಥಕ್ಕಾಗಿ ಹಣ್ಣಿನ ಗಿಡಗಳನ್ನು ನೆಟ್ಟರು. ಅಷ್ಟೇ ಅಲ್ಲ, ಭಿಕ್ಷುವಿನ ಎಷ್ಟೋ ನಿಯಮಗಳನ್ನು ಅವರು ಮುರಿದರು. ಹೀಗೆ ಅವರು ವಿಹಾರವನ್ನು ಗದ್ದಲಮಯ ಮಾಡಿ ಬೇರೆ ಭಿಕ್ಷುಗಳಿಗೆ ಅಶಾಂತಿ ತಂದರು.
ಈ ಭಿಕ್ಷುಗಳ ಬಗ್ಗೆ ಕೇಳಿದ ಭಗವಾನರು ಸಾರಿಪುತ್ತ ಮತ್ತು ಮೊಗ್ಗಲಾನರವರಿಗೆ ಅವರನ್ನು ಸರಿಹಾದಿಗೆ ತರಲು ಕಳುಹಿಸಿದರು. ಸಾರಿಪುತ್ತ ಮತ್ತು ಮೊಗ್ಗಲಾನರವರ ಬುದ್ಧಿವಾದ ಕೇಳಿದ ಬಹಳಷ್ಟು ಭಿಕ್ಷುಗಳು ಬದಲಾವಣೆ ಹೊಂದಿ ಶುದ್ಧ ಭಿಕ್ಷುಗಳಾದರು. ಕೆಲವು ತಮ್ಮಿಂದಾಗದು ಎಂದು ಪುನಃ ಗೃಹಸ್ಥರಾದರು. ಉಳಿದವರನ್ನು ಬಹಿಷ್ಕಾರ ಹಾಕಲಾಯಿತು. ಆ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ಹೇಳಿದರು.
ಬೋಧಿಸುವವನು ಬುದ್ಧಿ ಹೇಳಿ ಎಚ್ಚರಿಸುವವನು, ಅಸಭ್ಯತೆಗಳ ನಿವಾರಿಸುವವನು (ತಡೆಗಟ್ಟುವವನು) ಸಾತ್ವಿಕರಿಗೆ ಪ್ರಿಯನಾಗುವನು, ಅಸಾತ್ವಿಕರಿಗೆ ಅಪ್ರಿಯನಾಗುವನು
9.3 ಮಹಾ ಗೋಸಿಂಗ ಸುತ್ತ (ಸಂಕ್ಷಿಪ್ತವಾಗಿದೆ)
ಒಮ್ಮೆ ಭಗವಾನರು ಗೋಸಿಂಗನ ಸಾಲಾ ವೃಕ್ಷಗಳ ಉಧ್ಯಾನವನದಲ್ಲಿ ನೆಲೆಸಿದ್ದರು. ಆಗ ಅಲ್ಲಿ ಅಗ್ರ ಶ್ರಾವಕರಾದ ಸಾರಿಪುತ್ತ ಹಾಗೂ ಮೊಗ್ಗಲಾನರು ಮತ್ತು ಮಹಾಶಿಷ್ಯರಾದ ಮಹಾಕಸ್ಸಪನವರು , ಅನುರುದ್ಧರವರು, ರೇವತರವರು, ಆನಂದರವರು ಮತ್ತು ಇತರರು ಅಲ್ಲಿ ನೆಲಸಿದ್ದರು. ಆಗ ಈ ಮಹಾಶಿಷ್ಯರು ಮೊಗ್ಗಲಾನರ ಸಹಿತವಾಗಿ ಸಾರಿಪುತ್ತರ ಬಳಿಗೆ ಧಮ್ಮವನ್ನು ಆಲಿಸಲು ಬಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಮಿತ್ರರೇ ಈ ಗೋಸಿಂಗನ ಸಾಲಾ ವೃಕ್ಷಗಳ ಉಧ್ಯಾನವನವು ಅತ್ಯಂತ ರಮಣಿಯವಾಗಿದೆ, ಈ ಬೆಳದಿಂಗಳ ಬೆಳಕಿನಲ್ಲಿ ಸಾಲಾ ವೃಕ್ಷಗಳು ಅತಿ ಸುಂದರವಾಗಿ ಅರಳಿವೆ, ಸ್ವಗರ್ೀಯ ಸುಗಂಧವು ಎಲ್ಲೆಡೆ ಪ್ರಸರಿಸಿದೆ, ಇಲ್ಲಿ ಯಾವ ರೀತಿಯ ಭಿಕ್ಖುವು ಸಾಲಾ ವೃಕ್ಷಗಳ ಈ ಉಧ್ಯಾನವನಕ್ಕೇ ಹೊಂಬೆಳಗಿಸುವವನಾಗಿರುವನು ? ಈ ಪ್ರಶ್ನೆಗೆ ಎಲ್ಲರೂ ತಮ್ಮ ತಮ್ಮ ಪ್ರತಿಭೆ ಹಾಗೂ ಪ್ರಜ್ಞೆಗೆ ತಕ್ಕಂತೆ ಉತ್ತರ ನೀಡಿದರು. ನಂತರ ಮೊಗ್ಗಲಾನರ ಸರತಿಯು ಬಂದಾಗ ಅವರು ಈ ರೀತಿಯಲ್ಲಿ ಉತ್ತರಿಸಿದರು : ಪೂಜ್ಯ ಸಾರಿಪುತ್ತರೇ ಇಬ್ಬರು ಭಿಕ್ಖುಗಳು ಧಾಮ್ಮಿಕ ಚಚರ್ೆಯಲ್ಲಿ ತೊಡಗುತ್ತ ಪರಸ್ಪರ ಪ್ರಶ್ನಿಸುತ್ತ ಹಾಗೂ ಪರಸ್ಪರ ಉತ್ತರಿಸುತ್ತ ಇರುತ್ತಾರೆ. ಹೀಗೆ ಅವರ ಚಚರ್ೆಯು ಸಾಗುತ್ತಿರುತ್ತದೆ. ಈ ಬಗೆಯ ಭಿಕ್ಖುಗಳು ಈ ಉಧ್ಯಾನವನಕ್ಕೆ ಹೊಂಬೆಳಗಿಸುವವನಾಗಿರುವನು. ಎಂದು ಮೊಗ್ಗಲಾನರು ಉತ್ತರಿಸಿದರು.
9.4 ಅನುಮಾನ ಸುತ್ತ (ಪರಿಶೀಲನೆಯ ಸುತ್ತ)(ಸಂಕ್ಷಿಪ್ತವಾಗಿದೆ)
ಆ ಸಮಯದಲ್ಲಿ ಮಹಾಮೊಗ್ಗಲಾನರು ಭಗ್ಗರ ನಾಡಿನಲ್ಲಿ ಮೋಸಳೆಗಳ ಬೆಟ್ಟದ ಸಮೀಪದ ಬೇಸಕಾಲದ ಅರಣ್ಯದ ಜಿಂಕೆಗಳ ವನದಲ್ಲಿ ನೆಲಸಿದ್ದರು. ಆಗ ಅವರು ಭಿಕ್ಖುಗಳೊಂದಿಗೆ ಹೀಗೆ ಸಂಭೊಧಿಸಿದರು : ಆಯುಷ್ಮಂತರೇ.
ಪ್ರತಿಯಾಗಿ ಆ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು.
ಈಗ ಭಿಕ್ಖುಗಳು ಇನ್ನೊಬ್ಬ ಭಿಕ್ಖುವಿಗೆ ಬೋಧಿಸಲು ಅಹ್ವಾನಿಸುತ್ತಾರೆ. ಅದರೆ ಅವರಿಗೆ ಬೋಧಿಸಲು ಅತಿಕಠಿಣವಾಗಿರುತ್ತದೆ. ಯಾವ ಕಾರಣಕ್ಕಾಗಿ ಅವರಿಗೆ ಬೋಧಿಸಲು ಕಷ್ಟಕರವಾಗಿರುತ್ತದೆ. ?ಏಕೆಂದರೇ ಅವರು ಅಸಹéಿಷ್ಣುಗಳಾಗಿರುತ್ತಾರೆ.ಅವರು ಬೋಧನೆಗಳನ್ನು ಗೌರವದಿಂದ ಸ್ವೀಕರಿಸುವುದಿಲ್ಲ. ಹೀಗಾಗಿ ಆತನ ಪರಮಾರ್ಥ ಸಂಗಾತಿಗಳು ಆತನಿಗೆ ಬೋಧಿಸುವುದು ಅರ್ಹವೆಂದು ಭಾವಿಸುವುದಿಲ್ಲ.
ಅವರಲ್ಲಿನ ಯಾವ ಗುಣಗಳು ಅವರಿಗೆ ಭೋಧಿಸಲು ಅಡ್ಡಿಯಾಗುತ್ತದೆ. ಅವೆಂದರೇ ಮೊದಲಿಗೆ ಅವರಲ್ಲಿನ ಕೆಟ್ಟ ಬಯಕೆಗಳು. ಇದರಿಂದಾಗಿ ಅವರಿಗೆ ಬೋಧಿಸುವುದು ಅರ್ಹವೆಂದು ಭಾವಿಸುವುದಿಲ್ಲ .ಹಾಗೇಯೇ ಅವರಲ್ಲಿನ ಇತರ ದುಗರ್ುಣಗಳೆಂದರೇ ತಮ್ಮನ್ನು ಪ್ರಶಂಸಿಸಿಕೊಳ್ಳುವುದು ಹಾಗೂ ಇತರರನ್ನು ತೆಗಳುವುದು...... ಹಾಗೆಯೇ ಅವರು ಸ್ವಲ್ಪ ಸ್ವಲ್ಪಕ್ಕೂ ರೇಗುವ ಸ್ವಭಾವ ಹೊಂದಿರುತ್ತಾರೆ. ಅವರು ಕೋಪದಿಂದಿರುತ್ತಾರೆ.......ಕೋಪದಿಂದಾಗಿ ಹಠವಾದಿಗಳಾಗುತ್ತಾರೆ........ಹೀಗಾಗಿ ಕಟುನುಡಿಗಳನ್ನು ಆಡುವವರು ಆಗಿರುತ್ತಾರೆ.........ನಿಂದಿಸುತ್ತಾರೆ......ಅವರು ಪ್ರತಿಯಾಗಿ ನಿಂದಿಸುತ್ತಾರೆ......ವಾದವಿವಾದಗಳಾಗುತ್ತವೆ....ಅವರಿಗೆ ವಾದ ಮಾಡಲು ಅಸಮರ್ಥರಾಗಿ ಜಾರಲು ಯತ್ನಿಸುತ್ತಾರೆ...ಕೋಪವನ್ನು, ದ್ವéೇಷವನ್ನು ,ಕಹಿತನವನ್ನು ತೋರುತ್ತಾರೆ...ಅವರ ಮೇಲೆ ಆರೋಪ ಬಂದಾಗ ಅವರು ಸ್ವೀಕರಿಸುವುದಿಲ್ಲ......ಅವರು ಆಕ್ರಮಣಕಾರಿಯಾಗುತ್ತಾರೆ ಪರರನ್ನು ಕಡೆಗಣಿಸುವವರಾಗುತ್ತಾರೆ.....ಅಸೂಯೆ ಪಡುವವರು ಆಗುತ್ತಾರೆ......ಸ್ವಾಥರ್ಿಗಳಾಗುತ್ತಾರೆ.......ಹೀಗಾಗಿ ಅವರು ಮೋಸ ಮಾಡಲು ಹಿಂಜರಿಯುವುದಿಲ್ಲ........ಹಠವಾದಿಗಳಾಗಿ ಟೊಳ್ಳುತನ ಹೊಂದುತ್ತಾರೆ.....ಅವರು ತಮ್ಮ ಎಲ್ಲಾ ದೃಷ್ಟಿಕೋನಗಳಿಗೆ ಅಂಟಿಕೊಂಡು ಅದನ್ನು ಬಿಡಲು ಸಿದ್ಧರಿರುವುದಿಲ್ಲ,.... ಹೀಗಾಗಿ ಅವರನ್ನು ಭೋಧಿಸಿ ಸರಿದಾರಿಗೆ ತರುವುದು ಸುಲಭವಾಗಿರುವುದಿಲ್ಲ
ಇಲ್ಲಿ ಭಿಕ್ಖುಗಳು ಪರ ಭಿಕ್ಖುಗಳನ್ನು ತಿದ್ದಲು ಆಹ್ವಾನಿಸುವುದಿಲ್ಲ. ಆದರೂ ಅವರು ತಿದ್ದಿಕೊಳ್ಳಲು ಸುಲಭವಾಗಿರುತ್ತಾರೆ(ಸಿದ್ಧರಾಗಿರುತ್ತಾರೆ). ಅವರು ಪರರ ಯೋಗ್ಯ ಸಲಹೆಗಳನ್ನು ಸ್ವೀಕಾರ ಮಾಡುತ್ತಾರೆ. ಹಾಗೂ ಅವರ ಹಿತವಚನಗಳನ್ನು ಗೌರವದಿಂದ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರ ಪಾರಮಾರ್ಥ ಸಂಗಾತಿಗಳು ಅವರಿಗೆ ಬೋಧಿಸಲು ತಿದ್ದಲು ಅರ್ಹವೆಂದು ಬಾವಿಸುತ್ತಾರೆ, ಹಾಗೂ ಆ ಮನುಷ್ಯನು ನಂಬಿಕೆಯನ್ನು ಹಾಗೂ ಪುಣ್ಯವನ್ನು ಗಳಿಸುತ್ತಾನೆ.
ಅವರಲ್ಲಿನ ಯಾವ ಗುಣಗಳು ಅವರಿಗೆ ಬೋಧಿಸಲು ಸುಲಭವಾಗಿರುತ್ತದೆ. ಅವೆಂದರೇ ಮೊದಲಿಗೆ ಅವರಲ್ಲಿ ಕೆಟ್ಟ ಬಯಕೆಗಳು ಇರುವುದಿಲ್ಲ. ಇದರಿಂದಾಗಿ ಅವರಿಗೆ ಬೋಧಿಸುವುದು ಅರ್ಹವೆಂದು ಭಾವಿಸುತ್ತಾರೆ .ಹಾಗೇಯೇ ಅವರಲ್ಲಿನ ಇತರ ಗುಣಗಳೆಂದರೆ ತಮ್ಮನ್ನು ಪ್ರಶಂಸಿಸಿಕೊಳ್ಳುವುದಿಲ್ಲ ಹಾಗೂ ಇತರರನ್ನು ತೆಗಳುವುದು ಇಲ್ಲ...... ಹಾಗೆಯೇ ಅವರು ಸ್ವಲ್ಪ ಸ್ವಲ್ಪಕ್ಕೂ ರೇಗುವ ಸ್ವಭಾವ ಹೊಂದಿರುವುದಿಲ್ಲ............ ಅವರು ತಮ್ಮ ಎಲ್ಲಾ ದೃಷ್ಟಿಕೋನಗಳಿಗೆ ಅಂಟಿಕೊಂಡಿರುವುದಿಲ್ಲ ಮತ್ತು ಅವು ಅಕುಶಲವಾದರೇ ಅವನ್ನು ಬಿಡಲು ಸಿದ್ಧರಾಗಿರುತ್ತಾರೆ.... ಹೀಗಾಗಿ ಅವರನ್ನು ಭೋಧಿಸಿ ಸರಿದಾರಿಗೆ ತರುವುದು ಸುಲಭವಾಗಿರುತ್ತದೆ.
ಇಂತಹ ಪರಿಸ್ಥಿತಿಗಳಲ್ಲಿ ಭಿಕ್ಖುವು ತನ್ನನ್ನು ಪರರಿಗೆ ಹೋಲಿಸುತ್ತ ಈ ರೀತಿಯಲ್ಲಿ ಅಳತೆ ಮಾಡಿಕೊಳ್ಳುತ್ತಾನೆ ಈ ವ್ಯಕ್ತಿಯು ಕೆಟ್ಟ ಬಯಕೆಗಳಿಂದ ಕೂಡಿದ್ದಾನೆ. ಅದರಿಂದಲೇ ಜಾರಿಬಿದ್ದಿದ್ದಾನೆ. ಮತ್ತು ನಾನೂ ಸಹಾ ಈ ವ್ಯಕ್ತಿಯನ್ನು ಒಪ್ಪಲು ಸಿಧ್ಧನಿಲ್ಲ. ಒಂದು ವೇಳೆ ನಾನು ಏನಾದರೂ ಕೆಟ್ಟಬಯಕೆಗಳಲ್ಲಿ ಬಿದ್ದರೆ ಪರರು ನನ್ನನ್ನು ಸಹಾ ಒಪ್ಪುವುದಿಲ್ಲ. ಹೀಗಾಗಿ ನಾನು ಕೆಟ್ಟ ಬಯಕೆಗಳಿಗೆ ವಶನಾಗುವುದಿಲ್ಲ..............
..........ಅದೇ ರೀತಿಯಲ್ಲಿ ಇತರರ ಎಲ್ಲಾ ದುಗರ್ುಣಗಳನ್ನು ಒಪ್ಪಲು ಸಿಧ್ದನಿಲ್ಲ ಒಂದು ವೇಳೆ ನಾನು ದುಗರ್ುಣಗಳಲ್ಲಿ ಬಿದ್ದರೆ ಪರರು ನನ್ನನ್ನು ಸಹಾ ಒಪ್ಪುವುದಿಲ್ಲ. ಹೀಗಾಗಿ ನಾನು ದುಗರ್ುಣಗಳಿಗೆ ವಶನಾಗುವುದಿಲ್ಲ..............
.......ಅದೇ ರೀತಿಯಲ್ಲಿ ತನ್ನನ್ನು ಈ ರೀತಿ ಪರಿಶೀಲನೆ ಮಾಡುತ್ತಾನೆ.
ಈ ವ್ಯಕ್ತಿಯು ತನ್ನ ದೃಷ್ಟಿಕೊನಗಳಿಗೆ ಅಂಟಿಕೊಂಡಿದ್ದಾನೆ. ಅವುಗಳನ್ನು ಬಿಗಿಯಾಗಿ ಹಿಡಿದುಕೊಂಡು ಬಿಡುವುದಕ್ಕೆ ನಿರಾಕರಿಸುತ್ತಿದ್ದಾನೆ. ಮತ್ತು ನಾನು ಇಂತಹ ವ್ಯಕ್ತಿಯನ್ನು ಸಮ್ಮತಿಸುವುದಿಲ್ಲ ಹಾಗೂ ಇಷ್ಟಪಡುವುದಿಲ್ಲ. ಮತ್ತು ನಾನೂ ಏನಾದರೂ ಒಂದು ವೇಳೆ ಇದೇ ರೀತಿ ದೃಷ್ಟಿಕೋನಗಳಿಗೆ ಅಂಟಿಕೊಂಡರೆ ಅವುಗಳಿಗೆ ಬಿಗಿಯಾಗಿ ಹಿಡಿದುಕೊಂಡರೆ ಪರರೂ ಸಹಾ ನನಗೆ ಇಷ್ಟಪಡಲಾರರು ಹಾಗೂ ಸಮ್ಮತಿಸಲಾರರು. ಹೀಗೆ ಯೋಚಿಸುವ ಬಿಕ್ಖುವು ಈ ಬಗೆಯ ತಿಮರ್ಾನ ತೆಗೆದುಕೊಳ್ಳುತ್ತಾನೆ ;ನಾನು ನನ್ನ ದೃಷ್ಟಿಕೋನಗಳಿಗೆ ಅಂಟುವುದಿಲ್ಲ ಅವುಗಳನ್ನು ಬಿಗಿಯಾಗಿ ಹಿಡಿಯುವುದಿಲ್ಲ ಬದಲಾಗಿ ಬಿಟ್ಟುಬಿಡುತ್ತೇನೆ.
ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ.: ನಾನು ದುಷ್ಟ ಬಯಕೆಗಳಿಂದ ಕೂಡಿದ್ದೇನೆಯೇ ನಾನು ದುಷ್ಟಬಯಕೆಗಳ ಜಾಲದಲ್ಲಿ ಬಿದ್ದಿರುವೆನೇ ? ಪರೀಶೀಲನೆಯ ನಂತರ ತಾನು ದುಷ್ಟಬಯಕೆಗಳಿಂದ ಕೂಡಿದ್ದೇನೆ ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ದುಷ್ಟಬಯಕೆಗಳಿಂದ ಕೂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ...........
...............ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ ನಾನು ದೃಷ್ಟಿಕೋನಗಳಿಗೆ ಅಂಟಿರುವೆನೇ ಹಾಗೂ ಬಿಗಿಯಾಗಿ ಹಿಡಿದುಕೊಂಡಿರುವನೇ ? ಪರೀಶೀಲನೆಯ ನಂತರ ತಾನು ದೃಷ್ಟಿಕೋನಗಳಿಗೆ ಅಂಟಿರುವೆನು ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ದೃಷ್ಟಿಕೋನಗಳಿಗೆ ಅಂಟಿಕೊಂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ.
ಊಹಿಸಿರಿ ಒಬ್ಬ ತರುಣ ಅಥವಾ ತರುಣಿಯೊಬ್ಬಳು ಅಲಂಕಾರದಲ್ಲಿ ಆನಂದಿಸುವವರಾಗಿದ್ದು ಅವರು ಸ್ವಚ್ಚ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿದಾಗ ಅವರಿಗೆ ಮುಖದಲ್ಲಿ ಯಾವುಧೇ ಕಲೆಗಳಾಗಲಿ ಮಸಿಯಾಗಲಿ ಕಂಡುಬಂದರೆ ಅವರು ಕೂಡಲೇ ಅದನ್ನು ತೆಗೆಯಲು ಮುಂದಾಗುತ್ತಾರೆ ಒಂದು ವೇಳೆ ಅವರಿಗೆ ಯಾವುದೇ ಕಲೆಗಳಾಗಲಿ ಅಥವಾ ಮಸಿಯಾಗಲಿ ಕಂಡಿಲ್ಲವಾದರೇ ಆವರು ಆನಂದಗೊಳ್ಳುತ್ತಾರೆ ಒಹ್ ನಾನೇಷ್ಟು ಧನ್ಯ ಶುಚಿಯಾಗಿದ್ದೇನೆ ಶುಭ್ರವಾಗಿದ್ದೇನೆ ಎಂದು ಆನಂದಿಸುತ್ತಾರೆ.
ಅದೇ ರೀತಿಯಲ್ಲಿ ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ.: ನಾನು ಅಕುಶಲಗುಣಗಳಿಂದ ಕೂಡಿದ್ದೇನೆಯೇ ನಾನು ಅಕುಶಲಗುಣಗಳ ಜಾಲದಲ್ಲಿ ಬಿದ್ದಿರುವೆನೇ ? ಪರೀಶೀಲನೆಯ ನಂತರ ತಾನು ಅಕುಶಲಗುಣಗಳಿಂದ ಕೂಡಿದ್ದೇನೆ ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ಅಕುಶಲಗುಣಗಳಿಂದ ಕೂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ
ಹೀಗೇ ಮೊಗ್ಗಲಾನರು ಬೋಧಿಸಿದಾಗ ಅದನ್ನು ಆಲಿಸಿದಂತಹ ಭಿಕ್ಖುಗಳು ಆನಂದಿತರಾದರು ಹಾಗು ಸಂತೃಪ್ತರಾದರು.
ಮೊಗ್ಗಲಾನರ ಗಾಥೆಗಳು (ಥೇರ ಗಾಥ)
(ಕಾಡಿನಲ್ಲಿ ಭಿಕ್ಖು ಜೀವನದ ವೇಳೆಯ ಗಾಥೆಗಳು)
ಕಾಡಿನಲ್ಲಿ ವಾಸಿಸುತ್ತ ಭಿಕ್ಷಾನ್ನವನ್ನೇ ಸೇವಿಸುತ್ತ,
ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,
ಅದರೆ ಆಂತರ್ಯ ಮಾತ್ರ ಪ್ರಶಾಂತವಾಗಿದ್ದು
ಮಾರನ ಸೇನೆಯನ್ನು ಧ್ವಂಸಮಾಡೋಣ
ಕಾಡಿನಲ್ಲಿ ವಾಸಿಸುತ್ತ ಭಿಕ್ಷಾನ್ನವನ್ನೇ ಸೇವಿಸುತ್ತ,
ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,
ಆನೆಯು ಜೊಂಡಿನ ಕುಟೀರವನ್ನು ನಾಶಮಾಡುವಂತೆ
ಮಾರನ ಸೇನೆಯನ್ನು ಧ್ವಂಸಮಾಡೋಣ
ಮರದ ಬುಡದಲಿ ವಾಸಿಸುತ್ತ ಸತತ ಯತ್ನಶಾಲಿಯಾಗಿ,
ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,
ಅದರೆ ಆಂತರ್ಯದಲ್ಲಿ ಮಾತ್ರ ಪ್ರಶಾಂತವಾಗಿದ್ದು ,
ಮಾರನ ಸೇನೆಯನ್ನು ಧ್ವಂಸಮಾಡೋಣ
ಮರದ ಬುಡದಲಿ ವಾಸಿಸುತ್ತ ಸತತ ಯತ್ನಶಾಲಿಯಾಗಿ,
ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,
ಆನೆಯು ಜೊಂಡಿನ ಕುಟೀರವನ್ನು ನಾಶಮಾಡುವಂತೆ
ಮಾರನ ಸೇನೆಯನ್ನು ಧ್ವಂಸಮಾಡೋಣ.
ಗುಡಿಸಲಿನಂತೆ ಅಸ್ತಿಪಂಜರವಿದ್ದು
ಮಾಂಸ ನರಗಳಿಂದಾಗಿ ಹೆಣೆಯಲ್ಪಟ್ಟಿರುವ
ಹಾಳು ದುನರ್ಾತದ ಈ ಶರೀರ
ಪರರ ದೇಹಗಳನ್ನು ಸಲಹುತ್ತದೆ.
ಚರ್ಮದ ಗೋಣಿಚೀಲದ ಒಳಗಿನ ತೊಪ್ಪೆಯೇ
ಎದೆಯಲ್ಲಿ ಕೊಂಬುಗಳಿರುವ ಸತ್ವವೇ
ನಿನ್ನ ದೇಹವು ಒಂಬತ್ತು ತೊರೆಗಳಿಂದ
ನಿರಂತರವಾಗಿ ಹರಿಯುತ್ತಲೇ ಇರುತ್ತದೆ.
ಈ ಒಂಬತ್ತು ತೊರೆಗಳಿಂದ
ನಿನ್ನ ದೇಹವು ದುನರ್ಾತ ಮಲಭರಿತ
ಯಾವ ಭಿಕ್ಖುವು ವಿಶುಧ್ಧಿ ಬಯಸುವನೊ
ಈ ಶರೀರವನ್ನು ಕಶ್ಮಲದಂತೆ ತಡೆಯಲಿ
ಅವರು ನನ್ನಂತೆ ನಿನಗೆ
ನೋಡಿದರೆ
ಮಳೆಗಾಲದ ಗೊಬ್ಬರದ ಗುಂಡಿಯಂತೆ
ದೂರವಾಗುವರು.
(ವೇಶ್ಯೆಯೊಬ್ಬಳು ಪ್ರಲೋಭನೆ ಮಾಡಿದಾಗ ಈ ಗಾಥೆಗಳನ್ನು ಹೇಳಿದರು)
ಇದು ಹೀಗೆ ಇದೇ ಮಹಾವೀರನೇ!
ನೀ ಹೇಳಿದಂತೆಯೇ ತಾಪಸಿಯೇ
ಅದರೆ ಕೆಲವರು ಮುದಿ ವೃಷಭದ
ಯಾರು ಇದನು ಹೊಂಬಣ್ಣದ
ಆಥವಾ ಬೇರೆ ಬಣ್ಣದ ರೀತಿಯ
ಆಕಾಶವೆಂದು ಯೋಚಿಸುವರೋ
ಅವರು ಕೇವಲ ತಮ್ಮ ಸಮಸ್ಯೆಗಳಿಗೆ ಕಾರಣರಾಗುತಿಹರು.
ಈ ಮನವು ಗಗನದಂತೆ
ಪ್ರಶಾಂತವು ಆಂತರ್ಯದಲಿ
ಓ ಮಾರನೇ ಚಿಟ್ಟೆಯು ಬೆಂಕಿಗೆ
ಬೀಳುವಂತೆ ಮೇಲೆ ಬೀಳಬೇಡ
ನೋಡು ಈ ಅಲಂಕೃತ ಸೂತ್ರದ ಗೊಂಬೆಯ
ಹುಣ್ಣುಗಳ ರಾಶಿಯೇ ಇದೆ ಈ ಶರೀರದಲಿ,
ಈ ರೋಗಕಾರಿಗೆ ಗೀಳು ಹೊಂದಿ
ಶಾಶ್ವತವಾದ ಸ್ಥಿರತೆ ಇನ್ನಿಲ್ಲವಾಗುವುದು.
ನೋಡು ಈ ಅಲಂಕೃತ ಆಕಾರಗಳನು
ಹರಳುಗಳು ಹಾಗೂ ಕಿವಿಯುಂಗರಗಳನು
ಇಲ್ಲಿ ಕೇವಲ ಚರ್ಮವು ಹೊದಿಕೆಯಾಗಿದೆ ಮೂಳೆಗಳಿಗೆ
ಇದು ವಸ್ತ್ರಗಳಿಂದ ಮಾತ್ರ ಸೋಗಸಾಗಿದೆ
ಕೋಮಲವಾದ ಪಾದಗಳು
ಪುಡಿಯಿಂದಾದ ಬಿಳಪು ಮೊಗವು
ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು
ಅದರೆ ಆ ತೀರದ ಅನ್ವéೇಷಿಗನಿಗಲ್ಲ.
ಕೂದಲು ಎಂಟು ಜಡೆಗಳಾಗಿ
ಮತ್ತು ಕಾಡಿಗೆಯ ಲೇಪನ
ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು
ಅದರೆ ಆ ತೀರದ ಅನ್ವéೇಷಿಗನಿಗಲ್ಲ.
ಹೊಸದಾದ ಸೌಂದರ್ಯವರ್ಧಕ ಡಬ್ಬಿಯು
ಸಿಂಗರಿಸಿಕೊಂಡ ಅಸಹ್ಯಕರ ದೇಹವು
ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು
ಅದರೆ ಆ ತೀರದ ಅನ್ವéೇಷಿಗನಿಗಲ್ಲ.
ಬೇಟೆಗಾರನು ತನ್ನ ಬಲೆಯನ್ನು ಹಾಕಿದ್ದಾನೆ.
ಅದರೆ ಜಿಂಕೆಯು ಉರುಲಿಗೆ ಸಿಕ್ಕಿಕೊಂಡಿಲ್ಲ
ಜಿಂಕೆಯ ಬೇಟೆಗಾರನನ್ನು ಪ್ರಲಾಪಿಸಲು ಬಿಟ್ಟು
ಗಾಳದ ಆಹಾರ ಸೇವಿಸಿ ನಾವು ಹೊರಡುವೆವು
ಬೇಟೆಗಾರನ ಬಲೆಯು ಹರಿದುಹೋಗಿದೆ
ಜಿಂಕೆಯು ಉರುಳಿಗೆ ಬಿದ್ದಿಲ್ಲ
ಜಿಂಕೆಯ ಬೇಟೆಗಾರನನ್ನು ಪ್ರಲಾಪಿಸಲು ಬಿಟ್ಟು
ಗಾಳದ ಆಹಾರ ಸೇವಿಸಿ ನಾವು ಹೊರಡುವೆವು
(ಸಾರಿಪುತ್ತರ ಪರಿನಿಬ್ಬಾಣ ವೇಳೆ ನುಡಿದ ಗಾಥೆಗಳು)
ನಂತರ ಅಲ್ಲೊಂದು ಭೀಕರ
ಸಕಲ ಸಧ್ಗುಣ ಸಂಪನ್ನ
ಸಾರಿಪುತ್ತರ ಪರಿನಿಬ್ಬಾಣದ
ನಂತರ ಅವರಿಗೆ ರೋಮಂಚಕಾರಿ ಭಯ
ಸರ್ವ ಸಂಖಾರಗಳು ಅನಿತ್ಯ
ಏಳು ಬೀಳುವಿಕೆಯ ಸ್ವಭಾವದ್ದು
ಅವು ಏಳುವವು ಹಾಗೇಯೇ ಬೀಳುವವು
ಅವುಗಳ ನಿರೋಧವೇ ಪರಮಸುಖ
ಯಾರು ಪಂಚ ಸ್ಕಂಧಗಳನ್ನು ಹಾಗೂ
ಬೇರೆಯವನ್ನು ಸ್ವಯಂ ಎಂದು ಕಾಣುವುದಿಲ್ಲವೋ
ಅಂತಹವರು ಕೂದಲನ್ನು ಬಾಣದಿಂದ ಸೀಳುವ ಹಾಗೆ
ಪರಮಸೂಕ್ಷ್ಮತೆಯನ್ನು ಅರಿಯುವರು.
ಯಾರು ಎಲ್ಲಾ ಸ್ಥಿತಿಗಳನ್ನು ಹಾಗೂ
ಬೇರೆಯವನ್ನು ಆತ್ಮವೆಂದು ಕಾಣುವುದಿಲ್ಲವೋ
ಅಂತಹವರು ಕೂದಲನ್ನು ಬಾಣದಿಂದ ಭೇಧಿಸುವ ಹಾಗೆ
ಪರಮಸೂಕ್ಷ್ಮತೆಯನ್ನು ಅರಿಯುವರು.
ಖಡ್ಗಗಳ ಹೊಡೆತಕ್ಕೆ ಸಿಲುಕಿರುವಂತೆ
ತಲೆಗೆ ಬೆಂಕಿ ಬಿದ್ದಿರುವಂತೆ
ಜಾಗಾರೂಕ ಭಿಕ್ಖುವು ಇಂದ್ರಿಯ ಸುಖಗಳನ್ನು
ಪರಿತ್ಯಾಗ ಮಾಡಿ ಮುಂದೆ ಹೋಗುವನು
ಖಡ್ಗಗಳ ಹೊಡೆತಕ್ಕೆ ಸಿಲುಕಿರುವಂತೆ
ತಲೆಗೆ ಬೆಂಕಿ ಬಿದ್ದಿರುವಂತೆ
ಜಾಗಾರೂಕ ಭಿಕ್ಖುವು ಭವತನ್ಹವನ್ನು
ಪರಿತ್ಯಾಗ ಮಾಡಿ ಮುಂದೆ ಹೋಗುವನು
(ಮಿಗಾರ ಪ್ರಸಾಧ ಕಂಪನ ಮಾಡಿದಾಗ ನುಡಿದ ಗಾಥೆಗಳು)
ಅಂತಿಮ ದೇಹಧಾರಿಯಾದ
ಸುಗತರ ಪ್ರೋತ್ಸಾಹದಿಂದ
ನಾ ಮಿಗಾರ ಮಾತೆಯ ಭವನವನ್ನು
ಕೇವಲ ಕಾಲಿನ ಹೆಬ್ಬರಿಳಿನಿಂದ ಗಡಗಡ ಕಂಪಿಸಿಬಿಟ್ಟೆನು
ಸಡಿಲತೆಯಿಂದ ನೀ ಹಲವು ಪಡೆಯುವುದಲ್ಲ
ಅಲ್ಪಶ್ರಮದಿಂದ ನೀ ಹಲವು ಪಡೆಯುವುದಲ್ಲ
ನಿಬ್ಬಾಣದ ಸಾಕ್ಷಾತ್ಕಾರವು
ಸರ್ವ ಅಂಟುವಿಕೆಯ ಮುಕ್ತಿಯಿಂದಾಗುವುದು
ಈ ನವಯುವಕ ಭಿಕ್ಖು
ಮಾನವರಲ್ಲಿ ಅತ್ಯುತ್ತಮ
ಅಂತಿಮ ದೇಹದಾರಿಯಾದ
ಆವರು ಮಾರನ ಹಾಗೂ ಆತನ ಸೇನೆಯ ಸೋಲಿಸಿದವರು
(ಈ ಗಾಥೆಗಳನ್ನು ಅವರು ಏಕಾಂತದಲ್ಲಿ ಸಾಧನೆ ಮಾಡುವಾಗ ನುಡಿದದ್ದು ಆಗಿದೆ)
ವೆಭವ ಹಾಗೂ ಪಾಂಡವ ಪರ್ವತದ ಮೇಲೆ
ಮಿಂಚಿನ ಧಾರೆಗಳು ಉದುರಿದವು
ಅದರೆ ಪರ್ವತದ ಬಿರುಕಿನಲ್ಲಿ ಅಸಮಾನರ ಪುತ್ರನು
ಝಾನದಲ್ಲಿ ಲೀನವಾಗಿ ಹಾರಾಡಿದನು
(ಈ ಗಾಥೆಗಳನ್ನು ಕಸ್ಸಪರಿಗೆ ಗೌರವಿಸದ ಬ್ರಾಹ್ಮಣನಿಗೆ ನುಡಿದರು)
ಶಾಂತನು ಮತ್ತು ಪ್ರಶಾಂತನು
ಏಕಾಂತ ವಿಹಾರಿಯಾಗಿ ಋಷಿಯು
ಅನನ್ಯ ಬುದ್ಧರ ವಂಶಜನಾಗಿ
ಬ್ರಹ್ಮನಿಂದಲೂ ಗೌರವ ಪಡೆದನು.
ಶಾಂತನು ಮತ್ತು ಪ್ರಶಾಂತನು
ಏಕಾಂತ ವಿಹಾರಿಯಾಗಿ ಋಷಿಯು
ಅನನ್ಯ ಬುದ್ಧರ ವಂಶಜನಾಗಿದ್ದಾನೆ
ಬ್ರಾಹ್ಮಣ ನೀ ಕಸ್ಸಪರವರಿಗೆ ಗೌರವಿಸು.
ಒಬ್ಬನು ನಿರಂತರವಾಗಿ ನೂರು
ಜನ್ಮಗಳನ್ನು ಮಾನವನಾಗಿ
ಬ್ರಾಹ್ಮಣನಾಗಿ ಹುಟ್ಟಿ
ವೇದಗಳೆಲ್ಲವನ್ನು ನೆನಪಲ್ಲಿಟ್ಟರೂ
ಆತನು ಗುರುವಾಗಿದ್ದರೂ
ತ್ರಿವೇದದ ಪ್ರಾವಿಣ್ಯನಾಗಿದ್ದರೂ
ಅಂತಹವರಿಗೇ ಗೌರವಿಸುವುದರಿಂದ
ಸಿಗುವ ಲಾಭವು ಅತ್ಯಲ್ಪ
ಅದರೆ ಯಾರು ಅಷ್ಟಸಮಾಪತ್ತಿಗಳ
ಅಧಿಪತಿಯೋ ಯಾರು ಅವುಗಳಲ್ಲಿ ಮುನ್ನುಗ್ಗುವನೋ
ಹಾಗೂ ಹಿಂಬರುವನೋ ನಂತರ ಆಹಾರಕ್ಕೆ ಹೋಗುವನೋ
ಅಂತಹವನಿಗೇ ನೀಡುವ ಫಲವೂ ಹಿಂದಿನಗಿಂತ
ಹದಿನಾರು ಪಟ್ಟುಗಿಂತಲೂ ಹೆಚ್ಚಿನದು
ಅಂತಹ ಭಿಕ್ಖುವಿಗೆ ನೀ ಹೊಡೆಯಲು ಹೋಗಬೇಡ
ನಿನ್ನನ್ನು ನೀನೂ ನಾಶಗೋಳಿಸಿಕೊಳ್ಳುವೆ ಬ್ರಾಹ್ಮಣ
ಅರಹಂತರಲ್ಲಿ ಶ್ರದ್ಧೆಯಿಡು ಶ್ರಧ್ಧಾಂಜಲಿ ಪೂರ್ವಕ ಪೂಜಿಸು
ಹಾಗಲ್ಲದೆ ನಿನ್ನ ತಲೆಯನ್ನು ನುಚ್ಚುನೂರಾಗಿಸಬೇಡ
ನೀ ಪುನರ್ಜನ್ಮ ಪ್ರಮುಖವೆಂದು ಭಾವಿಸಿದರೆ
ನೀ ಧಮ್ಮವನ್ನು ಸರಿಯಾಗಿ ನೋಡಿಲ್ಲ
ನೀ ವಕ್ರ ಮಾರ್ಗವ ಸಾಗುತಿಹೆ
ಕುಮಾರ್ಗವು ನಿನಗೆ ಕೆಳಗೆ ದಬ್ಬುವುದು.
(ಟೊಳ್ಳು ಪೊತ್ತಿಲನಿಗೆ ನುಡಿದದು)
ಹೇಗೆ ಜಂತುವು ಸಗಣಿಯಿಂದ ಲೇಪಿತವಾಗಿಯೋ
ಹಾಗೆಯೇ ಆತನು ಪರಿಸ್ಥಿತಿಗಳಿಂದ ಮತ್ತಿನಲ್ಲಿನರುತ್ತಾನೆ
ಲಾಭ ಸತ್ಕಾರಗಳಿಂದ ಮುಳುಗಿರುತ್ತಾನೆ.
ಟೊಳ್ಳು ಪೊತ್ಥಿಲ ಮುಂದುವರಿ
(ಸಾರಿಪುತ್ತರ ಬಗ್ಗೆ ನುಡಿದ ಗಾಥೆಗಳು)
ನೋಡು ಸಾರಿಪುತ್ತನು ಬರುತ್ತಿರುವನು
ಆತನ ದರ್ಶನವು ಸಾಧುವಾದುದು
ಉಭಯ ರೀತಿಯಲ್ಲಿಯು ವಿಮುಕ್ತನವನು
ಅಂತರ್ಯದಲ್ಲಿ ಸದಾ ಪ್ರಶಾಂತನು.
ಆತನ ಶಲ್ಯವು ತೆಗೆದುಹಾಕಲ್ಫಟ್ಟಿದೆ ಮತ್ತು ಬಂಧನಗಳು ಕತ್ತರಿಸಲ್ಪಟ್ಟಿವೆ
ತ್ರಿವಿಧ್ಯಾಧರನು ಮಾರನಾಶಿಯು
ಆತಿಥ್ಯಗಳಿಗೆ ಅರ್ಹನು
ಲೋಕದ ಜನರಿಗೆ ಸರಿಸಾಟಿಯಿಲ್ಲದ ಪುಣ್ಯಕ್ಷೇತ್ರನು
(ಈ ಗಾಥೆಗಳನ್ನು ಸಾರಿಪುತ್ತರು ಹೇಳಿದದು)
ಆ ಸುಖ್ಯಾತಿಯ ದಶಸಹಸ್ರ ದೇವತೆಗಳು
ಇದ್ಧಿಸಂಪನ್ನರು ಸಹಾ
ಅವರೆಲ್ಲಾ ಬ್ರಹ್ಮನಿಗೆಮಂತ್ರಿಗಳು
ಅದರೂ ಮೊಗ್ಗಲಾನನಿಗೆ ಅಂಜಲೀಬದ್ಧರಾಗಿ ವಂದಿಸುವರು.
ಮನುಜರಲ್ಲಿ ಶ್ರೇಷ್ಟ ಅಶ್ವನೇ ವಂದನೆ ನಿಮಗೆ
ನರರಲ್ಲಿ ಶ್ರೇಷ್ಟನೇ ವಂದನೆ ನಿಮಗೆ
ಕಲ್ಮಶಗಳ ಅಂತ್ಯಮಾಡಿದ ಸ್ವಾಮಿ
ನೀವೇ ಆತಿಥ್ಯಗಳಿಗೆ ಅರ್ಹರು.
ದೇವ ಮನುಷ್ಯರಿಂದ ಪೂಜಿತರೇ
ಉದಯಿಸಿದವರೇ ಮೃತ್ಯಂಜಯರೇ
ನೀರಿನಿಂದ ಕಮಲದಂತೆ
ಪರಿಸ್ಥಿತಿಗಳಿಂದ ಮಲಿನವಾಗದವರೇ
ಬ್ರಹ್ಮಸಹಿತ ಸಹಸ್ರವಿಧದ ಲೋಕಗಳನ್ನು
ಗಳಿಗೆಯಲ್ಲಿ ನೋಡುವವರೆ
ಇದ್ಧಿಸಂಪನ್ನರೇ ಜೀವಿಗಳ ಚ್ಯುತಿ ಹಾಗೂ ಪುನರ್ಭವಗಳನ್ನು
ಹಾಗೂ ದೇವತೆಗಳನ್ನು ಸಕಾಲದಲ್ಲಿ ನೋಡುವವರೇ.
(ಮೊಗ್ಗಲಾನರ ಗಾಥೆ)
ದಾಟಿರುವಂತಹ ಭಿಕ್ಖುವಾದ ಸಾರಿಪುತ್ತ
ಪರಮ ಉತ್ಕೃಷ್ಟ
ಅದು ಶೀಲದಿಂದಾಗಿ ಪ್ರಜ್ಞಾದಿಂದಾಗಿ
ಹಾಗೂ ಶಾಂತಿಯಿಂದಾಗಿ.
(ಅರಹಂತ ಪ್ರಾಪ್ತಿ ವೇಳೆ ನುಡಿದ ಮೊಗ್ಗಲಾನರ ಗಾಥೆಗಳು)
ಕ್ಷಣಮಾತ್ರದಲ್ಲಿ ನಾನೂ ನನ್ನಂತಿರುವ
ಲಕ್ಷ ಜನರನ್ನು ದಶಲಕ್ಷ ಬಾರಿ ಸೃಷ್ಟಿಸಬಲ್ಲೆನು
ರೂಪ ಪರಿವರ್ತನೆಯಲ್ಲಿ ನಾನು ಮಹಾಕುಶಲನು
ಇದ್ಧಿ ಸಂಪನ್ನತೆಯಲ್ಲಿ ಪ್ರಾವಿಣ್ಯನು
ಸಮಾಧಿ ಹಾಗೂ ವಿಧ್ಯೆಗಳಲ್ಲಿ ಪರಿಪೂರ್ಣತೆ ಸಾಧಿಸಿದ
ಮೊಗ್ಗಲಾನ ಗೊತ್ರದ ಅಂಟದಿರುವಿಕೆಯ ಶಾಸನದಲ್ಲಿ ಪ್ರಾಜ್ಞನಾದ
ಧೀರನು ಹೇಗೆ ಆನೆಯು ಪೂತಿಲತೆಗಳ ಬಂಧನಗಳನ್ನು ಮುರಿದು ಹಾಕುವುದೋ
ಹಾಗೆಯೇ ಸಮಾಹಿತದ ಇಂದ್ರಿಯದ ಮೂಲಕ ಧ್ವಂಸ ಮಾಡುವನು.
ಶಾಸ್ತರ ಸೇವೆಯನ್ನು ಮಾಡಿರುವೆ
ಬುದ್ಧಶಾಶನದ ಎಲ್ಲವನ್ನು ಪರಿಪಾಲಿಸಿಹೆ
ಭಾರವಾದ ಹೊರೆಯನ್ನು ಇಳಿಸಿರುವೆ
ಭವವನ್ನು ತರಿಸುವ ಸಮೂಹ ಎಲ್ಲದರಲ್ಲಿಯು ಅಂಟದೇ ಹೋಗಿದ್ದೇನೆ.
ಯಾವುದಕ್ಕಾಗಿ ಪಬ್ಬಜಿತರು
ಮನೆ ಬಿಟ್ಟು ಅನಿಕೇತನರಾಗುವರೋ
ಅಂತಹ ಗುರಿಯನ್ನು ಸಿದ್ಧಿಸಿಹೆನು
ಸರ್ವಸಂಯೋಜನಗಳನ್ನು ಕ್ಷಯಿಸಿರುವೆನು.
(ಮಾರನೊಂದಿಗೆ ಸಂಭಾಷಣೆಯ ವೇಳೆ ನುಡಿದ ಗಾಥೆಗಳು)
ಯಾವ ರೀತಿಯ ನರಕವದು
ಅಲ್ಲಿ ದುಸ್ಸಿ ಬೆಂದು ಹೋಗಿದ್ದನು
ಕುಕುಸಂಧ ಬ್ರಾಹ್ಮಣರ ವಿಧುರ ಅಗ್ರ ಶಾವಕನಿಗೆ
ನೀಡಿದ ಕಿರುಕುಳಕ್ಕೆ ಕಮ್ಮವಿಪಾಕವದು
ಅಲ್ಲಿ ಏಕಕಾಲದಲ್ಲಿ ಶತ ಕತ್ತಿಗಳು ತಿವಿಯಲ್ಪಟ್ಟು
ಅಪಾರ ವೇದನೆಗಳು ಅಸಹನೀಯ ಅಲ್ಲಿ ದುಸ್ಸಿ ಬೆಂದು ಹೋಗಿದ್ದನು
ಕುಕುಸಂಧ ಬ್ರಾಹ್ಮಣರ ವಿಧುರ ಅಗ್ರ ಶಾವಕನಿಗೆ
ನೀಡಿದ ಕಿರುಕುಳಕ್ಕೆ ಕಮ್ಮವಿಪಾಕವದು
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಅದ್ದರಿಂದ ಕಣ್ಹನೇ
ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.
ಸರೋವರದ ಮಧ್ಯೆ ನಿಂತಿರುವ ವಿಮಾನವು
ಕಲ್ಪ ಕಾಲದಷ್ಟು ಇರುವದು
ನೀಲ ವರ್ಣದ ಸ್ಪಟಿಕದ ಪ್ರಭಾಯುತ ಭವನವದು
ನಾನ ವರ್ಣಗಳ ಅಪ್ಸರೆಯರು ಅಲ್ಲಿ ನೃತ್ಯವಾಡುವರು.
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಆದ್ದರಿಂದ ಕಣ್ಹನೇ
ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.
ಬುದ್ಧರಿಂದಲೇ ಸೂಚನೆಗೆ ಒಳಗಾಗಿ
ಭಿಕ್ಖುಸಂಘವನ್ನು ನೋಡಿಕೊಳ್ಳುತ್ತಿದ್ದ ನಾನೂ
ಮಿಗಾರ ಮಾತೆಯ ಭವನವನ್ನು ಕೇವಲ
ಪಾದದ ಅಂಗುಷ್ಟದಿಂದಲೇ ಕಂಪಿಸುವಂತೆ ಮಾಡಿದೆನು.
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಅದ್ದರಿಂದ ಕಣ್ಹನೇ
ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.
ಯಾರು ವೈಜಯಂತ ಪ್ರಸಾದವನ್ನು
ಪಾದದ ಅಂಗುಷ್ಟದಿಂದಲೇ ಕಂಪನವನ್ನುಂಟು ಮಾಡಿದರೋ
ಇದ್ಧಿಬಲಗಳಲ್ಲಿ ಪ್ರತಿಷ್ಟಿತರೊ
ಅಂತಹವರು ದೇವತೆಗಳಲ್ಲಿಯೂ ಸ್ಪೂತರ್ಿದಾಯಕರು
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಆದ್ದರಿಂದ ಕಣ್ಹನೇ
ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಅದ್ದರಿಂದ ಕಣ್ಹನೇ
ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.
ಯಾರು ವೈಜಯಂತ ಪ್ರಸಾದದಲ್ಲಿ
ಸಕ್ಕನಿಗೆಯೇ ಹೀಗೆ ಪ್ರಶ್ನಿಸಿದರೋ:
ಅಯುಷ್ಮಂತನೇ ತಣ್ಹಕ್ಷಯದಿಂದಾಗುವ ವಿಮುಕ್ತಿಯು
ನಿನಗೆ ತಿಳಿದಿದೆಯೇ? ಅದಕ್ಕೆ ಸಕ್ಕರು ಯಥಾತಥಾವಾಗಿಯೇ ಉತ್ತರಿಸಿದರು.
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಆದ್ದರಿಂದ ಕಣ್ಹನೇ
ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.
ಯಾರು ಬ್ರಹ್ಮನ ಸುಧಮ್ಮ ಸಭಾಂಗಣದಲ್ಲಿ ಹೀಗೆ
ಪ್ರಶ್ನಿಸಿದರೊ ; ಓ ಆಯುಷ್ಮಂತನೇ ಈ ಹಿಂದೆ ಇದ್ದಂತಹ
ದಿಟ್ಟಿಯು ಈಗಲೂ ಇದೆಯೇ ಅಥವಾ ಬ್ರಹ್ಮಲೋಕದ ಪ್ರಭೆಯು
ಆರಿಹೋಗುವುದು ಕಂಡಿರುವಿರಾ ?
ಅದಕ್ಕೆ ಬ್ರಹ್ಮರು
ಯಥಾತಥಾವಾಗಿಯೇ ಉತ್ತರಿಸಿದರು :
ಅಯುಷ್ಮಂತನೇ ಈ ಹಿಂದೆ
ಇದ್ದಂತಹ ದಿಟ್ಟಿಯು ಈಗಿಲ್ಲವಾಗಿದೆ.
ಕಾಣುತ್ತಿದ್ದೇನೆ ಬ್ರಹ್ಮಲೋಕದ ಪ್ರಭೆಯು
ಮರೆಯಾಗುವುದನ್ನು ಹೀಗಾಗಿ ಹೇಗೆ ತಾನೇ
ನಾನು ನಿತ್ಯನೆಂದು ಶಾಶ್ವತನೆಂದು ಹೇಳಲಿ
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಆದ್ದರಿಂದ ಕಣ್ಹನೇ
ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.
ಜನರು ವಾಸಿಸುವ ಪೂರ್ವವಿದೇಹದ ವನಗಳಲ್ಲಿರುವ
ಮಹಾನೇರು ಪರ್ವತದ ತುದಿಯನ್ನು
ತನ್ನ ವಿಮೋಕ್ಖತೆಯಿಂದ ಸ್ಪಶರ್ಿಸಿದರೋ
ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು
ತನ್ನ ಸ್ವಾನುಭೂತಿಯಿಂದಲೇ
ಹೇಳುತಿರುವನು ಆದ್ದರಿಂದ ಕಣ್ಹನೇ
ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.
ನಾನು ಮೂರ್ಖನನ್ನು ದಹಿಸುವೆ
ಎಂದು ಅಗ್ನಿಯು ಸಂಕಲ್ಪಿಸದು,
ಅದರೂ ಸಹಾ ಮೂರ್ಖನು ಅಗ್ನಿಯ
ಸಮೀಪ ಬಂದರೆ ಸುಟ್ಟುಹೋಗುವನು.
ಅದೇ ರೀತಿಯಾಗಿ ಮಾರ
ತಥಾಗಥರಿಗೇ ಆಕ್ರಮಣ ಮಾಡಿದರೇ
ಹೇಗೇ ಮೂರ್ಖನು ಸುಟ್ಟು ಹೋಗುವನೋ
ಹಾಗೇ ದಹಿಸಿ ಹೋಗುವೇ
ತಥಾಗತರಿಗೆ ಆಕ್ರಮಣ ಮಾಡಿದರೆ
ಮಾರನೇ ಪಾಪವನ್ನು ಹೇರಳವಾಗಿ ಪಡೆಯುವನು
ನನ್ನ ದುಷ್ಟತನವು ಫಲಕಾರಿಯಾಗದು
ಎಂದೆಣಿಸಬೇಡ ಹಾಗೇ ಕಲ್ಪಿಸಬೇಡ ದುಷ್ಟನೇ
ಬಹು ಕಾಲದಿಂದ ನೀನೇ ಸೃಷ್ಟಿಸಿರುವ
ದುಷ್ಟತನದ ಕುಪ್ಪೆಯನ್ನು ಸಂಗ್ರಹಿಸಿರುವೆ
ಓ ಮಾರ ಬುದ್ಧರಿಂದ ದೂರ ನಿಲ್ಲು
ಭಿಕ್ಖುಗಳನ್ನು ವಂಚಿಸುವ ಭರವಸೆಯನ್ನು ಬಿಟ್ಟುಬಿಡು.
ಈ ರೀತಿಯಾಗಿ ಭೇಸಕಾಲಾ ತೋಪಿನಲ್ಲಿ
ಭಿಕ್ಖುವು ಮಾರನನ್ನು ಹೆದರಿಸಿ ಗದರಿಸಿದರು
ಆ ಯಕ್ಖನು ಕೆಳಮುಖ ಮಾಡಿ
ತಕ್ಷಣ ಅಲ್ಲಿಂದ ಅದೃಶ್ಯನಾದನು.
(ಥೇರ ಗಾಥ 1150 ರಿಂದ 1218)
9.5 ಸಾರಿಪುತ್ತ ಹಾಗು ಮೊಗ್ಗಲಾನರಿಂದ ಸಂಘವು ಒಂದಾಯಿತು
ದೇವದತ್ತನು ಬುದ್ಧರೊಂದಿಗೆ ಕೋಸಂಬಿಯಲ್ಲಿ ವಾಸವಾಗಿದ್ದನು. ಆಗ ಆತನಿಗೆ ಬುದ್ಧರಿಗೆ ಸಿಗುವ ಗೌರವ, ಸತ್ಕಾರ, ಕೀತರ್ಿ, ಎಲ್ಲವನ್ನು ಕಂಡು ಅಸೂಯೆಯುಂಟಾಯಿತು. ಆತನೇ ಭಿಕ್ಷು ಸಂಘಕ್ಕೆ ನಾಯಕನಾಗಲು ಲೋಭಪಟ್ಟನು. ಒಂದುದಿನ ಭಗವಾನರು ರಾಜಗೃಹದ ವೇಲುವನದ ವಿಹಾರದಲ್ಲಿ ಬೋಧಿಸುತ್ತಿರುವಾಗ ಬುದ್ಧರಲ್ಲಿಗೆ ದೇವದತ್ತನು ಬಂದು ಭಗವಾನರಿಗೆ ವಯಸ್ಸಾಯಿತು, ಆದ್ದರಿಂದ ನನಗೆ ಸಂಘದ ನೇತೃತ್ವ ನೀಡಿ ಎಂದು ಕೇಳಿದನು. ಆತನು ಅತ್ಯಂತ ಅನರ್ಹನಾಗಿದ್ದನು. ಕೊನೇ ಪಕ್ಷ ಶೀಲವಂತನೂ ಸಹಾ ಆಗಿರಲಿಲ್ಲ. ಸಂಘದಲ್ಲಿ ಅಸಂಖ್ಯಾತ ಖೀಣಾಸವ ಅರಹಂತರು ಇದ್ದರು. ಅವರಿಗೂ ಸಹಾ ಬುದ್ಧರ ಧಮ್ಮದ ಆಳ್ವಿಕೆ ಸಾಧ್ಯವಿರಲಿಲ್ಲ. ಆದ್ದರಿಂದಾಗಿ ಭಗವಾನರು ಆತನ ಕೋರಿಕೆ ನಿರಾಕರಿಸಿದರು ಮತ್ತು ಆತನ ಮೋಹವನ್ನು ಖಂಡಿಸಿದರು.
ದೇವದತ್ತನು ಇದರಿಂದಾಗಿ ದ್ವೇಷದಿಂದ ಸೇಡಿನಿಂದ ತುಂಬಿಹೋದನು. ಆತನು ಬುದ್ಧರನ್ನು 3 ಬಾರಿ ಕೊಲ್ಲಲು ಪ್ರಯತ್ನಿಸಿದನು. ಮೊದಲಿಗೆ ಹಲವು ಧನುರ್ಧರರನ್ನು ಕೊಲ್ಲಲು ನೇಮಿಸಿದನು. ಆದರೆ ಬುದ್ಧ ಭಗವಾನರ ಅಸೀಮ ಮೈತ್ರಿಯಿಂದ ಮತ್ತು ಪ್ರಜ್ಞಾಶೀಲತೆಯಿಂದಾಗಿ ಅವರೆಲ್ಲರೂ ಬುದ್ಧಭಗವಾನರ ಶಿಷ್ಯರಾದರು. ನಂತರ ಗಿಜ್ಜಕೂಟ ಬೆಟ್ಟದ ಮೇಲೇರಿ ಅಲ್ಲಿಯ ದೊಡ್ಡ ಬಂಡೆಯನ್ನು ಬುದ್ಧರ ಮೇಲೆ ಉರುಳಿಸಿದನು. ಆದರೆ ಭಗವಾನರು ಪವಾಡಶಕ್ತಿಯಿಂದ ಪಾರಾದರು. ಆದರೂ ಹಿಂದಿನ ಕರ್ಮಫಲದ ಪರಿಣಾಮದಿಂದ ಕೇವಲ ಕಾಲಿನ ಹೆಬ್ಬೆರಳಿಗೆ ಗಾಯವಾಯಿತು. ನಂತರ ನಾಲಾಗಿರಿ ಆನೆಯನ್ನು ಉನ್ಮಾದಿಸಿ ಬುದ್ಧರ ಮೇಲೆ ಬಿಟ್ಟನು. ಆದರೆ ಭಗವಾನರ ಮೈತ್ರಿಯ ಪ್ರಬಲಶಕ್ತಿಯಿಂದಾಗಿ ಆನೆಯು ಸಹಾ ಪಳಗಿ ಶಾಂತವಾಗಿ ವಂದಿಸಿತು. ಆಗ ಈ ಪ್ರಯತ್ನಗಳು ವಿಫಲವಾದಾಗ ದೇವದತ್ತನು ಸಂಘಭೇದ ಮಾಡಲು, ಸಂಘವನ್ನು ಮುರಿಯಲು ಪ್ರಯತ್ನಿಸಿದನು.
9.6 ಸಂಘ ಭೇದದ ಪ್ರಕರಣ
ಒಮ್ಮೆ ಭಗವಾನರು ವೇಲುವನದಲ್ಲಿ ಬೋಧಿಸುತ್ತಿದ್ದರು. ಆಗ ಅಲ್ಲಿಗೆ ದೇವದತ್ತನು ಬಂದನು. ಭಗವಾನರಿಗೆ ಸಲಹೆಯೊಂದನ್ನು ನೀಡಿದನು. ಅದೇನೆಂದರೆ ಭಗವಾನರು ವೃದ್ಧರಾಗುತ್ತಿರುವುದರಿಂದಾಗಿ ಸಂಘದ ಆಳ್ವಿಕೆಯನ್ನು ದೇವದತ್ತನಿಗೆ ಒಪ್ಪಿಸುವುದು ಎಂದು. ಆದರೆ ಭಗವಾನರು ಇದಕ್ಕೆ ಒಪ್ಪಲಿಲ್ಲ. (ಸಂಘದ ಹೊಣೆಗಾರಿಕೆ ಅತ್ಯುನ್ನತ ಮಟ್ಟದ್ದಾಗಿರುವುದರಿಂದಾಗಿ, ಅದರ ಹೊಣೆಯನ್ನು ಸಾರಿಪುತ್ತ ಮತ್ತು ಮೊಗ್ಗಲ್ಲಾನರಿಗೂ ವಹಿಸಲು ಸಾಧ್ಯವಿರಲಿಲ್ಲ, ಇನ್ನು ದೇವದತ್ತನಿಗೆ ವಹಿಸಲು ಸಾಧ್ಯವೇ?) ಇದರಿಂದಾಗಿ ದೇವದತ್ತನು ಅಪಮಾನವಾದಂತೆ ಭಾಸವಾಗಿ, ಬುದ್ಧರನ್ನು ದ್ವೇಷಿಸಲು ಆರಂಭಿಸಿದನು. ಹೀಗಾಗಿ ಆತನು ಭಗವಾನರನ್ನು ಕೊಲ್ಲಲು ಮೂರುಬಾರಿ ಪ್ರಯತ್ನಿಸಿ ವಿಫಲನಾದನು. ಆಗ ಮತ್ತೊಂದು ಅಪಾಯಕಾರಿ ಉಪಾಯ ಹುಡುಕಿದನು. ಆ ಉಪಾಯದಿಂದ ಆತನು ಭಗವಾನರಲ್ಲಿಗೆ ಬಂದು ತಾನು ಐದು ವಿನಯ ನಿಯಮಗಳನ್ನು ಕಂಡುಹಿಡಿದಿರುವುದಾಗಿ ಅದು ಸಂಯಮಕ್ಕೆ ಅನುಕೂಲವಿರುವುದರಿಂದಾಗಿ ಅದರ ಜಾರಿಗೆ ಅನುಮತಿ ಕೇಳಿದನು. ಅದೇನೆಂದರೆ: 1) ಕಾಡಿನಲ್ಲಿಯೇ ಭಿಕ್ಷುಗಳ ವಾಸ 2) ಭಿಕ್ಷಾಟನೆಯಿಂದಲೇ ಆಹಾರ 3) ಕಸದ ಬಟ್ಟೆಯಿಂದಲೇ ವಸ್ತ್ರ 4) ಮರದ ಬುಡದಲ್ಲಿಯೇ ವಾಸ ಮತ್ತು 5) ಮಾಂಸ ಮತ್ತು ಮತ್ಸ್ಯದ ತಿರಸ್ಕಾರ.ಆದರೆ ಭಗವಾನರಿಗೆ ದೂರದೃಷ್ಟಿಯಿರುವುದರಿಂದಾಗಿ ಆ ನಿಯಮಗಳು ಸಾಮಾಜಿಕ ಹಿತಕ್ಕೆ ಅಡ್ಡಿಯಷ್ಟೇ ಅಲ್ಲದೆ ಭಿಕ್ಷುಗಳಿಗೆ ವಿನಾಕಾರಣ ದೇಹದಂಡಿಸಿದಂತಾಗುತ್ತದೆ ಎಂದರಿತ ಭಗವಾನರು ಅವನ್ನು ತಿರಸ್ಕರಿಸಿದರು.
ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ದೇವದತ್ತನು ತನ್ನ ಈ ನಿಯಮಗಳು ಇರುವ ನಿಯಮಗಳಿಗಿಂತ ಉತ್ತಮ ಎಂದು ದಡ್ಡ ಭಿಕ್ಷುಗಳಿಗೆ ನಂಬಿಸಿ ತನ್ನ ಹಿಂಬಾಲಕರನ್ನಾಗಿ ಮಾಡಿಕೊಂಡನು.
ಆಗ ಭಗವಾನರು ಆತನಿಗೆ ದೇವದತ್ತ ನೀನು ಸಂಘಭೇದ ಮಾಡುತ್ತಿರುವೆಯಾ?
ಹೌದು.
ಓಹ್, ಇದು ಮಹಾಪಾಪ. ಪಂಚಮಹಾಪಾತಕಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ ಅವೀಚಿ ನರಕದಲ್ಲಿ ಹುಟ್ಟಬೇಕಾಗುತ್ತದೆ, ಇವೆಲ್ಲಾ ಬಿಟ್ಟುಬಿಡು.
ಅಂಥದೇನೂ ಆಗೋಲ್ಲ ಎಂದು ನಿರ್ಲಕ್ಷ ವಹಿಸಿದನು. ಅಷ್ಟೇ ಅಲ್ಲದೆ ಆತನದೆ ಮಾರ್ಗದಲ್ಲಿ ಉಪೋಸಥ ಸಭೆ ಮತ್ತು ಆಚರಣೆ ಆರಂಭಿಸಿದನು.
ಈ ವಿಷಯವನ್ನು ಪರಮಪೂಜ್ಯ ಆನಂದರವರು ಭಗವಾನರಿಗೆ ತಿಳಿಸಿದಾಗ ಭಗವಾನರು ಈ ಗಾಥೆ ನುಡಿದರು.
ಅಸಾಧುವು (ಕೆಟ್ಟದ್ದು) ಮತ್ತು ಅಹಿತವಾದುದನ್ನು ಮಾಡಿಕೊಳ್ಳುವುದು ಸುಲಭ. ಆದರೆ ಸಾಧುವು (ಒಳ್ಳೆಯದು) ಮತ್ತು ಹಿತವಾದುದನ್ನು ಮಾಡಿಕೊಳ್ಳುವುದು ಪರಮ ದುಷ್ಕರವಾದುದು. (ಧ.ಪ. 163)
ಒಳ್ಳೆಯವರಿಗೆ ಹಿತ ಮತ್ತು ಸಾಧುಕಾರ್ಯ ಸುಲಭ, ಆದರೆ ಕೆಟ್ಟವರಿಗೆ ಅದು ಪರಮ ದುಷ್ಕರ. ಅದೇ ಕೆಟ್ಟವರಿಗೆ ಅಹಿತ ಮಾಡಿಕೊಳ್ಳುವಂತಹ ಪಾಪಕಾರ್ಯ ಸುಲಭ. ಆದರೆ ಒಳ್ಳೆಯವರಿಗೆ ಅದು ಅಸಾಧ್ಯ ಎಂದರು.
ನಂತರ ಉಪೋಸಥ ದಿನದಂದು 500 ವಜ್ಜಿಗಳ ಭಿಕ್ಷು ಗುಂಪು ದೇವದತ್ತನ ಮಾತಿಗೆ ಮರುಳಾಗಿ ಆತನ ಸಂಘ ಸೇರಿತು. ಆದರೆ ಭಗವಾನರ ಅನುಕಂಪ ಮತ್ತು ಸಾರಿಪುತ್ತ ಮತ್ತು ಮೊಗ್ಗಲ್ಲಾನರ ಹಿತವಚನದಿಂದಾಗಿ ಮರಳಿ ಭಗವಾನರ ಸಂಘಕ್ಕೆ ಹಿಂತಿರುಗಿದರು.
- ಂ0ಂ

No comments:
Post a Comment