Monday, November 7, 2022

6. ಇದ್ದಿ ಶಕ್ತಿಗಳಿಂದ ಪರರ ಕ್ಲೇಶಗಳ ದಮನ

 6. ಇದ್ದಿ ಶಕ್ತಿಗಳಿಂದ ಪರರ ಕ್ಲೇಶಗಳ ದಮನ



6.1 ಪರಪಂಥದ ನಾಯಕ ಅಗ್ಗಿದತ್ತನ ಮೋಹ ದಮನ 

ಕೋಸಲ ರಾಜ್ಯದಲ್ಲಿ ಅಗ್ಗಿದತ್ತನೆಂಬ ರಾಜಪುರೋಹಿತನಿದ್ದನು. ಕೋಸಲದ ದೊರೆ ಮಹಾಕೋಸಲನು ನಿಧನನಾದಾಗ, ಪಸೇನದಿಯು ಮಹಾರಾಜನಾದನು. ತಂದೆಯ ಮೇಲಿನ ಗೌರವದಿಂದಾಗಿ ಆತನು ಅಗ್ಗಿದತ್ತನಿಗೆ ಪುನಃ ರಾಜಪುರೋಹಿತನನ್ನಾಗಿಸಿದನು. ರಾಜನು ಅಗ್ಗಿದತ್ತನಿಗೆ ಅಪಾರ ಗೌರವ ನೀಡುತ್ತಿದ್ದನು. ಗುರುಗಳೇ ಬನ್ನಿ, ಕುಳಿತುಕೊಳ್ಳಿ ಎಂದೆಲ್ಲಾ ಸಂಬೋಧಿಸಿ ಗೌರವ ನೀಡುತ್ತಿದ್ದನು. ಕೆಲದಿನಗಳ ನಂತರ ಅಗ್ಗಿದತ್ತ ಈ ರೀತಿ ಚಿಂತಿಸಿದನು. ಈ ರಾಜನು ನನಗೆ ಅಪಾರ ಗೌರವ ನೀಡುತ್ತಿರುವನು. ಆದರೆ ಇದೇರೀತಿಯಲ್ಲಿ ರಾಜರ ಕೃಪೆಯಲ್ಲಿ ಉಳಿಯುವುದು ಅಸಾಧ್ಯದ ವಿಷಯವಾಗಿದೆ. ರಾಜನ ಕೃಪೆಯಿಂದಾಗಿ ಗೃಹಸ್ಥ ಜೀವನವು ಸುಮಧುರ. ಆದರೆ ಅದು ಯುವಕನಾಗಿದ್ದರೆ ಮಾತ್ರ, ಸಮಾನ ವಯಸ್ಕನಾಗಿದ್ದರೆ ಮಾತ್ರ ಸಮಂಜಸವಾದುದು, ನಾನಾದರೂ ವೃದ್ಧನಾಗಿದ್ದೇನೆ. ಆದ್ದರಿಂದ ನಾನು ಸಾಧುವಾಗಿ ಬಿಡುತ್ತೇನೆ ಎಂದು ಆತನು ರಾಜನಲ್ಲಿ ಅಪ್ಪಣೆ ಪಡೆದು, ತನ್ನ ಐಶ್ವರ್ಯವನ್ನು ಒಂದುವಾರ ಕಾಲ ದಾನಮಾಡಿ, ಆತನು ಲೌಕಿಕ ಜೀವನದಿಂದ ನಿವೃತ್ತನಾದನು, ಸಮಣನಾದನು. ಆತನಿಗೂ ಅಪಾರ ಶಿಷ್ಯರು ಸಿಕ್ಕಿದರು. 

ಅಗ್ಗಿದತ್ತನು ಅಂಗ, ಮಗಧ, ಕುರು ರಾಜ್ಯಗಳ ಗಡಿಪ್ರದೇಶದಲ್ಲಿ ವಾಸವಾಗಿದ್ದನು. ಆತನ ವಾಸಸ್ಥಳವು ಈ ಮೂರು ರಾಜ್ಯಗಳನ್ನು ಸೇರಿತ್ತು. ಆತನು ತನ್ನ ಅನುಯಾಯಿಗಳಿಗೆ ಈ ರೀತಿ ಬೋಧನೆ ಮಾಡಿದನು: ಮಿತ್ರರೇ, ನಿಮ್ಮಲ್ಲಿ ಕಾಮಯುತ ಯೋಚನೆಯಾಗಲಿ, ದುರಾಸೆಯುತ ಯೋಚನೆಯಾಗಲಿ, ಕ್ರೂರಯುತ ಯೋಚನೆಯಾಗಲಿ, ದ್ವೇಷಯುತ ಯೋಚನೆಗಳು ಉಂಟಾದರೆ ನೀವು ನದಿಯ ಮಣ್ಣನ್ನು ಹೂಜಿಯಲ್ಲಿ ತುಂಬಿ, ಇಲ್ಲಿ ಚೆಲ್ಲಿ ಅವನ್ನು ಬರಿದು ಮಾಡಬೇಕು ಎಂದು ಆಜ್ಞಾಪಿಸಿದರು. ಆ ಮೂಢರು ಅದರಂತೆ ತಮ್ಮಲ್ಲಿ ಕೆಟ್ಟ ಆಲೋಚನೆ ಹೊಮ್ಮಿದಂತೆಲ್ಲಾ ನದಿಯಿಂದ ಮಣ್ಣನ್ನು ತಂದು ತಂದು ಆತನಿರುವ ಸ್ಥಳದಲ್ಲಿ ಸುರಿಯುತ್ತಿದ್ದರು. ಹೀಗಾಗಿ ಅಲ್ಲಿ ಒಂದು ಸಣ್ಣ ಗುಡ್ಡವೇ ನಿಮರ್ಾಣವಾಗಿತ್ತು. ಆತನ ಈ ಕೃತ್ಯದಿಂದ ಉತ್ತೇಜಿತರಾದ ಭಕ್ತಾಧಿಗಳು ಆತನಿಗೆ ಅಪಾರ ಕಾಣಿಕೆಗಳನ್ನು ನೀಡಲು ಆರಂಭಿಸಿದರು. 

ಆಗ ಆತನು ಅವರಿಗೆ ಇನ್ನೊಂದು ಶಿಕ್ಷಣ ನೀಡಲು ನಿರ್ಧರಿಸಿದನು. ಆತನು ತನ್ನ ಹಿಂಬಾಲಕರಿಗೆ ಹೀಗೆ ಆಜ್ಞಾಪಿಸಿದನು: ನೀವುಗಳೆಲ್ಲಾ ಪರ್ವತಗಳಿಗೆ, ಬೆಟ್ಟಗಳಿಗೆ ಶರಣು ಹೋಗಿರಿ, ಕಾಡಿಗೆ ಶರಣು ಹೋಗಿ, ತೋಪಿಗೆ ಶರಣು ಹೋಗಿ, ವೃಕ್ಷಗಳಿಗೆ ಶರಣುಹೋಗಿ, ಆಗ ನೀವು ಎಲ್ಲಾ ದುಃಖಗಳಿಂದ ಮುಕ್ತರಾಗುವಿರಿ. ಆತನ ದಡ್ಡ ಶಿಷ್ಯರು ಅದರಂತೆಯೇ ಆಚರಿಸತೊಡಗಿದರು. ಒಂದುದಿನ ಮುಂಜಾನೆ ಭಗವಾನರು ಮಹಾಕರುಣಾ ಸಮಾಪತ್ತಿಯಲ್ಲಿ ಅರಹಂತರಾಗಲು ಅರ್ಹತೆಯಿರುವ ವ್ಯಕ್ತಿಗಳನ್ನು ಹುಡುಕುವಾಗ ಅವರಿಗೆ ಅಗ್ಗಿದತ್ತ ಮತ್ತು ಆತನ ಶಿಷ್ಯರು ಕಾಣಿಸಿಕೊಂಡರು. ಆಗ ಅವರು ಪೂಜ್ಯ ಮೊಗ್ಗಲ್ಲಾನರವರಿಗೆ ಕರೆಸಿ ಹೀಗೆ ಹೇಳಿದರು: ಮೊಗ್ಗಲ್ಲಾನ, ಈ ಅಗ್ಗಿದತ್ತ ಬೃಹತ್ ಸಮೂಹಕ್ಕೆ ದಾರಿ ತಪ್ಪಿಸುತ್ತಿದ್ದಾನೆ ಹೊರತು ಯೋಗ್ಯ ಪಥಕ್ಕೆ ಕರೆದೊಯ್ಯುತ್ತಿಲ್ಲ. ಆತನಿಗೆ ಜ್ಞಾನೋದಯವನ್ನುಂಟು ಮಾಡು. ಆಗ ಮೊಗ್ಗಲ್ಲಾನರು ಹೀಗೆ ಹೇಳಿದರು: ಭಗವಾನ್, ಆತನಿಗೆ ಇಲ್ಲಿ ಅಪಾರ ಅನುಯಾಯಿಗಳಿದ್ದಾರೆ, ನಾನು ಒಬ್ಬನೇ ಹೋದರೆ ಅವರು ಅವಿಧೇಯರಾಗಿ ಅನಾಹುತ ಮಾಡಬಹುದೆಂದು ಭಾವಿಸುತ್ತೇನೆ. ಆದರೆ ನೀವು ಹೋದರೆ ಅವರೆಲ್ಲಾ ವಿಧೇಯರಾಗಬಹುದು.

ಮೊಗ್ಗಲ್ಲಾನ ನಾನೂ ಬರುವೆ, ಆದರೆ ಮೊದಲು ನೀನೇ ಹೋಗುವವನಾಗು.

ದಾರಿಯಲ್ಲಿ ಮೊಗ್ಗಲ್ಲಾನರು ಹೀಗೆ ಚಿಂತನೆ ಮಾಡಿದರು: ಈತನಿಗೆ ಇಲ್ಲಿ ಆಪಾರ ಶಿಷ್ಯರಿದ್ದಾರೆ. ಅವರಿಗೆ ಅಪ್ರಿಯವಾಗಿ ಒಂದು ಪದವನ್ನು ಹೇಳಿದರೂ ಸಹಾ, ಅವರು ನನ್ನ ಮೇಲೆ ಸೈನ್ಯದಂತೆ ಬೀಳುತ್ತಾರೆ. ಆದ್ದರಿಂದ ನಾನು ಅತೀಂದ್ರಿಯ ಶಕ್ತಿಯಿಂದ ಭಾರಿ ಮಳೆಯನ್ನೇ ಸೃಷ್ಟಿಸುವೆ ಎಂದು ಮಹಾಮೊಗ್ಗಲ್ಲಾನರು ಹಿಂಸೆ, ವಾದವಿವಾದ ಇಷ್ಟವಿಲ್ಲದೆ ಭಾರಿ ಮಳೆಯನ್ನು ಸುರಿಸಿದರು. ಆಗ ಅಗ್ಗಿದತ್ತನ ಅನುಯಾಯಿಗಳೆಲ್ಲಾ ಒಬ್ಬೊಬ್ಬರಂತೆ ತಮ್ಮ ಕುಟೀರವನ್ನು ಸೇರಿದರು. ಆಗ ಪರಮಪೂಜ್ಯ ಮಹಾಮೊಗ್ಗಲ್ಲಾನರು ಅಗ್ಗಿದತ್ತನ ಬಾಗಿಲಿನ ಬಳಿ ನಿಂತುಕೊಂಡು ಅಗ್ಗಿದತ್ತ ಎಂದು ಕೂಗಿದರು. ಆಗ ಅಗ್ಗಿದತ್ತನಿಗೆ ಆಶ್ಚರ್ಯವಾಯಿತು. ಆತನಿಗೆ ಈವರೆಗೆ ಯಾರು ಸಹಾ ಹೀಗೆ ಹೆಸರಿಡಿದು ಕೂಗಿರಲಿಲ್ಲ. ಆತನ ಅಹಂಕಾರ ಕೆರಳಿದಂತಾಗಿ ಯಾರದು? ಎಂದನು. 

ನಾನು ಬ್ರಾಹ್ಮಣ.

ಏತಕ್ಕಾಗಿ ಕರೆದಿದ್ದು.

ನನಗೆ ರಾತ್ರಿ ಕಳೆಯುವುದಕ್ಕಾಗಿ ದಯವಿಟ್ಟು ಸ್ಥಳವನ್ನು ತೋರಿಸಿ.

ಇಲ್ಲಿ ಉಳಿಯುವುದಕ್ಕಾಗಿ ಸ್ಥಳವಿಲ್ಲ, ಕೇವಲ ಸಮಣನಿಗಾಗಿ ಒಂದೇ ಕುಟೀರವಿದೆ.

ಅಗ್ಗಿದತ್ತ, ಮಾನವ ಮಾನವರ ಮನೆಗೆ ಹೋಗುತ್ತಾನೆ, ದನಗಳು ದನಗಳ ಕೊಟ್ಟಿಗೆಗೆ ಹೋಗುತ್ತವೆ. ಸಮಣರು ಸಮಣರ ಕುಟೀರಕ್ಕೆ ಹೋಗುವರು. ಆದ್ದರಿಂದ ನಿರಾಕರಿಸದೆ ಇರಲು ಸ್ಥಳವನ್ನು ನೀಡುವವನಾಗು.

ನೀನು ಸಮಣನೇ?

ಹೌದು.

ಹಾಗಾದರೆ ನಿಮ್ಮ ಪಿಂಡಪಾತ್ರೆ ಎಲ್ಲಿ ?

ನನ್ನಲ್ಲಿ ಪಿಂಡಪಾತ್ರೆ ಇದೆ, ಆದರೆ ಪ್ರಯಾಣದಲ್ಲಿ ತೊಂದರೆಯಾಗುವುದೆಂದು ಬಿಟ್ಟು ಬಂದಿದ್ದೇನೆ. ಅಗ್ಗಿದತ್ತ ಕೋಪಗೊಳ್ಳಬೇಡ, ನಾನು ರಾತ್ರಿ ಕಳೆಯುವುದಕ್ಕಾಗಿ ಸ್ಥಳವನ್ನು ತೋರಿಸು.

ಇಲ್ಲಿ ಯಾವ ಸ್ಥಳವೂ ಮಲಗಲಿಕ್ಕಾಗಿ ಇಲ್ಲ.

ಸರಿ, ಆ ಮರಳಿನ ರಾಶಿಯಲ್ಲಿ ಯಾರು ಜೀವಿಸುತ್ತಿದ್ದಾರೆ.

ಅಲ್ಲಿ ನಾಗರಾಜನು (ದಿವ್ಯಸರ್ಪ) ವಾಸಿಸುತ್ತಿದ್ದಾನೆ.

ನನಗೆ ಆ ಮರಳಲ್ಲಿ ನೆಲೆ ನೀಡಬಲ್ಲಿರಾ?

ನಾನು ಆ ಮರಳನ್ನು ನೀಡಲಾರೆ, ಅದು ಆ ನಾಗರಾಜನಿಗೆ ಭಾರಿ ಅಪಮಾನ ಮಾಡಿದಂತೆ ಆಗುವುದು.

ಪರವಾಗಿಲ್ಲ, ನನಗೆ ನೀಡಿ.

ಸರಿ ನಿಮಗೆ ಗೊತ್ತಾಗುವುದು ಎಂದನು ಅಗ್ಗಿದತ್ತ.

ಆಗ ಪರಮಪೂಜ್ಯ ಮೊಗ್ಗಲ್ಲಾನರು ಆ ಮರಳಿನ ರಾಶಿಯೆಡೆಗೆ ನಡೆಯಲು ಆರಂಭಿಸಿದರು. ಆಗ ನಾಗರಾಜನಿಗೆ ಮೊಗ್ಗಲ್ಲಾನರು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಆಗ ನಾಗರಾಜನು ಹೀಗೆ ಯೊಚಿಸಿದನು: ಈ ಭಿಕ್ಷುವು ಇಲ್ಲಿಗೆ ಸಮೀಪಿಸುತ್ತಿದ್ದಾನೆ, ಆತನಿಗೆ ನಾನಿರುವುದು ತಿಳಿದಿಲ್ಲ, ನಾನು ಆತನಿಗೆ ಬೆಂಕಿ ಉಗುಳಿ ಕೊಲ್ಲುತ್ತೇನೆ. ಆಗ ಮೊಗ್ಗಲ್ಲಾನರು ಆ ನಾಗರಾಜನ ಚಿತ್ತವನ್ನು ಓದಿ, ಅರಿತುಕೊಂಡು ಆತನಂತೆಯೇ ಅವರು ಬೆಂಕಿ ಉಗುಳಿದರು. ಇಬ್ಬರೂ ಪರಸ್ಪರ ಬೆಂಕಿ ಮತ್ತು ಹೊಗೆ ಉಗುಳಿದರು. ಆ ಬೆಂಕಿ ಮತ್ತು ಹೊಗೆಯಿಂದ ಮೊಗ್ಗಲ್ಲಾನರವರಿಗೆ ಏನೂ ಆಗಲಿಲ್ಲ. ಆದರೆ ಮೊಗ್ಗಲ್ಲಾನರ ಬೆಂಕಿ ಮತ್ತು ಹೊಗೆಯನ್ನು ನಾಗರಾಜನು ತಡೆದುಕೊಳ್ಳಲಾಗಲಿಲ್ಲ. ಏಕೆಂದರೆ ಮಹಾಮೊಗ್ಗಲ್ಲಾನರು ತೇಜೋ ಕಸಿಣಾ ಧ್ಯಾನವನ್ನು ಸಿದ್ಧಿಪಡೆದಿದ್ದರು. ಹೀಗಾಗಿ ಅವರು ಬೆಂಕಿ ಉಗುಳಿದರೆ ಅದು ಬ್ರಹ್ಮಲೋಕದವರೆಗೂ ವ್ಯಾಪಿಸುತ್ತಿತ್ತು. ಅವರು ತೇಜೋಕಸಿನಾ ಧ್ಯಾನದಲ್ಲಿ ಕ್ಷಣದಲ್ಲಿ ಚತುರ್ಥಧ್ಯಾನ ತಲುಪಿ ನಂತರ ತೀಕ್ಷ್ಣವಾಗಿ ಅಗ್ನಿಯನ್ನು ಉಗುಳುತ್ತಿದ್ದರು. ಆಗ ಅವರ ಶರೀರವಿಡೀ ಬೆಂಕಿಯಿಂದ ಆವೃತವಾಗಿರುವಂತೆ ಕಾಣಿಸುತ್ತಿತ್ತು. ಆಗ ಅಗ್ಗಿದತ್ತ ಮತ್ತು ಆತನ ಅನುಯಾಯಿಗಳು ಮೊಗ್ಗಲ್ಲಾನರನ್ನು ಆ ನಾಗರಾಜನು ಸುಡುತ್ತಿದ್ದಾನೆ ಎಂದು ಭಾವಿಸಿದರು. ನಮ್ಮ ಮಾತು ಕೇಳದೆ ಆತನು ನಾಶವಾದನಲ್ಲ ಎಂದು ವ್ಯಥೆಪಟ್ಟರು. ಆದರೆ ಅವರು ಭಯದಿಂದ ಹೊರಬರಲಿಲ್ಲ. ಆದರೆ ಮೊಗ್ಗಲ್ಲಾನರವರು ನಾಗರಾಜನನ್ನು ದಮಿಸಿಬಿಟ್ಟರು. ಆತನು ಶರಣಾಗತನಾದನು. ತಾನು ಮಾಡುತ್ತಿದ್ದ ಕುಕಾರ್ಯ ನಿಲ್ಲಿಸಿ ಶರಣು ಹೊಂದಿದನು. ಈಗ ಮೊಗ್ಗಲ್ಲಾನರವರು ಮರಳುರಾಶಿಯ ಮೇಲೆ ಕುಳಿತರು. ನಂತರ ನಾಗರಾಜನು ಅವರಿಗೆ ತಿಂಡಿ ತಿನಿಸು ಮುಂದಿಟ್ಟು, ನಂತರ ಅವರಿಗೆ ಛತ್ರಿ ಹಿಡಿಯುವಂತೆ ತನ್ನ ವಿಶಾಲವಾದ ಹೆಡೆಯನ್ನು ವಿಕಸಿಸಿ, ಪೂಜ್ಯ ಮೊಗ್ಗಲ್ಲಾನರವರ ತಲೆಯ ಮೇಲೆ ನೆರಳು ನೀಡುವಂತೆ ಚಾಚಿದನು.

ಮುಂಜಾನೆ ಅಗ್ಗಿದತ್ತ ಮತ್ತು ಇನ್ನಿತರ ಋಷಿಗಳು ಮೊಗ್ಗಲ್ಲಾನರವರು ಬದುಕಿರುವರೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ಬಂದರು. ಆದರೆ ಅವರಿಗೆ ಆಶ್ಚರ್ಯವಾಯಿತು. ಮೊಗ್ಗಲ್ಲಾನರು ಕುಳಿತೇ ಇದ್ದರು ಮತ್ತು ನಾಗರಾಜನು ಅವರ ತಲೆಯ ಮೇಲೆ ಹಡೆಯಾಡಿಸುತ್ತ ಅವರಿಗೆ ನೆರಳು ನೀಡುತ್ತಾ ಇದ್ದನು. ಓಹ್! ಈ ಭಿಕ್ಷುವು ಪ್ರಬಲವಾದ ನಾಗರಾಜನನ್ನೇ ಜಯಿಸಿದ್ದಾನೆ ಎಂದು ಆತನನ್ನು ಅಭಿನಂದಿಸುತ್ತಾ ಆತನ ಸುತ್ತಲೂ ನಿಂತರು.

ಅದೇ ಸಮಯದಲ್ಲಿ ಭಗವಾನರು ಅತ್ತಲಿಂದ ಬರುತ್ತಿದ್ದರು. ತಕ್ಷಣ ಮೊಗ್ಗಲ್ಲಾನರು ಅವರಿಗೆ ವಂದಿಸಿದರು. ಇವರು ನಿಮಗಿಂತ ಶ್ರೇಷ್ಠರೇ? ಎಂದು ಅಗ್ಗಿದತ್ತ ಕೇಳಿದಾಗ, ಇವರೇ ಮಹಾಮಹೀಮರಾದ ಬುದ್ಧರು, ಸಮ್ಮಾಸಂಬೋಧಿ ಪಡೆದವರು, ನಿಬ್ಬಾಣಕ್ಕೆ ಮಾರ್ಗದಶರ್ಿಯೂ. ನಾನು ಕೇವಲ ಅವರ ಶಿಷ್ಯನಷ್ಟೇ ಆಗಿದ್ದೇನೆ. ನಂತರ ಭಗವಾನರು ಆಸನದಲ್ಲಿ ಕುಳಿತರು. ಆಗ ಅಗ್ಗಿದತ್ತ ಮತ್ತು ಇತರ ಋಷಿಗಳು ಹೀಗೆ ಮಾತನಾಡಿಕೊಂಡರು. ಕೇವಲ ಶಿಷ್ಯನ ಅತೀಂದ್ರಿಯ ಸಾಮಥ್ರ್ಯ ಹೀಗಿರಬೇಕಾದರೆ ಅವರ ಗುರುಗಳಾದ ಬುದ್ಧರ ಸಾಮಥ್ರ್ಯ ಹೇಗಿರಬೇಕು! ಎಂದು ಯೋಚಿಸಿ ಶ್ರದ್ಧೆಯುಳ್ಳವರಾದರು. ಭಗವಾನರಿಗೆ ವಂದಿಸಿದರು. ಆಗ ಭಗವಾನರು ಅಗ್ಗಿದತ್ತನಿಗೆ ನಿನ್ನ ಶಿಷ್ಯರಿಗೆ ಏನೆಂದು ಉಪದೇಶ ನೀಡುವೆ ಎಂದು ವಿಚಾರಿಸಿದಾಗ, ಆತನು ಬೆಟ್ಟ, ಮರ, ಮಂದಿರಗಳಿಗೆ ಶರಣು ಹೋದರೆ ಒಬ್ಬನು ದುಃಖದಿಂದ ಮುಕ್ತರಾಗುವರು ಎಂದು ಹೇಳಿದ್ದೇನೆ ಎಂದನು.

ಯಾವಾಗ ಭಯವು ಪೀಡಿಸುವುದೋ ಆಗ ಬಹಳಷ್ಟು ಮಾನವನು ಬೆಟ್ಟಗಳಿಗೆ, ಕಾಡುಗಳಿಗೆ, ಮರಗಳಿಗೆ, ಮಂದಿರಗಳಿಗೆ, (ಪೂಜಾ ಸ್ಥಳಗಳಿಗೆ) ಶರಣು ಹೋಗುತ್ತಾರೆ. (188)

ಆದರೆ ಅಂತಹ ಯಾವ ಶರಣು ಕ್ಷೇಮಕರವಲ್ಲ ಮತ್ತು ಅಂತಹ ಯಾವುದೂ ಉತ್ತಮ ಶರಣು ಅಲ್ಲ! ಅಂತಹ ಶರಣುವಿನಿಂದ ಯಾರೊಬ್ಬರೂ ದುಃಖಗಳಿಂದ ಮುಕ್ತರಾಗಲು ಸಾಧ್ಯವಿಲ್ಲ. (189)

ಆದರೆ ಯಾರು ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘದಲ್ಲಿ ಶರಣು ಹೋಗುವರೋ ಅಂತಹವರು ಮಾತ್ರ ಸಮ್ಮಾ ಪ್ರಜ್ಞಾದಿಂದಾಗಿ ನಾಲ್ಕು ಆರ್ಯಸತ್ಯಗಳನ್ನು ಅರಿಯುತ್ತಾರೆ.   (190)

ಅದೆಂದರೆ ದುಃಖ ಸತ್ಯ, ದುಃಖ ಸಮುದಾಯ ಸತ್ಯ (ಕಾರಣ) ದುಃಖ ನಿರೋಧ ಸತ್ಯ ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ ಸತ್ಯ, ಇವುಗಳನ್ನು ಅರಿಯುತ್ತಾರೆ. (191)

ಇಂತಹ ಶರಣು ಕ್ಷೇಮಕರವಾಗಿದೆ, ಇಂತಹ ಶರಣು ಉತ್ತಮೋತ್ತಮವಾಗಿದೆ, ಇಂತಹ ಶರಣುವಿನಲ್ಲಿ ಶರಣು ಹೋದಾಗ ದುಃಖವೆಲ್ಲದರಿಂದ ಮುಕ್ತರಾಗಬಹುದು. (192)

ಆಗ ಭಗವಾನರು ಆತನಿಗೆ ಈ ಮೇಲಿನ ಗಾಥೆಗಳನ್ನು ನುಡಿದು ತಿದ್ದಿದರು. ನಂತರದ ಸುತ್ತದ ಅಂತ್ಯದಲ್ಲಿ ಅವರೆಲ್ಲಾ ಅರಹಂತರಾದರು. ಜೊತೆಗೆ ಅತೀಂದ್ರಿಯ ಶಕ್ತಿಗಳನ್ನು ಹೊಂದಿದರು. ನಂತರ ಭಿಕ್ಷುಗಳಾಗಿ, ಭಗವಾನರನ್ನು ಹಿಂಬಾಲಿಸಿ ಬರುತ್ತಿದ್ದರು. ಆಗ ಇವರನ್ನು ಕಂಡ ಜನರಲ್ಲಿ ಗೊಂದಲ ಉಂಟಾಯಿತು. ಏನೆಂದರೆ: ಅಗ್ಗಿದತ್ತ ಋಷಿಯು ಶ್ರೇಷ್ಠನೋ ಅಥವಾ ಬುದ್ಧ ಭಗವಾನರು ಶ್ರೇಷ್ಠರೋ? ಎಂದು.

ಆಗ ಭಗವಾನರಿಗೆ ಅವರ ಗೊಂದಲು ಅರ್ಥವಾಯಿತು. ಅವರು ಅಗ್ಗಿದತ್ತನಿಗೆ ಅಗ್ಗಿದತ್ತ, ನಿನ್ನ ಶಿಷ್ಯರ ಸಂದೇಹ ನಿವಾರಿಸು ಎಂದರು. ಆಗ ಅವರಿಗೂ ಪರಿಸ್ಥಿತಿ ಅರ್ಥವಾಗಿ ಆತನೂ ತನ್ನ ಅತೀಂದ್ರಿಯ ಶಕ್ತಿಯಿಂದಾಗಿ ಏಳುಬಾರಿ ಆಕಾಶಕ್ಕೆ ಹಾರಿ ನಂತರ ಭಗವಾನರ ಪಾದದಡಿ ಶಿರಬಾಗಿ ವಂದಿಸಿ ಇವರೇ ನನ್ನ ಗುರುಗಳು, ನಾನು ಇವರ ಶಿಷ್ಯ ಮಾತ್ರನಾಗಿದ್ದೇನೆ, ಇವರಿಂದಲೇ ನಾನು ಸಮ್ಮಾದೃಷ್ಟಿ ಪಡೆದಿದ್ದೇನೆ, ಮಿಥ್ಯ ಶರಣುಗಳನ್ನು ತೊರೆದಿದ್ದೇನೆ, ಅವರ ಅನುಗ್ರಹದಿಂದಲೇ ಅರಹಂತನು, ಅತೀಂದ್ರಿಯ ಶಕ್ತಿವಂತನು ಆಗಿದ್ದೇನೆ ಎಂದು.

6.2 ಜಿಪುಣಾಗ್ರೇಸನ ಲೋಭ ದಮನ

ಒಂದು ದಿನ ಭಗವಾನರು ಮುಂಜಾನೆ ಮಹಾಕರುಣಾ ಸಮಾಪತ್ತಿಯಲ್ಲಿ ಇಂದು ಯಾರು ಜ್ಞಾನೋದಯವನ್ನು ಪಡೆಯುವರು ಎಂದು ವೀಕ್ಷಿಸುವಾಗ ಅವರಿಗೆ ರಾಜಗೃಹದ ಬೆಲ್ಲವೆಂಬ ಪಟ್ಟಣದ ಶ್ರೇಷ್ಟಿಯು ಕಂಡು ಬಂದನು. ಆತನು ಮಹಾ ಜಿಪುಣನಾಗಿದ್ದನು. ಆತನು ಕೇವಲ ಬೋಧನೆಯಿಂದ ಬದಲಾಗುವುದಿಲ್ಲ ಜೊತೆಗೆ ಇದ್ದಿಶಕ್ತಿಯು ಅವಶ್ಯಕ ಎಂದು ಅವರಿಗೆ ತಿಳಿಯಿತು. ಹೀಗಾಗಿ ಇದಕ್ಕೆ ಬಹು ಸಮರ್ಥ ಕೇವಲ ಮೊಗ್ಗಲಾನರೇ ಸರಿ ಎಂದು ನಿರ್ಧರಿಸಿ ಅವರು ಮೊಗ್ಗಲಾನರವರಿಗೆ ಕರೆಸಿ  ಆ ದಿನವೇ  ಶ್ರೇಷ್ಟಿಯನ್ನು ಪರಿವತರ್ಿಸಿ ಆತನಿಂದ ದಾನವನ್ನು ಬುಧ್ಧರ ಸಹಿತ ಭಿಕ್ಖುಸಂಘಕ್ಕೆ ನೀಡುವಂತೆ ಮಾಡಬೇಕೆಂದು ಹೇಳಿದರು. ಇದರಿಂದಾಗಿ ಶ್ರೇಷ್ಟಿಗೆ ಆಪಾರ ಪುಣ್ಯವು ಸಿಗುವುದೆಂದು ಹಾಗೇ ಲೋಕೋತ್ತರ ಫಲಪ್ರಾಪ್ತಿಗೂ ಸಹಾಯವಾಗುವುದು ಎಂದು ಅವರು ಹಾಗೇ ನುಡಿದರು. ಹಾಗೆ ಮಾಡಲು ಮೊಗ್ಗಲಾನರು ಒಪ್ಪಿದರು.  

ಆ ದಿನ ಬೆಳಿಗ್ಗೆ ಶ್ರೇಷ್ಟಿಯು ದಾರಿಯಲ್ಲಿ ಒಬ್ಬ ಹಳ್ಳಿಯವನು ಕಜ್ಜಾಯದಂತಹ ಸಿಹಿ ತಿಂಡಿಯನ್ನು ತಿನ್ನುವುದನ್ನು ಕಂಡನು. ಆತನಲ್ಲಿ ರಸತೃಷ್ಣೆಯು ಆರಂಭವಾಯಿತು.. ಹೀಗಾಗಿ ಆತನಿಗೆ ಬೇರೆ ಯಾವ ವಿಷಯದಲ್ಲೂ ಆಸಕ್ತಿಯು ಇಲ್ಲದಂತಾಯಿತು. ಅದರೆ ಅದನ್ನು ಮನೆಯಲ್ಲಿ ಮಾಡಿಸಿದರೆ ಪರರಿಗೂ ಕೊಡಬೇಕಾಗುತ್ತದೆ. ಇದರಿಂದ ಹಣವು ನಷ್ಟವಾಗುತ್ತದೆ ಎಂದು ಆತನು ಯಾರಿಗೂ ಹೇಳಲಾರದೆ ಹಾಗೆಯೇ ಆಸೆಯನ್ನು ಬಿಡಲಾರದೇ ಕ್ಷೊಭೆಯನ್ನು ಅನುಭವಿಸಿದನು. 

ಈತನ ಪರಿಸ್ಥಿತಿಯನ್ನು ಕಂಡು ಆತನ ಹೆಂಡತಿಯು ಉಪಾಯವಾಗಿ ಮಾತಾನಾಡಿಸಿ ವಿಷಯವನ್ನು ಹೊರಹಾಕಿಸಿದಳು. ಹಾಗೂ ಇಷ್ಟೆನಾ ಮನೆಯಲ್ಲಿ ಮಾಡಿದರಾಯಿತು ಎಂದು ಹೇಳಲು ಆತನು ಒಪ್ಪಲಿಲ್ಲ ಕೇವಲ ತನಗಾಗಿಯೇ ಮಾಡಬೇಕೆಂದು ಕರಾರು ಹಾಕಿದನು. ಅದಕ್ಕೆ ಒಪ್ಪಿದ ಆತನ ಹೆಂಡತಿಯು ಆತನನ್ನು  ಮಹಡಿಯ ಮೇಲಕ್ಕೆ ಕರೆದೂಯ್ದು ಎಲ್ಲಾ ಚಿಲಕವನ್ನು ಹಾಕಿ ಅಲ್ಲಿ ಅಡುಗೆಯನ್ನು ಆರಂಭಿಸಿದಳು. 

ಇನ್ನೇನು ತಟ್ಟೆಗೆ ಹಾಕಬೇಕು ಎನ್ನುವಷ್ಟರಲ್ಲಿ ಅಲ್ಲಿ ಆಕಾಶದಲ್ಲಿ ಮೊಗ್ಗಲಾನರು ಪ್ರತ್ಯಕ್ಷರಾದರು. ಅವರನ್ನು ಕಂಡ ಶ್ರೇಷ್ಟಿಯು ಗಾಬರಿಯಾದನು ,ಇಂತಹವರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದರೇ ಇಲ್ಲು ಸಹಾ ನಿರಾಳವಿಲ್ಲವಲ್ಲ ಎಂದು ಭಾವಿಸಿ ಆತನು ಮೊಗ್ಗಲಾನರಿಗೆ ಹೀಗೆ ಹೇಳೀದನು ಓ ಸಮಣನೇ ಆಕಾಶದಲ್ಲಿ ನಿಂತ ಮಾತ್ರಕ್ಕೆ ನಿಮಗೆ ಆಹಾರ ಸಿಗುವುದು ಎಂದು ಭಾವಿಸಿದಿರಾ, ಆ ಆಕಾಶದಲ್ಲೇ ನಡೆದಾಡಿದರೂ ಸಹಾ ಈ ಕಜ್ಜಾಯಗಳು ನಿಮಗೆ ಸಿಗಲಾರದು ಅದನ್ನು ಆಲಿಸಿದ ಮೊಗ್ಗಲಾನರು ಆಕಾಶದಲ್ಲೆ ನಡೆದಾಡಿದರು. ಅದನ್ನು ನೋಡಿದಂತಹ ಶ್ರೇಷ್ಟಿಯು ಹೀಗೆ ನುಡಿದನು,ಕೇವಲ ಆಕಾಶದಲ್ಲಿ ನಡೆದಾಡಿದ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಆಕಾಶದಲ್ಲೇ ಪದ್ಮಾಸನ ಹಾಕಿ ಕುಳಿತರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಆಲಿಸಿದ ಮೊಗ್ಗಲಾನರು ಆಕಾಶದಲ್ಲೆ ಪದ್ಮಾಸನದಲ್ಲಿ ಕುಳಿತರು. ಅದನ್ನು ನೋಡಿದಂತಹ ಶ್ರೇಷ್ಟಿಯು ಹೀಗೆ ನುಡಿದನು,ಕೇವಲ ಆಕಾಶದಲ್ಲೇ ಪದ್ಮಾಸನ ಹಾಕಿ ಕುಳಿತ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಈ ಕಿಟಕಿಯ ಬಳಿ ಬಂದು ನಿಂತರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಆಲಿಸಿ ಮೊಗ್ಗಲಾನರು ಹಾಗೆಯೇ ಕಿಟಕಿಯ ಬಳಿ ಬಂದು ನಿಂತರು. ಕೇವಲ ಈ ಕಿಟಕಿಯ ಬಳಿ ಬಂದು ನಿಂತ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಇಲ್ಲಿ ಭಾರಿ ಹೊಗೆ ಎಬ್ಬಿಸಿದರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಕೇಳಿದ ಮೊಗ್ಗಲಾನರು ಭಾರಿ ಹೊಗೆಯನ್ನು ಸೃಷ್ಟಿಸಿಬಿಟ್ಟರು. ಇದರಿಂದ ಆ ಮಹಡಿಯ ಮೇಲ್ಭಾಗವೆಲ್ಲಾ ಹೊಗೆಯಿಂದ ಆವೃತವಾಯಿತು. ಇದರಿಂದ ಶ್ರೇಷ್ಟಿಗೂ ದಿಕ್ಕೇ ತೋಚದಂತಾಯಿತು. 

ಆಗ ಆತನ ಮನಸ್ಸಿನಲ್ಲಿ ಈ ಬಗೆಯ ಯೋಚನೆಯುಂಟಾಯಿತು.ಕೇವಲ ಹೊಗೆ ಎಬ್ಬಿಸಿದ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಇಲ್ಲಿ ಭಾರಿ ಬೆಂಕಿ ಸೃಷ್ಟಿಸಿದರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಅದರೆ ಅದನ್ನು ಹೇಳಲು ಹೆದರಿದನು ಏಕೆಂದರೇ ಮೊಗ್ಗಲಾನರು ಹಾಗೇಯೇ ಮಾಡುವರೆಂಬ ಭಯವಿತ್ತು. ಆಗ ಶ್ರೇಷ್ಟಿಯು ಹೀಗೂ ಯೋಚಿಸಿದನು ಈ ಸಮಣನು ಹಠವಾದಿಯಂತೆ ಕಾಣುವನು ಈತನು ಬರಿಗೈಯಲ್ಲಿ ಹೋಗುವವನಂತೆ ಕಾಣುತ್ತಿಲ್ಲ. ನಾನು ಈತನಿಗೆ ಒಂದು ಕಜ್ಜಾಯ ಕೊಟ್ಟು ಕಳುಹಿಸಬೇಕು. 

ಪತ್ನಿಯೇ ಈತನಿಗೆ ಒಂದು ಚಿಕ್ಕ ಕಜ್ಜಾಯ ಕೊಟ್ಟು ಕಳುಹಿಸು. ಎಂದನು. ಆಗ ಆಕೆಯು ಬಾಣಲಿಯಲ್ಲಿನ ಎಣ್ಣೆಗೆ  ಸ್ವಲ್ಪ ಹಿಟ್ಟನ್ನು ಹಾಕಿದಳು. ಅದರೆ ಅದು ಇಡೀ ಬಾಣಲೆಯನ್ನು ಆಕ್ರಮಿಸಿತು. ಒಹ್ ನೀನೂ ತಂಬಾ ಹಾಕಿರುವೆ ಎಂದು ಬಯ್ದು ತಾನೇ ಚಮಚದಿಂದ ಸ್ವಲ್ಪ ತಗೆದುಕೊಂಡು ಹಾಕಿದನು. ಅದರೆ ಅದು ಮೊದಲಗಿಂತ ದೊಡ್ಡದಾಗಿಬಿಟ್ಟಿತು. ಆಗ ಚಕಿದನಾದ ಆತನು ಇನ್ನೊಂದು, ಮತ್ತೊಂದು, ನಂತರ ಮಗದೊಂದು ಹಾಕಿದನು ಅದರೆ ಅವೆಲ್ಲವೂ ಹಾಗೆ ಆದವು. 

ಇದರಿಂದ ದಣಿದ ಆತನು ಹೀಗೆ ಹೇಳಿದನು.ಪತ್ನಿಯೇ ಇತನಿಗೆ ನೀನೇ ಒಂದು ಕಜ್ಜಾಯವನ್ನು ನೀಡಿಬಿಡು ಆಗ ಆಕೆಯು ಆತನ ಅಜ್ಞೆಯಂತೆ ಒಂದು  ಕಜ್ಜಾಯವನ್ನು ನೀಡಲು  ಹೋದರೆ ಅವೆಲ್ಲವೂ ಅಂಟಿಕೊಂಡಿದ್ದವು. ಹಾಗೂ ಅವನ್ನು ಆಕೆಯಿಂದ ಬೇಪರ್ಾಡು ಮಾಡಲು ಆಗಲಿಲ್ಲ. ಆಗ ಕೆಂಗೆಟ್ಟ ಆತನು ತಾನೇ ಅವನ್ನು ಬಿಡಿಸಲು ಹೋದನು. ಅದರೆ ಸಾಧ್ಯವಾಗಲಿಲ್ಲ. ನಂತರ ಪತಿ, ಪತ್ನಿ ಇಬ್ಬರೂ ಸೇರಿ ಬೇರೆ ಮಾಡಲು ಯತ್ನಿಸಿದರು.. ಅವರ ಶತಾಯಾಗತಾಯ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಇಬ್ಬರಿಗೂ ಬೆವರು ಹರಿದಿತ್ತು, ಶರೀರವೂ ಅಪಾರ ದಣಿಯಿತು. ಅದರೆ ಅವನ್ನು ಬೇರೆ ಮಾಡಲು ಸಾಧ್ಯವಾಗಲೇ ಇಲ್ಲ.

ಇಷ್ಟರ ಹೊತ್ತಿಗೆ ಆತನ ಬಯಕೆಯು ನಿರಾಸೆಯಾಗಿ ಕೊನೆಗೆ ಆ ತಿಂಡಿಯಿಂದಲೇ  ಆತನಿಗೆ ವಿರಕ್ತಿ ಉಂಟಾಯಿತು. ಆಗ ಆತನು ಪತ್ನಿಗೆ ಹೀಗೆ ಹೇಳಿದನು. ಪತ್ನಿಯೇ ನನಗೆ ಈ ಕಜ್ಜಾಯಗಳು ಬೇಡ ಎಲ್ಲವೂ ಆತನಿಗೆ ಕೊಟ್ಟುಬಿಡು ಎಂದನು. ಆಗ ಆಕೆಯು ಮೊಗ್ಗಲಾನರಿಗೆ ಬುಟ್ಟಿ ತುಂಬಾ ಕಜ್ಜಾಯವನ್ನು ನೀಡಲು ಬಂದಳು. ಆಗ ಮೊಗ್ಗಲಾನರು ಅವರಿರ್ವರಿಗೂ ಬೋಧನೆ ನೀಡಿದರು. ದಾನದ ಮಹತ್ವ, ತಿಸರಣದ ಉತ್ಕೃಷ್ಟತೆ, ತ್ಯಾಗದ ಪರಮ ಲಾಭಗಳು, ಶೀಲದ ಮಹೋನ್ನತೆ ಇತ್ಯಾದಿಗಳನ್ನು ತಿಳಿಸಿದರು. ಇದರಿಂದಾಗಿ ಅವರಿರ್ವರು ಪ್ರಭಾವಿತರಾದರು.  ಬನ್ನಿ ಭಂತೆ ಈ ವೈಭವಯುತ ಪೀಠದಲ್ಲಿ ಕುಳಿತು ಈ ಕಜ್ಜಾಯಗಳನ್ನು ತಿನ್ನಿರಿ. ಎಂದರು..

ಆಗ ಮೊಗ್ಗಲಾನರು ಹೀಗೆ ನುಡಿದರು. ಭಗವಾನರು ಹಾಗೂ 500 ಭಿಕ್ಖುಗಳು ಅಲ್ಲಿ ನಿಮಗಾಗಿ ಕಾಯುತ್ತಿದ್ದಾರೆ. ನಾವು ಈ ಕಜ್ಜಾಯಗಳ ಸಮೇತ ಅಲ್ಲಿಗೆ ಹೋಗೋಣ ನಿಮ್ಮ ಕೈಯಾರೇ ದಾನ ನೀಡುವಿರಂತೆ .

ಭಗವಾನರು ಈಗ ಎಲ್ಲಿಹರು?.

ಇಲ್ಲಿಂದ 45 ಯೋಜನ ದೂರದ ಜೇತವನದಲ್ಲಿ 

ಅಷ್ಟು ದೂರದಲ್ಲಿ ಹೋಗುವುದು ಹೇಗೆಂದು ಅವರು ಗೊಂದಲದಲ್ಲಿ ಇದ್ದಾಗ, ಮೊಗ್ಗಲಾನರು ತಮ್ಮ ಅತಿಮಾನಸ ಶಕ್ತಿಯಿಂದ ಕರೆದೊಯ್ಯುವೆ ಎಂದು ನುಡಿದರು. ನಂತರ ಮೊಗ್ಗಲಾನರು ತಾವು ಶ್ರೇಷ್ಟಿಗಳ ಹಾಗೂ ಕಜ್ಜಾಯಗಳ ಸಮೇತ ಜೇತವನದ ಹೆಬ್ಬಾಗಿಲಿನಲ್ಲಿ ಇರುವಂತಾಗಲಿ ಎಂದು ಸಂಕಲ್ಪಿಸಿದರು..ಅದರಂತೆಯೇ ಅವರೆಲ್ಲರೂ ಕ್ಷಣದಲ್ಲಿ ಜೇತವನದಲ್ಲಿದ್ದರು. ನಂತರ ಅಲ್ಲಿ ಅವರು ತಮ್ಮ ಕೈಯಾರೆ ದಾನ ಮಾಡಿದರು. ಅದರೂ ಆ ಕಜ್ಜಾಯಗಳು ಮುಗಿಯಲಿಲ್ಲ. ನಂತರ ಅವರಿಗೆ ಭಗವಾನರು ಧಮ್ಮ ಬೋಧಿಸಿದಾಗ ಅವರಿರ್ವರು ಸೋತಪತ್ತಿ ಫಲ ಪಡೆದರು. ನಂತರ ಮೊಗ್ಗಲಾನರ ಇಚ್ಚೆಯಂತೆ ಅವರು ಪುನಃ ತಮ್ಮ ಮನೆಯಲ್ಲಿದ್ದರು. ನಂತರ ಅವರು ತಮ್ಮ ಐಶ್ವರ್ಯವನ್ನು ಸಂಘಕ್ಕೆ ಮೀಸಲಾಗಿಟ್ಟರು.

6.3 ನಂದೋಪನಂದನ ರೋಷ ದಮನ

ಒಂದು ದಿನ ಶ್ರಾವಸ್ಥಿಯ ಕೋಟ್ಯಾಧಿಶರಾದ ಆನಾಥಪಿಂಡಿಕರು ಜೇತವನಕ್ಕೆ ಭಗವಾನರ ಬಳಿಗೆ ಬಂದರು. ಹಾಗೂ ಮಾರನೆಯ ದಿನ 500 ಭಿಕ್ಷುಗಳೊಂದಿಗೆ ಭಗವಾನರಿಗೆ ಔತಣಕ್ಕೆ ಆಹ್ವಾನ ನೀಡಿದರು. ಭಗವಾನರು ಮೌನದಿಂದ ಒಪ್ಪಿಗೆ ನೀಡಿದರು.

   ಮಾರನೆಯ ದಿನ ಭಗವಾನರು ಮುಂಜಾನೆ ಕರುಣಾ ಸಮಾಪತ್ತಿಯಲ್ಲಿರುವಾಗ ಇಂದು ಯಾರಿಗೆ ಜ್ಞಾನೋದಯವನ್ನುಂಟು ಮಾಡಲಿ ಎಂದು ವೀಕ್ಷಿಸಿದಾಗ ಅವರಿಗೆ ನಂದೋಪನಂದನು ಕಾಣಿಸಿಕೊಂಡನು.

ನಂದೋಪನಂದನು ದಿವ್ಯ ನಾಗನಾಗಿದ್ದನು. ನಾಗರಲ್ಲಿ 3 ವಿಧ, ಅಂಡಜ ಅಂದರೆ ಮೊಟ್ಟೆಯಿಂದ ಜನಿಸುವವರು, ಗರ್ಭಜ ಗರ್ಭದಿಂದ ಜನಿಸುವವರು, ಮತ್ತು ಓಪಪಾತಿಕ ಅಂದರೆ ದೇವ ಹಾಗೂ ಪೇತಗಳಂತೆ ಮಾನವರಿಂದ ನೇರವಾಗಿ ಆ ನಿದರ್ಿಷ್ಟ ರೂಪ ಪಡೆಯುವುದು. ನಂದೋಪನಂದನು ಒಪಪಾತಿಕ ನಾಗನಾಗಿದ್ದನು. ಈ ನಂದೋಪನಂದನು ಆಪಾರ ದಿವ್ಯ ಶಕ್ತಿಗಳಿಂದ ಕೂಡಿದ್ದನು. ಅದರೆ ಆತನಲ್ಲಿ ಅಹಂನಿಂದಾಗಿ ಆತನಿಗೆ ಧಮ್ಮವು ಅರ್ಥವಾಗಲೂ ಪ್ರಧಾನ ಅಡ್ಡಿಯಾಗಿತ್ತು. ಆತನ ಗರ್ವಭಂಗ ಕೇವಲ ಮೊಗ್ಗಲಾನರಿಂದ ಸಾಧ್ಯ ಎಂದು ಭಗವಾನರಿಗೆ ತಿಳಿದಿತ್ತು.. ಹೀಗಾಗಿ ಆತನಿಂದಲೇ ನಂದೊಪನಂದನ ದಮನ ಮಾಡಲು ಭಗವಾನರು ನಿರ್ಧರಿಸಿದರು. ನಂತರ ಭಗವಾನರು ಆನಂದರವರನ್ನು ಕರೆದು 500 ಭಿಕ್ಖುಗಳೊಂದಿಗೆ ದಿವ್ಯಲೋಕಗಳಿಗೆ ಭೇಟಿ ನೀಡಲು ಬೇಕಾದ ಸಿದ್ಧತೆ ಆರಂಭಿಸು ಎಂದರು.

ನಂದೋಪನಂದನು ದಿವ್ಯವಾಧ ವೈಭವದಿಂದ ಕೂಡಿದ್ದನು. ಈ ನಂದೋಪನಂದನ ವಾಸಸ್ಥಳದ ಮೇಲ್ಭಾಗದಲ್ಲೇ ತಾವತಿಂಸ ಲೋಕವಿತ್ತು. ಹೀಗಾಗಿ ಭಗವಾನರು ಭಿಕ್ಖುಗಳನ್ನು ಕರೆದುಕೊಂಡು ಆತನ ವಾಸಸ್ಥಳದ ಮೇಲ್ಭಾಗದಿಂದ ಹಾರಿಹೋಗುತ್ತಿದ್ದರು. ಅವರ ಪಾದದ ಧೂಳು ನಾಗರ ಮೇಲೆ ಬೀಳಲಾರಂಬಿಸಿತು. ಇದರಿಂದಾಗಿ ನಂದೋಪನಂದನು ಕೆರಳಿಹೋದನು. ನಾನು ಹೀಗೆ ಹೋಗಲೂ ಬಿಡಲಾರೆ ಎಂದು ಸಂಕಲ್ಪ ಮಾಡಿದನು. ನಂತರ ನಂದೋಪನಂದನು ಬೃಹತ್ ಆಕಾರವನ್ನು ತಾಳಿ ಮೇರು ಪರ್ವತವನ್ನು 7 ಸುತ್ತು ಸುತ್ತುವರೆದು ತನ್ನ ಬೃಹತ್ ಹೆಡೆಯನ್ನು ತಾವತಿಂಸ ಲೋಕಕ್ಕೆ ಅಡ್ಡವಾಗಿರಿಸಿದನು. ನಂತರ ಅಪಾರವಾದ ಕತ್ತಲೆಯನ್ನು ಸೃಷ್ಟಿಸಿ ಕತ್ತಲೆಯನ್ನುಂಟು ಮಾಡಿದನು..

    ಈ ತಕ್ಷಣದ ಕತ್ತಲೆ ಕಂಡು ಪೂಜ್ಯ ಅರಹಂತ ರತ್ನಪಾಲರು ಹೀಗೆ ಹೇಳಿದರು :  ಭಗವಾನ್ ನಾವು ಯಾವಾಗಲೇ ಆಗಲಿ ಈ ಮಾರ್ಗದಲ್ಲಿ ಸಾಗಬೇಕಾದರೆ ಸುನೇರು ಪರ್ವತವು ಕಾಣಿಸುತ್ತಿತ್ತು ಹಾಗೆಯೇ ಮೇಲೆ ತಾವತಿಂಸವು ಹಾಗೂ ಅಲ್ಲಿನ ವೈಜಯಂತ ವಿಮಾನ ಅರಮನೆಯು ಮತ್ತು ಅದರ ದಿವ್ಯ ಧ್ವಜವೂ ಕಾಣುತ್ತಿತ್ತು. ಈಗ ಅವೆಲ್ಲ ಏಕೆ ಕಾಣುತ್ತಿಲ್ಲ. ?

ರತ್ನಪಾಲ ನಂದೋಪನಂದ ನಾಗನು ಕೋಪಾರೋಷದಿಂದಾಗಿ ಬೃಹದಾಕಾರ ತಾಳಿ ಸುಮೇರುವನ್ನು ಸುತ್ತುವರೆದು ತನ್ನ ಹೆಡೆಯಿಂದ ತಾವತಿಂಸವನ್ನು ಅಡಗಿಸಿ, ತನ್ನ ದಿವ್ಯಶಕ್ತಿಯಿಂದ ಕತ್ತಲೆಯನ್ನುಂಟು ಮಾಡಿದ್ದಾನೆ. ಎಂದು ಭಗವಾನರು ಉತ್ತರಿಸಿದರು.

ಆಗ ರತ್ನಪಾಲರು ಹೀಗೆ ಕೇಳಿದರು ;ಭಂತೆ ನಾನು ಆತನ ದಮನ ಮಾಡಲೇ?

ಅದರೆ ಭಗವಾನರು ನಿರಾಕರಿಸಿದರು. ನಂತರ ಭಂತೆ ಭದ್ಧಿಯಾ, ಭಂತೆ ರಾಹುಲ, ಮತ್ತು ಇತರರು ನಂದೋಪನಂದನನ್ನು ದಮಿಸಲು ಅಪ್ಪಣೆ ಕೇಳಿದರು . ಅದರೆ ಭಗವಾನರು ಎಲ್ಲರನ್ನೂ ನಿರಾಕರಿಸಿದರು.

ನಂತರ ಪೂಜ್ಯ ಮಹಾಮೊಗ್ಗಲಾನರು ಭಗವಾನ್ ನಾನು ಆತನನ್ನು ದಮಿಸಲೇ?

ಆಗ ಭಗವಾನರು ಮೊಗ್ಗಲಾನ ದಮಿಸು ಎಂದರು.

ತಕ್ಷಣ ಮೊಗ್ಗಲಾನರು ನಂದೊಪನಂದನಿಗಿಂತ ಬೃಹತಾಕಾರ ತಾಳಿ ಆತನನ್ನೆ 14 ಬಾರಿ ಸುತ್ತುವರೆದು ಆತನ ಹೆಡೆಯ ಮೇಲೇ ಬೃಹತ್ ಹೆಡೆ ಆವರಿಸಿ ಆತನಿಗೆ ಅದುಮತೊಡಗಿದರು. ಆಗ ನಾಗನು ಹೊಗೆಯನ್ನು ಬಿಡಲಾರಂಬಿಸಿದನು. ಆ ಹೊಗೆಯು ಮೊಗ್ಗಲಾನರಿಗೆ ಏನೂ ಮಾಡಲಿಲ್ಲ. ಈಗ ಮೊಗ್ಗಲಾನರು ಇನ್ನಷ್ಟು ತೀಕ್ಷ್ಣವಾದ ಹೊಗೆಯನ್ನು ಬಿಟ್ಟರು. ಅದು ನಾಗನಿಗೆ ಕ್ಷೊಭೆಯನ್ನುಂಟು ಮಾಡಿತು. ನಂತರ ನಾಗನು ಬೆಂಕಿಯನ್ನು ಉಗುಳತೊಡಗಿದನು. ಅದು ಮೊಗ್ಗಲಾನರಿಗೆ ಏನೂ ಹಾನಿ ಮಾಡಲಿಲ್ಲ. ಆಗ ಮೊಗ್ಗಲಾನರು ತಾವು ಬೆಂಕಿಯನ್ನು ಉಗುಳಲಾರಂಬಿಸಿದರು. ಅದು ನಾಗನಿಗೆ ಉರಿಯನ್ನುಂಟು ಮಾಡಿತು. ಮೊದಲೆ ಪರ್ವತಕ್ಕೆ ಅಮುಕಿಕೊಂಡು ನಂತರ ಹೊಗೆ ಬೆಂಕಿಗಳಿಂದ ತೀವ್ರ ಒತ್ತಡಕ್ಕೆ ಗುರಿ ಮಾಡಿದಾಗ ತಲ್ಲಣಿಸಿದ ನಾಗನು ಮೊಗ್ಗಲಾನರಿಗೆ ಹೀಗೆ ಕೇಳಿದನು : ಪೂಜ್ಯರೇ ತಾವು ಯಾರು?

ನಾನು ಮೊಗ್ಗಲಾನ

ದಯವಿಟ್ಟು ತಮ್ಮ ಭಿಕ್ಷುರೂಪವನ್ನು ಪ್ರಕಟಪಡಿಸಿ.

ಆಗ ಮೊಗ್ಗಲಾನರು ತಮ್ಮ ಭಿಕ್ಷು ರೂಪದಲ್ಲಿ ಕಾಣಿಸಿದರು. ತಕ್ಷಣ ನಾಗನು ಅವರ ಬಲಕಿವಿಯಿಂದ ನುಗ್ಗಿ ಎಡ ಕಿವಿಯಿಂದ ಹೊರಗೆ ಬಂದನು. ನಂತರ ಎಡ ಕಿವಿಯಿಂದ ನುಗ್ಗಿ ಬಲಕಿವಿಯಿಂದ ಹೊರಗೆ ಬಂದನು. ಅದೇ ರೀತಿಯುಲ್ಲಿ ಬಲ ಮೂಗಿನ ಹೊಳ್ಳೆಯಲ್ಲಿ ನುಗ್ಗಿ ಎಡ ಹೊಳ್ಳೆಯಿಂದ ಹೊರ ಬಂದನು , ನಂತರ ಎಡ ಮೂಗಿನ ಹೊಳ್ಳೆಯಲ್ಲಿ ನುಗ್ಗಿ ಬಲ ಮೂಗಿನ ಹೊಳ್ಳೆಯಿಂದ ಹೊರಗೆ ಬಂದನು. ಆಗ ತಕ್ಷಣ ಮೊಗ್ಗಲಾನರು ಕಿರಿಯ ರೂಪ ತಾಳಿ ಆತನ ಬಾಯಿಯ ಮೂಲಕ ಪ್ರವೇಶಿಸಿ ಆತನ ಹೊಟ್ಟೆಯಲ್ಲಿ ಚಂಕ್ರಮಣ ನಡಿಗೆಯನ್ನು ಆರಂಭಿಸಿದರು. ಆಗ ತಕ್ಷಣ ಭಗವಾನರು ಈ ರೀತಿಯಲ್ಲಿ ಎಚ್ಚರಿಸಿದರು ಎಚ್ಚರ ಮೊಗ್ಗಲಾನ ಈತನು ಪ್ರಬಲ ನಾಗ ಎಂದರು.

ಭಗವಾನ್ ನಾಲ್ಕು ಇದ್ಧಿಪಾದಗಳು ನನ್ನಲ್ಲಿ ಚೆನ್ನಾಗಿ ಅಭಿವೃದ್ಧಿಯಾಗಿವೆ ಹಾಗೂ ನಿರಂತರ ಪುನಾರಾವತರ್ಿತವಾಗಿವೆ. ಆಭ್ಯಸಿತವಾಗಿವೆ,  ವಾಹನದಂತೆ ನಿಮರ್ಿತವಾಗಿವೆ, ಸುಸ್ಥಾಪಿತವಾಗಿದೆ, ಮತ್ತು ಚೆನ್ನಾಗಿ ನೆಲೆಯೂರಿದೆ, ಏಕತ್ರಗೂಡಿ ಘನಿಕೃತವಾಗಿದೆ, ಸರಿಯಾಗಿ ಸಾಧಿಸಲ್ಪಟ್ಟಿದೆ, ನಾನೂ ಇಂತಹ ಲಕ್ಷ ನಂದೂಪನಂದರನ್ನು ದಮಿಸಬಲ್ಲೆ ಈ ಒಬ್ಬ ನಂದೋಪನಂದ ಯಾವ ಮಹಾ ಎಂದರು.

  ಆಗ ನಾಗನು ಈ ರೀತಿಯ ಕುತಂತ್ರವನ್ನು ಯೋಚಿಸಿದನು. : ಈ ಭಿಕ್ಖುವು ಒಳ ಹೋಗಿದ್ದೇ ನನಗೆ ತಿಳಿಯಲಿಲ್ಲ ಅದರೆ ಆತನನ್ನು ಹೊರಗೆ ಕರೆಸಿಕೊಂಡು ಹೊರ ಬರುವಾಗ ಆತನನ್ನು ಹಲ್ಲುಗಳಲ್ಲಿ ಸಿಕ್ಕಿಸಿಕೊಂಡು ತಿಂದು ಬಿಡುವೆನು..ಹೀಗೆ ಯೋಜನೆಯನ್ನು ಹಾಕಿ ಆತನು ಅವರಿಗೆ ಹೀಗೆ ಮಾತಾನಾಡಿಸಿದನು.ಭಂತೆ ದಯವಿಟ್ಟು ಹೊರ ಬನ್ನಿ ನನ್ನ ಹೊಟ್ಟೆಯಲ್ಲಿ ನಡೆದಾಡುತ್ತಾ ತೊಂದರೆ ನೀಡಬೇಡಿ .ಆತನ ಮಾತನ್ನು ನಂಬಿ ಮೊಗ್ಗಲಾನರು ಹೊರ ಬಂದು ಆತನ ಮುಂದೆ ನಿಂತರು.ಅವರನ್ನು ನೋಡಿ ಒಹ್ ಇದು ಇವರ ಕೆಲಸವೇ ಎಂದು ಕೋಪೊದ್ರೇಕನಾಗಿ ತಕ್ಷಣ ನಾಗನು ಅವರ ಮೇಲೆ ವಿಷವಾಯುವನ್ನು ತನ್ನ ಮೂಗಿನಿಂದ ಬಿಟ್ಟನು. ತಕ್ಷಣ ಮೊಗ್ಗಲಾನರು ಚತುರ್ಥ ಸಮಾಧಿಗೆ ಪ್ರವೇಶಿಸಿದರು. ಈ ರೀತಿಯಾಗಿ ಮೊಗ್ಗಲಾನರು ತಮ್ಮ ಮೇಲಿನ ಆಪಾಯವನ್ನು ತಪ್ಪಿಸಿಕೊಂಡರು. ಚತುರ್ಥ ಸಮಾಧಿಯಲ್ಲಿರುವಾಗ ಒಬ್ಬನನ್ನು ಯಾರು ನಾಷವಾಗಲಿ ಗಾಯವನ್ನು ಸಹಾ ಉಂಟುಮಾಡಲಾರರು. ಅವರ ಕೂದಲಿಗೂ ಸಹಾ ಯಾವುದೇ ಹಾನಿಯಾಗಲಿಲ್ಲ. ಇದೇ ಕಾರಣಕ್ಕಾಗಿ ಭಗವಾನರು ಬೇರೆ ಯಾರನ್ನು ಸಹಾ ಆಯ್ಕೆ ಮಾಡಲಿಲ್ಲ. ಅಷ್ಟು ಕ್ಷಿಪ್ರವಾಗಿ ಚತುರ್ಥ ಸಮಾಧಿಗೆ ತಲುಪುವವರು ಬುದ್ಧರನ್ನು ಬಿಟ್ಟರೆ ಅದು ಮಹಾಮೊಗ್ಗಲಾನರೇ ಆಗಿದ್ದರು. ಈ ರೀತಿಯಾಗಿ ಮೊಗ್ಗಲಾನರು ವಿಷವನ್ನು ತಟಸ್ಥಗೊಳಿಸಿದರು.. ಅವರು ಅರಾಮವಾಗಿರುವುದನ್ನು ಕಂಡು ನಾಗನಿಗೂ ಆಶ್ಚರ್ಯವಾಯಿತು. ಅವರ ಕೂದಲಿಗೂ ಹಾನಿಯಾಗಲಿಲ್ಲವಲ್ಲ ಎಂದು ಆತನು ವಿಸ್ಮಯಗೊಂಡನು.

ಈಗ ಮೊಗ್ಗಲಾನರು ಬೃಹತ್ ಸುಪಣ್ಣದ(ಗರುಡ) ರೂಪತಾಳಿದರು. ಸುಪರ್ಣವು ನಾಗರ ಶತ್ರುವೆಂದೆ ಖ್ಯಾತಿ. ಈಗ ಸುಪಣ್ಣವು ನಂದೊಪನಂದರನ್ನು ಬೆನ್ನಟ್ಟಿತು. ಮುಂದಿನ ಭೀಕರತೆ ಅರಿತು ನಾಗನು ಯುವಕನ ರೂಪ ತಾಳಿ ಮೊಗ್ಗಲಾನರ ಪಾದಕ್ಕೆ ಬಿದ್ದನು. ಭಂತೆ ನಾನು ತಮ್ಮಲ್ಲಿ ಶರಣು ಹೋಗುತ್ತೇನೆ ಎಂದನು. ಹಾಗೂ ಅವರ ಪೂಜೆ ಮಾಡಿದನು.

ಆಗ ಮೊಗ್ಗಲಾನರು ಹೀಗೆಂದರು : ನಂದ ಭಗವಾನರು ಇಲ್ಲೆ ಇದ್ದಾರೆ ಅವರಲ್ಲಿಗೆ ಹೋಗೋಣ ಎಂದರು. ಹಾಗೂ ಭಗವಾನರಲ್ಲಿಗೆ ಕರೆದೂಯ್ದರು. ಆಗ ನಾಗನು ಭಗವಾನರಿಗೂ ವಂದಿಸಿ ಅವರ ಶರಣು ಹೋದನು..  ನಾಗರಾಜ ನೀನು ಸುಖಿಯಾಗಿರು ಎಂದು ಭಗವಾನರು ಆತನಿಗೆ ಆಶಿವರ್ಾದ ಮಾಡಿದರು. ಹಾಗೂ ಆತನಿಗೆ ಶೀಲದಲ್ಲಿ ಪ್ರತಿಷ್ಠಾಪನೆ ಮಾಡಿದರು. ನಂತರ ಭಗವಾನರು ಹಾಗೂ ಭಿಕ್ಖುಗಳು ಅಲ್ಲಿಂದ ಆನಾಥಪಿಂಡಿಕನ ಮನೆಗೆ ಹೋದರು.

ಅಲ್ಲಿ ಆನಾಥಪಿಂಡಿಕರು ಕುಶಲ ವಿಚಾರಿಸಿ ಇಂದು ತಡವೇಕೆ ಎಂದು ವಿಚಾರಿಸಿದಾಗ ಮೊಗ್ಗಲಾನರಿಗೂ ಹಾಗೂ ನಂದೊಪನಂದರಿಗೂ ಅತಿಮಾನಸ ಸ್ಪಧರ್ೆಯಿತ್ತು.

ಯಾರು ಗೆದ್ದರು?

ಮೊಗ್ಗಲಾನರು ಗೆದ್ದರು ಮತ್ತು ನಂದನು ಸೋತನು.

ಇದರಿಂದ ಆನಂದಿತನಾದ ಆನಾಥಪಿಂಡಿಕನು ಭಗವಾನರ ಸಹಿತ ಭಿಕ್ಖುಗಣಕ್ಕೆ ಮತ್ತೆ ಏಳು ದಿನ ದಾನಕ್ಕೆ ಆಹ್ವಾನ ನೀಡಿದನು.

6.4 ಅಗ್ರಶ್ರಾವಕರ ಬಗ್ಗೆ ಎಂದಿಗೂ ದ್ವೇಷ ಬೇಡ

(ಅಗ್ರಶ್ರಾವಕ ಆಯುಷ್ಮಂತ ಸಾರಿಪುತ್ತ ಮತ್ತು ಆಯುಷ್ಮಂತ ಮೊಗ್ಗಲ್ಲಾನರಿಗೆ ನಿಂದಿಸಿ ಕೋಕಾಲಿಕನು ನರಕದಲ್ಲಿ ಹುಟ್ಟಿದನು. ಸಂತರನ್ನು ನಿಂದಿಸುವುದು ಮಹಾ ಪಾಪವಾಗಿದೆ.)

ಕೋಕಾಲಿಕನು ದುಶ್ಶೀಲ ಭಿಕ್ಷು ದೇವದತ್ತನ ಶಿಷ್ಯನಾಗಿದ್ದನು. ಇವರಿಬ್ಬರು ಪರಸ್ಪರ ಹೊಗಳಿಕೊಳ್ಳುತ್ತಾ ಭಿಕ್ಷೆಯಲ್ಲಿ ಲಾಭವನ್ನು ಪಡೆಯುತ್ತಿದ್ದರು. ಒಮ್ಮೆ ಕೋಕಾಲಿಕನು ಧಮ್ಮೋಪದೇಶ ಮಾಡಲು ಹೋಗಿ ಅಸಮರ್ಥನಾಗಿ ಅಪಮಾನಿತನಾಗಿದ್ದನು.

ಈ ಕೋಕಾಲಿಕನು ಇರುವೆಡೆ ಒಮ್ಮೆ ಸಾರಿಪುತ್ರ ಮತ್ತು ಮೊಗ್ಗಲ್ಲಾನರು ಮೂರು ತಿಂಗಳ ಕಾಲ ವರ್ಷವಾಸ ಕಳೆದರು. ನಂತರ ಅಲ್ಲಿದ್ದ ಜನರು ಅಗ್ರಶ್ರಾವಕರಾದ ಸಾರಿಪುತ್ರ ಮತ್ತು ಮೊಗ್ಗಲ್ಲಾನರಿಗೆ ಸತ್ಕಾರ, ದಾನಗಳೆಲ್ಲಾ ಮಾಡಲು ಬಂದಿದ್ದರು, ಆದರೆ ಸಂತೃಪ್ತರಾದ ಅವರು ಏನನ್ನೂ ಸ್ವೀರಿಸಲಿಲ್ಲ. ಹಾಗೆಯೇ ಅವರು ಕೋಕಾಲಿಕನಿಗೂ ಏನನ್ನೂ ಕೊಡಿಸಲಿಲ್ಲ. ಇದರಿಂದ ಕ್ರುದ್ಧನಾದ ಕೋಕಾಲಿಕನು ಹೀಗೆ ಯೋಚಿಸಿದನು: ಈ ಥೇರರು ತಾವು ಸ್ವೀಕರಿಸಲಿಲ್ಲ, ನನಗೂ ಕೊಡಿಸಲಿಲ್ಲ. ಹಾಗೆಯೇ ಅಸೂಯಪರ ವರ್ತನೆ ಮಾಡಲಾರಂಭಿಸಿದಾಗ ಅವರು ಅಲ್ಲಿಂದ ಹೊರಟರು. ಇದು ಜನರಿಗೆ ಗೊತ್ತಾಗಿ ಅವರು ಕೋಕಾಲಿಕನಿಗೂ ದೂರ ಅಟ್ಟಿದರು. 

ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ತಂಗಿದ್ದರು. ಆಗ ಕೋಕಾಲಿಕನು ಭಗವಾನರು ಇರುವೆಡೆಗೆ ಬಂದನು. ಭಗವಾನರಿಗೆ ವಂದಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಕೋಕಾಲಿಕನು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರಾಗಿದ್ದಾರೆ, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ.

ಹೀಗೆ ಹೇಳಿದ ಕೋಕಾಲಿಕ ಭಿಕ್ಷುವಿಗೆ ಭಗವಾನರು ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಉತ್ತಮರಾಗಿದ್ದಾರೆ.

ಎರಡನೆಯ ಬಾರಿಯೂ ಮತ್ತು ಮೂರನೆಯ ಬಾರಿಯೂ ಕೋಕಾಲಿಕ ಭಿಕ್ಷುವು ಭಗವಾನರಿಗೆ ಈ ರೀತಿ ಹೇಳಿದನು: ಭಂತೆ! ಯಾದಾಪಿ ನಾನು ಭಗವಾನರಲ್ಲಿ ಶ್ರದ್ಧೆ ಇಡುವೆನು ಹಾಗು ಪ್ರಸನ್ನನಾಗಿರುವೆನು. ಆದರೂ ಸಹಾ ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರು, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ. ಮೂರನೆಯ ಬಾರಿಯೂ ಸಹಾ ಭಗವಾನರು ಕೋಕಾಲಿಕನಿಗೆ ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಅತ್ಯುತ್ತಮರಾಗಿದ್ದಾರೆ.

ಆಗ ಕೋಕಾಲಿಕ ಭಿಕ್ಷು ಆಸನದಿಂದ ಎದ್ದು ಭಗವಾನರಿಗೆ ಪ್ರಣಾಮ ಮಾಡಿ ಪ್ರದಕ್ಷಿಣೆ ಹಾಕಿ ಹೊರಟನು. ಕೋಕಾಲಿಕ ಭಿಕ್ಷು ಹೋದ ಅಲ್ಪಕಾಲದಲ್ಲೇ ಆತನ ಶರೀರದಲ್ಲೆಲ್ಲಾ ಸಾಸುವೆ ಕಾಳಿನಷ್ಟು ಗುಳ್ಳೆಗಳು ಎದ್ದವು. ಸಾಸುವೆ ಕಾಳಿನಿಂದ ಆ ಗುಳ್ಳೆಗಳ ಆಕಾರ ಹೆಸರುಕಾಳಿನಷ್ಟಾದವು. ಹೆಸರುಕಾಳಿನಿಂದ ಅದರ ಗಾತ್ರವು ಬಟಾಣಿಕಾಳಿನಷ್ಟಾಯಿತು. ಬಟಾಣಿ ಕಾಳಿನಿಂದ ಆ ಗುಳ್ಳೆಗಳ ಗಾತ್ರವು ಗೊರಟಿನಷ್ಟಾಯಿತು. ಗೊರಟಿಯ ಗಾತ್ರದಿಂದ ಆ ಗುಳ್ಳೆಗಳು ಬೊರೆಹಣ್ಣಿನಷ್ಟಾಯಿತು. ಬೋರೆ ಹಣ್ಣಿನ ಗಾತ್ರದಿಂದ ಆ ಗುಳ್ಳೆಗಳು ನಲ್ಲಿಕಾಯಿಯಷ್ಟು ದಪ್ಪಗಾದವು. ನಲ್ಲಿಕಾಯಿ ಗಾತ್ರದಿಂದ ಆ ಗುಳ್ಳೆಗಳು ಬೇಲದಹಣ್ಣಿನಷ್ಟಾಯಿತು. ಬೇಲದಹಣ್ಣಿನಷ್ಟು ಆದಮೇಲೆ ಗುಳ್ಳೆಗಳು ಹಿಗ್ಗಿ ಒಡೆದುಹೋದವು. ಕೀವು ಹಾಗು ರಕ್ತವು ಹರಿಯಿತು. ನಂತರ ಕೋಕಾಲಿಕನು ಅದೇ ರೋಗದಿಂದ ಮರಣಿಸಿದನು. ಸಾರಿಪುತ್ತ ಹಾಗು ಮೊಗ್ಗಲ್ಲಾನರ ದ್ವೇಷಚಿತ್ತದ ಪರಿಣಾಮವಾಗಿ ಆತನು ಪದ್ಮನರಕದಲ್ಲಿ ಉದ್ಭವಿಸಿದನು.

ಆಗ ಸಹಂಪತಿ ಬ್ರಹ್ಮನು ರಾತ್ರಿ ಕಳೆಯುತ್ತಿದ್ದಂತೆ ತನ್ನ ಕಾಂತಿಯಿಂದ ಸಂಪೂರ್ಣ ಜೇತವನವನ್ನು ಪ್ರಕಾಶಗೊಳಿಸುತ್ತಾ ಭಗವಾನರು ಇರುವಲ್ಲಿಗೆ ಬಂದನು. ಭಗವಾನರ ಬಳಿಗೆ ಬಂದು ವಂದಿಸಿ ಒಂದುಕಡೆ ನಿಂತುಕೊಂಡನು. ಒಂದುಕಡೆ ನಿಂತ ಸಹಂಪತಿ ಬ್ರಹ್ಮನು ಭಗವಾನರಿಗೆ ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ಭಗವಾನರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.

ಆಗ ಭಗವಾನರು ಆ ರಾತ್ರಿ ಕಳೆದನಂತರ ಭಿಕ್ಷುಗಳಿಗೆ ಆಮಂತ್ರಿಸಿದರು. ನಂತರ ಹೀಗೆ ನುಡಿದರು- ಭಿಕ್ಷುಗಳೇ, ಇಂದು ರಾತ್ರಿ ಸಹಂಪತಿ ಬ್ರಹ್ಮನು ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ನಂತರ ನನಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.

ಹೀಗೆ ನುಡಿದ ನಂತರ ಓರ್ವ ಭಿಕ್ಷುವು ಭಗವಾನರೊಡನೆ ಹೀಗೆ ಕೇಳಿದನು- ಭಂತೆ, ಪದ್ಮ ನರಕದ ಆಯುವು ಎಷ್ಟು ದೀರ್ಘವಾಗಿರುತ್ತದೆ?

ಭಿಕ್ಷು, ಪದ್ಮ ನರಕದ ಆಯುವು ದೀರ್ಘವಾಗಿರುತ್ತದೆ. ಅದರ ಗಣಿಕೆ ಇಷ್ಟು ಸಹಜವಾಗಿಲ್ಲ. ಅದು ಇಷ್ಟು ವರ್ಷ, ನೂರು ವರ್ಷ ಅಥವಾ ಇಷ್ಟು ಲಕ್ಷ ವರ್ಷವೆಂದು ಸೀಮಿತವಾಗಿಲ್ಲ?

ಭಂತೆ, ಉಪಮೆ ನೀಡಬಲ್ಲಿರಾ?

ಭಿಕ್ಷು, ನೀಡಬಹುದು ಎಂದು ಭಗವಾನರು ಹೀಗೆ ನುಡಿದರು- ಭಿಕ್ಷು ಹೇಗೆ ಇಪ್ಪತ್ತು ಖಾರಿ (1 ಖಾರಿ=4 ಮಣ) ಎಳ್ಳನ್ನು ಕೊಂಡೊಯ್ಯುತ್ತಿರುವ ಕೋಸಲದ ಯಾವ ಬಂಡಿಯಿದೆಯೋ ಅದರಿಂದ ಒಬ್ಬ ಪುರುಷನು ಸಾವಿರ ವರ್ಷದ ನಂತರ ಒಂದು ಎಳ್ಳುಕಾಳನ್ನು ತೆಗೆದರೆ, ಇದೇ ಕ್ರಮದಲ್ಲಿ ಕಾಲಾಂತರದಲ್ಲಿ ಇಪ್ಪತ್ತು ಖಾರಿ ಎಳ್ಳನ್ನು ತೆಗೆಯುತ್ತಾ ಮುಗಿಸಿದರೂ ಅದು ಅಬರ್ುದ ನರಕದ ಆಯುವಿನ 20 ಜೀವನಕ್ಕೆ ಸಮನಾಗಿದೆ ಹಾಗು ನಿರಬರ್ುದ ನರಕದ ಒಂದು ಜೀವನ ಕಾಲಕ್ಕೆ ಸಮನಾಗಿದೆ. ಭಿಕ್ಷು ಅಬಬ ನರಕದ 20 ಜೀವನಗಳಿಗೆ ಸಮನಾಗಿ ಅಹಹದ ನರಕದ ಒಂದು ಜೀವನ ಸಮವಾಗಿದೆ. ಭಿಕ್ಷು ಅಹಹ ನರಕದ 20 ಜೀವನಕ್ಕೆ ಸಮವಾದುದು ಅಟಟ ನರಕದ ಒಂದು ಜೀವನ ಕಾಲ. ಅಟಟ ನರಕದ 20 ಜೀವನಗಳಿಗೆ ಸಮನಾದುದು ಕುಮುದ ನರಕದ ಒಂದು ಜೀವನ. ಭಿಕ್ಷು ಕುಮುದ ನರಕದ 20 ಜೀವನಗಳಿಗೆ ಸಮನಾದುದು ಸೌಗಂಧಿಕಾ ನರಕದ ಒಂದು ಜೀವನಕಾಲ. ಭಿಕ್ಷು ಸೌಗಂಧಿಕಾ ನರಕದ 20 ಜೀವನಕ್ಕೆ ಸಮನಾದುದು ಉತ್ಪಲ ನರಕದ ಒಂದು ಜೀವನಕಾಲ. ಉತ್ಪಲ ನರಕದ 20 ಜೀವನಕ್ಕೆ ಸಮನಾದುದು ಪುಂಡರಿಕ ನರಕದ ಒಂದು ಜೀವನ ಕಾಲ. ಪುಂಡರಿಕ ನರಕದ 20 ಜೀವನ ಕಾಲಕ್ಕೆ ಸಮನಾದುದು ಪದ್ಮ ನರಕದ ಒಂದು ಜೀವನಕಾಲ. ಭಿಕ್ಷು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಪ್ರತಿ ದ್ವೇಷಚಿತ್ತ ಮಾಡಿ ಕೋಕಾಲಿಕನು ಪದ್ಮ ನರಕದಲ್ಲಿ ಉತ್ಪತ್ತಿಯಾಗಿದ್ದಾನೆ. ಹೀಗೆ ಹೇಳಿ ಸುಗತರಾದ ಶಾಸ್ತರು ಹೀಗೆ ಹೇಳಿದರು-

1. ಅಲ್ಲಿ ಉತ್ಪನ್ನವಾಗುವ ಪುರುಷರ ಮುಖದಲ್ಲಿ ಕೊಡಲಿಯು ಉದ್ಭವಿಸುತ್ತದೆ. ಮೂರ್ಖ ಕೆಟ್ಟ ಮಾತು ಆಡುತ್ತಾ ಅದರಿಂದಲೇ ಕತ್ತರಿಸಲ್ಪಡುತ್ತಾನೆ.

2. ಯಾರು ನಿಂದನೀಯನ ಪ್ರಶಂಸೆ ಮಾಡುವನೋ ಅಥವಾ ಪ್ರಶಂಸನೀಯರ ನಿಂದೆ ಮಾಡುತ್ತಾನೋ ಆ ಮೂರ್ಖನು ಪಾಪ ಮಾಡುತ್ತಾನೆ ಮತ್ತು ಆ ಪಾಪದ ಕಾರಣದಿಂದ ಆತನು ಸುಖವನ್ನು ಪ್ರಾಪ್ತಿಮಾಡುವುದಿಲ್ಲ. 

3. ಯಾರು ಜೂಜಿನಲ್ಲಿ ತನ್ನ ಸರ್ವಸ್ವ ಧನವನ್ನು ಕಳೆದುಕೊಳ್ಳುವನೋ ಅದು ಅಲ್ಪಹಾನಿಯೇ ಆಗಿದೆ. ಆದರೆ ಎಲ್ಲಕ್ಕಿಂತ ದೊಡ್ಡ ಹಾನಿ ಯಾವುದೆಂದರೆ ತಥಾಗತರ ಬಗ್ಗೆ ಮನವನ್ನು ದೂಷಿತ ಮಾಡುವುದಾಗಿದೆ.

4. ಆರ್ಯ ಪುರುಷರ ನಿಂದೆ ಮಾಡುವವನು ತನ್ನ ಮನ ಮತ್ತು ವಚನವನ್ನು ಪಾಪದಲ್ಲಿ ಹಾಕಿ ನರಕದಲ್ಲಿ ಉದ್ಭವಿಸುತ್ತಾನೆ. ಅಲ್ಲಿನ ಆಯು ಒಂದು ಲಕ್ಷ ನಿರಬರ್ುದ ಹಾಗು 41 ಅಬರ್ುದವಾಗಿದೆ.

5. ಅಸತ್ಯವಾದಿಯು ನರಕಕ್ಕೆ ಹೋಗುವನು ಮತ್ತು ಯಾರು ಮಾಡಿರುವುದನ್ನು ಇಲ್ಲವೆನ್ನುತ್ತಾನೋ ಆತನು ಸಹಾ ಹೀನಕರ್ಮ ಮಾಡುವ ಈ ಇಬ್ಬರು ಪರಲೋಕದಲ್ಲಿ ಸಮಾನರಾಗುತ್ತಾರೆ.

6. ಯಾರು ದೋಷರಹಿತರಾದ ಶುದ್ಧ, ನಿರ್ಮಲ, ಪುರುಷರಿಗೆ ದೋಷಿಸುತ್ತಾರೋ ಅವರ ಪಾಪ ಎದುರು ದಿಕ್ಕಿನಲ್ಲಿ ಬರುತ್ತಿರುವ ಗಾಳಿಗೆ ಧೂಳನ್ನು ಎಸೆದಂತೆ ಅದೇ ಮೂರ್ಖನ ಮೇಲೆ ಬೀಳುತ್ತದೆ.

7. ಯಾರು ಶ್ರದ್ಧಾರಹಿತನೋ, ಯಾರು ಬೇರೆಯವರು ದಾನ ಮಾಡುತ್ತಿದ್ದರೆ ಸಹಿಸಲಾರನೋ, ಯಾರ ಮಾತನ್ನು ಕೇಳುವುದಿಲ್ಲವೋ, ಜಿಪುಣನೋ, ಚಾಡಿತನದಲ್ಲಿ ತಲ್ಲೀನನೋ, ಲೋಭದಲ್ಲಿ ಬಿದ್ದಿರುವನೋ, ಅವನು ವಚನದಿಂದ ಪರರನ್ನು ನಿಂದಿಸುವನು.

8. ದುರ್ವಚನಿಯು, ಸುಳ್ಳುಗಾರನು, ಅನಾರ್ಯನೂ ಬುದ್ಧಿನಾಶಕನೂ, ಪಾಪಿಯು, ಕೆಟ್ಟಕರ್ಮನೂ, ಅಧಮ ಪುರುಷನು ಮತ್ತು ಕೆಳನರಕದಲ್ಲಿ ಹೋಗುವಂತಹ ನೀನು ಇಲ್ಲಿ ಹೆಚ್ಚು ಮಾತು ಆಡದಿರು.

9. ನೀನು ಪಾಪಿ ಆಗಿದ್ದೂ ಅಲ್ಲದೆ, ನಂತರ ನಿಂದೆಮಾಡಿ ನಿನ್ನ ಅಹಿತವನ್ನು ಮಾಡಿಕೊಳ್ಳುತ್ತಿದ್ದೀಯೆ. ಅನೇಕ ಪಾಪಮಾಡಿ ಬಹುಕಾಲ ಹಳ್ಳದಲ್ಲಿ ಬೀಳುವೆ.

10. ಯಾರ ಕರ್ಮವು ನಷ್ಟವಾಗುವುದಿಲ್ಲ, ಮಾಡುವವನು ಅದರ ಫಲ ಪ್ರಾಪ್ತಿಮಾಡುತ್ತಾನೆ. ಪಾಪಕಾರಿ ಮೂರ್ಖನು ತಾನಾಗಿಯೇ ಪರಲೋಕದಲ್ಲಿ ದುಃಖದಲ್ಲಿ ಬೀಳುತ್ತಾನೆ.

11. ಆತನು ಮುಳ್ಳುಗಳಿಂದ ಹಾಗು ತೀಕ್ಷ್ಣ ಅಗ್ರವುಳ್ಳ ಲೋಹದ ಭಜರ್ಿಗಳಿಂದ ಆವೃತವಾದ ನರಕದಲ್ಲಿ ಬೀಳುತ್ತಾನೆ. ಅಲ್ಲಿ ಕಾದ ಲೋಹದ ಗುಂಡುಗಳೇ ಅವನ ಭೋಜನವಾಗಿರುತ್ತದೆ.

12. ನರಕವಾಸಿಗಳಾದ ಯಾರು ಅಲ್ಲಿ ಪ್ರಿಯವಚನ ನುಡಿಯಲಾರರು. ಪ್ರಸನ್ನ ಮುಖದವರು ಹಾಗು ರಕ್ಷಕರೂ ಅಲ್ಲಿ ದೊರೆಯಲಾರದ ಬೆಂಕಿಯಿಂದ ಆವೃತರಾದ ಅವರು ಬೆಂಕಿಯ ಹಾಸಿಗೆಯಲ್ಲಿ ಮಲಗುತ್ತಾರೆ. ಪ್ರಜ್ವಲಿಸುತ್ತಿರುವ ಬೆಂಕಿಯಲ್ಲೇ ಪ್ರವೇಶಿಸಬೇಕಾಗುತ್ತದೆ.

13. ನರಕವಾಸಿಗಳು ಜಾಲಗಳಲ್ಲಿ ಬಂಧಿತರಾಗಿ ಸುತ್ತಿಗೆಗಳಿಂದ ಹೊಡೆದಾಡಿಕೊಳ್ಳುವರು (ಹೊಡೆಯುವರು). ಅವರು ಬಹು ಘೋರ ಅಂಧಕಾರದಲ್ಲಿ ಬೀಳುವರು ಹಾಗು ಅದು ಉನ್ನತ ಪೃಥ್ವಿಯ ರೀತಿ ಹರಡಿರುತ್ತದೆ.

14. ಬೆಂಕಿಯ ಸಮಾನವಾದ ಲೋಹದ ದೊಡ್ಡ ಪಾತ್ರೆಯಲ್ಲಿ ಬೀಳುವರು ಮತ್ತು ಬೆಂಕಿಯ ರೀತಿ ಅದರಲ್ಲಿ ಚಿರಕಾಲ ಮೇಲೆ-ಕೆಳಗೆ ಬಂದು ಹೋಗುತ್ತಾ ಬೇಯುವರು.

15. ಆಗ ಕೀವು ಹಾಗು ರಕ್ತದಿಂದ ಆ ಪಾಪಕಾರಿಯು ಒದ್ದಾಡುತ್ತಾ ಬೇಯುತ್ತಾನೆ. ಯಾವರೀತಿ ಎಂದರೆ ಎಲ್ಲೆಲ್ಲಿ ಒದ್ದಾಡುತ್ತಾನೋ ಅಲ್ಲೆಲ್ಲಾ ಕೀವುರಕ್ತದಿಂದ ಸ್ರವಿಸಿ ಮಲಿನವಾಗುತ್ತಾನೆ.

16. ಪಾಪಿಯು ಮಲಿನವಾದ ನೀರಿನಲ್ಲಿ ಈ ರೀತಿಯಾಗಿ ಬೇಯುತ್ತಾನೆ. ಹೇಗೆಂದರೆ ಆತನು ಈಜಲಾರ. ಏಕೆಂದರೆ ನಾಲ್ಕು ಕಡೆಯೂ ಕಡಾಯಿಗಳಿರುತ್ತವೆ.

17. ಗಾಯಗೊಂಡ ಶರೀರದಿಂದ ಆತನು ತೀಕ್ಷ್ಣವಾದ ಅಸಿಪತ್ರ ವನದಲ್ಲಿ ಪ್ರವೇಶಿಸುತ್ತಾನೆ. ನರಕವಾಸಿಗಳು ಆತನ ನಾಲಿಗೆಯನ್ನು ಹಿಡಿದು ಮುಳ್ಳುಗಳಿಂದ ವಧಿಸುತ್ತಾರೆ.

18. ಆಗ ಆತನ ತೀಕ್ಷ್ಣಧಾರೆಯ ಕತ್ತಿಗೆ ಸಮಾನವಾದ ತೀಕ್ಷ್ಣ ಧಾರೆಯುಳ್ಳ ದುಸ್ತರವಾದ ವೈತರಿಣಿ ನದಿಯಲ್ಲಿ ಬೀಳುತ್ತಾನೆ. ಪಾಪಿಯಾಗಿರುವ ಮೂರ್ಖನು ಅದರಲ್ಲೇ ಬೀಳುತ್ತಾನೆ.

19. ಅಲ್ಲಿ ಕಪ್ಪಾದ ಮತ್ತು ಬಣ್ಣಗಳ ಕಾಗೆಯು ಅವರನ್ನು ತಿನ್ನುತ್ತದೆ. ನಾಯಿಗಳು, ನರಿಗಳು, ವ್ಯಾಘ್ರ, ಹದ್ದುಗಳು ಮತ್ತು ಕಾಗೆಗಳು ಅವರನ್ನು ತಿನ್ನುತ್ತವೆ.

20. ಪಾಪಕಾರಿ ಮಾನವ ನರಕದಲ್ಲಿ ಯಾವ ಜೀವನದ ಅನುಭವ ಪಡೆಯುವನೋ,  ಅದು ದುಃಖಕರವಾಗಿದೆ. ಆದ್ದರಿಂದ ಮನುಷ್ಯನು ಪ್ರಮಾದರಹಿತನಾಗಿ ತನ್ನ ಉಳಿದ ಜೀವನವನ್ನು ಒಳ್ಳೆಯ ಕರ್ಮದಿಂದ ಜೀವಿಸಲಿ.

21. ಪದ್ಮ ನರಕವು ಉತ್ಪನ್ನವಾಗುವವರ ಆಯುವು ಪಂಡಿತರ ಗಣಕದಿಂದ ಎಳ್ಳನ್ನು ಒಂದೊಂದಾಗಿ ಎಣಿಸುವಷ್ಟು ದೀರ್ಘಯುತವಾಗಿದೆ. ಅದು 4 ನರಕ ಕೋಟಿ ಮತ್ತು 1200 ಕೋಟಿಗೆ ಸಮನಾಗಿದೆ.

22. ಇಲ್ಲಿ ಎಷ್ಟೆಲ್ಲವೂ ದುಃಖವನ್ನು ನೀಡಲಾಗಿದೆಯೋ, ಅದೆಲ್ಲವನ್ನು ಅವರು ಅನುಭವಿಸಬೇಕಾಗಿದೆ. ಆದ್ದರಿಂದ ಪವಿತ್ರ ಉತ್ತಮ ಸಾಧುಗಳಲ್ಲಿ ಪ್ರತಿ ತಮ್ಮ ಮನಸ್ಸನ್ನು ಹಾಗು ವಚನವನ್ನು ಸದಾ ಸಂಯಮವಾಗಿಡಿ.

ಒಮ್ಮೆ ಭಿಕ್ಷುಗಳು ಆತನ ಬಗ್ಗೆ ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ ಭಗವಾನರು ಹೀಗೆ ಹೇಳಿದರು: ಭಿಕ್ಷುಗಳೇ, ಕೋಕಾಲಿಕನು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲಿಯೂ ಸಹಾ ತನ್ನ ನಾಲಿಗೆಯ ನಿಯಂತ್ರಣ ತಪ್ಪಿ ಸಾವನ್ನು ಅಪ್ಪಿದ್ದಾನೆ ಎಂದರು. ನಂತರ ಭಿಕ್ಷುಗಳ ಕೋರಿಕೆಯಂತೆ ಆತನ ಹಿಂದಿನ ಜನ್ಮವನ್ನು ತಿಳಿಸಿದರು.

ಒಮ್ಮೆ ಹಿಮಾಲಯದ ಸರೋವರದಲ್ಲಿ ಆಮೆಯೊಂದು ಇರುತ್ತಿತ್ತು. ಒಂದುದಿನ ಎರಡು ಯುವ ಹಂಸಗಳು ಆಹಾರವನ್ನು ಅನ್ವೇಷಿಸುವಾಗ ಆತನೊಂದಿಗೆ ಪರಿಚಯ ಬೆಳೆಸಿದವು. ಅಲ್ಪಕಾಲದಲ್ಲೇ ಅವರೆಲ್ಲಾ ಮಿತ್ರರಾದರು. ಒಂದುದಿನ ಹಂಸವು ಆಮೆಗೆ ಹೀಗೆ ಹೇಳಿತು: ಮಿತ್ರ ಹಿಮಾಲಯದಲ್ಲಿ ಚಿತ್ರಕೂಟ ಪರ್ವತವೆಂಬುದೊಂದಿದೆ. ಅದು ಸುವರ್ಣ ವರ್ಣದ್ದು. ಅದು ವಾಸಿಸಲು ಅತ್ಯಂತ ಮಧುರವಾದುದು, ನಮ್ಮೊಂದಿಗೆ ಅಲ್ಲಿ ಬರಲು ಇಚ್ಛಿಸುವೆಯಾ?

ನನಗೆ ಅಂತಹ ಆಸೆಯಿದೆ, ಆದರೆ ನಾನು ಅಲ್ಲಿಗೆ ಹೇಗೆತಾನೇ ಬರಬಲ್ಲೆ.

ನೀನು ಪೂರ್ಣವಾಗಿ ಬಾಯಲ್ಲಿ ನಿಯಂತ್ರಣವಿರಿಸಿದ್ದೇ ಆದರೆ ನಾವು ಕರೆದೊಯ್ಯಬಲ್ಲೆವು.

ಅದಕ್ಕೆ ಆಮೆ ಒಪ್ಪಿತು. ಆಗ ಹಂಸಗಳು ಗಟ್ಟಿಯಾದ ಕೋಲೊಂದನ್ನು ತೆಗೆದುಕೊಂಡು ಬಂದವು. ಆಮೆಗೆ ನಡುವೆ ಕಚ್ಚಿಕೊಂಡು ಬಾಯ್ಬಿಡದೆ ಹಾಗೇ ಇರಲು ಸೂಚಿಸಿ, ತಾವು ಎರಡು ಬದಿಯಲ್ಲಿ ಕಚ್ಚಿಕೊಂಡು ಆಕಾಶದಲ್ಲಿ ಹಾರಿದವು. 

ಹಾಗೆ ಅವು ಆಕಾಶದಲ್ಲಿ ಹಾರುತ್ತಿರುವಾಗ, ಭೂಮಿಯಲ್ಲಿದ್ದ ಕೆಲ ಹುಡುಗರು ನೋಡಲ್ಲಿ, ಹೇಗೆ ಆ ಹಂಸಗಳು ಆಮೆಯನ್ನು ತೆಗೆದುಕೊಂಡು ಹೋಗುತ್ತಿವೆ ಎಂದರು. ಅದು ಕೇಳಿದ ಆಮೆಗೆ ಕೋಪವುಂಟಾಗಿ ಇದರಿಂದ ನಿಮಗೇನು? ಎಂದು ಹೇಳಲು ಬಾಯಿಬಿಟ್ಟಿತು. ತಕ್ಷಣ ಅಕಾಶದಿಂದ ವಾರಣಾಸಿಯ ನಗರದ ಅರಮನೆಯ ಭೂಮಿಗೆ ಬಿದ್ದು ಎರಡು ತುಂಡಾಗಿ ಸತ್ತಿತು. 

ಹೀಗೆ ಕೋಕಾಲಿಕನ ಹಿಂದಿನ ಜನ್ಮದ ವಿವರ ತಿಳಿಸಿ, ಈ ಗಾಥೆಯನ್ನು ತಿಳಿಸಿದರು.

ಯಾವ ಭಿಕ್ಷುವು ನಾಲಿಗೆಯಲ್ಲಿ ಸಂಯಮದಿಂದಿರುವನೋ, ಪ್ರಾಜ್ಞನಂತೆ ಮಾತನಾಡಬಲ್ಲನೋ, ಯಾರು ಅಹಂಕಾರಿಯಲ್ಲದೆ ನಮ್ರನೋ, ಯಾರು ಧಮ್ಮವನ್ನು ಅಕ್ಷರ ಹಾಗು ಅರ್ಥವೊಂದರಲ್ಲಿಯೇ ವಿವರಿಸಬಲ್ಲನೋ, ಅಂತಹವನ ನುಡಿಗಳು ಅತ್ಯಂತ ಮಧುರವಾಗಿರುತ್ತದೆ.

- ಂ0ಂ  

No comments:

Post a Comment

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...