Monday, November 7, 2022

7. ಮೊಗ್ಗಲಾನರ ಹಿಂದಿನ ಜನ್ಮಗಳು

 7. ಮೊಗ್ಗಲಾನರ ಹಿಂದಿನ ಜನ್ಮಗಳು


     

ಜಾತಕ ಕಥೆಗಳ ಅನುಸಾರವಾಗಿ ಮೊಗ್ಗಲಾನರು ಭಗವಾನರಿಗೆ 31 ಜನ್ಮಗಳಿಂದ ಪರಿಚಿತರಾಗಿದ್ದರು ಅದರಲ್ಲಿ 30 ಜನ್ಮಗಳಲ್ಲಿ ಸಾರಿಪುತ್ತರೊಡನೆ ಮಿತ್ರುತ್ವವಿತ್ತು. ಅದರೆ ಜಾತಕ ಕಥೆಗಳ ಪ್ರಕಾರ ಅವರಿಗೆ ಬೋಧಿಸತ್ವರೊಡನೆ ಅತಿನಿಕಟ ಸ್ನೇಹವಿರುವುದು ಸ್ಪಷ್ಟವಾಗಿದೆ.

ಕೆಲವು ಜಾತಕದಲ್ಲಿ ಅವರು ಸೋದರರಾಗಿದ್ದರು.(488,509,543) ಕೆಲವು ಜಾತಕದಲ್ಲಿ ಮಿತ್ರರಾಗಿದ್ದರು.(326), ಕೆಲವು ಜಾತಕದಲ್ಲಿ ಮಂತ್ರಿಯು,(401), ಕೆಲವು ಜಾತಕಗಳಲ್ಲಿ ಶಿಷ್ಯರು(432,522) ಅದರೆ ಕೆಲವು ಜಾತಕಗಳಲ್ಲಿ ಗುರುಗಳು ಸಹಾ ಆಗಿದ್ದರು.(539), ಕೆಲವೊಮ್ಮೆ ಸೇನಾಧಿಪತಿ(525)ಹಾಗೆಯೇ ಸಹ ದೇವತೆಗಳು ಆಗಿದ್ದರು.(450)

      ಇನ್ನೂ ಸಾರಿಪುತ್ತರೊಡನೆ ಅವರ ಸಂಬಂಧ ಹೇಳುವುದಾದರೆ ಇಬ್ಬರೂ ಸಂಸಾರದ ಆಳ ಹಾಗೂ ಅಗಲಕ್ಕೂ ಜೊತೆಗೂಡಿ ಸಂಸಾರವನ್ನು ಕಂಡವರು. ಅವರು ಪ್ರಾಣಿಗಳಾಗಿ ಹುಟ್ಟಿರುವಾಗ ಸಾಧಾರಣವಾಗಿ ಸಮಾನವಾಗಿ ಇದ್ದರು. (160,187,215,476) ಹಾಗೇಯೇ ಸಾರಿಪುತ್ತರವರು ಅತಿ ಉನ್ನತ ಪ್ರಾಣಿಯಾಗಿರುವ ಸಂಧರ್ಭವೇ ಹೆಚ್ಚು.  ಹೇಳುವುದಾದರೇ ಹಾವೂ ಮತ್ತು ಹೆಗ್ಗಣ(37), ಮನುಷ್ಯ ಮತ್ತು ನರಿ(490), ಹಾವು ಮತ್ತು ನರಿ (315), ಹಾಗೇಯೇ ಮಾನವರಾಗಿ ಹುಟ್ಟಿರುವಾಗಲೂ ಸಾರಿಪುತ್ತರವರೇ ಸ್ವಲ್ಪ ಹೆಚ್ಚಿನ ಸ್ಥಾನದಲ್ಲಿದ್ದುದು ಕಂಡು ಬರುವುದು. ಉದಾಹರಿಸುವುದಾದರೆ ರಾಜಕುಮಾರ ಮತ್ತು ಮಂತ್ರಿ(525), ಮಂತ್ರಿ ಮತ್ತು ಗುಲಾಮನ ಮಗ(544), ಬೋಧಿಸತ್ವರ ಸಾರಥಿ ಹಾಗೂ ಆನಂದರ ಸಾರಥಿ(151), ಒಮ್ಮೆ ಮೊಗ್ಗಲಾನರು ದೇವನಾಗಿದ್ದರೆ ಸಾರಿಪುತ್ತರು ತಾಪಸಿ ನಾರದ ಆಗಿದ್ದರು(535), ಅದರೇ ತಾಪಸಿಗಳಾಗಿರುವಾಗ ಅಥವಾ ದೇವತೆಗಳಾಗಿರುವಾಗ ಅವರು ಸಮಾನರಾಗಿರುವುದು ಕಂಡು ಬರುತ್ತದೆ(450,545) ಕೇವಲ ಒಂದು ಬಾರಿ ಮಾತ್ರ ಮೊಗ್ಗಲಾನರು ಸಾರಿಪುತ್ತರ ಹೊರತಾಗಿ ಕಾಣಿಸಿಕೊಳ್ಳುತ್ತಾರೆ. 73ರ ಜಾತಕದಲ್ಲಿ ಅವರಿಬ್ಬರೂ ಜಿಪುಣರಾಗಿದ್ದು ಸಾವಿನ ನಂತರ ಆ ಐಶ್ವರ್ಯದ ಬಳಿಯಲ್ಲಿಯೇ ಹಾವು ಹಾಗೂ ಹೆಗ್ಗಣವಾಗಿ ಹುಟ್ಟುವರು.. ಅದರೆ ಜಾತಕ 78ರಲ್ಲಿ ಮೊಗ್ಗಲಾನರು ಸಕ್ಕರಾಗಿದ್ದು ತಮ್ಮ ವಂಶಜನಿಗೆ ಕಾಣಿಸಿಕೊಂಡು ಜಿಪುಣತನ ವಜರ್ಿಸಿ ದಾನಿಯಾಗಿರುವಂತೆ ಪ್ರೋತ್ಸಾಹಿಸುತ್ತಾರೆ. ಹಾಗೆಯೇ ಜಾತಕ 490 ರಲ್ಲಿ ದುರಾಸೆಯುತ ನರಿಯಾಗಿದ್ದು  ಆಹಾರಕ್ಕಾಗಿ ಆನೆಯ ಶವದಲ್ಲಿ ಹೊಕ್ಕು ಈಚೆಗೆ ಬಾರದೆ ಪರದಾಡುತ್ತದೆ. ಆಗ ಆಸೆಯ ಭೀಕರತೆ ಅರಿಯುತ್ತದೆ.

ಹಾಗೆಯೇ ಪ್ರಸಿದ್ಧವಾದ ಕುರುಧಮ್ಮ ಜಾತಕದಲ್ಲಿ ಮೊಗ್ಗಲಾನರು ಉಗ್ರಾಣದ ನಿರ್ವಹಕರಾಗಿದ್ದು ಸಾರಿಪುತ್ತರು ವ್ಯಾಪಾರಿಯಾಗಿರುತ್ತಾರೆ. ಅವರಿಬ್ಬರು ಯಾವುದೇ ರೀತಿಯ ಕಳ್ಳತನ, ಮೋಸಗಳಿಗೆ ಬಲಿಯಾಗದೇ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ.

  ಸಸ ಜಾತಕದಲ್ಲಿ ಬೋಧಿಸತ್ವರು ಮೊಲವಾಗಿದ್ದಾಗ ಮೊಗ್ಗಲಾನರು ನರಿಯಾಗಿದ್ದರು ಹಾಗೂ ಅವರು ಸಹಾ ಬೋಧಿಸತ್ವರನ್ನು ಕಂಡು ಉಪೂಸಥ ವ್ರತವನ್ನು ಆಚರಿಸುತ್ತಾರೆ.

ಹಾಗೂ ಕಕ್ಕಾರು ಜಾತಕದಲ್ಲಿ ಮೊಗ್ಗಲಾನರು ದೇವಪುತ್ರರಾಗಿರುತ್ತಾರೆ. 

 ಇಂದ್ರಿಯ ಜಾತಕದಲ್ಲಿ ಕಿಸವಚ್ಚರಾಗಿದ್ದರು. ಇಲ್ಲಿಸ ಜಾತಕದಲ್ಲಿ ಸಕ್ರನಾಗಿಯೂ, ಕುರುಂಗಮಿಗ ಹಾಗೂ ಮಹಾಉಕ್ಕುಸ ಜಾತಕದಲ್ಲಿ ಆಮೆಯಾಗಿಯೂ, ಖಂದಹಾಲ  ಜಾತಕದಲ್ಲಿ ಚಂದಸೇನನಾಗಿಯು, ಚೂಲಸುತಸೋಮ ಜಾತಕದಲ್ಲಿ ಸೇನಾಪತಿಯಾಗಿಯು, ಜವನಹಂಸ ಜಾತಕದಲ್ಲಿ ಪಕ್ಷಿಯಾಗಿಯೂ , ತಿತ್ತಿರ ಜಾತಕದಲ್ಲಿ ಆನೆಯಾಗಿಯೂ, ವಣ್ಣರೋಭ , ವ್ಯಾಘ್ಘ ಹಾಗೂ ಇನ್ನುಂದು ತಿತ್ತಿರ ಜತಕದಲ್ಲಿ ಹುಲಿಯಾಗಿಯೂ, ದಸಕಣ್ಣ ಜಾತಕದಲ್ಲಿ ಆಯುರನಾಗಿಯು, ಭೂರಿದತ್ತ ಜಾತಕದಲ್ಲಿ ಸುಭಾಗನಾಗಿಯು, ಮಹಾಜನಕ ಜಾತಕದಲ್ಲಿ ಮಿಗಜಿನನಾಗಿಯು, ಮಹಾ ನಾರದ ಕಸ್ಸಪ ಜಾತಕದಲ್ಲಿ ಬಿಜಕನಾಗಿಯು, ರಾಜೋವಾದ ಜಾತಕದಲ್ಲಿ ಸಾರಥಿಯಾಗಿಯು, ವಿದುರ ಪಂಡಿತ ಜಾತಕದಲ್ಲಿ ಗರುಲ ರಾಜನಾಗಿಯು, ಹತ್ಥಿಪಾಲ ಜಾತಕದಲ್ಲಿ ಗೋಪಾಲನಾಗಿಯು ಮತ್ತು ಶುಧಭೋಜನ ಜಾತಕದಲ್ಲಿ ಚಂದನಾಗಿಯು ಆವರು ಜನ್ಮ ತಾಳಿದ್ದರು.

- ಂ0ಂ  

No comments:

Post a Comment

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...