Monday, November 7, 2022

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ 



12.1 ಉಕ್ಕಚೆಲಾ ಸುತ್ತ:

ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರಿಪುತ್ತ ಹಾಗು ಮೊಗ್ಗಲಾನರೀರ್ವರು ಪರಿನಿಬ್ಬಾಣ ಪಡೆದಿದ್ದರು. ಅದಕ್ಕೆ ಮುಂಚೆಯೇ ಶುದ್ಧೋಧನ, ಯಶೋಧರೆ, ರಾಹುಲ ಇವರೆಲ್ಲರೂ ಪರಿನಿಬ್ಬಾಣ ಪಡೆದಿದ್ದರು. ಆ ಸಮಯದಲ್ಲಿ ಭಗವಾನರು ಭಿಕ್ಷುಗಳೊಡನೆ ತೆರೆದ ಆಕಾಶದಲ್ಲಿ, ನದಿಯ ದಡದಲ್ಲಿ ಕುಳಿತಿದ್ದರು. ಭಗವಾನರು ಭಿಕ್ಖು ಸಮೂಹಕ್ಕೆ ಹೀಗೆ ನುಡಿದರು.

ಭಿಕ್ಷುಗಳೇ, ಈಗ ಸಾರಿಪುತ್ತ ಹಾಗು ಮೊಗ್ಗಲಾನರವರು ಪರಿನಿಬ್ಬಾಣ ಪಡೆದಿರುವುದಕ್ಕಾಗಿ ಈ ಸಭೆಯು ಬರಿದಾದ ಅಥವಾ ಟೊಳ್ಳಾದ ಮನಸ್ಥಿತಿಯನ್ನು ಅನುಭವಿಸುತ್ತಿದೆ. ಆದರೆ ನನಗೆ ಈ ಬಗೆಯ ಬರಿದಾದ ಮನಸ್ಥಿತಿಯಿಲ್ಲ. ಹಾಗೆಯೇ ಸಾರಿಪುತ್ತ ಹಾಗೂ ಮೊಗ್ಗಲಾನರು ಎಲ್ಲಿರುವರು ಎಂಬ ಹಂಬಲಿಕೆಯೂ ಇಲ್ಲ.

ಭಿಕ್ಖುಗಳೇ, ಹಿಂದಿನ ಸಮ್ಮಾಸಂಬುದ್ಧರಿಗೂ ನನಗೆ ಸಾರಿಪುತ್ತ ಹಾಗು ಮೊಗ್ಗಲಾನರ ಜೋಡಿ ಇರುವಂತೆ ಅವರಿಗೂ ಇದ್ದರು. ಹಾಗೆಯೇ ಮುಂದಿನ ಸಮ್ಮಾಸಂಬುದ್ಧರಿಗೂ ಇರುತ್ತಾರೆ.

ಅದ್ಭುತ ಭಿಕ್ಷುಗಳೇ, ಈ ಜೋಡಿಯು ಶಾಸ್ತರ ಬೋಧನೆಗೆ ಅನುಗುಣವಾಗಿಯೇ ಆಚರಿಸಬಲ್ಲ, ಅನುಷ್ಠಾನ ಮಾಡಬಲ್ಲ, ಬುದ್ಧರ ಬುದ್ಧಿವಾದದಂತೆಯೇ ತಿದ್ದಿಕೊಳ್ಳಬಲ್ಲಂತಹ, ಅವರು ನಾಲ್ಕು ಬಗೆಯ ಸಭೆಗಳಿಗೂ ಪ್ರಿಯರಾಗಿದ್ದರು, ಗೌರವಕ್ಕೆ ಪಾತ್ರರಾಗಿದ್ದರು. ಆದರೂ ಭಿಕ್ಷುಗಳೇ, ಆಶ್ಚರ್ಯ, ಅದ್ಭುತ! ತಥಾಗತರಿಗೆ ಇಂತಹ ಅದ್ಭುತ ಅಗ್ರಶ್ರಾವಕರ ಜೋಡಿ ವಿಯೋಗವಾದರೂ ಸಹಾ ನಿರಾಸೆಯಿಲ್ಲ, ಶೋಕವಿಲ್ಲ, ಪ್ರಲಾಪವಿಲ್ಲ. ಏಕೆಂದರೆ ಯಾವುದೆಲ್ಲವೂ ಜನಿಸಿದೆಯೋ, ಅಸ್ತಿತ್ವದಲ್ಲಿದೆಯೋ ಅವೆಲ್ಲವೂ ದೂರವಾಗುತ್ತದೆ (ಎಂಬ ಸ್ಪಷ್ಟ ಜ್ಞಾನವಿರುವುದಕ್ಕಾಗಿ) ವಿಯೋಗವಾಗುವಂತಹುದನ್ನು ಹೇಗೆತಾನೆ ವಿಯೋಗವಾಗಬಾರದು ಎಂದು ಅಳಿಸಲಾಗುತ್ತದೆ?! ನಿಜಕ್ಕೂ ಅಂತಹ ಸ್ಥಿತಿ ಸಾಧ್ಯವಿಲ್ಲ. ಆದ್ದರಿಂದ ಭಿಕ್ಖುಗಳೇ ನಿಮಗೆ ನೀವೇ ದ್ವೀಪಗಳಾಗಿ, ನಿಮಗೆ ನೀವೇ ಶರಣುಹೊಂದಿ. ಬೇರ್ಯಾವ ಆಶ್ರಯವೂ ಬೇಡ, ಧಮ್ಮವೇ (ಜ್ಞಾನವೇ) ನಿಮ್ಮ ಆಶ್ರಯ, ಧಮ್ಮವೇ ನಿಮ್ಮ ಶರಣು, ಬೇರ್ಯಾವ ಶರಣು ಹೋಗದಿರಿ.

ಹೀಗೆ ಭಗವಾನರೇ ಸಾರಿಪುತ್ತರಿಗೆ ಮತ್ತು ಮೊಗ್ಗಲಾನರಿಗೆ ಈ ರೀತಿಯಾಗಿ ಅಂತಿಮ ಪ್ರಶಂಸೆ ಮಾಡಿದರು. ನಂತರ ಅಸ್ಥಿಅವಶೇಷಗಳಿಗೆ ಸ್ತೂಪ ನಿಮರ್ಿಸಲು ಆಜ್ಞೆಯಿತ್ತರು. ನಂತರ ಭಗವಾನರು ರಾಜಗೃಹಕ್ಕೆ ಹೋಗಲು ನಿಶ್ಚಯಿಸಿದರು. ನಂತರ ಬೃಹತ್ ಸಮೂಹದೊಂದಿಗೆ ಅಲ್ಲಿಗೆ ಬಂದರು. 

12.2 ಮೊಗ್ಗಲಾನರ ಸ್ತೂಪ

ನಳಂದದ ಸ್ತೂಪದ ಸ್ಥಳವನ್ನು ಸಾರಿಪುತ್ತರ ಹುಟ್ಟಿನ ಹಾಗು ಪರಿನಿಬ್ಬಾಣದ ಸ್ಥಳವೆಂದು ಭಾವಿಸುತ್ತಾರೆ. ಸಾರಿಪುತ್ತರ ಸ್ತೂಪದಲ್ಲಿ ಪ್ರಧಾನವಾಗಿ ಅವರ ಅಸ್ಥಿ ಅವಶೇಷಗಳಿರುತ್ತದೆ. ಅಂತಹ ಸ್ತೂಪವು ಹಿಂದೆ ಬುದ್ಧ ಭಗವಾನರ ಕೋರಿಕೆಯಂತೆ ರಾಜ ಅಜಾತಶತ್ರುವು ಸ್ತೂಪವನ್ನು ನಿಮರ್ಿಸಿದ್ದಾನೆ. ಇತಿಹಾಸದ ಪ್ರಕಾರ ಭಿಕ್ಖು ಚುಂದರು ಸಾರಿಪುತ್ತರ ಅಸ್ಥಿಯನ್ನು ತೆಗೆದುಕೊಂಡು ಆನಂದರವರಿಗೆ ನೀಡುತ್ತಾರೆ, ಆನಂದರವರು ಭಗವಾನರಿಗೆ ನೀಡುತ್ತಾರೆ. ಭಗವಾನರ ಕೋರಿಕೆಯಂತೆ ರಾಜ ಅಜಾತಶತ್ರುವು ಸ್ತೂಪವನ್ನು ಕಟ್ಟಿಸುತ್ತಾನೆ. ಮುಂದೆ ಅಶೋಕ ಚಕ್ರವತರ್ಿಯು ಇದನ್ನು ಇನ್ನೂ ಭವ್ಯವಾಗಿ ನಿಮರ್ಿಸುತ್ತಾನೆ. ಅದು ನಳಂದದಲ್ಲಿ ಇದೆ. ಹಾಗೆಯೇ ಸಾಂಚಿಯಲ್ಲೂ ಮುಂದೆ ಅಶೋಕ ಚಕ್ರವತರ್ಿ ನಿಮರ್ಿಸಿದ್ದಾನೆ. ಸಾಂಚಿಯ ಅಸ್ಥಿ ಅವಶೇಷದ ಪವಿತ್ರ ಕೋಣೆಯು ಎರಡು ಕಲ್ಲಿನ ಕೋಶವಾಗಿ ಕಂಡುಬರುತ್ತದೆ. ಉತ್ತರ ದಿಕ್ಕಿನತ್ತ ಇರುವುದು ಮಹಾಮೊಗ್ಗಲಾನರವರದು ಹಾಗು ದಕ್ಷಿಣ ದಿಕ್ಕಿನತ್ತ ಇರುವುದು ಸಾರಿಪುತ್ತರದು ಎಂದು ಖಚಿತಪಡಿಸಲಾಗಿದೆ. ನೀವು ಶ್ರೀಲಂಕ, ಜಪಾನ್ ಅಥವಾ ಚೀನಾ ದೇಶಗಳಿಗೆ ಹೋದರೆ ಭಗವಾನರ ಪಕ್ಕದಲ್ಲಿ ಬಲಗಡೆ ಹಾಗು ಎಡಗಡೆ ಇಬ್ಬರು ಭಿಕ್ಷುಗಳ ವಿಗ್ರಹಗಳನ್ನು ಕಾಣಬಹುದು. ಅವರೇ ಸಾರಿಪುತ್ತ ಹಾಗು ಮಹಾಮೊಗ್ಗಲಾನ. ಬಲಗಡೆ ಯಾವಾಗಲೂ ಸಾರಿಪುತ್ತರು ಇರುತ್ತಾರೆ ಹಾಗು ಎಡಗಡೆ ಮೊಗ್ಗಲಾನರು ಇರುತ್ತಾರೆ. ಭಗವಾನರೇ ಚುಂದ ಸುತ್ತದಲ್ಲಿ ನುಡಿದಿರುವಂತೆ ಸಾರಿಪುತ್ತರ ಅಸ್ಥಿಯು ಶಂಕುವಿನ ವರ್ಣದ್ದಾಗಿದೆ. ಇದನ್ನು ಈ  ಹೀಗೆ ಕಾಣಬಹುದು.

ಮೊಗ್ಗಲಾನರ ಅಸ್ಥಿಗಳು

ಸಾಂಚಿ ಸ್ತೂಪ 3 ರಲ್ಲಿ ಸಾರಿಪುತ್ತ ಹಾಗೂ ಮೊಗ್ಗಲಾನರ ಸ್ತೂಪಗಳೆರಡೂ ಇವೆ. ಇದಕ್ಕೆ ಬ್ರಿಟೀಷರ ಪುರಾತನ ಶಾಸ್ತ್ರಜ್ಞನಾದ ಅಲೆಗ್ಸಾಂಡರ್ ಕನ್ನಿಂಗ್ಹ್ಯಾಮ್ರವರ  ಕೊಡುಗೆ ಅಪಾರ ಅವರು ಬೌದ್ಧ ಸ್ತೂಪಗಳ ಅನ್ವೇಷಣೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಇದರ ಶೋಧನೆಯು ಸಹಾ ಅವರೇ ಮಾಡಿದ್ದರು. ಅವರು ಹೀಗೆ ಹೇಳಿದ್ದಾರೆ :ಆ ಸ್ತೂಪದಲ್ಲಿ ತೋಪಿನಾಕಾರದ ಆಕೃತಿಯೊಳಗೆ ಹಲವು ಗಂಟೆಗಳ ಶ್ರಮದ ನಂತರ 5 ಅಡಿಯ ಉದ್ದದ ಚಪ್ಪಡಿಯು ಕಂಡು ಬಂದಿತು. ಅದನ್ನು  ಉತ್ತರ ದಕ್ಷಿಣವಾಗಿ ಮಲಗಿಸಿದ್ದರು. ಆ ಚಪ್ಪಡಿಯನ್ನು ಎತ್ತಿದಾಗ ನಮಗೆ 2 ವಿಶಾಲವಾದ ಪೆಟ್ಟಿಗೆಗಳು ಕಂಡು ಬಂದಿತು. ಅವೇ ಸಾರಿಪುತ್ತ ಹಾಗೂ ಮೊಗ್ಗಲಾನರ ಅಸ್ಥಿಗಳು.  ಸಾರಿಪುತ್ತರದು ದಕ್ಷಿಣ ದಿಕ್ಕಿನಲ್ಲಿ ಹಾಗೂ ಮೊಗ್ಗಲಾನರದ್ದು ಉತ್ತರ ದಿಕ್ಕಿನಲ್ಲಿ ಇಟ್ಟಿದ್ದರು. ಅದರ ಮೇಲೆ ಬ್ರಾಹ್ಮಿ ಲಿಪಿಯಲ್ಲಿ ಅಸೋಕನು ಕೆತ್ತಿಸಲಾದಂತಹ ಸಾರಿಪುತ್ತಸ್ಸ  ಹಾಗೂ ಮಹಾ ಮೊಗ್ಗಲಾನಸ್ಸ ಎಂದು ವಿವರಣೆಯಿದೆ.

ಸ್ತೂಪದಲ್ಲಿರುವ ಅಸ್ಥಿಯ ವಿವರಣೆ

ಸಾರಿಪುತ್ತರ ಪೆಟ್ಟಿಗೆಯಲ್ಲಿ  ಬಿಳಿಯ ನುಣುಪಾದ ಬಳಪದ ಕಲ್ಲಿನ  ಭರಣಿಯಾಗಿದ್ದು 6 ಅಂಗುಲ ಅಗಲವಾಗಿದ್ದು 3 ಅಂಗುಲ ಎತ್ತರವಾಗಿದೆ. ಅದರ ಹೊರ ಮೇಲ್ಮೈ ನುಣುಪಾಗಿದ್ದು ಗಟ್ಟಿಯಾಗಿದೆ, ಅದು ಅತ್ಯಂತ ಕುಶಲ ಕಾಮರ್ಿಕರಿಂದ ನಿಮರ್ಿತವಾಗಿದೆ, ಭರಣಿಯಿಂದ ಈಗಲೂ ಶ್ರೀಗಂಧದ ಸುವಾಸನೆಯಿದೆ.  ಒಳಗೆ ಅಸ್ಥಿಯ ಜೊತೆಗೆ ಹಲವಾರು ಅತ್ಯಮೂಲ್ಯ ಕಲ್ಲುಗಳಿವೆ(ವಜ್ರ, ರತ್ನ ಇತ್ಯಾದಿ). ಹಾಗೂ ಆ ಭರಣಿಯು ಸಹಾ ಸಾರಿಪತ್ತರ ಒಂದು ಮೂಳೆಯಿಂದ ಕೂಡಿದೆ. ಅದು ಕೇವಲ ಒಂದು ಅಂಗುಲದಷ್ಟಿದೆ. 

ಮೊಗ್ಗಲಾನರ ಕಲ್ಲಿನ ಪೆಟ್ಟಿಗೆಯಲ್ಲಿ ಇನ್ನೊಂದು ಬಳಪದ ಕಲ್ಲಿನ ಭರಣಿಯಿದ್ದು ಅದು ಸಾರಿಪುತ್ತರ ಭರಣಿಯ ತರಹವಿದೆ. ಒಂದು ಭರಣಿಯಲ್ಲಿ ಮೊಗ್ಗಲಾನರ ಎರಡು ಮೂಳೆಯ ಅಸ್ಥಿಗಳಿವೆ. ಅವು ಸಾರಿಪುತ್ತರದಕ್ಕಿಂತ ಚಿಕ್ಕಾದಾಗಿದ್ದು ಅದರೆ ಅಗಲ ಹೆಚ್ಚಾಗಿದೆ.

ಪ್ರತಿ ಭರಣಿಯಲ್ಲಿ ಏಕ ಅಕ್ಷರದ ಲಿಪಿಯಿದ್ದು ಸಾರಿಪುತ್ತರ ಭರಣಿಯ ಮೇಲೆ ಸಾ ಎಂಬ ಅಕ್ಷರವಿದೆ ಹಾಗೂ ಮೊಗ್ಗಲಾನರ ಭರಣಿಯ ಮೇಲೆ ಮ ಅಕ್ಷರವಿದೆ. ಸಾರಿಪುತ್ತರ ಭರಣಿಯು ದಕ್ಷಿಣ ದಿಕ್ಕಿನಲ್ಲಿದೆ ಹಾಗೂ ಮೊಗ್ಗಲಾನರ ಭರಣಿಯು ಉತ್ತರ ದಿಕ್ಕಿನಲ್ಲಿದೆ. ಭಗವಾನರ ಕಾಲದಲ್ಲಿಯು ಭಗವಾನರು ಪೂವರ್ಾಭಿಮುಖವಾಗಿ ಕುಳಿತ್ತಿದ್ದರೆ ಸಾರಿಪುತ್ತ ಹಾಗೂ ಮೊಗ್ಗಲಾನರು ದಕ್ಷಿಣ ಹಾಗೂ ಉತ್ತರಾಭಿಮುಖವಾಗಿ ಕುಳಿತುಕೊಳ್ಳುತ್ತಿದ್ದರು.

- ಂ0ಂ  

11. ಮೊಗ್ಗಲ್ಲಾನರವರ ದುರಂತ ಹಾಗೂ ಪರಿನಿಬ್ಬಾಣ

 11. ಮೊಗ್ಗಲ್ಲಾನರವರ ದುರಂತ ಹಾಗೂ ಪರಿನಿಬ್ಬಾಣ





ವರ್ಧಮಾನ ಮಹಾವೀರರ ಮರಣದ ನಂತರ ಅವರ ಶಿಷ್ಯರಲ್ಲಿ ಅತಿ ಹಿಂಸಾತ್ಮಕ ಜಗಳವುಂಟಾಯಿತು. ಅವರ ಶಿಷ್ಯರಲ್ಲೇ ಗುರುವಿನ ಬೋಧನೆಯ ಬಗ್ಗೆ ವಾದವಿವಾದಗಳಾದವು. ಹೀಗಾಗಿ ಜನರು ಸಹಾ ಅವರ ಮೇಲೆ ಶ್ರದ್ಧೆ ಕಳೆದುಕೊಂಡರು.  

ಇತ್ತ ಬುದ್ಧ ಧಮ್ಮ ಅತ್ಯಂತ ಉನ್ನತ ಶಿಖರವೇರಿತ್ತು. ಅದಕ್ಕೆ ಕಾರಣ ಬುದ್ಧ ಭಗವಾನರು ಮಾತ್ರವಲ್ಲದೆ ಸಾರಿಪುತ್ತರ ಪ್ರಜ್ಞಾಶೀಲತೆ ಹಾಗೂ ಮೊಗ್ಗಲಾನರ ಇದ್ಧಿ ಶಕ್ತಿ. ಮೊಗ್ಗಲ್ಲಾನರಿಗೆ ಮಹಾಮೊಗ್ಗಲ್ಲಾನ ಎಂದೇ ಕರೆಯುತ್ತಿದ್ದರು. ಏಕೆಂದರೆ ಅಂತಹ ಶ್ರೇಷ್ಠತೆ ಅವರಲ್ಲಿತ್ತು. ಅವರು ವಿವಿಧ ಮನಸ್ಶಕ್ತಿಗಳನ್ನು ಸಂಪಾದಿಸಿದ್ದರು. ಅವರು ಮಾಡದ ಪವಾಡವೇ ಇರಲಿಲ್ಲ. ಸಮಾಧಿ, ಇದ್ದಿಪಾದ ಮತ್ತು ಅಭಿಜ್ಞಗಳಲ್ಲಿ ಅವರು ಪರಿಪೂರ್ಣತೆ ಸಾಧಿಸಿ ಅತ್ಯಂತ ಪರಿಣಿತ ಮಾನಸಶಕ್ತಿ ಸಂಪನ್ನರಾಗಿದ್ದರು. ಹೀಗಾಗಿ ಅವರು ಪಾಪ ಮಾಡಿದವರ ಮುಂದಿನ ಗತಿ ತಿಳಿದುಕೊಂಡು ಜನರಿಗೆ ತಿಳಿಸಿ ಜನರು ಪಾಪ ಮಾಡದಂತೆ ತಡೆಯುತ್ತಿದ್ದರು. ಹಾಗೆಯೇ ದಾನ, ಶೀಲ ಆಚರಿಸಿದವರ ಸುಗತಿ ತಿಳಿದುಕೊಂಡು ಅವರ ಸುಗತಿಯ ಬಗ್ಗೆ ಜನರಿಗೆ ತಿಳಿಸಿ ಅವರನ್ನು ದಾನಿಗಳನ್ನಾಗಿ, ಶೀಲವಂತರನ್ನಾಗಿಸುತ್ತಿದ್ದರು. ಹಾಗೆಯೇ ಸಮಾಧಿವಂತರ ಬ್ರಹ್ಮಲೋಕ, ದಾನಿಗಳ, ಸ್ವರ್ಗಲೋಕ, ಪ್ರಜ್ಞಾರ ಲೋಕೋತ್ತರ ಫಲಗಳನ್ನು ತಿಳಿಸಿ ಅವರಲ್ಲಿ ಸ್ಫೂತರ್ಿ ತುಂಬಿಸುತ್ತಿದ್ದರು. ಇದರಿಂದಾಗಿ ಸರ್ವರು ಬುದ್ಧರ ಶರಣು ಪಡೆಯುತ್ತಿದ್ದರು, ಬೌದ್ಧ ಭಿಕ್ಷುಗಳಿಗೆ ಅತಿಯಾಗಿ ಸತ್ಕಾರ ಮಾಡುತ್ತಿದ್ದರು. ಹೀಗಾಗಿ ಅನ್ಯ ಮತಾವಲಂಬಿಗಳಿಗೆ ತೊಂದರೆಯಾಯಿತು. 

ಆಗ ನಗ್ನ ಸನ್ಯಾಸಿಗಳಾದ ನಿಗಂಠರಿಗೂ ತೊಂದರೆಯಾಯಿತು. ಆಗ ನಿಗಂಠ ಸನ್ಯಾಸಿಗಳು ಸಭೆ ಸೇರಿ ಹೀಗೆ ಚಚರ್ಿಸಿಕೊಂಡರು. ಸೋದರರೇ, ನಮಗೆ ಸತ್ಕಾರ ಕ್ಷೀಣವಾಗಿದೆ, ಕೇವಲ ಬೌದ್ಧ ಭಿಕ್ಷುಗಳಿಗೆ ಆದರ ಸತ್ಕಾರ ಗೌರವಗಳು ಹೇರಳವಾಗಿ ಸಿಗುತ್ತಿವೆ. ಇದಕ್ಕೆಲ್ಲಾ ಕಾರಣ ಯಾರೆಂದರೆ ಮೊಗ್ಗಲ್ಲಾನರವರೇ. ಏಕೆಂದರೆ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದ ನರಕಗಳಲ್ಲಿ, ಸ್ವರ್ಗಗಳಲ್ಲಿ, ಬ್ರಹ್ಮಲೋಕಗಳಲ್ಲಿ ಸಂಚರಿಸುವವರಾಗಿದ್ದಾರೆ. ಹೀಗಾಗಿ ಇಲ್ಲಿ ಬಂದು, ಇಂತಹ ವ್ಯಕ್ತಿ ಅಲ್ಲಿ ಹೇಗೆ ಜನಿಸಿದ್ದಾನೆ. ಇಂತಹ ಸುಖವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿಸುವವರಾಗಿದ್ದಾರೆ. ಆದ್ದರಿಂದಾಗಿ ಬೌದ್ಧ ಭಿಕ್ಷುಗಳಿಗೆ ಅಧಿಕ ಸತ್ಕಾರಗಳು ಸಿಗುತ್ತಿವೆ. ನಮಗೆ ನೋಡುವವರೇ ಇಲ್ಲವಾಗಿದ್ದಾರೆ. ನಮ್ಮ ದಾರಿಗೆ ಮುಳ್ಳಾಗಿರುವ ಈ ಮೊಗ್ಗಲ್ಲಾನರನ್ನು ಯಾವುದೇ ರೀತಿಯಲ್ಲಾಗಲೀ ಕೊಲ್ಲೋಣ ಅಥವಾ ಕೊಲ್ಲಿಸೋಣ. ಆಗ ಮಾತ್ರ ನಾವು ಸುಖವಾಗಿರಬಲ್ಲೆವು, ಏನೆನ್ನುವಿರಿ? ಎಲ್ಲರೂ ಇದಕ್ಕೆ ಒಪ್ಪಿಗೆ ಸೂಚಿಸಿದರು.

ನಂತರ ಅವರು ಅಲೆದಾಡುವ ಶ್ರಮಣಗುಪ್ತನೆಂಬ ಕಳ್ಳರಿಗೆ ಸಾವಿರ ಚಿನ್ನದ ನಾಣ್ಯಗಳನ್ನು ನೀಡಿ, ಮೊಗ್ಗಲ್ಲಾನರಿಗೆ ಮುಗಿಸಲು ಯೋಜನೆ ಮಾಡಿದರು. ಹೋಗಿ, ಮೊಗ್ಗಲ್ಲಾನರು ಕರಿಬಂಡೆಯ ಬಳಿ ವಾಸವಾಗಿದ್ದಾರೆ, ಅಲ್ಲಿಗೆ ಹೋಗಿ ಮುಗಿಸಿಬಿಡಿ ಎಂದು ಆಜ್ಞಾಪಿಸಿ ಕಳುಹಿಸಿದರು. 

ಆಗ ಮೊಗ್ಗಲ್ಲಾನರು ಕರಿಬಂಡೆ(ಕಾಲಾ ಶಿಲ)ಯ ಬಳಿಯಲ್ಲಿನ ವಾಸಸ್ಥಳದಲ್ಲಿ ಧ್ಯಾನಿಸುತ್ತಿದ್ದರು. ಕಳ್ಳರೆಲ್ಲರೂ ಸುತ್ತುವರೆದರು. ಆದರೆ ಮೊಗ್ಗಲ್ಲಾನರು ಬೀಗದ ಕೈ ಹಾಕುವ ಕಿಂಡಿಯಿಂದ ಸೂಕ್ಷ್ಮರೂಪ ಪಡೆದು ಅಲ್ಲಿಂದ ತಪ್ಪಿಸಿಕೊಂಡರು. ಮತ್ತೊಂದು ದಿನ ವಾಸಸ್ಥಳವನ್ನು ಸುತ್ತುವರೆದಾಗ, ಮೊಗ್ಗಲ್ಲಾನರು ಛಾವಣಿಯ ರಂಧ್ರದಿಂದ ಸೂಕ್ಷ್ಮ ರೂಪ ಪಡೆದು ಅಗೋಚರವಾಗಿ ಹಾರಿ ತಪ್ಪಿಸಿಕೊಂಡರು. ಇದೇರೀತಿಯಾಗಿ ಆರು ದಿನಗಳು ಅವರ ಕೈಗೆ ಸಿಗದೆ ಮೊಗ್ಗಲ್ಲಾನರು ಯಶಸ್ವಿಯಾದರು. ಅರಹಂತರಾದ ಅವರಿಗೆ ದೇಹವನ್ನು ರಕ್ಷಿಸಿಕೊಳ್ಳಬೇಕೆಂಬ ಆಸೆ ಏನೂ ಇರಲಿಲ್ಲ. ಅದರೆ ಅವರನ್ನು ಕೊಂದವರಿಗೆ ಭೀಕರ ದುರ್ಗತಿ ಸಿಗುವುದೆಂಬ ಕಾರಣಕ್ಕಾಗಿ , ಕೊಲೆಗಾರರ ಮೇಲಿನ ಕರುಣೆಯು ಅವರನ್ನು ಹೀಗೆ ತಪ್ಪಿಸಿಕೊಳ್ಳಲು  ಮುಖ್ಯ ಕಾರಣವಾಗಿತ್ತು.

ಆದರೆ ಯಾವಾಗ 7ನೆಯ ದಿನ ಬಂದಿತೋ, ಆಗ ಪೂಜ್ಯ ಮೊಗ್ಗಲ್ಲಾನರಿಗೆ ತಾವು ಕಲ್ಪಗಳ ಹಿಂದೆ ಮಾಡಿದ ಪಾಪದ ಕರ್ಮವು ನೆನಪಿಗೆ ಬಂದಿತು. ಅದು ಹೀಗಿತ್ತು.

      *******     *********     *********      ***********

   ಅತೀತ ಕಾಲದಲ್ಲಿ ಬಹು ಜನ್ಮಗಳ ಹಿಂದೆ, ಈ ಮೊಗ್ಗಲ್ಲಾನರು ಉತ್ತಮ ಕುಟುಂಬದಲ್ಲಿ ಜನಿಸಿದ್ದರು. ತಂದೆ ತಾಯಿಗಳ ಸೇವೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆಗ ತಂದೆ ತಾಯಿಗಳು ಆತನಿಗೆ ವಿವಾಹಕ್ಕೆ ಬಲವಂತ ಮಾಡಿದಾಗ ಮೊದಮೊದಲು ವಿವಾಹಕ್ಕೆ ಆ ಯುವಕನು ನಿರಾಕರಿಸಿದನು: ಅದರ ಅವಶ್ಯಕತೆ ಏಕೆ, ನಾನೇ ನಿಮಗೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ, ಮುಂದೆ ಹಾಗೆಯೇ ಚೆನ್ನಾಗಿ ನೋಡಿಕೊಳ್ಳುವೆನು ಎನ್ನುತ್ತಿದ್ದರು. ಆದರೂ ತಾಯ್ತಂದೆಯರು ಆತನಿಗೆ ಚೆಂದದ ಸ್ತ್ರೀಯೊಂದಿಗೆ ವಿವಾಹ ಮಾಡಿಸಿದ್ದರು.

ಮೊದಮೊದಲು ಆ ಸೊಸೆಯು ಅತ್ತೆ-ಮಾವಂದಿರನ್ನು ಚೆನ್ನಾಗಿಯೇ ನೋಡಿಕೊಂಡಳು. ನಂತರ ಆಕೆಗೆ ಅವರನ್ನು ಕಂಡರೆ ಅಸಹ್ಯವಾಗತೊಡಗಿತು. ನಾನು ನಿಮ್ಮ ಅಂಧರಾಗಿರುವ ಮುದಿ ತಂದೆ-ತಾಯಿಗಳೊಂದಿಗೆ ಇರಲು ಸಾಧ್ಯವಿಲ್ಲ, ಹೀಗೆಯೇ ಒಂದೇ ಮನೆಯಲ್ಲಿ ಇರಲು ಸಾಧ್ಯವೇ ಇಲ್ಲ ಎಂದಳು. ಆದರೆ ಆ ಯುವಕನು ಅದನ್ನೆಲ್ಲ ಕಿವಿಗೆ ಹಾಕಿಕೊಳ್ಳಲಿಲ್ಲ. ಇದರಿಂದ ಆಕೆಯು ಉಪಾಯವೊಂದನ್ನು ಮಾಡಿದಳು. ಅಕ್ಕಿಯ ಗಂಜಿಯನ್ನು ಅಲ್ಲಲ್ಲಿ ಸಿಂಪಡಿಸಿ, ಗಂಡನು ಮನೆಗೆ ಬಂದಾಗ ನೋಡಿ, ನಿಮ್ಮ ತಂದೆ-ತಾಯಿ ಮಾಡಿರುವುದನ್ನು, ಅವರು ಮನೆಯೆಲ್ಲಾ ಹೀಗೆ ಗಲೀಜು ಮಾಡುತ್ತಾರೆ, ದಿನಾ ನಾನೇ ಇದನ್ನೆಲ್ಲಾ ಶುಚಿಗೊಳಿಸಬೇಕು. ಅಬ್ಬಾ, ಇವರೊಂದಿಗೆ ನಾನು ಇನ್ನೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ಎಂದಳು. ಹೀಗೆ ಆಕೆ ಪದೇ ಪದೇ ಅಸಹ್ಯ ತೋಡಿಕೊಂಡಾಗ, ಆತನಂತಹ ಶುದ್ಧ ಜೀವಿಯಲ್ಲೂ ಕಲುಶತೆ ಮೂಡಿತು. ಸರಿ ಅವರಿಗೆ ಏನಾದರೂ ವ್ಯವಸ್ಥೆ ಮಾಡುವೆನು ಎಂದನು.

ಮಾರನೆಯದಿನ ಆ ಯುವಕನು ತನ್ನ ತಂದೆ ತಾಯಿಗಳೊಂದಿಗೆ ಅಪ್ಪ-ಅಮ್ಮ, ಇಂತಹ ಊರಿನಲ್ಲಿ ನಿಮ್ಮ ಸಂಬಂಧಿಕರು ನಿಮಗೆ ನೋಡಲು ಹಾತೊರೆಯುತ್ತಿದ್ದಾರೆ, ನಿಮ್ಮನ್ನು ಕರೆತರಲು ಕೇಳಿಕೊಂಡಿದ್ದಾನೆ ಎಂದು ಹೇಳಿ ಬಂಡಿ ಸಿದ್ಧಪಡಿಸಿ ದಟ್ಟ ಅರಣ್ಯದೊಳಗೆ ಕರೆದೊಯ್ದನು. ನಂತರ ಒಂದೆಡೆ ನಿಲ್ಲಿಸಿ, ತನ್ನ ತಂದೆಗೆ ಬಂಡಿಯ ಎತ್ತುಗಳ ಹಗ್ಗವನ್ನು ನೀಡಿ, ಇಲ್ಲಿ ಕಳ್ಳರ ಕಾಟವೆಂದು ಹೇಳಿ ಅವರೇ ಮುಂದುವರೆಯುವಂತೆ ಹೇಳಿದನು. ನಂತರ ಕಳ್ಳರು ಆಕ್ರಮಣ ಮಾಡಿರುವ ಹಾಗೆ ಶಬ್ದಗಳನ್ನು ಮಾಡಿದನು. ಆ ಶಬ್ದಗಳನ್ನು ಕೇಳಿದ ತಾಯಿ-ತಂದೆಯರು ಮಗು, ನೀನು ಊರಿಗೆ ಸೇರಿಬಿಡು, ನೀನಿನ್ನೂ ಯುವಕ, ನಮಗೆ ವಯಸ್ಸಾಗಿದೆ, ನೀನು ಜೀವ ಉಳಿಸಿಕೋ ಹೋಗು ಎಂದರು. ಆದರೆ ಮನಸ್ಸನ್ನು ಕಲ್ಲು ಮಾಡಿಕೊಂಡಿದ್ದ ಆತನಿಗೆ ಅದರಿಂದ ಯಾವ ಪರಿಣಾಮವೂ ಆಗಲಿಲ್ಲ. ಆತನು ಕಳ್ಳರಂತೆ ಶಬ್ದಗಳನ್ನು ಮಾಡುತ್ತ ಅವರನ್ನು ಹಿಂಸಿಸಿ, ಕೊಂದು ಅರಣ್ಯದಲ್ಲಿ ಎಸೆದು ಊರಿಗೆ ಹಿಂತಿರುಗಿದನು. 

   *********          **********          *********        **********

ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು.

ಆ ಕರ್ಮಫಲದ ಪ್ರಬಲ ಶಕ್ತಿಯಿಂದಾಗಿ ಅವರ ಪವಾಡ ಶಕ್ತಿಯು ತಾತ್ಕಾಲಿಕವಾಗಿ ಸ್ಥಗಿತಗೊಂಡಿತು. ನಂದೋಪನಂದರನ್ನು ದಮನ ಮಾಡಿದಂತಹ, ಅನೇಕ ನಾಗರನ್ನು ದಮನ ಮಾಡಿದ , ಇಂದ್ರನ ವೈಜಯಂತವನ್ನು ಅಲುಗಾಡಿಸಿದಂತಹ, ಇದ್ದಿ ಹಾಗೂ ಅಭಿಜ್ಞಾಗಳಲ್ಲಿ ಬುದ್ಧರ ನಂತರ ಇಡೀ ಲೋಕಗಳಿಗೆ  ದ್ವಿತೀಯರಾದಂತಹ ಮೊಗ್ಗಲಾನರು ಕಮ್ಮಫಲದ ಮುಂದೆ ಏನೂ ಇಲ್ಲದೆ ಹೋದರು. ಏಳಲು ಅಸಮರ್ಥರಾದರು, ತಪ್ಪಿಸಿಕೊಳ್ಳಲು ಅಸಮರ್ಥರಾದರು. ಅದೇ ಸಮಯಕ್ಕೆ ಕಳ್ಳರು ಅವರನ್ನು ಹಿಡಿದುಕೊಂಡರು. ಅಂಗಗಳನ್ನೆಲ್ಲಾ ಕತ್ತರಿಸಿ ಹಾಕಿದರು, ಮೂಳೆಗಳನ್ನೆಲ್ಲ ಪುಡಿ ಪುಡಿ ಮಾಡಿದರು. ಇವರು ಸತ್ತಿದ್ದಾರೆ ಎಂದು ಭಾವಿಸಿ ಅವರು ಮೊಗ್ಗಲ್ಲಾನರ ಅವಶೇಷಗಳನ್ನು ಪೊದೆಯಲ್ಲಿ ಬಿಸಾಡಿ ಹೊರಟರು.

ಅವರು ಹೊರಟ ನಂತರ ಮೊಗ್ಗಲ್ಲಾನರಿಗೆ ತಮ್ಮ ಅತೀಂದ್ರಿಯ ಶಕ್ತಿಯ ಚಾಲನಶಕ್ತಿ ಪುನಃ ಪೂರ್ಣವಾಗಿ ವಶಕ್ಕೆ ಬಂದಿತು. ಆಗ ಅವರು ಹೀಗೆ ಯೋಚಿಸಿದರು. ನನ್ನ ನಿಬ್ಬಾಣದ ಸಮಯ ಸನ್ನಿಹಿತವಾಯಿತು. ಪರಿನಿಬ್ಬಾಣಕ್ಕೆ ಮುನ್ನ ಭಗವಾನರಿಗೆ ಗೌರವಿಸುವುದು ಒಳ್ಳೆಯದು ಎಂದು ತಕ್ಷಣ ಅವರು ತಮ್ಮ ಅತೀಂದ್ರಿಯ ಶಕ್ತಿಯಿಂದಾಗಿ ಇಡೀ ದೇಹವನ್ನು ಪುನಃ ಒಂದಾಗಿಸಿ ಸರಿಪಡಿಸಿಕೊಂಡು ಗಾಳಿಯಲ್ಲಿ ಹಾರಿಕೊಂಡು ಭಗವಾನರ ಬಳಿಗೆ ಬಂದರು. ಅವರನ್ನು ಪೂಜಿಸಿ ಹೀಗೆ ಹೇಳಿದರು: ಭಗವಾನ್, ನನ್ನ ಆಯು ಸಂಖಾರ ಕ್ಷೀಣವಾಗಿದೆ. .ನಾನು ಪರಿನಿಬ್ಬಾಣ ಪಡೆಯಲು ನಿರ್ಧರಿಸಿದ್ದೇನೆ.

ಹೌದೆ? ಯಾವ ಸ್ಥಳವನ್ನು ಆಯ್ಕೆಮಾಡಿರುವೆ ?

ಕರಿಬಂಡೆಯ ಬಳಿ.

ಸರಿ ಮೊಗ್ಗಲ್ಲಾನ, ಅದಕ್ಕೆ ಮುನ್ನ ಧಮ್ಮ ಬೋಧನೆಯನ್ನು ಭಿಕ್ಷುಗಳಿಗೆ ಮಾಡುವವನಾಗು, ನಿನ್ನಂತಹ ಶ್ರೇಷ್ಠ ಶಿಷ್ಯ ಮುಂದೆ ಗೋಚರಿಸಲಾರ.

ಹಾಗೇ ಆಗಲಿ ಭಂತೆ ಎಂದು ನುಡಿದು ಗೌರವಿಸಿ, ಪ್ರದಕ್ಷಿಣೆ ಮಾಡಿದರು. ನಂತರ ಗಾಳಿಯಲ್ಲಿ ತೇಲಿಕೊಂಡು, ಎಲ್ಲಾ ಬಗೆಯ ಇದ್ಧಿಶಕ್ತಿಯ, ಅತೀಂದ್ರಿಯ ಪವಾಡಗಳನ್ನು ಪ್ರದಶರ್ಿಸಿದರು. ಅದು ಅತ್ಯದ್ಭುತ ದೃಶ್ಯವಾಗಿತ್ತು. ಏಕೆಂದರೆ ಬುದ್ಧರ ನಂತರ ಅಂತಹ ಶ್ರೇಷ್ಠತೆಯ ಮಾನಸಶಕ್ತಿಯಿಂದ ಮಾಡುವ ಅಚ್ಚರಿಗಳನ್ನು ಅವರು ಮಾತ್ರ ಮಾಡುವಂತಹದಾಗಿತ್ತು. ನಂತರ ಧಮ್ಮ ಬೋಧಿಸಿ ಕರಿಬಂಡೆಯ ಬಳಿ ಪರಿನಿಬ್ಬಾಣ ಪ್ರಾಪ್ತಿ ಮಾಡಿದರು.

ಕೂಡಲೇ ಎಲ್ಲಾ ಲೋಕಗಳಲ್ಲಿ  ಏಕಕಾಲದಲ್ಲಿ ನಮ್ಮ ಆಚಾರ್ಯರ ಪರಿನಿಬ್ಬಾಣವಾಯಿತು ಎಂದು ಆಕ್ರಂದನ ಉಂಟಾಯಿತು. ಬ್ರಹ್ಮರು ,ದೇವದೇವತೆಗಳು, ಮಾನವರು ದಿವ್ಯ ಸುಗಂಧಗಳಿಂದ, ವಿವಿಧ ಪುಷ್ಪಗಳ ಮಾಲೆಗಳಿಂದ, ಸುಗಂಧಿತ ಧೂಪಗಳಿಂದ, ಇತ್ಯಾದಿಗಳಿಂದ ಅವರ ಚಿತಾ ಸ್ಥಳವೂ ಸಿದ್ಧವಾಯಿತು. 99ರತ್ನಗಳಷ್ಟು ಎತ್ತರದ ಚಿತೆಯು ಸಿದ್ಧವಾಯಿತು. ಸ್ವತಃ ಭಗವಾನರೇ ಅವರ ಶರೀರವನ್ನು ಚಿತೆಯ ಮೇಲೆ ಇಟ್ಟರು. ಚಿತೆಯ ಸುತ್ತಲೂ ಒಂದು ಯೋಜನದಷ್ಟು ವಿಸ್ತಾರದಲ್ಲಿ ಅಂತರಿಕ್ಷದಿಂದ ಪುಷ್ಪವೃಷ್ಟಿಯಾಯಿತು. ದೇವತೆಗಳ ಮಧ್ಯೆ ಮಾನವರು, ಮಾನವರ ಮಧ್ಯೆ ದೇವತೆಗಳು ನಿಂತಿದ್ದರು. ಏಳು ದಿನಗಳವರೆಗೆ ಎಲ್ಲರೂ ಬಂದು ಪೂಜಿಸಿ ಸಾಧು ಕ್ರಿಯೆಗಳನ್ನು ಮಾಡುತ್ತಿದ್ದರು. ನಂತರ ವೇಲೂವನದ ದ್ವಾರದಲ್ಲಿ  ಭಗವಾನರ ಸಮ್ಮುಖದಲ್ಲಿ ಅವರ ಚೈತ್ಯ ನಿಮರ್ಾಣವಾಯಿತು.

(ಮೊಗ್ಗಲಾನರವರನ್ನು ಆಕ್ರಮಣ ಮಾಡಿದ ಸ್ಥಳವು ಈ ಮೇಲಿನ ಚಿತ್ರದಲ್ಲಿದೆ) 

ಅವರ ಮೇಲೆ ಮಾರಣಾಂತಿಕ ಹಲ್ಲೆ ಆದ ಸುದ್ದಿ  ತಕ್ಷಣ ಬೆಂಕಿಯಂತೆ ಹಬ್ಬಿತು. ರಾಜ ಅಜಾತಶತ್ರುವು ಎಲ್ಲೆಡೆ ಗೂಢಾಚಾರರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ತೆಹಚ್ಚಲು ತಕ್ಷಣ ನೇಮಿಸಿದನು. ಆಗ ಕೊಲೆಗಾರರು ಕುಡಿದ ಅಮಲಿನಲ್ಲಿ ಈ ವಿಷಯವನ್ನು ತಾವೆ ಮಾಡಿದ್ದು ಎಂದು ಬೀಗುವಾಗ, ಪತ್ತೆದಾರರು ತಕ್ಷಣ ಅವರನ್ನು ಬಂಧಿಸಿ ರಾಜನ ಮುಂದೆ ನಿಲ್ಲಿಸಿದರು. ರಾಜನು ಪ್ರಶ್ನಿಸಿದಾಗ, ತಾವೇ ಮಾಡಿರುವುದಾಗಿ ತಿಳಿಸಿದರು. ನಿಮಗೆ ಹೀಗೆ ಮಾಡಲು ಪ್ರೇರೇಪಣೆ ನೀಡಿದ್ದು ಯಾರು? ಎಂದು ರಾಜನು ಪ್ರಶ್ನಿಸಿದಾಗ, ನಿಗಂಠ ನಗ್ನ ಸನ್ಯಾಸಿಗಳು ಎಂದು ಉತ್ತರಿಸಿದರು. ಆಗ ರಾಜನಿಗೆ ಕೋಪವುಂಟಾಗಿ ಆ ಕಳ್ಳರಿಗೂ ಮತ್ತು ಕಾರಣಕರ್ತರಾದ 500 ನಗ್ನ ನಿಗಂಠರಿಗೂ ಬಂಧಿಸಿ ಅವರನ್ನೆಲ್ಲಾ ಸೊಂಟದವರೆಗೂ ಹೂತ ನಂತರ ಮೇಲ್ಭಾಗಕ್ಕೆ ಹುಲ್ಲುಗಳನ್ನು ಜೋಡಿಸಿ, ಅಗ್ನಿಗೆ ಆಹುತಿ ಮಾಡಿಸಿದನು. ನಂತರ ಉಳಿದ ಶವದ ಅವಶೇಷಗಳನ್ನು ಭೂಮಿಯಲ್ಲಿ ನೇಗಿಲಿನಿಂದ ಹೂಳಿಸಿದನು.

ಆ ಸಮಯದಲ್ಲಿ ಭಿಕ್ಷುಗಳು ಮೊಗ್ಗಲ್ಲಾನರವರ ಬಗ್ಗೆಯೇ ಚಚರ್ಿಸತೊಡಗಿದ್ದರು. ಆಗ ಅಲ್ಲಿಗೆ ಬಂದ ಭಗವಾನರು ಹೀಗೆ ಅವರನ್ನು ಕೇಳಿದರು: ಭಿಕ್ಷುಗಳೇ, ನೀವು ಮೊಗ್ಗಲ್ಲಾನರವರ ವರ್ತಮಾನದ ಬದುಕಿನ ಬಗ್ಗೆಯೇ ಪರಿಗಣನೆ ತೆಗೆದುಕೊಳ್ಳುವುದಾದರೆ, ಖಂಡಿತವಾಗಿ ಅವರು ಹಿಂಸೆಗೆ ಅರ್ಹರಾಗುತ್ತಿರಲಿಲ್ಲ. ಆದರೆ ವಾಸ್ತವವಾಗಿ ಹೇಳುವುದಾದರೆ ಅವರ ಇಂದಿನ ಅನಾಹುತಕ್ಕೆ ಅವರ ಹಿಂದಿನ ಜನ್ಮವೊಂದರ ಕೃತ್ಯವೇ ಕಾರಣವಾಗಿತ್ತು. 

ಆಗ ಭಿಕ್ಷುಗಳು ಭಗವಾನ್ ದಯವಿಟ್ಟು ಈ ವಿವರವನ್ನೆಲ್ಲಾ ಭಗವಾನರು ಹೇಳುವಂತಾಗಲಿ.

ಆಗ ಭಗವಾನರು ಆ ಹಿಂದಿನ ಜನ್ಮದ ಘಟನೆಯನ್ನು ತಿಳಿಸಿದರು. ಹಾಗೂ ಹೀಗೆ ನುಡಿದರು. ಇದರ ಪರಿಣಾಮವಾಗಿ ಆತನು ನರಕದಲ್ಲಿ ಸಾವಿರಾರು ವರ್ಷ ನೋವು ಅನುಭವಿಸಿದನು. ನಂತರ ನೂರಾರು ಜನ್ಮಗಳಲ್ಲಿ ಹೀಗೆಯೇ ಹಿಂಸೆಗೆ ಒಳಗಾಗಿ ಮರಣವನ್ನಪ್ಪಿದನು. ಆದ್ದರಿಂದಲೇ ಈ ಅಂತಿಮ ಜನ್ಮದಲ್ಲೂ ಹೀಗೆ ಭೀಕರವಾಗಿ ಚಿತ್ರಹಿಂಸೆಯುತ ನೋವನ್ನು ಅನುಭವಿಸಿದನು. ಆದರೆ ಪರಿನಿಬ್ಬಾಣ ಸಾಧಿಸಿದ್ದರಿಂದಾಗಿ ದುಃಖಪೂರಿತ ಸಂಸಾರದಿಂದ ಪೂರ್ಣವಿಮುಕ್ತಿ ಸಾಧಿಸಿದ್ದಾನೆ. ಆದ್ದರಿಂದಾಗಿ ಮಾತೃಹತ್ಯೆ ಮತ್ತು ಪಿತೃಹತ್ಯೆ ಯಾರೂ ಮಾಡಬಾರದು. ಅದು ಅತ್ಯಂತ ಭೀಕರ ಕರ್ಮಫಲ ನೀಡುತ್ತದೆ. ಹಾಗೆಯೇ ನಿರಪರಾಧಿಗಳ ಮೇಲೆ ಹಿಂಸೆ ಮಾಡುವವರು ಮುಂದೆ ವಿಕೋಪ ಸ್ಥಿತಿಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿ ಈ  ಗಾಥೆಗಳನ್ನು ನುಡಿದರು. 

ಯಾರು ಮುಗ್ಧರಾದ, ದಂಡಿಸಬಾರದವರನ್ನು ದಂಡಶಸ್ತ್ರಗಳಿಂದ ಹಿಂಸಿಸುವನೋ, ತಪ್ಪು ಮಾಡದವರನ್ನು ನೋಯಿಸುವನೋ, ಅಂತಹವನು ಶೀಘ್ರದಲ್ಲೇ ಈ ಹತ್ತು ಸ್ಥಿತಿಗಳಲ್ಲಿ ಒಂದನ್ನು ಪಡೆಯುತ್ತಾನೆ. (137)

ಆತನು ತೀಕ್ಷ್ಣವಾದ ನೋವು, ಮಹಾದುರಂತ, ಶಾರೀರಿಕ ತೀವ್ರಗಾಯ ಅಥವಾ ಕಡುಕಾಯಿಲೆ ಅಥವಾ ಚಿತ್ತ ನಿಯಂತ್ರಣ ತಪ್ಪಿ ಹುಚ್ಚನಾಗುವಿಕೆ, ಅಥವಾ ಸಕರ್ಾರದಿಂದ ರಾಜನಿಂದ ದಂಡನೆ ಅಥವಾ ಘೋರ ಆಪಾದನೆ ಅಥವಾ ಬಂಧು ಬಳಗದವರ ಸಾವು, ಐಶ್ವರ್ಯವೆಲ್ಲಾ ನಾಶವಾಗುವಿಕೆ ಅಥವಾ ಮಹಾ ಅಗ್ನಿಯ ಆಹುತತೆ ಹಾಗು ಸಾವಿನ ನಂತರ ಅಂತಹ ದುಪ್ರಜ್ಞನು ನಿರಯದಲ್ಲಿ 

ಹುಟ್ಟುತ್ತಾನೆ. (138, 139, 140 

10. ಮೊಗ್ಗಲಾನರ ಕೊನೆಯ ದಿನಗಳು

 10. ಮೊಗ್ಗಲಾನರ ಕೊನೆಯ ದಿನಗಳು



ಭಗವಾನರಿಗೆ ಆರೋಗ್ಯ ಅಸ್ವಸ್ಥತೆ ವೈಶಾಖ ಮಾಸದಲ್ಲಿ ಆರಂಭವಾಗುತ್ತದೆ .ಆದಾದ ಆರು ತಿಂಗಳಲ್ಲೇ ಸಾರಿಪುತ್ತ ಹಾಗೂ ಮೊಗ್ಲಾಲಾನ ಇಬ್ಬರು ಕಾತರ್ಿಕ ಮಾಸದಲ್ಲಿ ಪರಿನಿಬ್ಬಾಣವನ್ನು ಪಡೆಯುತ್ತಾರೆ.ಅಂದರೆ ಕಾತರ್ಿಕ ಹುಣ್ಣಿಮೆಯಂದು ತಮ್ಮ 84ನೇಯ ವಯಸ್ಸಿನಲ್ಲಿ ಸಾರಿಪುತ್ತರು ಹಾಗೂ ಕಾತರ್ಿಕ ಅಮವಾಸೆಯಂದು ಮೊಗ್ಗಲಾನರು ಪರಿನಿಬ್ಬಾಣವನ್ನು ಪಡೆಯುತ್ತಾರೆ. ಅದಾದ 6 ತಿಂಗಳಲ್ಲೆ ಭಗವಾನರು ವೈಶಾಖ ಶುದ್ಧ ಪೌರ್ಣಮಿಯಂದು ತಮ್ಮ 80ನೇಯ ವಯಸ್ಸಿನಲ್ಲಿ ಪರಿನಿಬ್ಬಾಣವನ್ನು ಪಡೆಯುತ್ತಾರೆ.  ಅದರಲ್ಲಿ ಸಾರಿಪುತ್ತರು ತಾವು ಜನಿಸಿದ ಮನೆಯಲ್ಲಿಯೇ ಪರಿನಿಬ್ಬಾಣ ಪಡೆದರೆ ಮೊಗ್ಗಲಾನರು ದುರಂತಕ್ಕೆ ಒಳಗಾಗಿ ನಂತರ ಭಗವಾನರ ಸಮ್ಮುಖದಲ್ಲಿ ಪರಿನಿಬ್ಬಾಣ ಪಡೆಯುತ್ತಾರೆ. ಜೀವನದಲ್ಲಿ ಅವರಿಬ್ಬರು ಅಗಲದೇ ಇದ್ದರೂ ಪರಿನಿಬ್ಬಾಣದ ಸಮಯ, ಪ್ರದೇಶ, ಭಿನ್ನವಾಗಿತ್ತು.

    ಸಾರಿಪುತ್ತರ ಪರಿನಿಬ್ಬಾಣದ ನಂತರ ಮೊಗ್ಗಲಾನರು  ಭಗ್ಗರ ನೆಲದಲ್ಲಿ, ಮೊಸಳೆಯ ಬೆಟ್ಟದ ಪಕ್ಕದಲ್ಲಿನ ಭೇಸಕಾಲ ಅರಣ್ಯದಲ್ಲಿನ ಮೃಗದಾವದಲ್ಲಿ (ಜಿಂಕೆಗಳ ಧಾಮ) ನಡಿಗೆಯ ಧ್ಯಾನದಲ್ಲಿ ತೊಡಗಿದ್ದರು. 

ಆ ಸಮಯದಲ್ಲಿ ಮಾರನು ಮೊಗ್ಗಲಾನರ ಹೊಟ್ಟೆಯಲ್ಲಿ ಪ್ರವೇಶಿಸಿದನು, ಇದು ಮೊಗ್ಗಲಾನರಿಗೆ ತಿಳಿದು ಆತನಿಗೆ ಹೊರಬರುವಂತೆ ಅಜ್ಞಾಪಿಸಿದರು. ಆತನಿಗೆ ಇದು ಆಶ್ಚರ್ಯವಾಯಿತು. ಏಕೆಂದರೆ ಸಾಧಾರಣ ಜನರಿಗೆ ಮಾರನು ಹೊಕ್ಕರೇ ತಿಳಿಯುತ್ತಿರಲಿಲ್ಲ.ನಂತರ ಆತನು ಅವರ ಬಾಯಿಯ ಬಳಿ ಬಂದು ನಿಂತನು ಆಗಲೂ ಸಹಾ ಮೊಗ್ಗಲಾನರು ಇದನ್ನು  ತಿಳಿದು ಆತನಿಗೆ ಹೊರಬರುವಂತೆ ಆಜ್ಞಾಪಿಸಿದರು. ಆಗ ಆತನು ಹೊರ ಬಂದು ಬಾಗಿಲ ಬಳಿ ನಿಂತನು. ಮೊಗ್ಗಲಾನರು ಆತನ ಮನಸ್ಸನ್ನು ಓದುವುದು ತಿಳಿದು ಆತನಿಗೆ ಆಶ್ಚರ್ಯವಾಯಿತು ಸಾಧಾರಣವಾಗಿ ಬೇರ್ಯಾರು ಆತನ ಮನಸ್ಸನ್ನು ಓದಲು ಆಗುತ್ತಿರಲಿಲ್ಲ. ಆಗ ಮೊಗ್ಗಲಾನರು ಆತನಿಗೆ ಹೀಗೆ ಹೇಳಿದರು. ಓ ಮಾರನೇ ಹಿಂದಿನ ಜನ್ಮಗಳ ಭಾಂಧವ್ಯದಲ್ಲಿ ನೀನು ನನ್ನ ತಂಗಿಯ ಮಗನಾಗಿರುವೇ. ನಾನು ನಿನ್ನ ತಾಯಿಯ ಅಣ್ಣ ದೂಸಿ ಮಾರನಾಗಿದ್ದೆನು ಎಂದು ಹೇಳಿ ತಮ್ಮ ಹಿಂದಿನ ಜನ್ಮದ ಚರಿತ್ರೆಯನ್ನು ವಿವರಿಸಿದರು. 

ಆ ಜನ್ಮವೂ ಕಕುಸಂಧ ಬುದ್ಧ ಭಗವಾನರ ಕಾಲದಾಗಿತ್ತು. ಆಗ ಮೊಗ್ಗಲಾನರೇ ಮಾರನಾಗಿದ್ದರು. ಆಗ ಅವರ ಹೆಸರು ದೂಸಿಮಾರನೆಂದು ಆಗಿತ್ತು. ಅವರ ತಂಗಿಯ ಹೆಸರು ಕಾಳಿ ಎಂದಾಗಿತ್ತು. ಆಕೆಯ ಮಗನೇ ಈಗಿನ ಮಾರನು. ಆ ಜನ್ಮದಲ್ಲಿ ದೂಸಿ ಮಾರನು ಸಂಘಕ್ಕೆ ಆಪಾರ ಕಿರುಕುಳ ನೀಡಿದ್ದನು. ಜನರಿಂದ ತೆಗಳಿಕೆ ಮಾಡಿಸುವುದು ಅಥವಾ ಹೊಗಳಿಕೆ ಮಾಡಿಸುವುದು ಇತ್ಯಾದಿ. ಅದರೆ ಭಗವಾನರ ಸಲಹೆಯಂತೆ ಮೆತ್ತ ಉಪೇಕ್ಖಗಳ ಪಾಲನೆಯಿಂದ ಸಂಘದಲ್ಲಿ ಎಲ್ಲ ಸರಿಹೋಯಿತು. ಆಗ ಕ್ರುದ್ಧನಾದ ದೂಸಿಮಾರನು ಒಮ್ಮೆ ಆಗಿನ ಅಗ್ರಶ್ರಾವಕರಾದ  ವಿಧುರರಿಗೆ ಹೊಡೆಯಲು ನಿರ್ಧರಿಸಿ ಒಬ್ಬ ಬಾಲಕನಲ್ಲಿ ಆವಾಹಿಸಿ ವಿಧುರರನ್ನು ಕಲ್ಲಿನಿಂದ ಅವರ ತಲೆಗೆ ಹೊಡೆದನು. ಅಗ್ರಶ್ರಾವಕರಾದ ವಿಧುರರ ತಲೆಗೆ ಗಾಯವಾಗಿ ರಕ್ತ ಹರಿಯಿತು. ಆಗ ಭಗವಾನರು ಹಿಂತಿರುಗಿ ಹೀಗೆ ಹೇಳಿದರು  ಈ ಮಾರನಿಗೆ ಮಿತಿಯೇ ತಿಳಿದಿಲ್ಲ. ಹಾಗೆ ನುಡಿದ ಕ್ಷಣವೇ ಮಾರನ ಅಸುರ ದೇಹವು ಕರಗಿ ಆ ಕ್ಷಣದಲ್ಲೆ ಆತನು ಭೀಕರವಾದ ನರಕದಲ್ಲಿ ಉತ್ಪನ್ನನಾದನು. ಆ ಒಂದು ನಿಮಿಷದ ಹಿಂದೆ ಆತನ ಅಡಿಯಲ್ಲಿ ಎಲ್ಲಾ ನರಕಗಳು ಸೇರುತ್ತಿದ್ದವು ಆತನು ಆ ಎಲ್ಲಾ ಕೀಳು ಲೋಕಗಳಿಗೆ ಅಧಿಪತಿಯಾಗಿದ್ದನು. ಅದರೆ ಈಗ ಅದೇ ನರಕದಲ್ಲಿ ಆತನು ಸಹಾ ಶಿಕ್ಷೆ ಅನುಭವಿಸುವವನಾದನು. ಹೀಗೆಯೇ ಸಹಸ್ರಾರು ವರ್ಷಗಳಷ್ಟು ಕಾಲ ಅತನು ಆ ನರಕದಲ್ಲಿದ್ದು ನಂತರ ಆತನು ದಶಸಹಸ್ರ ವರ್ಷಗಳ ಕಾಲ ಮಾನವಶರೀರ ಹಾಗೂ ಮೀನಿನ ಶಿರವುಳ್ಳವನಾಗಿ ಮತ್ತೆ ನರಕದ ದುಃಖಗಳನ್ನು ಅನುಭವಿಸಿದನು. 

ಹೀಗೆ ಅಗ್ರಶ್ರಾವಕರಿಗೆ ಕಿರುಕುಳ ನೀಡಿದರೆ ಏನಾಗುವುದು ಎಂದು ತಿಳಿಸಿ ಆತನಲ್ಲಿ ಭಯವನ್ನು ಹುಟ್ಟಿಸಿ ಕಳುಹಿಸಿದರು.


- ಂ0ಂ  

9. ಮೊಗ್ಗಲಾನರ ಅಗಾಧ ಜ್ಞಾನ

 9. ಮೊಗ್ಗಲಾನರ ಅಗಾಧ ಜ್ಞಾನ



9.1. ಮೊಗ್ಗಲ್ಲಾನ ಸುತ್ತ

ನಂತರ ಪರಿವ್ರಾಜಕ ವಚ್ಚಗೊತ್ತನು (ಗೊತ್ತ) ಪೂಜ್ಯ ಮೊಗ್ಗಲ್ಲಾನರ ಬಳಿಗೆ ಬಂದನು ಹಾಗು ಕುಶಲ ಕ್ಷೇಮಗಳ ವಿನಿಯಮ ಮಾಡಿಕೊಂಡನು. ನಂತರ ಒಂದಡೆ ಕುಳಿತು ಹೀಗೆ ಮಹಾಮೊಗ್ಗಲಾನರ ಬಳಿಯಲ್ಲಿ ಪ್ರಶ್ನಿಸಿದನು:

ಮಹಾ ಮೊಗ್ಗಲ್ಲಾನರೇ, ಇದು ಹೇಗೆ ಈ ಲೋಕವು ಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಮಹಾಮೊಗ್ಗಲಾನರೇ, ಈ ಲೋಕವು ಅಶಾಶ್ವತವೇ? ವಚ್ಚ, ಭಗವಾನರು ಈ ಲೋಕವನ್ನು ಅಶಾಶ್ವತವೆಂದು ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕಕ್ಕೆ (ಅಂತ್ಯವಿದೆಯೇ) ಸೀಮಿತವಿದೆಯೇ? ವಚ್ಚ, ಭಗವಾನರು ಈ ಲೋಕವು ಸೀಮಿತವಾಗಿದೆ ಎಂದೂ ಘೋಷಿಸಿಲ್ಲ. ಹಾಗಾದರೆ ಪೂಜ್ಯ ಮಹಾಮೊಗ್ಗಲಾನರೇ, ಈ ಲೋಕವೂ ಅನಂತವೇ? ವಚ್ಚ, ಭಗವಾನರು ಈ ಲೋಕವನ್ನು ಅನಂತವೆಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ಜೀವ (ಆತ್ಮ) ಹಾಗು ಶರೀರವೂ ಒಂದೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರ ಒಂದೇ ಎಂದೂ ಘೋಷಿಸಿಲ್ಲ. ಸರಿ ಮಹಾಮೊಗ್ಗಲ್ಲಾನರೇ, ಹಾಗಾದರೆ ಜೀವ ಮತ್ತು ಶರೀರ ಬೇರೆ ಬೇರೆಯೇ? ವಚ್ಚ, ಭಗವಾನರು ಜೀವ ಹಾಗು ಶರೀರವು ಬೇರೆ ಬೇರೆ ಎಂದು ಘೋಷಿಸಿಲ್ಲ. ಸರಿ, ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವರೇ? ವಚ್ಚ, ಭಗವಾನರು ಮರಣದ ನಂತರ ತಥಾಗತರು ಇರುವರೆಂದು ಘೋಷಿಸಿಲ್ಲ. ಸರಿ ಮಹಾಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲವೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲ ಇದು ಸತ್ಯವೇ? ವಚ್ಚ, ಭಗವಾನರು ಮರಣದ ನಂತರ ಇರುತ್ತಾರೆ ಹಾಗು ಇರುವುದಿಲ್ಲವೆಂದು ಸಹಾ ಘೋಷಿಸಿಲ್ಲ. ಸರಿ ಮೊಗ್ಗಲಾನರೇ, ತಥಾಗತರು ಮರಣದ ನಂತರ ಇರುವುದಿಲ್ಲ ಮತ್ತು ಇಲ್ಲದೆಯೂ ಹೋಗುವುದಿಲ್ಲ ಎಂಬುದು ಸರಿಯೇ? ವಚ್ಚ, ತಥಾಗತರು ಮರಣದ ನಂತರ ಇರುವುದಿಲ್ಲ, ಇಲ್ಲದೆಯೂ ಹೋಗುವುದಿಲ್ಲ ಎಂದು ಸಹಾ ಘೋಷಿಸಿಲ್ಲ.

ಮತ್ತೆ ಮಹಾಮೊಗ್ಗಲಾನರೇ, ಯಾವ ಕಾರಣದಿಂದಾಗಿ ಹಾಗು ಯಾವ ಉದ್ದೇಶದಿಂದಾಗಿ ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ಉದಾಹರಿಸುವುದಾದರೆ, ಲೋಕವು ಶಾಶ್ವತ ಅಥವಾ ಅಶಾಶ್ವತ ಅಥವಾ ಅಂತ ಅಥವಾ ಅನಂತವೆಂದೂ ಅಥವಾ ಜೀವ ಶರೀರವೊಂದೇ ಅಥವಾ ಬೇರೆ ಬೇರೆ ಅಥವಾ ತಥಾಗತರು ಮರಣದ ನಂತರ ಇರುತ್ತಾರೆ/ಇರುವುದಿಲ್ಲ/ಇರುತ್ತಾರೆ ಮತ್ತು ಇರುವುದಿಲ್ಲ/ಇರುವುದಿಲ್ಲ ಇಲ್ಲದೇಯೂ ಇಲ್ಲ ಇಂತಹ ಪ್ರಶ್ನೆಗಳಿಗೆ ಏತಕ್ಕಾಗಿ ಸಮಣ ಗೋತಮರು ಉತ್ತರಿಸುತ್ತಿಲ್ಲ. ಯಾವ ಕಾರಣದಿಂದಾಗಿ ಯಾವ ಉದ್ದೇಶದಿಂದಾಗಿ ಹೀಗೆ ಅಘೋಷಿತವಾಗಿದ್ದಾರೆ?

ವಚ್ಚ, ಬುದ್ಧರ ಹೊರತು ಪರ ಪಂಗಡದವರ ಕಣ್ಣಿಗೆ ಹೀಗೆ ಅಭಿಪ್ರಾಯರಾಗುತ್ತಾರೆ. ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮ. ಹಾಗೆಯೇ ಕಿವಿಗೆ... ನಾಲಿಗೆಗೆ... ಮೂಗಿಗೆ... ಶರೀರಕ್ಕೆ... ಮನಸ್ಸಿಗೆ ಇದು ನನ್ನದು, ಇದೇ ನಾನು ಮತ್ತು ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅನ್ಯ ಪಂಗಡದವರು ಈ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ... ಆದರೆ ವಚ್ಚ, ಯಾವಾಗ ತಥಾಗತರು ಅರಹಂತರು ಹಾಗು ಸಮ್ಮಾಸಂಬುದ್ಧರು ಕಣ್ಣಿನ ಬಗ್ಗೆ ಕಿವಿಗೆ ಮನಸ್ಸಿನ ಬಗ್ಗೆ ಅಭಿಪ್ರಾಯ ತಾಳುತ್ತಾರೆ. ಹೇಗೆಂದರೆ, ಇದು ನಾನಲ್ಲ, ಇದು ನನ್ನದಲ್ಲ ಹಾಗು ಇದು ನನ್ನ ಆತ್ಮವಲ್ಲ. ಆದ್ದರಿಂದಲೇ ತಥಾಗತರಿಗೆ ಈ ಬಗೆಯ ಪ್ರಶ್ನೆಗಳನ್ನು ಕೇಳಿದಾಗ ಅವರು ಉತ್ತರಿಸಲಾರರು.

ಆಗ ಪರಿವ್ರಾಜಕ ವಚ್ಚಗೊತ್ತನು ತನ್ನ ಆಸನದಿಂದೆದ್ದು ಅಲ್ಲಿಂದ ಹೊರಟು ಭಗವಾನರ ಬಳಿಗೆ ಬಂದನು. ಅಲ್ಲಿ ಪರಸ್ಪರ ಕುಶಲ ಕ್ಷೇಮ ವಿನಿಮಯ ಮಾಡಿಕೊಂಡು ಭಗವಾನರೊಂದಿಗೆ ಹೀಗೆ ಕೇಳಿದನು: ಇದು ಹೇಗೆ ಗೋತಮರೇ, ಈ ಲೋಕವು ಶಾಶ್ವತವೇ? (ಇಲ್ಲಿ ಬರುವ ಸಂಭಾಷಣೆಯೆಲ್ಲವೂ ಮೊಗ್ಗಲಾನ ಹಾಗು ವಚ್ಚರೊಂದಿಗೆ ನಡೆದ ಸಂಭಾಷಣೆಯಂತೆಯೇ ಇರುತ್ತದೆ).

ವಚ್ಚ, ನಾನು ತಥಾಗತರು ಇರುವುದಿಲ್ಲ ಹಾಗೆಯೇ ಇಲ್ಲದೆಯೂ ಇಲ್ಲ ಎಂದು ಘೋಷಿಸಲಾರೆನು. ಏತಕ್ಕಾಗಿ ಗೋತಮಶಾಸ್ತ್ರರೇ, ಯಾವ ಕಾರಣಕ್ಕಾಗಿ ಹಾಗು ಯಾವ ಉದ್ದೇಶಕ್ಕಾಗಿ, ಯಾವಾಗ ಪರಪಂಗಡದವರು ಕೇಳಿದ ಪ್ರಶ್ನೆಗಳಿಗೆ ತಾವು ಉತ್ತರಿಸುವುದಿಲ್ಲ. ಉದಾಹರಿಸುವುದಾದರೆ ಈ ಲೋಕವು ಶಾಶ್ವತವೇ / ಅಶಾಶ್ವತವೇ? ಇತ್ಯಾದಿ... ವಚ್ಚ, ಪರಪಂಗಡದವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನನ್ನದು, ಇದೇ ನಾನು, ಇದೇ ನನ್ನ ಆತ್ಮವೆಂದು ಪರಿಗಣಿಸುತ್ತಾರೆ. ಆದ್ದರಿಂದಲೇ ಅವರಲ್ಲಿ ಅಂತಹ ಪ್ರಶ್ನೆಗಳಿರುತ್ತದೆ. ಹಾಗೆಯೇ ಅಂತಹುದು ಉತ್ತರಗಳು ಅವರಲ್ಲಿರುತ್ತದೆ. ಉದಾಹರಿಸುವುದಾದರೆ, ಈ ಲೋಕವು ಶಾಶ್ವತ, ಈ ಲೋಕವು ಅಶಾಶ್ವತ ಇತ್ಯಾದಿ. ಆದರೆ ವಚ್ಚ ತಥಾಗತರು ಸಮ್ಮಾಸಂಬುದ್ದರು ಅರಹಂತರಾಗಿರುವ ಅವರು ಕಣ್ಣನ್ನು... ಕಿವಿಯನ್ನು... ಮೂಗನ್ನು... ನಾಲಿಗೆಯನ್ನು... ದೇಹವನ್ನು... ಮನಸ್ಸನ್ನು... ಇದು ನಾನಲ್ಲ, ಇದು ನನ್ನ ಆತ್ಮವಲ್ಲ ಎಂದು ಪರಿಗಣಿಸುತ್ತಾರೆ. ಆದ್ದರಿಂದಲೇ ತಥಾಗತರಲ್ಲಿ ಅಂತಹ ಪ್ರಶ್ನೆಗಳಾಗಲಿ ಅಥವಾ ಅಂತಹ ಉತ್ತರಗಳಾಗಿ ಉದಯಿಸುವುದಿಲ್ಲ.

ಆಶ್ಚರ್ಯಕರ ಗೋತಮ ಶಾಸ್ತ್ರರೇ, ಅದ್ಭುತಮಯ ಗೋತಮರೇ, ತಮ್ಮ ಶಿಷ್ಯನ ಹಾಗು ತಮ್ಮ ಹೇಳಿಕೆಯಲ್ಲಿ ಅರ್ಥದಲ್ಲಿಯಾಗಲಿ, ವ್ಯಂಜನದಲ್ಲಿಯಾಗಲಿ, ವಾಕ್ಯರಚನೆಯಲ್ಲಾಗಲಿ ಸ್ವಲ್ಪವೂ ವ್ಯತ್ಯಾಸವಿಲ್ಲ. ಹೇಗೆ ಅದ್ಭುತವಾದ ಗುರುವೋ ಹಾಗೆಯೇ ಪರಮಕುಶಲಿ ಶಿಷ್ಯನೂ ಸಹಾ. ತಮ್ಮಿಬ್ಬರಲ್ಲಿ ಯಾವುದೇ ಬೇಧವಿಲ್ಲದೆ ಒಂದೇರೀತಿಯಲ್ಲಿಯೇ ನುಡಿದಿದ್ದೀರಿ. ಈಗ ತಾನೇ ಗೋತಮರೆ, ನಾನು ಸಮಣ ಮಹಾಮೊಗ್ಗಲಾನರಲ್ಲಿಗೆ ಹೋಗಿದ್ದೆನು. ಅವರಲ್ಲಿಯೂ ಇದೇ ಪ್ರಶ್ನೆಗಳನ್ನು ಕೇಳಿದಾಗ ಅವರು ತಮ್ಮಂತೆಯೇ ಅಕ್ಷರ, ವಾಕ್ಯ, ಅರ್ಥ ವ್ಯತ್ಯಾಸವಿಲ್ಲದೆ ಇದೇ ರೀತಿಯಲ್ಲಿಯೇ ಉತ್ತರಿಸಿದ್ದರು. ಇದು ಆಶ್ಚರ್ಯಕರ, ಅದ್ಭುತಮಯ. ಹೇಗೆ ಅದ್ಭುತವಾದ ಶಾಸ್ತ್ರರೋ ಹಾಗೆಯೇ ಕುಶಲಿಯಾದ ಶಿಷ್ಯನೂ ಸಹಾ ಇದ್ದಾನೆ. ಯಾವುದೇ ರೀತಿಯಲ್ಲಿಯೂ ವಿರೋದಾಭಾಸವಿಲ್ಲದೆ ತಮ್ಮಂತೆಯೇ ತದ್ರೂಪಿಯಾಗಿ ಉತ್ತರಿಸಿದ್ದರು. ನಂತರ ವಚ್ಚನು ಅಲ್ಲಿಂದ ಹೊರಟನು.

9.2 ಅಸಾತ್ವಿಕರಿಗೆ ಉಪದೇಶ ಅಪ್ರಿಯವಾಗಿರುತ್ತದೆ

ಭಿಕ್ಖು ಅಸ್ಸಜಿ ಮತ್ತು ಪುನಭಾನುಕ ಮತ್ತು ಅವರ ಶಿಷ್ಯರು ಕಿಟಾಗಿರಿಯಲ್ಲಿ ತಂಗಿದ್ದರು. ಅವರು ಅಲ್ಲಿದ್ದಾಗ ಸ್ವಾರ್ಥಕ್ಕಾಗಿ ಹಣ್ಣಿನ ಗಿಡಗಳನ್ನು ನೆಟ್ಟರು. ಅಷ್ಟೇ ಅಲ್ಲ, ಭಿಕ್ಷುವಿನ  ಎಷ್ಟೋ ನಿಯಮಗಳನ್ನು ಅವರು ಮುರಿದರು. ಹೀಗೆ ಅವರು ವಿಹಾರವನ್ನು ಗದ್ದಲಮಯ ಮಾಡಿ ಬೇರೆ ಭಿಕ್ಷುಗಳಿಗೆ ಅಶಾಂತಿ ತಂದರು.

ಈ ಭಿಕ್ಷುಗಳ ಬಗ್ಗೆ ಕೇಳಿದ ಭಗವಾನರು ಸಾರಿಪುತ್ತ ಮತ್ತು ಮೊಗ್ಗಲಾನರವರಿಗೆ ಅವರನ್ನು ಸರಿಹಾದಿಗೆ ತರಲು ಕಳುಹಿಸಿದರು. ಸಾರಿಪುತ್ತ ಮತ್ತು ಮೊಗ್ಗಲಾನರವರ ಬುದ್ಧಿವಾದ ಕೇಳಿದ ಬಹಳಷ್ಟು ಭಿಕ್ಷುಗಳು ಬದಲಾವಣೆ ಹೊಂದಿ ಶುದ್ಧ ಭಿಕ್ಷುಗಳಾದರು. ಕೆಲವು ತಮ್ಮಿಂದಾಗದು ಎಂದು ಪುನಃ ಗೃಹಸ್ಥರಾದರು. ಉಳಿದವರನ್ನು ಬಹಿಷ್ಕಾರ ಹಾಕಲಾಯಿತು. ಆ ಸಂದರ್ಭದಲ್ಲಿ ಭಗವಾನರು ಈ ಗಾಥೆಯನ್ನು ಹೇಳಿದರು. 

ಬೋಧಿಸುವವನು ಬುದ್ಧಿ ಹೇಳಿ ಎಚ್ಚರಿಸುವವನು, ಅಸಭ್ಯತೆಗಳ ನಿವಾರಿಸುವವನು (ತಡೆಗಟ್ಟುವವನು) ಸಾತ್ವಿಕರಿಗೆ ಪ್ರಿಯನಾಗುವನು, ಅಸಾತ್ವಿಕರಿಗೆ ಅಪ್ರಿಯನಾಗುವನು

9.3 ಮಹಾ ಗೋಸಿಂಗ ಸುತ್ತ (ಸಂಕ್ಷಿಪ್ತವಾಗಿದೆ)

ಒಮ್ಮೆ ಭಗವಾನರು ಗೋಸಿಂಗನ ಸಾಲಾ ವೃಕ್ಷಗಳ ಉಧ್ಯಾನವನದಲ್ಲಿ ನೆಲೆಸಿದ್ದರು. ಆಗ ಅಲ್ಲಿ ಅಗ್ರ ಶ್ರಾವಕರಾದ ಸಾರಿಪುತ್ತ ಹಾಗೂ ಮೊಗ್ಗಲಾನರು ಮತ್ತು ಮಹಾಶಿಷ್ಯರಾದ ಮಹಾಕಸ್ಸಪನವರು , ಅನುರುದ್ಧರವರು, ರೇವತರವರು, ಆನಂದರವರು ಮತ್ತು ಇತರರು ಅಲ್ಲಿ ನೆಲಸಿದ್ದರು. ಆಗ ಈ ಮಹಾಶಿಷ್ಯರು ಮೊಗ್ಗಲಾನರ ಸಹಿತವಾಗಿ ಸಾರಿಪುತ್ತರ ಬಳಿಗೆ ಧಮ್ಮವನ್ನು ಆಲಿಸಲು ಬಂದರು. ಆಗ ಸಾರಿಪುತ್ತರು ಹೀಗೆ ನುಡಿದರು : ಮಿತ್ರರೇ ಈ ಗೋಸಿಂಗನ ಸಾಲಾ ವೃಕ್ಷಗಳ ಉಧ್ಯಾನವನವು ಅತ್ಯಂತ ರಮಣಿಯವಾಗಿದೆ, ಈ ಬೆಳದಿಂಗಳ ಬೆಳಕಿನಲ್ಲಿ ಸಾಲಾ ವೃಕ್ಷಗಳು ಅತಿ ಸುಂದರವಾಗಿ ಅರಳಿವೆ, ಸ್ವಗರ್ೀಯ ಸುಗಂಧವು ಎಲ್ಲೆಡೆ ಪ್ರಸರಿಸಿದೆ, ಇಲ್ಲಿ ಯಾವ ರೀತಿಯ ಭಿಕ್ಖುವು ಸಾಲಾ ವೃಕ್ಷಗಳ ಈ ಉಧ್ಯಾನವನಕ್ಕೇ ಹೊಂಬೆಳಗಿಸುವವನಾಗಿರುವನು ? ಈ ಪ್ರಶ್ನೆಗೆ ಎಲ್ಲರೂ ತಮ್ಮ ತಮ್ಮ ಪ್ರತಿಭೆ ಹಾಗೂ ಪ್ರಜ್ಞೆಗೆ ತಕ್ಕಂತೆ ಉತ್ತರ ನೀಡಿದರು. ನಂತರ ಮೊಗ್ಗಲಾನರ ಸರತಿಯು ಬಂದಾಗ ಅವರು ಈ ರೀತಿಯಲ್ಲಿ ಉತ್ತರಿಸಿದರು : ಪೂಜ್ಯ ಸಾರಿಪುತ್ತರೇ ಇಬ್ಬರು ಭಿಕ್ಖುಗಳು ಧಾಮ್ಮಿಕ ಚಚರ್ೆಯಲ್ಲಿ ತೊಡಗುತ್ತ ಪರಸ್ಪರ ಪ್ರಶ್ನಿಸುತ್ತ ಹಾಗೂ ಪರಸ್ಪರ ಉತ್ತರಿಸುತ್ತ ಇರುತ್ತಾರೆ. ಹೀಗೆ ಅವರ ಚಚರ್ೆಯು ಸಾಗುತ್ತಿರುತ್ತದೆ. ಈ ಬಗೆಯ ಭಿಕ್ಖುಗಳು ಈ ಉಧ್ಯಾನವನಕ್ಕೆ ಹೊಂಬೆಳಗಿಸುವವನಾಗಿರುವನು. ಎಂದು ಮೊಗ್ಗಲಾನರು ಉತ್ತರಿಸಿದರು.

9.4 ಅನುಮಾನ ಸುತ್ತ (ಪರಿಶೀಲನೆಯ  ಸುತ್ತ)(ಸಂಕ್ಷಿಪ್ತವಾಗಿದೆ)

ಆ ಸಮಯದಲ್ಲಿ ಮಹಾಮೊಗ್ಗಲಾನರು ಭಗ್ಗರ ನಾಡಿನಲ್ಲಿ ಮೋಸಳೆಗಳ ಬೆಟ್ಟದ ಸಮೀಪದ ಬೇಸಕಾಲದ ಅರಣ್ಯದ ಜಿಂಕೆಗಳ ವನದಲ್ಲಿ ನೆಲಸಿದ್ದರು. ಆಗ ಅವರು ಭಿಕ್ಖುಗಳೊಂದಿಗೆ ಹೀಗೆ ಸಂಭೊಧಿಸಿದರು : ಆಯುಷ್ಮಂತರೇ.

ಪ್ರತಿಯಾಗಿ ಆ ಭಿಕ್ಖುಗಳು ಸಹಾ ಆಯುಷ್ಮಂತರೇ ಎಂದರು.

ಈಗ ಭಿಕ್ಖುಗಳು ಇನ್ನೊಬ್ಬ ಭಿಕ್ಖುವಿಗೆ ಬೋಧಿಸಲು ಅಹ್ವಾನಿಸುತ್ತಾರೆ. ಅದರೆ ಅವರಿಗೆ ಬೋಧಿಸಲು ಅತಿಕಠಿಣವಾಗಿರುತ್ತದೆ. ಯಾವ ಕಾರಣಕ್ಕಾಗಿ ಅವರಿಗೆ ಬೋಧಿಸಲು ಕಷ್ಟಕರವಾಗಿರುತ್ತದೆ. ?ಏಕೆಂದರೇ ಅವರು ಅಸಹéಿಷ್ಣುಗಳಾಗಿರುತ್ತಾರೆ.ಅವರು ಬೋಧನೆಗಳನ್ನು ಗೌರವದಿಂದ ಸ್ವೀಕರಿಸುವುದಿಲ್ಲ. ಹೀಗಾಗಿ ಆತನ ಪರಮಾರ್ಥ ಸಂಗಾತಿಗಳು ಆತನಿಗೆ ಬೋಧಿಸುವುದು ಅರ್ಹವೆಂದು ಭಾವಿಸುವುದಿಲ್ಲ.

     ಅವರಲ್ಲಿನ ಯಾವ ಗುಣಗಳು ಅವರಿಗೆ ಭೋಧಿಸಲು ಅಡ್ಡಿಯಾಗುತ್ತದೆ. ಅವೆಂದರೇ ಮೊದಲಿಗೆ ಅವರಲ್ಲಿನ ಕೆಟ್ಟ ಬಯಕೆಗಳು. ಇದರಿಂದಾಗಿ ಅವರಿಗೆ ಬೋಧಿಸುವುದು ಅರ್ಹವೆಂದು ಭಾವಿಸುವುದಿಲ್ಲ .ಹಾಗೇಯೇ ಅವರಲ್ಲಿನ ಇತರ ದುಗರ್ುಣಗಳೆಂದರೇ ತಮ್ಮನ್ನು ಪ್ರಶಂಸಿಸಿಕೊಳ್ಳುವುದು ಹಾಗೂ ಇತರರನ್ನು ತೆಗಳುವುದು...... ಹಾಗೆಯೇ ಅವರು ಸ್ವಲ್ಪ ಸ್ವಲ್ಪಕ್ಕೂ ರೇಗುವ ಸ್ವಭಾವ ಹೊಂದಿರುತ್ತಾರೆ. ಅವರು ಕೋಪದಿಂದಿರುತ್ತಾರೆ.......ಕೋಪದಿಂದಾಗಿ ಹಠವಾದಿಗಳಾಗುತ್ತಾರೆ........ಹೀಗಾಗಿ ಕಟುನುಡಿಗಳನ್ನು ಆಡುವವರು ಆಗಿರುತ್ತಾರೆ.........ನಿಂದಿಸುತ್ತಾರೆ......ಅವರು ಪ್ರತಿಯಾಗಿ ನಿಂದಿಸುತ್ತಾರೆ......ವಾದವಿವಾದಗಳಾಗುತ್ತವೆ....ಅವರಿಗೆ ವಾದ ಮಾಡಲು ಅಸಮರ್ಥರಾಗಿ ಜಾರಲು ಯತ್ನಿಸುತ್ತಾರೆ...ಕೋಪವನ್ನು, ದ್ವéೇಷವನ್ನು ,ಕಹಿತನವನ್ನು ತೋರುತ್ತಾರೆ...ಅವರ ಮೇಲೆ ಆರೋಪ ಬಂದಾಗ ಅವರು ಸ್ವೀಕರಿಸುವುದಿಲ್ಲ......ಅವರು ಆಕ್ರಮಣಕಾರಿಯಾಗುತ್ತಾರೆ ಪರರನ್ನು ಕಡೆಗಣಿಸುವವರಾಗುತ್ತಾರೆ.....ಅಸೂಯೆ ಪಡುವವರು ಆಗುತ್ತಾರೆ......ಸ್ವಾಥರ್ಿಗಳಾಗುತ್ತಾರೆ.......ಹೀಗಾಗಿ ಅವರು ಮೋಸ ಮಾಡಲು ಹಿಂಜರಿಯುವುದಿಲ್ಲ........ಹಠವಾದಿಗಳಾಗಿ ಟೊಳ್ಳುತನ ಹೊಂದುತ್ತಾರೆ.....ಅವರು ತಮ್ಮ ಎಲ್ಲಾ ದೃಷ್ಟಿಕೋನಗಳಿಗೆ ಅಂಟಿಕೊಂಡು ಅದನ್ನು ಬಿಡಲು ಸಿದ್ಧರಿರುವುದಿಲ್ಲ,.... ಹೀಗಾಗಿ ಅವರನ್ನು ಭೋಧಿಸಿ ಸರಿದಾರಿಗೆ ತರುವುದು ಸುಲಭವಾಗಿರುವುದಿಲ್ಲ

ಇಲ್ಲಿ ಭಿಕ್ಖುಗಳು ಪರ ಭಿಕ್ಖುಗಳನ್ನು ತಿದ್ದಲು ಆಹ್ವಾನಿಸುವುದಿಲ್ಲ. ಆದರೂ ಅವರು ತಿದ್ದಿಕೊಳ್ಳಲು ಸುಲಭವಾಗಿರುತ್ತಾರೆ(ಸಿದ್ಧರಾಗಿರುತ್ತಾರೆ). ಅವರು ಪರರ ಯೋಗ್ಯ ಸಲಹೆಗಳನ್ನು ಸ್ವೀಕಾರ ಮಾಡುತ್ತಾರೆ. ಹಾಗೂ ಅವರ ಹಿತವಚನಗಳನ್ನು ಗೌರವದಿಂದ ತೆಗೆದುಕೊಳ್ಳುತ್ತಾರೆ. ಹೀಗಾಗಿ ಅವರ ಪಾರಮಾರ್ಥ ಸಂಗಾತಿಗಳು ಅವರಿಗೆ ಬೋಧಿಸಲು ತಿದ್ದಲು ಅರ್ಹವೆಂದು ಬಾವಿಸುತ್ತಾರೆ, ಹಾಗೂ ಆ ಮನುಷ್ಯನು ನಂಬಿಕೆಯನ್ನು ಹಾಗೂ ಪುಣ್ಯವನ್ನು ಗಳಿಸುತ್ತಾನೆ.

ಅವರಲ್ಲಿನ ಯಾವ ಗುಣಗಳು ಅವರಿಗೆ ಬೋಧಿಸಲು ಸುಲಭವಾಗಿರುತ್ತದೆ. ಅವೆಂದರೇ ಮೊದಲಿಗೆ ಅವರಲ್ಲಿ ಕೆಟ್ಟ ಬಯಕೆಗಳು ಇರುವುದಿಲ್ಲ. ಇದರಿಂದಾಗಿ ಅವರಿಗೆ ಬೋಧಿಸುವುದು ಅರ್ಹವೆಂದು ಭಾವಿಸುತ್ತಾರೆ .ಹಾಗೇಯೇ ಅವರಲ್ಲಿನ ಇತರ ಗುಣಗಳೆಂದರೆ ತಮ್ಮನ್ನು ಪ್ರಶಂಸಿಸಿಕೊಳ್ಳುವುದಿಲ್ಲ ಹಾಗೂ ಇತರರನ್ನು ತೆಗಳುವುದು ಇಲ್ಲ...... ಹಾಗೆಯೇ ಅವರು ಸ್ವಲ್ಪ ಸ್ವಲ್ಪಕ್ಕೂ ರೇಗುವ ಸ್ವಭಾವ ಹೊಂದಿರುವುದಿಲ್ಲ............ ಅವರು ತಮ್ಮ  ಎಲ್ಲಾ ದೃಷ್ಟಿಕೋನಗಳಿಗೆ ಅಂಟಿಕೊಂಡಿರುವುದಿಲ್ಲ  ಮತ್ತು ಅವು ಅಕುಶಲವಾದರೇ ಅವನ್ನು ಬಿಡಲು ಸಿದ್ಧರಾಗಿರುತ್ತಾರೆ.... ಹೀಗಾಗಿ ಅವರನ್ನು ಭೋಧಿಸಿ ಸರಿದಾರಿಗೆ ತರುವುದು ಸುಲಭವಾಗಿರುತ್ತದೆ.

ಇಂತಹ ಪರಿಸ್ಥಿತಿಗಳಲ್ಲಿ ಭಿಕ್ಖುವು ತನ್ನನ್ನು ಪರರಿಗೆ ಹೋಲಿಸುತ್ತ ಈ ರೀತಿಯಲ್ಲಿ ಅಳತೆ ಮಾಡಿಕೊಳ್ಳುತ್ತಾನೆ ಈ ವ್ಯಕ್ತಿಯು ಕೆಟ್ಟ ಬಯಕೆಗಳಿಂದ ಕೂಡಿದ್ದಾನೆ. ಅದರಿಂದಲೇ ಜಾರಿಬಿದ್ದಿದ್ದಾನೆ. ಮತ್ತು ನಾನೂ ಸಹಾ ಈ ವ್ಯಕ್ತಿಯನ್ನು ಒಪ್ಪಲು ಸಿಧ್ಧನಿಲ್ಲ. ಒಂದು ವೇಳೆ ನಾನು ಏನಾದರೂ ಕೆಟ್ಟಬಯಕೆಗಳಲ್ಲಿ ಬಿದ್ದರೆ ಪರರು ನನ್ನನ್ನು ಸಹಾ ಒಪ್ಪುವುದಿಲ್ಲ. ಹೀಗಾಗಿ ನಾನು ಕೆಟ್ಟ ಬಯಕೆಗಳಿಗೆ ವಶನಾಗುವುದಿಲ್ಲ..............

..........ಅದೇ ರೀತಿಯಲ್ಲಿ ಇತರರ ಎಲ್ಲಾ ದುಗರ್ುಣಗಳನ್ನು ಒಪ್ಪಲು ಸಿಧ್ದನಿಲ್ಲ ಒಂದು ವೇಳೆ ನಾನು ದುಗರ್ುಣಗಳಲ್ಲಿ ಬಿದ್ದರೆ ಪರರು ನನ್ನನ್ನು ಸಹಾ ಒಪ್ಪುವುದಿಲ್ಲ. ಹೀಗಾಗಿ ನಾನು ದುಗರ್ುಣಗಳಿಗೆ ವಶನಾಗುವುದಿಲ್ಲ..............

.......ಅದೇ ರೀತಿಯಲ್ಲಿ ತನ್ನನ್ನು ಈ ರೀತಿ ಪರಿಶೀಲನೆ ಮಾಡುತ್ತಾನೆ.

ಈ ವ್ಯಕ್ತಿಯು ತನ್ನ ದೃಷ್ಟಿಕೊನಗಳಿಗೆ ಅಂಟಿಕೊಂಡಿದ್ದಾನೆ. ಅವುಗಳನ್ನು ಬಿಗಿಯಾಗಿ ಹಿಡಿದುಕೊಂಡು ಬಿಡುವುದಕ್ಕೆ ನಿರಾಕರಿಸುತ್ತಿದ್ದಾನೆ. ಮತ್ತು ನಾನು ಇಂತಹ ವ್ಯಕ್ತಿಯನ್ನು ಸಮ್ಮತಿಸುವುದಿಲ್ಲ ಹಾಗೂ ಇಷ್ಟಪಡುವುದಿಲ್ಲ. ಮತ್ತು ನಾನೂ ಏನಾದರೂ ಒಂದು ವೇಳೆ ಇದೇ ರೀತಿ ದೃಷ್ಟಿಕೋನಗಳಿಗೆ ಅಂಟಿಕೊಂಡರೆ ಅವುಗಳಿಗೆ ಬಿಗಿಯಾಗಿ ಹಿಡಿದುಕೊಂಡರೆ ಪರರೂ ಸಹಾ ನನಗೆ ಇಷ್ಟಪಡಲಾರರು ಹಾಗೂ ಸಮ್ಮತಿಸಲಾರರು. ಹೀಗೆ ಯೋಚಿಸುವ ಬಿಕ್ಖುವು ಈ ಬಗೆಯ ತಿಮರ್ಾನ ತೆಗೆದುಕೊಳ್ಳುತ್ತಾನೆ ;ನಾನು ನನ್ನ ದೃಷ್ಟಿಕೋನಗಳಿಗೆ ಅಂಟುವುದಿಲ್ಲ ಅವುಗಳನ್ನು ಬಿಗಿಯಾಗಿ ಹಿಡಿಯುವುದಿಲ್ಲ ಬದಲಾಗಿ ಬಿಟ್ಟುಬಿಡುತ್ತೇನೆ.

ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ.: ನಾನು ದುಷ್ಟ ಬಯಕೆಗಳಿಂದ ಕೂಡಿದ್ದೇನೆಯೇ ನಾನು ದುಷ್ಟಬಯಕೆಗಳ ಜಾಲದಲ್ಲಿ ಬಿದ್ದಿರುವೆನೇ ? ಪರೀಶೀಲನೆಯ ನಂತರ ತಾನು ದುಷ್ಟಬಯಕೆಗಳಿಂದ ಕೂಡಿದ್ದೇನೆ ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ದುಷ್ಟಬಯಕೆಗಳಿಂದ ಕೂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ...........

...............ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ ನಾನು ದೃಷ್ಟಿಕೋನಗಳಿಗೆ ಅಂಟಿರುವೆನೇ ಹಾಗೂ ಬಿಗಿಯಾಗಿ ಹಿಡಿದುಕೊಂಡಿರುವನೇ ? ಪರೀಶೀಲನೆಯ ನಂತರ ತಾನು  ದೃಷ್ಟಿಕೋನಗಳಿಗೆ ಅಂಟಿರುವೆನು ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ದೃಷ್ಟಿಕೋನಗಳಿಗೆ ಅಂಟಿಕೊಂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ.

ಊಹಿಸಿರಿ ಒಬ್ಬ ತರುಣ ಅಥವಾ ತರುಣಿಯೊಬ್ಬಳು ಅಲಂಕಾರದಲ್ಲಿ ಆನಂದಿಸುವವರಾಗಿದ್ದು ಅವರು ಸ್ವಚ್ಚ ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬವನ್ನು ನೋಡಿದಾಗ ಅವರಿಗೆ ಮುಖದಲ್ಲಿ ಯಾವುಧೇ ಕಲೆಗಳಾಗಲಿ ಮಸಿಯಾಗಲಿ ಕಂಡುಬಂದರೆ ಅವರು ಕೂಡಲೇ ಅದನ್ನು ತೆಗೆಯಲು ಮುಂದಾಗುತ್ತಾರೆ ಒಂದು ವೇಳೆ ಅವರಿಗೆ ಯಾವುದೇ ಕಲೆಗಳಾಗಲಿ ಅಥವಾ ಮಸಿಯಾಗಲಿ ಕಂಡಿಲ್ಲವಾದರೇ ಆವರು ಆನಂದಗೊಳ್ಳುತ್ತಾರೆ ಒಹ್ ನಾನೇಷ್ಟು ಧನ್ಯ ಶುಚಿಯಾಗಿದ್ದೇನೆ ಶುಭ್ರವಾಗಿದ್ದೇನೆ ಎಂದು ಆನಂದಿಸುತ್ತಾರೆ.

ಅದೇ ರೀತಿಯಲ್ಲಿ ಅಂತಹ ವೇಳೆಯಲ್ಲಿ ಭಿಕ್ಖುವು ಈ ಬಗೆಯಲ್ಲಿ ತನ್ನ ಪರಿಶೀಲನೆ ಮಾಡಿಕೊಳ್ಳುತ್ತಾನೆ.: ನಾನು ಅಕುಶಲಗುಣಗಳಿಂದ ಕೂಡಿದ್ದೇನೆಯೇ ನಾನು ಅಕುಶಲಗುಣಗಳ ಜಾಲದಲ್ಲಿ ಬಿದ್ದಿರುವೆನೇ ? ಪರೀಶೀಲನೆಯ ನಂತರ ತಾನು ಅಕುಶಲಗುಣಗಳಿಂದ  ಕೂಡಿದ್ದೇನೆ ಎಂದು ಅರಿವಾಗುತ್ತದೆ. ನಂತರ ಆ ಪ್ರಜ್ಞಾವಂತ ಭಿಕ್ಖುಗಳು ಅವುಗಳನ್ನು ತೊರೆಯಲು ಯತ್ನಿಸುತ್ತಾರೆ.ಹಾಗೂ ಯಶಸ್ವಿಗಳಾಗುತ್ತಾರೆ. ಅಥವಾ ಅವರು ಪರಿಶೀಲನೆಯ ನಂತರ ಅವರು ಅಕುಶಲಗುಣಗಳಿಂದ  ಕೂಡಿಲ್ಲ ಎಂದು ಅರಿವಾದಾಗ ಆಗ ಅವರು ಆನಂದಭರಿತರಾಗುತ್ತಾರೆ. ಅಂತಹವರು ರಾತ್ರಿಯಲ್ಲಿ ಆಗಲಿ ಅಥವಾ ಹಗಲಿನಲ್ಲಿಯೇ ಆಗಲಿ ಆನಂದದಿಂದ ಧ್ಯಾನದಲ್ಲಿ ತೊಡಗಿ ಕುಶಲಗುಣಗಳನ್ನು ವೃದ್ಧಿಸುತ್ತಾರೆ 

ಹೀಗೇ ಮೊಗ್ಗಲಾನರು ಬೋಧಿಸಿದಾಗ ಅದನ್ನು ಆಲಿಸಿದಂತಹ ಭಿಕ್ಖುಗಳು ಆನಂದಿತರಾದರು ಹಾಗು ಸಂತೃಪ್ತರಾದರು. 

ಮೊಗ್ಗಲಾನರ ಗಾಥೆಗಳು (ಥೇರ ಗಾಥ)

(ಕಾಡಿನಲ್ಲಿ ಭಿಕ್ಖು ಜೀವನದ ವೇಳೆಯ ಗಾಥೆಗಳು)

ಕಾಡಿನಲ್ಲಿ ವಾಸಿಸುತ್ತ ಭಿಕ್ಷಾನ್ನವನ್ನೇ ಸೇವಿಸುತ್ತ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಅದರೆ ಆಂತರ್ಯ ಮಾತ್ರ ಪ್ರಶಾಂತವಾಗಿದ್ದು 

ಮಾರನ ಸೇನೆಯನ್ನು ಧ್ವಂಸಮಾಡೋಣ      

ಕಾಡಿನಲ್ಲಿ ವಾಸಿಸುತ್ತ ಭಿಕ್ಷಾನ್ನವನ್ನೇ ಸೇವಿಸುತ್ತ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಆನೆಯು ಜೊಂಡಿನ ಕುಟೀರವನ್ನು ನಾಶಮಾಡುವಂತೆ

ಮಾರನ ಸೇನೆಯನ್ನು ಧ್ವಂಸಮಾಡೋಣ       

ಮರದ ಬುಡದಲಿ ವಾಸಿಸುತ್ತ ಸತತ ಯತ್ನಶಾಲಿಯಾಗಿ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಅದರೆ ಆಂತರ್ಯದಲ್ಲಿ ಮಾತ್ರ ಪ್ರಶಾಂತವಾಗಿದ್ದು , 

ಮಾರನ ಸೇನೆಯನ್ನು ಧ್ವಂಸಮಾಡೋಣ        

ಮರದ ಬುಡದಲಿ ವಾಸಿಸುತ್ತ ಸತತ ಯತ್ನಶಾಲಿಯಾಗಿ,

ಪಿಂಡಪಾತ್ರೆಗೆ ಏನೇ ಬೀಳಲಿ ಸುಖಿಯಾಗಿದ್ದು,

ಆನೆಯು ಜೊಂಡಿನ ಕುಟೀರವನ್ನು ನಾಶಮಾಡುವಂತೆ

ಮಾರನ ಸೇನೆಯನ್ನು ಧ್ವಂಸಮಾಡೋಣ.

ಗುಡಿಸಲಿನಂತೆ ಅಸ್ತಿಪಂಜರವಿದ್ದು

ಮಾಂಸ ನರಗಳಿಂದಾಗಿ ಹೆಣೆಯಲ್ಪಟ್ಟಿರುವ

ಹಾಳು ದುನರ್ಾತದ ಈ ಶರೀರ

ಪರರ ದೇಹಗಳನ್ನು ಸಲಹುತ್ತದೆ.                       

ಚರ್ಮದ ಗೋಣಿಚೀಲದ ಒಳಗಿನ ತೊಪ್ಪೆಯೇ

ಎದೆಯಲ್ಲಿ ಕೊಂಬುಗಳಿರುವ ಸತ್ವವೇ

ನಿನ್ನ ದೇಹವು ಒಂಬತ್ತು ತೊರೆಗಳಿಂದ

ನಿರಂತರವಾಗಿ ಹರಿಯುತ್ತಲೇ ಇರುತ್ತದೆ.      

ಈ ಒಂಬತ್ತು ತೊರೆಗಳಿಂದ 

ನಿನ್ನ ದೇಹವು ದುನರ್ಾತ ಮಲಭರಿತ

ಯಾವ ಭಿಕ್ಖುವು ವಿಶುಧ್ಧಿ ಬಯಸುವನೊ

ಈ ಶರೀರವನ್ನು ಕಶ್ಮಲದಂತೆ ತಡೆಯಲಿ     

ಅವರು ನನ್ನಂತೆ ನಿನಗೆ

ನೋಡಿದರೆ

ಮಳೆಗಾಲದ ಗೊಬ್ಬರದ ಗುಂಡಿಯಂತೆ

ದೂರವಾಗುವರು.                         

(ವೇಶ್ಯೆಯೊಬ್ಬಳು ಪ್ರಲೋಭನೆ ಮಾಡಿದಾಗ ಈ ಗಾಥೆಗಳನ್ನು ಹೇಳಿದರು)

ಇದು ಹೀಗೆ ಇದೇ ಮಹಾವೀರನೇ!

ನೀ ಹೇಳಿದಂತೆಯೇ ತಾಪಸಿಯೇ

ಅದರೆ ಕೆಲವರು ಮುದಿ ವೃಷಭದ

ಯಾರು ಇದನು ಹೊಂಬಣ್ಣದ 

ಆಥವಾ ಬೇರೆ ಬಣ್ಣದ ರೀತಿಯ

ಆಕಾಶವೆಂದು ಯೋಚಿಸುವರೋ

ಅವರು ಕೇವಲ ತಮ್ಮ ಸಮಸ್ಯೆಗಳಿಗೆ ಕಾರಣರಾಗುತಿಹರು.     

ಈ ಮನವು ಗಗನದಂತೆ

ಪ್ರಶಾಂತವು ಆಂತರ್ಯದಲಿ

ಓ ಮಾರನೇ ಚಿಟ್ಟೆಯು ಬೆಂಕಿಗೆ

ಬೀಳುವಂತೆ ಮೇಲೆ ಬೀಳಬೇಡ

ನೋಡು ಈ ಅಲಂಕೃತ ಸೂತ್ರದ ಗೊಂಬೆಯ

ಹುಣ್ಣುಗಳ ರಾಶಿಯೇ ಇದೆ ಈ ಶರೀರದಲಿ,

ಈ ರೋಗಕಾರಿಗೆ ಗೀಳು ಹೊಂದಿ

ಶಾಶ್ವತವಾದ ಸ್ಥಿರತೆ ಇನ್ನಿಲ್ಲವಾಗುವುದು.

ನೋಡು ಈ ಅಲಂಕೃತ ಆಕಾರಗಳನು

ಹರಳುಗಳು ಹಾಗೂ ಕಿವಿಯುಂಗರಗಳನು

ಇಲ್ಲಿ ಕೇವಲ ಚರ್ಮವು ಹೊದಿಕೆಯಾಗಿದೆ ಮೂಳೆಗಳಿಗೆ

ಇದು  ವಸ್ತ್ರಗಳಿಂದ ಮಾತ್ರ ಸೋಗಸಾಗಿದೆ

ಕೋಮಲವಾದ ಪಾದಗಳು

ಪುಡಿಯಿಂದಾದ ಬಿಳಪು ಮೊಗವು

ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು

ಅದರೆ ಆ ತೀರದ ಅನ್ವéೇಷಿಗನಿಗಲ್ಲ.

ಕೂದಲು ಎಂಟು ಜಡೆಗಳಾಗಿ

ಮತ್ತು ಕಾಡಿಗೆಯ ಲೇಪನ 

ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು

ಅದರೆ ಆ ತೀರದ ಅನ್ವéೇಷಿಗನಿಗಲ್ಲ.

ಹೊಸದಾದ ಸೌಂದರ್ಯವರ್ಧಕ ಡಬ್ಬಿಯು

ಸಿಂಗರಿಸಿಕೊಂಡ ಅಸಹ್ಯಕರ ದೇಹವು

ಇಷ್ಟೇ ಸಾಕು ಮೂರ್ಖನಿಗೆ ಮರಳುಮಾಡಲು

ಅದರೆ ಆ ತೀರದ ಅನ್ವéೇಷಿಗನಿಗಲ್ಲ.

ಬೇಟೆಗಾರನು ತನ್ನ ಬಲೆಯನ್ನು ಹಾಕಿದ್ದಾನೆ.

ಅದರೆ ಜಿಂಕೆಯು ಉರುಲಿಗೆ ಸಿಕ್ಕಿಕೊಂಡಿಲ್ಲ

ಜಿಂಕೆಯ ಬೇಟೆಗಾರನನ್ನು ಪ್ರಲಾಪಿಸಲು ಬಿಟ್ಟು

ಗಾಳದ ಆಹಾರ ಸೇವಿಸಿ ನಾವು ಹೊರಡುವೆವು

ಬೇಟೆಗಾರನ ಬಲೆಯು ಹರಿದುಹೋಗಿದೆ

ಜಿಂಕೆಯು ಉರುಳಿಗೆ ಬಿದ್ದಿಲ್ಲ

ಜಿಂಕೆಯ ಬೇಟೆಗಾರನನ್ನು ಪ್ರಲಾಪಿಸಲು ಬಿಟ್ಟು

ಗಾಳದ ಆಹಾರ ಸೇವಿಸಿ ನಾವು ಹೊರಡುವೆವು

(ಸಾರಿಪುತ್ತರ ಪರಿನಿಬ್ಬಾಣ ವೇಳೆ ನುಡಿದ ಗಾಥೆಗಳು)

ನಂತರ ಅಲ್ಲೊಂದು ಭೀಕರ

ಸಕಲ ಸಧ್ಗುಣ ಸಂಪನ್ನ 

ಸಾರಿಪುತ್ತರ ಪರಿನಿಬ್ಬಾಣದ 

ನಂತರ ಅವರಿಗೆ ರೋಮಂಚಕಾರಿ ಭಯ

ಸರ್ವ ಸಂಖಾರಗಳು ಅನಿತ್ಯ

ಏಳು ಬೀಳುವಿಕೆಯ ಸ್ವಭಾವದ್ದು

ಅವು ಏಳುವವು ಹಾಗೇಯೇ ಬೀಳುವವು

ಅವುಗಳ ನಿರೋಧವೇ ಪರಮಸುಖ

ಯಾರು ಪಂಚ ಸ್ಕಂಧಗಳನ್ನು ಹಾಗೂ 

ಬೇರೆಯವನ್ನು ಸ್ವಯಂ ಎಂದು ಕಾಣುವುದಿಲ್ಲವೋ

ಅಂತಹವರು ಕೂದಲನ್ನು ಬಾಣದಿಂದ ಸೀಳುವ ಹಾಗೆ

ಪರಮಸೂಕ್ಷ್ಮತೆಯನ್ನು ಅರಿಯುವರು.

ಯಾರು ಎಲ್ಲಾ ಸ್ಥಿತಿಗಳನ್ನು  ಹಾಗೂ

ಬೇರೆಯವನ್ನು ಆತ್ಮವೆಂದು ಕಾಣುವುದಿಲ್ಲವೋ

ಅಂತಹವರು ಕೂದಲನ್ನು ಬಾಣದಿಂದ ಭೇಧಿಸುವ ಹಾಗೆ

ಪರಮಸೂಕ್ಷ್ಮತೆಯನ್ನು ಅರಿಯುವರು.

ಖಡ್ಗಗಳ ಹೊಡೆತಕ್ಕೆ ಸಿಲುಕಿರುವಂತೆ

ತಲೆಗೆ ಬೆಂಕಿ ಬಿದ್ದಿರುವಂತೆ

ಜಾಗಾರೂಕ ಭಿಕ್ಖುವು ಇಂದ್ರಿಯ ಸುಖಗಳನ್ನು

ಪರಿತ್ಯಾಗ ಮಾಡಿ ಮುಂದೆ ಹೋಗುವನು

ಖಡ್ಗಗಳ ಹೊಡೆತಕ್ಕೆ ಸಿಲುಕಿರುವಂತೆ

ತಲೆಗೆ ಬೆಂಕಿ ಬಿದ್ದಿರುವಂತೆ

ಜಾಗಾರೂಕ ಭಿಕ್ಖುವು ಭವತನ್ಹವನ್ನು

ಪರಿತ್ಯಾಗ ಮಾಡಿ ಮುಂದೆ ಹೋಗುವನು

(ಮಿಗಾರ ಪ್ರಸಾಧ ಕಂಪನ ಮಾಡಿದಾಗ ನುಡಿದ ಗಾಥೆಗಳು)

ಅಂತಿಮ ದೇಹಧಾರಿಯಾದ 

ಸುಗತರ ಪ್ರೋತ್ಸಾಹದಿಂದ 

ನಾ ಮಿಗಾರ ಮಾತೆಯ ಭವನವನ್ನು 

ಕೇವಲ ಕಾಲಿನ ಹೆಬ್ಬರಿಳಿನಿಂದ ಗಡಗಡ ಕಂಪಿಸಿಬಿಟ್ಟೆನು

ಸಡಿಲತೆಯಿಂದ ನೀ ಹಲವು ಪಡೆಯುವುದಲ್ಲ

ಅಲ್ಪಶ್ರಮದಿಂದ ನೀ ಹಲವು ಪಡೆಯುವುದಲ್ಲ

ನಿಬ್ಬಾಣದ ಸಾಕ್ಷಾತ್ಕಾರವು 

ಸರ್ವ ಅಂಟುವಿಕೆಯ ಮುಕ್ತಿಯಿಂದಾಗುವುದು

ಈ ನವಯುವಕ ಭಿಕ್ಖು

ಮಾನವರಲ್ಲಿ ಅತ್ಯುತ್ತಮ

ಅಂತಿಮ ದೇಹದಾರಿಯಾದ

ಆವರು ಮಾರನ ಹಾಗೂ ಆತನ ಸೇನೆಯ ಸೋಲಿಸಿದವರು

(ಈ ಗಾಥೆಗಳನ್ನು ಅವರು ಏಕಾಂತದಲ್ಲಿ ಸಾಧನೆ ಮಾಡುವಾಗ ನುಡಿದದ್ದು ಆಗಿದೆ)

ವೆಭವ ಹಾಗೂ ಪಾಂಡವ ಪರ್ವತದ ಮೇಲೆ

ಮಿಂಚಿನ ಧಾರೆಗಳು ಉದುರಿದವು

ಅದರೆ ಪರ್ವತದ ಬಿರುಕಿನಲ್ಲಿ ಅಸಮಾನರ ಪುತ್ರನು

ಝಾನದಲ್ಲಿ ಲೀನವಾಗಿ ಹಾರಾಡಿದನು

(ಈ ಗಾಥೆಗಳನ್ನು ಕಸ್ಸಪರಿಗೆ ಗೌರವಿಸದ ಬ್ರಾಹ್ಮಣನಿಗೆ ನುಡಿದರು)

ಶಾಂತನು ಮತ್ತು ಪ್ರಶಾಂತನು

ಏಕಾಂತ ವಿಹಾರಿಯಾಗಿ ಋಷಿಯು

ಅನನ್ಯ ಬುದ್ಧರ ವಂಶಜನಾಗಿ

ಬ್ರಹ್ಮನಿಂದಲೂ ಗೌರವ ಪಡೆದನು.

ಶಾಂತನು ಮತ್ತು ಪ್ರಶಾಂತನು

ಏಕಾಂತ ವಿಹಾರಿಯಾಗಿ ಋಷಿಯು

ಅನನ್ಯ ಬುದ್ಧರ ವಂಶಜನಾಗಿದ್ದಾನೆ

ಬ್ರಾಹ್ಮಣ ನೀ ಕಸ್ಸಪರವರಿಗೆ ಗೌರವಿಸು.

ಒಬ್ಬನು ನಿರಂತರವಾಗಿ ನೂರು

ಜನ್ಮಗಳನ್ನು ಮಾನವನಾಗಿ

ಬ್ರಾಹ್ಮಣನಾಗಿ ಹುಟ್ಟಿ

ವೇದಗಳೆಲ್ಲವನ್ನು ನೆನಪಲ್ಲಿಟ್ಟರೂ

ಆತನು ಗುರುವಾಗಿದ್ದರೂ

ತ್ರಿವೇದದ ಪ್ರಾವಿಣ್ಯನಾಗಿದ್ದರೂ

ಅಂತಹವರಿಗೇ ಗೌರವಿಸುವುದರಿಂದ

ಸಿಗುವ ಲಾಭವು ಅತ್ಯಲ್ಪ

ಅದರೆ ಯಾರು ಅಷ್ಟಸಮಾಪತ್ತಿಗಳ

ಅಧಿಪತಿಯೋ ಯಾರು ಅವುಗಳಲ್ಲಿ ಮುನ್ನುಗ್ಗುವನೋ

ಹಾಗೂ ಹಿಂಬರುವನೋ ನಂತರ ಆಹಾರಕ್ಕೆ ಹೋಗುವನೋ

ಅಂತಹವನಿಗೇ ನೀಡುವ ಫಲವೂ ಹಿಂದಿನಗಿಂತ 

ಹದಿನಾರು ಪಟ್ಟುಗಿಂತಲೂ ಹೆಚ್ಚಿನದು

ಅಂತಹ ಭಿಕ್ಖುವಿಗೆ ನೀ ಹೊಡೆಯಲು ಹೋಗಬೇಡ

ನಿನ್ನನ್ನು ನೀನೂ ನಾಶಗೋಳಿಸಿಕೊಳ್ಳುವೆ ಬ್ರಾಹ್ಮಣ

ಅರಹಂತರಲ್ಲಿ ಶ್ರದ್ಧೆಯಿಡು ಶ್ರಧ್ಧಾಂಜಲಿ ಪೂರ್ವಕ ಪೂಜಿಸು

ಹಾಗಲ್ಲದೆ ನಿನ್ನ ತಲೆಯನ್ನು ನುಚ್ಚುನೂರಾಗಿಸಬೇಡ

ನೀ ಪುನರ್ಜನ್ಮ ಪ್ರಮುಖವೆಂದು ಭಾವಿಸಿದರೆ

ನೀ ಧಮ್ಮವನ್ನು ಸರಿಯಾಗಿ ನೋಡಿಲ್ಲ

ನೀ ವಕ್ರ ಮಾರ್ಗವ ಸಾಗುತಿಹೆ 

ಕುಮಾರ್ಗವು ನಿನಗೆ ಕೆಳಗೆ ದಬ್ಬುವುದು.


(ಟೊಳ್ಳು ಪೊತ್ತಿಲನಿಗೆ ನುಡಿದದು)

 ಹೇಗೆ ಜಂತುವು ಸಗಣಿಯಿಂದ ಲೇಪಿತವಾಗಿಯೋ

ಹಾಗೆಯೇ ಆತನು ಪರಿಸ್ಥಿತಿಗಳಿಂದ ಮತ್ತಿನಲ್ಲಿನರುತ್ತಾನೆ

ಲಾಭ ಸತ್ಕಾರಗಳಿಂದ ಮುಳುಗಿರುತ್ತಾನೆ.

ಟೊಳ್ಳು ಪೊತ್ಥಿಲ ಮುಂದುವರಿ

(ಸಾರಿಪುತ್ತರ ಬಗ್ಗೆ ನುಡಿದ ಗಾಥೆಗಳು)

ನೋಡು ಸಾರಿಪುತ್ತನು ಬರುತ್ತಿರುವನು

ಆತನ ದರ್ಶನವು ಸಾಧುವಾದುದು

ಉಭಯ ರೀತಿಯಲ್ಲಿಯು ವಿಮುಕ್ತನವನು

ಅಂತರ್ಯದಲ್ಲಿ ಸದಾ ಪ್ರಶಾಂತನು.

ಆತನ ಶಲ್ಯವು ತೆಗೆದುಹಾಕಲ್ಫಟ್ಟಿದೆ ಮತ್ತು ಬಂಧನಗಳು ಕತ್ತರಿಸಲ್ಪಟ್ಟಿವೆ

ತ್ರಿವಿಧ್ಯಾಧರನು ಮಾರನಾಶಿಯು

ಆತಿಥ್ಯಗಳಿಗೆ ಅರ್ಹನು

ಲೋಕದ ಜನರಿಗೆ ಸರಿಸಾಟಿಯಿಲ್ಲದ ಪುಣ್ಯಕ್ಷೇತ್ರನು

(ಈ ಗಾಥೆಗಳನ್ನು ಸಾರಿಪುತ್ತರು ಹೇಳಿದದು)

 ಆ ಸುಖ್ಯಾತಿಯ ದಶಸಹಸ್ರ ದೇವತೆಗಳು 

ಇದ್ಧಿಸಂಪನ್ನರು ಸಹಾ

ಅವರೆಲ್ಲಾ ಬ್ರಹ್ಮನಿಗೆಮಂತ್ರಿಗಳು

ಅದರೂ ಮೊಗ್ಗಲಾನನಿಗೆ ಅಂಜಲೀಬದ್ಧರಾಗಿ ವಂದಿಸುವರು.

ಮನುಜರಲ್ಲಿ ಶ್ರೇಷ್ಟ ಅಶ್ವನೇ ವಂದನೆ ನಿಮಗೆ

ನರರಲ್ಲಿ ಶ್ರೇಷ್ಟನೇ ವಂದನೆ ನಿಮಗೆ

ಕಲ್ಮಶಗಳ ಅಂತ್ಯಮಾಡಿದ ಸ್ವಾಮಿ

ನೀವೇ ಆತಿಥ್ಯಗಳಿಗೆ ಅರ್ಹರು.

ದೇವ ಮನುಷ್ಯರಿಂದ ಪೂಜಿತರೇ

ಉದಯಿಸಿದವರೇ ಮೃತ್ಯಂಜಯರೇ

ನೀರಿನಿಂದ ಕಮಲದಂತೆ

ಪರಿಸ್ಥಿತಿಗಳಿಂದ ಮಲಿನವಾಗದವರೇ

ಬ್ರಹ್ಮಸಹಿತ ಸಹಸ್ರವಿಧದ ಲೋಕಗಳನ್ನು

ಗಳಿಗೆಯಲ್ಲಿ ನೋಡುವವರೆ

ಇದ್ಧಿಸಂಪನ್ನರೇ ಜೀವಿಗಳ ಚ್ಯುತಿ ಹಾಗೂ ಪುನರ್ಭವಗಳನ್ನು

ಹಾಗೂ ದೇವತೆಗಳನ್ನು ಸಕಾಲದಲ್ಲಿ ನೋಡುವವರೇ.

(ಮೊಗ್ಗಲಾನರ ಗಾಥೆ)

ದಾಟಿರುವಂತಹ ಭಿಕ್ಖುವಾದ ಸಾರಿಪುತ್ತ

ಪರಮ ಉತ್ಕೃಷ್ಟ

ಅದು ಶೀಲದಿಂದಾಗಿ ಪ್ರಜ್ಞಾದಿಂದಾಗಿ

ಹಾಗೂ ಶಾಂತಿಯಿಂದಾಗಿ.

(ಅರಹಂತ ಪ್ರಾಪ್ತಿ ವೇಳೆ ನುಡಿದ ಮೊಗ್ಗಲಾನರ ಗಾಥೆಗಳು)

ಕ್ಷಣಮಾತ್ರದಲ್ಲಿ ನಾನೂ ನನ್ನಂತಿರುವ

ಲಕ್ಷ ಜನರನ್ನು ದಶಲಕ್ಷ ಬಾರಿ ಸೃಷ್ಟಿಸಬಲ್ಲೆನು

ರೂಪ ಪರಿವರ್ತನೆಯಲ್ಲಿ ನಾನು ಮಹಾಕುಶಲನು

ಇದ್ಧಿ ಸಂಪನ್ನತೆಯಲ್ಲಿ ಪ್ರಾವಿಣ್ಯನು 

ಸಮಾಧಿ ಹಾಗೂ ವಿಧ್ಯೆಗಳಲ್ಲಿ ಪರಿಪೂರ್ಣತೆ ಸಾಧಿಸಿದ

ಮೊಗ್ಗಲಾನ ಗೊತ್ರದ ಅಂಟದಿರುವಿಕೆಯ ಶಾಸನದಲ್ಲಿ ಪ್ರಾಜ್ಞನಾದ

ಧೀರನು ಹೇಗೆ ಆನೆಯು ಪೂತಿಲತೆಗಳ ಬಂಧನಗಳನ್ನು ಮುರಿದು ಹಾಕುವುದೋ

ಹಾಗೆಯೇ ಸಮಾಹಿತದ ಇಂದ್ರಿಯದ ಮೂಲಕ ಧ್ವಂಸ ಮಾಡುವನು.

ಶಾಸ್ತರ ಸೇವೆಯನ್ನು ಮಾಡಿರುವೆ

ಬುದ್ಧಶಾಶನದ ಎಲ್ಲವನ್ನು ಪರಿಪಾಲಿಸಿಹೆ

ಭಾರವಾದ ಹೊರೆಯನ್ನು ಇಳಿಸಿರುವೆ

ಭವವನ್ನು ತರಿಸುವ ಸಮೂಹ ಎಲ್ಲದರಲ್ಲಿಯು ಅಂಟದೇ ಹೋಗಿದ್ದೇನೆ.

ಯಾವುದಕ್ಕಾಗಿ ಪಬ್ಬಜಿತರು 

ಮನೆ ಬಿಟ್ಟು ಅನಿಕೇತನರಾಗುವರೋ

ಅಂತಹ ಗುರಿಯನ್ನು ಸಿದ್ಧಿಸಿಹೆನು

ಸರ್ವಸಂಯೋಜನಗಳನ್ನು ಕ್ಷಯಿಸಿರುವೆನು.

(ಮಾರನೊಂದಿಗೆ ಸಂಭಾಷಣೆಯ ವೇಳೆ ನುಡಿದ ಗಾಥೆಗಳು)

ಯಾವ ರೀತಿಯ ನರಕವದು

ಅಲ್ಲಿ ದುಸ್ಸಿ ಬೆಂದು ಹೋಗಿದ್ದನು

ಕುಕುಸಂಧ ಬ್ರಾಹ್ಮಣರ ವಿಧುರ ಅಗ್ರ ಶಾವಕನಿಗೆ

ನೀಡಿದ ಕಿರುಕುಳಕ್ಕೆ ಕಮ್ಮವಿಪಾಕವದು

ಅಲ್ಲಿ ಏಕಕಾಲದಲ್ಲಿ ಶತ ಕತ್ತಿಗಳು ತಿವಿಯಲ್ಪಟ್ಟು

ಅಪಾರ ವೇದನೆಗಳು ಅಸಹನೀಯ ಅಲ್ಲಿ ದುಸ್ಸಿ ಬೆಂದು ಹೋಗಿದ್ದನು

ಕುಕುಸಂಧ ಬ್ರಾಹ್ಮಣರ ವಿಧುರ ಅಗ್ರ ಶಾವಕನಿಗೆ

ನೀಡಿದ ಕಿರುಕುಳಕ್ಕೆ ಕಮ್ಮವಿಪಾಕವದು

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಅದ್ದರಿಂದ ಕಣ್ಹನೇ

ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.

ಸರೋವರದ ಮಧ್ಯೆ ನಿಂತಿರುವ ವಿಮಾನವು 

ಕಲ್ಪ ಕಾಲದಷ್ಟು ಇರುವದು 

ನೀಲ ವರ್ಣದ ಸ್ಪಟಿಕದ ಪ್ರಭಾಯುತ ಭವನವದು

ನಾನ ವರ್ಣಗಳ ಅಪ್ಸರೆಯರು ಅಲ್ಲಿ ನೃತ್ಯವಾಡುವರು.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಬುದ್ಧರಿಂದಲೇ ಸೂಚನೆಗೆ ಒಳಗಾಗಿ

ಭಿಕ್ಖುಸಂಘವನ್ನು ನೋಡಿಕೊಳ್ಳುತ್ತಿದ್ದ ನಾನೂ

ಮಿಗಾರ ಮಾತೆಯ ಭವನವನ್ನು ಕೇವಲ

ಪಾದದ ಅಂಗುಷ್ಟದಿಂದಲೇ ಕಂಪಿಸುವಂತೆ ಮಾಡಿದೆನು.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಅದ್ದರಿಂದ ಕಣ್ಹನೇ

ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.

ಯಾರು ವೈಜಯಂತ ಪ್ರಸಾದವನ್ನು 

ಪಾದದ ಅಂಗುಷ್ಟದಿಂದಲೇ ಕಂಪನವನ್ನುಂಟು ಮಾಡಿದರೋ

ಇದ್ಧಿಬಲಗಳಲ್ಲಿ ಪ್ರತಿಷ್ಟಿತರೊ

ಅಂತಹವರು ದೇವತೆಗಳಲ್ಲಿಯೂ ಸ್ಪೂತರ್ಿದಾಯಕರು

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಅದ್ದರಿಂದ ಕಣ್ಹನೇ

ನೀ ಬಿಕ್ಖುಗಳಿಗೆ ನೀಡಬೇಡ ತೊಂದರೆ.

ಯಾರು ವೈಜಯಂತ ಪ್ರಸಾದದಲ್ಲಿ 

ಸಕ್ಕನಿಗೆಯೇ ಹೀಗೆ ಪ್ರಶ್ನಿಸಿದರೋ:

ಅಯುಷ್ಮಂತನೇ ತಣ್ಹಕ್ಷಯದಿಂದಾಗುವ ವಿಮುಕ್ತಿಯು

ನಿನಗೆ ತಿಳಿದಿದೆಯೇ? ಅದಕ್ಕೆ ಸಕ್ಕರು ಯಥಾತಥಾವಾಗಿಯೇ ಉತ್ತರಿಸಿದರು.

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಯಾರು ಬ್ರಹ್ಮನ ಸುಧಮ್ಮ ಸಭಾಂಗಣದಲ್ಲಿ ಹೀಗೆ

ಪ್ರಶ್ನಿಸಿದರೊ ; ಓ ಆಯುಷ್ಮಂತನೇ ಈ ಹಿಂದೆ ಇದ್ದಂತಹ 

ದಿಟ್ಟಿಯು ಈಗಲೂ ಇದೆಯೇ ಅಥವಾ ಬ್ರಹ್ಮಲೋಕದ ಪ್ರಭೆಯು 

ಆರಿಹೋಗುವುದು ಕಂಡಿರುವಿರಾ ?

ಅದಕ್ಕೆ ಬ್ರಹ್ಮರು 

ಯಥಾತಥಾವಾಗಿಯೇ ಉತ್ತರಿಸಿದರು :

ಅಯುಷ್ಮಂತನೇ ಈ ಹಿಂದೆ 

ಇದ್ದಂತಹ ದಿಟ್ಟಿಯು ಈಗಿಲ್ಲವಾಗಿದೆ.

ಕಾಣುತ್ತಿದ್ದೇನೆ ಬ್ರಹ್ಮಲೋಕದ ಪ್ರಭೆಯು

ಮರೆಯಾಗುವುದನ್ನು ಹೀಗಾಗಿ ಹೇಗೆ ತಾನೇ

ನಾನು ನಿತ್ಯನೆಂದು ಶಾಶ್ವತನೆಂದು ಹೇಳಲಿ

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ಜನರು ವಾಸಿಸುವ ಪೂರ್ವವಿದೇಹದ ವನಗಳಲ್ಲಿರುವ 

ಮಹಾನೇರು ಪರ್ವತದ ತುದಿಯನ್ನು

ತನ್ನ ವಿಮೋಕ್ಖತೆಯಿಂದ ಸ್ಪಶರ್ಿಸಿದರೋ

ಇದನ್ನು ಬುದ್ಧ ಶಾಶನದ ಅಗ್ರ ಭಿಕ್ಖು 

ತನ್ನ ಸ್ವಾನುಭೂತಿಯಿಂದಲೇ 

ಹೇಳುತಿರುವನು ಆದ್ದರಿಂದ ಕಣ್ಹನೇ

ನೀ ಭಿಕ್ಖುಗಳಿಗೆ ನೀಡಬೇಡ ತೊಂದರೆ.

ನಾನು ಮೂರ್ಖನನ್ನು ದಹಿಸುವೆ 

ಎಂದು ಅಗ್ನಿಯು ಸಂಕಲ್ಪಿಸದು,

ಅದರೂ ಸಹಾ ಮೂರ್ಖನು ಅಗ್ನಿಯ 

ಸಮೀಪ ಬಂದರೆ ಸುಟ್ಟುಹೋಗುವನು.

ಅದೇ ರೀತಿಯಾಗಿ ಮಾರ

ತಥಾಗಥರಿಗೇ ಆಕ್ರಮಣ ಮಾಡಿದರೇ

ಹೇಗೇ ಮೂರ್ಖನು ಸುಟ್ಟು ಹೋಗುವನೋ

ಹಾಗೇ ದಹಿಸಿ ಹೋಗುವೇ

ತಥಾಗತರಿಗೆ ಆಕ್ರಮಣ ಮಾಡಿದರೆ

ಮಾರನೇ ಪಾಪವನ್ನು ಹೇರಳವಾಗಿ ಪಡೆಯುವನು

ನನ್ನ ದುಷ್ಟತನವು ಫಲಕಾರಿಯಾಗದು

ಎಂದೆಣಿಸಬೇಡ ಹಾಗೇ ಕಲ್ಪಿಸಬೇಡ ದುಷ್ಟನೇ

ಬಹು ಕಾಲದಿಂದ ನೀನೇ ಸೃಷ್ಟಿಸಿರುವ 

ದುಷ್ಟತನದ ಕುಪ್ಪೆಯನ್ನು ಸಂಗ್ರಹಿಸಿರುವೆ

ಓ ಮಾರ ಬುದ್ಧರಿಂದ ದೂರ ನಿಲ್ಲು

ಭಿಕ್ಖುಗಳನ್ನು ವಂಚಿಸುವ ಭರವಸೆಯನ್ನು ಬಿಟ್ಟುಬಿಡು.

ಈ ರೀತಿಯಾಗಿ ಭೇಸಕಾಲಾ ತೋಪಿನಲ್ಲಿ

ಭಿಕ್ಖುವು ಮಾರನನ್ನು ಹೆದರಿಸಿ ಗದರಿಸಿದರು

ಆ ಯಕ್ಖನು ಕೆಳಮುಖ ಮಾಡಿ

ತಕ್ಷಣ ಅಲ್ಲಿಂದ ಅದೃಶ್ಯನಾದನು.

(ಥೇರ ಗಾಥ 1150 ರಿಂದ 1218)

9.5 ಸಾರಿಪುತ್ತ ಹಾಗು ಮೊಗ್ಗಲಾನರಿಂದ ಸಂಘವು ಒಂದಾಯಿತು

ದೇವದತ್ತನು ಬುದ್ಧರೊಂದಿಗೆ ಕೋಸಂಬಿಯಲ್ಲಿ ವಾಸವಾಗಿದ್ದನು. ಆಗ ಆತನಿಗೆ ಬುದ್ಧರಿಗೆ ಸಿಗುವ ಗೌರವ, ಸತ್ಕಾರ, ಕೀತರ್ಿ, ಎಲ್ಲವನ್ನು ಕಂಡು ಅಸೂಯೆಯುಂಟಾಯಿತು. ಆತನೇ ಭಿಕ್ಷು ಸಂಘಕ್ಕೆ ನಾಯಕನಾಗಲು ಲೋಭಪಟ್ಟನು. ಒಂದುದಿನ ಭಗವಾನರು ರಾಜಗೃಹದ ವೇಲುವನದ ವಿಹಾರದಲ್ಲಿ ಬೋಧಿಸುತ್ತಿರುವಾಗ ಬುದ್ಧರಲ್ಲಿಗೆ ದೇವದತ್ತನು ಬಂದು ಭಗವಾನರಿಗೆ ವಯಸ್ಸಾಯಿತು, ಆದ್ದರಿಂದ ನನಗೆ ಸಂಘದ ನೇತೃತ್ವ ನೀಡಿ ಎಂದು ಕೇಳಿದನು. ಆತನು ಅತ್ಯಂತ ಅನರ್ಹನಾಗಿದ್ದನು. ಕೊನೇ ಪಕ್ಷ ಶೀಲವಂತನೂ ಸಹಾ ಆಗಿರಲಿಲ್ಲ. ಸಂಘದಲ್ಲಿ ಅಸಂಖ್ಯಾತ ಖೀಣಾಸವ ಅರಹಂತರು ಇದ್ದರು. ಅವರಿಗೂ ಸಹಾ ಬುದ್ಧರ ಧಮ್ಮದ ಆಳ್ವಿಕೆ ಸಾಧ್ಯವಿರಲಿಲ್ಲ. ಆದ್ದರಿಂದಾಗಿ ಭಗವಾನರು ಆತನ ಕೋರಿಕೆ ನಿರಾಕರಿಸಿದರು ಮತ್ತು ಆತನ ಮೋಹವನ್ನು ಖಂಡಿಸಿದರು.

ದೇವದತ್ತನು ಇದರಿಂದಾಗಿ ದ್ವೇಷದಿಂದ ಸೇಡಿನಿಂದ ತುಂಬಿಹೋದನು. ಆತನು ಬುದ್ಧರನ್ನು 3 ಬಾರಿ ಕೊಲ್ಲಲು ಪ್ರಯತ್ನಿಸಿದನು. ಮೊದಲಿಗೆ ಹಲವು ಧನುರ್ಧರರನ್ನು ಕೊಲ್ಲಲು ನೇಮಿಸಿದನು. ಆದರೆ ಬುದ್ಧ ಭಗವಾನರ ಅಸೀಮ ಮೈತ್ರಿಯಿಂದ ಮತ್ತು ಪ್ರಜ್ಞಾಶೀಲತೆಯಿಂದಾಗಿ ಅವರೆಲ್ಲರೂ ಬುದ್ಧಭಗವಾನರ ಶಿಷ್ಯರಾದರು. ನಂತರ ಗಿಜ್ಜಕೂಟ ಬೆಟ್ಟದ ಮೇಲೇರಿ ಅಲ್ಲಿಯ ದೊಡ್ಡ ಬಂಡೆಯನ್ನು ಬುದ್ಧರ ಮೇಲೆ ಉರುಳಿಸಿದನು. ಆದರೆ ಭಗವಾನರು ಪವಾಡಶಕ್ತಿಯಿಂದ ಪಾರಾದರು. ಆದರೂ ಹಿಂದಿನ ಕರ್ಮಫಲದ ಪರಿಣಾಮದಿಂದ ಕೇವಲ ಕಾಲಿನ ಹೆಬ್ಬೆರಳಿಗೆ ಗಾಯವಾಯಿತು. ನಂತರ ನಾಲಾಗಿರಿ ಆನೆಯನ್ನು ಉನ್ಮಾದಿಸಿ ಬುದ್ಧರ ಮೇಲೆ ಬಿಟ್ಟನು. ಆದರೆ ಭಗವಾನರ ಮೈತ್ರಿಯ ಪ್ರಬಲಶಕ್ತಿಯಿಂದಾಗಿ ಆನೆಯು ಸಹಾ ಪಳಗಿ ಶಾಂತವಾಗಿ ವಂದಿಸಿತು. ಆಗ ಈ ಪ್ರಯತ್ನಗಳು ವಿಫಲವಾದಾಗ ದೇವದತ್ತನು ಸಂಘಭೇದ ಮಾಡಲು, ಸಂಘವನ್ನು ಮುರಿಯಲು ಪ್ರಯತ್ನಿಸಿದನು. 

9.6 ಸಂಘ ಭೇದದ ಪ್ರಕರಣ

ಒಮ್ಮೆ ಭಗವಾನರು ವೇಲುವನದಲ್ಲಿ ಬೋಧಿಸುತ್ತಿದ್ದರು. ಆಗ ಅಲ್ಲಿಗೆ ದೇವದತ್ತನು ಬಂದನು. ಭಗವಾನರಿಗೆ ಸಲಹೆಯೊಂದನ್ನು ನೀಡಿದನು. ಅದೇನೆಂದರೆ ಭಗವಾನರು ವೃದ್ಧರಾಗುತ್ತಿರುವುದರಿಂದಾಗಿ ಸಂಘದ ಆಳ್ವಿಕೆಯನ್ನು ದೇವದತ್ತನಿಗೆ ಒಪ್ಪಿಸುವುದು ಎಂದು. ಆದರೆ ಭಗವಾನರು ಇದಕ್ಕೆ ಒಪ್ಪಲಿಲ್ಲ. (ಸಂಘದ ಹೊಣೆಗಾರಿಕೆ ಅತ್ಯುನ್ನತ ಮಟ್ಟದ್ದಾಗಿರುವುದರಿಂದಾಗಿ, ಅದರ ಹೊಣೆಯನ್ನು ಸಾರಿಪುತ್ತ ಮತ್ತು ಮೊಗ್ಗಲ್ಲಾನರಿಗೂ ವಹಿಸಲು ಸಾಧ್ಯವಿರಲಿಲ್ಲ, ಇನ್ನು ದೇವದತ್ತನಿಗೆ ವಹಿಸಲು ಸಾಧ್ಯವೇ?) ಇದರಿಂದಾಗಿ ದೇವದತ್ತನು ಅಪಮಾನವಾದಂತೆ ಭಾಸವಾಗಿ, ಬುದ್ಧರನ್ನು ದ್ವೇಷಿಸಲು ಆರಂಭಿಸಿದನು. ಹೀಗಾಗಿ ಆತನು ಭಗವಾನರನ್ನು ಕೊಲ್ಲಲು ಮೂರುಬಾರಿ ಪ್ರಯತ್ನಿಸಿ ವಿಫಲನಾದನು. ಆಗ ಮತ್ತೊಂದು ಅಪಾಯಕಾರಿ ಉಪಾಯ ಹುಡುಕಿದನು. ಆ ಉಪಾಯದಿಂದ ಆತನು ಭಗವಾನರಲ್ಲಿಗೆ ಬಂದು ತಾನು ಐದು ವಿನಯ ನಿಯಮಗಳನ್ನು ಕಂಡುಹಿಡಿದಿರುವುದಾಗಿ ಅದು ಸಂಯಮಕ್ಕೆ ಅನುಕೂಲವಿರುವುದರಿಂದಾಗಿ ಅದರ ಜಾರಿಗೆ ಅನುಮತಿ ಕೇಳಿದನು. ಅದೇನೆಂದರೆ: 1) ಕಾಡಿನಲ್ಲಿಯೇ ಭಿಕ್ಷುಗಳ ವಾಸ 2) ಭಿಕ್ಷಾಟನೆಯಿಂದಲೇ ಆಹಾರ 3) ಕಸದ ಬಟ್ಟೆಯಿಂದಲೇ ವಸ್ತ್ರ 4) ಮರದ ಬುಡದಲ್ಲಿಯೇ ವಾಸ ಮತ್ತು 5) ಮಾಂಸ ಮತ್ತು ಮತ್ಸ್ಯದ ತಿರಸ್ಕಾರ.ಆದರೆ ಭಗವಾನರಿಗೆ ದೂರದೃಷ್ಟಿಯಿರುವುದರಿಂದಾಗಿ ಆ ನಿಯಮಗಳು ಸಾಮಾಜಿಕ ಹಿತಕ್ಕೆ ಅಡ್ಡಿಯಷ್ಟೇ ಅಲ್ಲದೆ ಭಿಕ್ಷುಗಳಿಗೆ ವಿನಾಕಾರಣ ದೇಹದಂಡಿಸಿದಂತಾಗುತ್ತದೆ ಎಂದರಿತ ಭಗವಾನರು ಅವನ್ನು ತಿರಸ್ಕರಿಸಿದರು. 

ಈ ಅವಕಾಶಕ್ಕಾಗಿಯೇ ಕಾಯುತ್ತಿದ್ದ ದೇವದತ್ತನು ತನ್ನ ಈ ನಿಯಮಗಳು ಇರುವ ನಿಯಮಗಳಿಗಿಂತ ಉತ್ತಮ ಎಂದು ದಡ್ಡ ಭಿಕ್ಷುಗಳಿಗೆ ನಂಬಿಸಿ ತನ್ನ ಹಿಂಬಾಲಕರನ್ನಾಗಿ ಮಾಡಿಕೊಂಡನು. 

ಆಗ ಭಗವಾನರು ಆತನಿಗೆ ದೇವದತ್ತ ನೀನು ಸಂಘಭೇದ ಮಾಡುತ್ತಿರುವೆಯಾ?

ಹೌದು.

ಓಹ್, ಇದು ಮಹಾಪಾಪ. ಪಂಚಮಹಾಪಾತಕಗಳಲ್ಲಿ ಒಂದಾಗಿದೆ. ಇದರ ಪರಿಣಾಮವಾಗಿ ಅವೀಚಿ ನರಕದಲ್ಲಿ ಹುಟ್ಟಬೇಕಾಗುತ್ತದೆ, ಇವೆಲ್ಲಾ ಬಿಟ್ಟುಬಿಡು.

ಅಂಥದೇನೂ ಆಗೋಲ್ಲ ಎಂದು ನಿರ್ಲಕ್ಷ ವಹಿಸಿದನು. ಅಷ್ಟೇ ಅಲ್ಲದೆ ಆತನದೆ ಮಾರ್ಗದಲ್ಲಿ ಉಪೋಸಥ ಸಭೆ ಮತ್ತು ಆಚರಣೆ ಆರಂಭಿಸಿದನು.

ಈ ವಿಷಯವನ್ನು ಪರಮಪೂಜ್ಯ ಆನಂದರವರು ಭಗವಾನರಿಗೆ ತಿಳಿಸಿದಾಗ ಭಗವಾನರು ಈ ಗಾಥೆ ನುಡಿದರು.

ಅಸಾಧುವು (ಕೆಟ್ಟದ್ದು) ಮತ್ತು ಅಹಿತವಾದುದನ್ನು ಮಾಡಿಕೊಳ್ಳುವುದು ಸುಲಭ. ಆದರೆ ಸಾಧುವು (ಒಳ್ಳೆಯದು) ಮತ್ತು ಹಿತವಾದುದನ್ನು ಮಾಡಿಕೊಳ್ಳುವುದು ಪರಮ ದುಷ್ಕರವಾದುದು. (ಧ.ಪ. 163)

ಒಳ್ಳೆಯವರಿಗೆ ಹಿತ ಮತ್ತು ಸಾಧುಕಾರ್ಯ ಸುಲಭ, ಆದರೆ ಕೆಟ್ಟವರಿಗೆ ಅದು ಪರಮ ದುಷ್ಕರ. ಅದೇ ಕೆಟ್ಟವರಿಗೆ ಅಹಿತ ಮಾಡಿಕೊಳ್ಳುವಂತಹ ಪಾಪಕಾರ್ಯ ಸುಲಭ. ಆದರೆ ಒಳ್ಳೆಯವರಿಗೆ ಅದು ಅಸಾಧ್ಯ ಎಂದರು.

ನಂತರ ಉಪೋಸಥ ದಿನದಂದು 500 ವಜ್ಜಿಗಳ ಭಿಕ್ಷು ಗುಂಪು ದೇವದತ್ತನ ಮಾತಿಗೆ ಮರುಳಾಗಿ ಆತನ ಸಂಘ ಸೇರಿತು. ಆದರೆ ಭಗವಾನರ ಅನುಕಂಪ ಮತ್ತು ಸಾರಿಪುತ್ತ ಮತ್ತು ಮೊಗ್ಗಲ್ಲಾನರ ಹಿತವಚನದಿಂದಾಗಿ ಮರಳಿ ಭಗವಾನರ ಸಂಘಕ್ಕೆ ಹಿಂತಿರುಗಿದರು. 


- ಂ0ಂ  

8. ಭಗವಾನರು ಮೊಗ್ಗಲಾನರ ರೋಗವನ್ನು ಗುಣಪಡಿಸಿದ್ದು

 8. ಭಗವಾನರು ಮೊಗ್ಗಲಾನರ ರೋಗವನ್ನು ಗುಣಪಡಿಸಿದ್ದು 

(ಮಹಾಮೊಗ್ಗಲಾನ ಥೇರ ಭೊಜ್ಜಾಂಗ ಸುತ್ತ)     



ನಾನು ಹೀಗೆ ಕೇಳಿದ್ದೇನೆ : ಒಮ್ಮೆ ಭಗವಾನರು ರಾಜಗೃಹದ ವೇಲುವನದ ಕಲಂದಕನಿವಾಪದಲ್ಲಿ ನೆಲಸಿದ್ದರು.ಆ ಸಮಯದಲ್ಲಿ ಮೊಗ್ಗಲಾನರು ಗಿಜ್ಜಕೂಟದಲ್ಲಿ (ಗಿಡಗಗಳ ಬೆಟ್ಟದಲ್ಲಿ) ಇದ್ದರು ಅದರೆ ಅವರು  ಆ ಸಮಯದಲ್ಲಿ ತೀವ್ರವಾಗಿ ಅಸ್ವಸ್ಥರಾಗಿದ್ದರು. ಅಗ ಭಗವಾನರು ತಮ್ಮ ಏಕಾಂತದಿಂದ ಎದ್ದು ಮಹಾಮೊಗ್ಗಲಾನರು ಇರುವಲ್ಲಿಗೆ ಬಂದರು. ಅಲ್ಲಿ ಪಕ್ಕದಲ್ಲಿ ಕುಳಿತು ಹೀಗೆ ನುಡಿದರು. :

ಮೊಗ್ಗಲಾನ ಹೇಗಿರುವೆ ?ನೀನು ನಿನ್ನ ನೋವುಗಳನ್ನು ಸಹಿಸುತ್ತಿರುವೆಯಾ ? ನಿನ್ನ ನೋವುಗಳು ಕಡಿಮೆಯಾಗುತ್ತಿದೆಯೇ ? ಇದಕ್ಕೆ ಸಂಬಂದಿಸಿದ ಲಕ್ಷಣಗಳು ಕಡಿಮೆ ಯಾಗುತ್ತಿದೆಯಲ್ಲವೆ?

ಇಲ್ಲ ಭಂತೆ, ನನ್ನಿಂದ ಸಹಿಸಲಾಗುತ್ತಿಲ್ಲ, ನೋವಿನ ವೇದನೆಗಳು ಅತಿ ತೀಕ್ಷ್ಣವಾಗಿವೆ, ಈ ನೋವಿನ ಹಾಗೂ ಅಸ್ವಸ್ಥತೆಯ ಲಕ್ಷಣಗಳು ಕಡಿಮೆಯಾಗುತ್ತಿಲ್ಲ.

ಮೊಗ್ಗಲಾನ ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿದೆ, ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ. ಅವು ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವುದು.

ಯಾವುವವು ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿರುವ  ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವ ಆ ಸಪ್ತಬೋಧಿ ಅಂಗಗಳು ಯಾವುವು ?

ಅವೆಂದರೆ :

1. ಸತಿ (ಎಚ್ಚರಿಕೆಯ) ಸಂಬೋಧಿ ಅಂಗ

2 ಧಮ್ಮ ವಿಚಯ(ಧಮ್ಮದ ಶೋಧನೆಯ) ಸಂಬೋಧಿ ಅಂಗ

3. ವಿರಿಯಾ (ಸತತ ಪ್ರಯತ್ನಶೀಲತೆ) ಸಂಬೋಧಿ ಅಂಗ

4. ಪೀತಿ(ಆನಂದ) ಸಂಬೋಧಿ ಅಂಗ

5. ಪಸ್ಸಧಿ(ಪ್ರಶಾಂತತೆಯ) ಸಂಬೋಧಿ ಅಂಗ

6. ಸಮಾಧಿ  ಸಂಬೋಧಿ ಅಂಗ

7. ಉಪೇಕ್ಖ (ಸಮಚಿತ್ತತೆಯ) ಸಂಬೋಧಿ ಅಂಗ.

ಈ ಸಪ್ತಭೋಧಿ ಅಂಗಗಳು ನನ್ನಿಂದ ಚೆನ್ನಾಗಿ ವಿವರಿಸಲ್ಪಟ್ಟಿದೆ, ಹಾಗೂ ನನ್ನಲ್ಲಿ ಚೆನ್ನಾಗಿ ಸ್ಥಾಪಿಸಲ್ಪಟ್ಟಿದೆ. ಅವು ಪರಿಪೂರ್ಣ ಅರಿವಿಗೆ, ಅಭಿಜ್ಞೆಗೆ, ಸಂಬೋಧಿಗೆ, ಮತ್ತು ನಿಬ್ಬಾಣಕ್ಕೆ ಕರೆದೂಯ್ಯುವುದು.

ಹೀಗೆ ಭಗವಾನರು ಸಪ್ತ ಬೋಧಿಯ ಅಂಗಗಳ ಬಗ್ಗೆ ವಿವರಿಸಿದಾಗ ಮೊಗ್ಗಲಾನರು ಅವುಗಳ ಗಹನವಾನ ಆಳ ಅರ್ಥವನ್ನು ಅರಿತರು. ಹಾಗೂ ಅತ್ಯಂತ ಆನಂದವುಳ್ಳವರಾಗಿ ಹೀಗೆ ನುಡಿದರು :

ಖಂಡಿತವಾಗಿಯು ಭಗವಾನ್ ಇವು ಭೋಧಿ ಅಂಗಗಳೇ ಆಗಿವೆ. ಖಂಡಿತವಾಗಿಯು ಸುಗತರೇ ಇವು ಬೋಧಿಯ ಅಂಗಗಳೆ ಆಗಿವೆ. ಹಾಗು ಮೊಗ್ಗಲಾನರ ರೋಗವು ಪೂರ್ಣವಾಗಿ ಅದೃಷ್ಯವಾಯಿತು.

ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ 

ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ 

ಏತೇನ ಸಚ್ಚ ವಜ್ಜೆನ ರೋಗ ವೂಪ ಸಮೇತು ಮೆ/ತೆ 

ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ)

ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ)

ಈ ಸತ್ಯವಚನದಿಂದಾಗಿ ನಾನೂ/ನೀನು/ಅವರು ರೋಗದಿಂದ ಮುಕ್ತನಾಗಲಿ(ರಾಗಲಿ 

7. ಮೊಗ್ಗಲಾನರ ಹಿಂದಿನ ಜನ್ಮಗಳು

 7. ಮೊಗ್ಗಲಾನರ ಹಿಂದಿನ ಜನ್ಮಗಳು


     

ಜಾತಕ ಕಥೆಗಳ ಅನುಸಾರವಾಗಿ ಮೊಗ್ಗಲಾನರು ಭಗವಾನರಿಗೆ 31 ಜನ್ಮಗಳಿಂದ ಪರಿಚಿತರಾಗಿದ್ದರು ಅದರಲ್ಲಿ 30 ಜನ್ಮಗಳಲ್ಲಿ ಸಾರಿಪುತ್ತರೊಡನೆ ಮಿತ್ರುತ್ವವಿತ್ತು. ಅದರೆ ಜಾತಕ ಕಥೆಗಳ ಪ್ರಕಾರ ಅವರಿಗೆ ಬೋಧಿಸತ್ವರೊಡನೆ ಅತಿನಿಕಟ ಸ್ನೇಹವಿರುವುದು ಸ್ಪಷ್ಟವಾಗಿದೆ.

ಕೆಲವು ಜಾತಕದಲ್ಲಿ ಅವರು ಸೋದರರಾಗಿದ್ದರು.(488,509,543) ಕೆಲವು ಜಾತಕದಲ್ಲಿ ಮಿತ್ರರಾಗಿದ್ದರು.(326), ಕೆಲವು ಜಾತಕದಲ್ಲಿ ಮಂತ್ರಿಯು,(401), ಕೆಲವು ಜಾತಕಗಳಲ್ಲಿ ಶಿಷ್ಯರು(432,522) ಅದರೆ ಕೆಲವು ಜಾತಕಗಳಲ್ಲಿ ಗುರುಗಳು ಸಹಾ ಆಗಿದ್ದರು.(539), ಕೆಲವೊಮ್ಮೆ ಸೇನಾಧಿಪತಿ(525)ಹಾಗೆಯೇ ಸಹ ದೇವತೆಗಳು ಆಗಿದ್ದರು.(450)

      ಇನ್ನೂ ಸಾರಿಪುತ್ತರೊಡನೆ ಅವರ ಸಂಬಂಧ ಹೇಳುವುದಾದರೆ ಇಬ್ಬರೂ ಸಂಸಾರದ ಆಳ ಹಾಗೂ ಅಗಲಕ್ಕೂ ಜೊತೆಗೂಡಿ ಸಂಸಾರವನ್ನು ಕಂಡವರು. ಅವರು ಪ್ರಾಣಿಗಳಾಗಿ ಹುಟ್ಟಿರುವಾಗ ಸಾಧಾರಣವಾಗಿ ಸಮಾನವಾಗಿ ಇದ್ದರು. (160,187,215,476) ಹಾಗೇಯೇ ಸಾರಿಪುತ್ತರವರು ಅತಿ ಉನ್ನತ ಪ್ರಾಣಿಯಾಗಿರುವ ಸಂಧರ್ಭವೇ ಹೆಚ್ಚು.  ಹೇಳುವುದಾದರೇ ಹಾವೂ ಮತ್ತು ಹೆಗ್ಗಣ(37), ಮನುಷ್ಯ ಮತ್ತು ನರಿ(490), ಹಾವು ಮತ್ತು ನರಿ (315), ಹಾಗೇಯೇ ಮಾನವರಾಗಿ ಹುಟ್ಟಿರುವಾಗಲೂ ಸಾರಿಪುತ್ತರವರೇ ಸ್ವಲ್ಪ ಹೆಚ್ಚಿನ ಸ್ಥಾನದಲ್ಲಿದ್ದುದು ಕಂಡು ಬರುವುದು. ಉದಾಹರಿಸುವುದಾದರೆ ರಾಜಕುಮಾರ ಮತ್ತು ಮಂತ್ರಿ(525), ಮಂತ್ರಿ ಮತ್ತು ಗುಲಾಮನ ಮಗ(544), ಬೋಧಿಸತ್ವರ ಸಾರಥಿ ಹಾಗೂ ಆನಂದರ ಸಾರಥಿ(151), ಒಮ್ಮೆ ಮೊಗ್ಗಲಾನರು ದೇವನಾಗಿದ್ದರೆ ಸಾರಿಪುತ್ತರು ತಾಪಸಿ ನಾರದ ಆಗಿದ್ದರು(535), ಅದರೇ ತಾಪಸಿಗಳಾಗಿರುವಾಗ ಅಥವಾ ದೇವತೆಗಳಾಗಿರುವಾಗ ಅವರು ಸಮಾನರಾಗಿರುವುದು ಕಂಡು ಬರುತ್ತದೆ(450,545) ಕೇವಲ ಒಂದು ಬಾರಿ ಮಾತ್ರ ಮೊಗ್ಗಲಾನರು ಸಾರಿಪುತ್ತರ ಹೊರತಾಗಿ ಕಾಣಿಸಿಕೊಳ್ಳುತ್ತಾರೆ. 73ರ ಜಾತಕದಲ್ಲಿ ಅವರಿಬ್ಬರೂ ಜಿಪುಣರಾಗಿದ್ದು ಸಾವಿನ ನಂತರ ಆ ಐಶ್ವರ್ಯದ ಬಳಿಯಲ್ಲಿಯೇ ಹಾವು ಹಾಗೂ ಹೆಗ್ಗಣವಾಗಿ ಹುಟ್ಟುವರು.. ಅದರೆ ಜಾತಕ 78ರಲ್ಲಿ ಮೊಗ್ಗಲಾನರು ಸಕ್ಕರಾಗಿದ್ದು ತಮ್ಮ ವಂಶಜನಿಗೆ ಕಾಣಿಸಿಕೊಂಡು ಜಿಪುಣತನ ವಜರ್ಿಸಿ ದಾನಿಯಾಗಿರುವಂತೆ ಪ್ರೋತ್ಸಾಹಿಸುತ್ತಾರೆ. ಹಾಗೆಯೇ ಜಾತಕ 490 ರಲ್ಲಿ ದುರಾಸೆಯುತ ನರಿಯಾಗಿದ್ದು  ಆಹಾರಕ್ಕಾಗಿ ಆನೆಯ ಶವದಲ್ಲಿ ಹೊಕ್ಕು ಈಚೆಗೆ ಬಾರದೆ ಪರದಾಡುತ್ತದೆ. ಆಗ ಆಸೆಯ ಭೀಕರತೆ ಅರಿಯುತ್ತದೆ.

ಹಾಗೆಯೇ ಪ್ರಸಿದ್ಧವಾದ ಕುರುಧಮ್ಮ ಜಾತಕದಲ್ಲಿ ಮೊಗ್ಗಲಾನರು ಉಗ್ರಾಣದ ನಿರ್ವಹಕರಾಗಿದ್ದು ಸಾರಿಪುತ್ತರು ವ್ಯಾಪಾರಿಯಾಗಿರುತ್ತಾರೆ. ಅವರಿಬ್ಬರು ಯಾವುದೇ ರೀತಿಯ ಕಳ್ಳತನ, ಮೋಸಗಳಿಗೆ ಬಲಿಯಾಗದೇ ಅತ್ಯಂತ ಪ್ರಾಮಾಣಿಕರಾಗಿರುತ್ತಾರೆ.

  ಸಸ ಜಾತಕದಲ್ಲಿ ಬೋಧಿಸತ್ವರು ಮೊಲವಾಗಿದ್ದಾಗ ಮೊಗ್ಗಲಾನರು ನರಿಯಾಗಿದ್ದರು ಹಾಗೂ ಅವರು ಸಹಾ ಬೋಧಿಸತ್ವರನ್ನು ಕಂಡು ಉಪೂಸಥ ವ್ರತವನ್ನು ಆಚರಿಸುತ್ತಾರೆ.

ಹಾಗೂ ಕಕ್ಕಾರು ಜಾತಕದಲ್ಲಿ ಮೊಗ್ಗಲಾನರು ದೇವಪುತ್ರರಾಗಿರುತ್ತಾರೆ. 

 ಇಂದ್ರಿಯ ಜಾತಕದಲ್ಲಿ ಕಿಸವಚ್ಚರಾಗಿದ್ದರು. ಇಲ್ಲಿಸ ಜಾತಕದಲ್ಲಿ ಸಕ್ರನಾಗಿಯೂ, ಕುರುಂಗಮಿಗ ಹಾಗೂ ಮಹಾಉಕ್ಕುಸ ಜಾತಕದಲ್ಲಿ ಆಮೆಯಾಗಿಯೂ, ಖಂದಹಾಲ  ಜಾತಕದಲ್ಲಿ ಚಂದಸೇನನಾಗಿಯು, ಚೂಲಸುತಸೋಮ ಜಾತಕದಲ್ಲಿ ಸೇನಾಪತಿಯಾಗಿಯು, ಜವನಹಂಸ ಜಾತಕದಲ್ಲಿ ಪಕ್ಷಿಯಾಗಿಯೂ , ತಿತ್ತಿರ ಜಾತಕದಲ್ಲಿ ಆನೆಯಾಗಿಯೂ, ವಣ್ಣರೋಭ , ವ್ಯಾಘ್ಘ ಹಾಗೂ ಇನ್ನುಂದು ತಿತ್ತಿರ ಜತಕದಲ್ಲಿ ಹುಲಿಯಾಗಿಯೂ, ದಸಕಣ್ಣ ಜಾತಕದಲ್ಲಿ ಆಯುರನಾಗಿಯು, ಭೂರಿದತ್ತ ಜಾತಕದಲ್ಲಿ ಸುಭಾಗನಾಗಿಯು, ಮಹಾಜನಕ ಜಾತಕದಲ್ಲಿ ಮಿಗಜಿನನಾಗಿಯು, ಮಹಾ ನಾರದ ಕಸ್ಸಪ ಜಾತಕದಲ್ಲಿ ಬಿಜಕನಾಗಿಯು, ರಾಜೋವಾದ ಜಾತಕದಲ್ಲಿ ಸಾರಥಿಯಾಗಿಯು, ವಿದುರ ಪಂಡಿತ ಜಾತಕದಲ್ಲಿ ಗರುಲ ರಾಜನಾಗಿಯು, ಹತ್ಥಿಪಾಲ ಜಾತಕದಲ್ಲಿ ಗೋಪಾಲನಾಗಿಯು ಮತ್ತು ಶುಧಭೋಜನ ಜಾತಕದಲ್ಲಿ ಚಂದನಾಗಿಯು ಆವರು ಜನ್ಮ ತಾಳಿದ್ದರು.

- ಂ0ಂ  

6. ಇದ್ದಿ ಶಕ್ತಿಗಳಿಂದ ಪರರ ಕ್ಲೇಶಗಳ ದಮನ

 6. ಇದ್ದಿ ಶಕ್ತಿಗಳಿಂದ ಪರರ ಕ್ಲೇಶಗಳ ದಮನ



6.1 ಪರಪಂಥದ ನಾಯಕ ಅಗ್ಗಿದತ್ತನ ಮೋಹ ದಮನ 

ಕೋಸಲ ರಾಜ್ಯದಲ್ಲಿ ಅಗ್ಗಿದತ್ತನೆಂಬ ರಾಜಪುರೋಹಿತನಿದ್ದನು. ಕೋಸಲದ ದೊರೆ ಮಹಾಕೋಸಲನು ನಿಧನನಾದಾಗ, ಪಸೇನದಿಯು ಮಹಾರಾಜನಾದನು. ತಂದೆಯ ಮೇಲಿನ ಗೌರವದಿಂದಾಗಿ ಆತನು ಅಗ್ಗಿದತ್ತನಿಗೆ ಪುನಃ ರಾಜಪುರೋಹಿತನನ್ನಾಗಿಸಿದನು. ರಾಜನು ಅಗ್ಗಿದತ್ತನಿಗೆ ಅಪಾರ ಗೌರವ ನೀಡುತ್ತಿದ್ದನು. ಗುರುಗಳೇ ಬನ್ನಿ, ಕುಳಿತುಕೊಳ್ಳಿ ಎಂದೆಲ್ಲಾ ಸಂಬೋಧಿಸಿ ಗೌರವ ನೀಡುತ್ತಿದ್ದನು. ಕೆಲದಿನಗಳ ನಂತರ ಅಗ್ಗಿದತ್ತ ಈ ರೀತಿ ಚಿಂತಿಸಿದನು. ಈ ರಾಜನು ನನಗೆ ಅಪಾರ ಗೌರವ ನೀಡುತ್ತಿರುವನು. ಆದರೆ ಇದೇರೀತಿಯಲ್ಲಿ ರಾಜರ ಕೃಪೆಯಲ್ಲಿ ಉಳಿಯುವುದು ಅಸಾಧ್ಯದ ವಿಷಯವಾಗಿದೆ. ರಾಜನ ಕೃಪೆಯಿಂದಾಗಿ ಗೃಹಸ್ಥ ಜೀವನವು ಸುಮಧುರ. ಆದರೆ ಅದು ಯುವಕನಾಗಿದ್ದರೆ ಮಾತ್ರ, ಸಮಾನ ವಯಸ್ಕನಾಗಿದ್ದರೆ ಮಾತ್ರ ಸಮಂಜಸವಾದುದು, ನಾನಾದರೂ ವೃದ್ಧನಾಗಿದ್ದೇನೆ. ಆದ್ದರಿಂದ ನಾನು ಸಾಧುವಾಗಿ ಬಿಡುತ್ತೇನೆ ಎಂದು ಆತನು ರಾಜನಲ್ಲಿ ಅಪ್ಪಣೆ ಪಡೆದು, ತನ್ನ ಐಶ್ವರ್ಯವನ್ನು ಒಂದುವಾರ ಕಾಲ ದಾನಮಾಡಿ, ಆತನು ಲೌಕಿಕ ಜೀವನದಿಂದ ನಿವೃತ್ತನಾದನು, ಸಮಣನಾದನು. ಆತನಿಗೂ ಅಪಾರ ಶಿಷ್ಯರು ಸಿಕ್ಕಿದರು. 

ಅಗ್ಗಿದತ್ತನು ಅಂಗ, ಮಗಧ, ಕುರು ರಾಜ್ಯಗಳ ಗಡಿಪ್ರದೇಶದಲ್ಲಿ ವಾಸವಾಗಿದ್ದನು. ಆತನ ವಾಸಸ್ಥಳವು ಈ ಮೂರು ರಾಜ್ಯಗಳನ್ನು ಸೇರಿತ್ತು. ಆತನು ತನ್ನ ಅನುಯಾಯಿಗಳಿಗೆ ಈ ರೀತಿ ಬೋಧನೆ ಮಾಡಿದನು: ಮಿತ್ರರೇ, ನಿಮ್ಮಲ್ಲಿ ಕಾಮಯುತ ಯೋಚನೆಯಾಗಲಿ, ದುರಾಸೆಯುತ ಯೋಚನೆಯಾಗಲಿ, ಕ್ರೂರಯುತ ಯೋಚನೆಯಾಗಲಿ, ದ್ವೇಷಯುತ ಯೋಚನೆಗಳು ಉಂಟಾದರೆ ನೀವು ನದಿಯ ಮಣ್ಣನ್ನು ಹೂಜಿಯಲ್ಲಿ ತುಂಬಿ, ಇಲ್ಲಿ ಚೆಲ್ಲಿ ಅವನ್ನು ಬರಿದು ಮಾಡಬೇಕು ಎಂದು ಆಜ್ಞಾಪಿಸಿದರು. ಆ ಮೂಢರು ಅದರಂತೆ ತಮ್ಮಲ್ಲಿ ಕೆಟ್ಟ ಆಲೋಚನೆ ಹೊಮ್ಮಿದಂತೆಲ್ಲಾ ನದಿಯಿಂದ ಮಣ್ಣನ್ನು ತಂದು ತಂದು ಆತನಿರುವ ಸ್ಥಳದಲ್ಲಿ ಸುರಿಯುತ್ತಿದ್ದರು. ಹೀಗಾಗಿ ಅಲ್ಲಿ ಒಂದು ಸಣ್ಣ ಗುಡ್ಡವೇ ನಿಮರ್ಾಣವಾಗಿತ್ತು. ಆತನ ಈ ಕೃತ್ಯದಿಂದ ಉತ್ತೇಜಿತರಾದ ಭಕ್ತಾಧಿಗಳು ಆತನಿಗೆ ಅಪಾರ ಕಾಣಿಕೆಗಳನ್ನು ನೀಡಲು ಆರಂಭಿಸಿದರು. 

ಆಗ ಆತನು ಅವರಿಗೆ ಇನ್ನೊಂದು ಶಿಕ್ಷಣ ನೀಡಲು ನಿರ್ಧರಿಸಿದನು. ಆತನು ತನ್ನ ಹಿಂಬಾಲಕರಿಗೆ ಹೀಗೆ ಆಜ್ಞಾಪಿಸಿದನು: ನೀವುಗಳೆಲ್ಲಾ ಪರ್ವತಗಳಿಗೆ, ಬೆಟ್ಟಗಳಿಗೆ ಶರಣು ಹೋಗಿರಿ, ಕಾಡಿಗೆ ಶರಣು ಹೋಗಿ, ತೋಪಿಗೆ ಶರಣು ಹೋಗಿ, ವೃಕ್ಷಗಳಿಗೆ ಶರಣುಹೋಗಿ, ಆಗ ನೀವು ಎಲ್ಲಾ ದುಃಖಗಳಿಂದ ಮುಕ್ತರಾಗುವಿರಿ. ಆತನ ದಡ್ಡ ಶಿಷ್ಯರು ಅದರಂತೆಯೇ ಆಚರಿಸತೊಡಗಿದರು. ಒಂದುದಿನ ಮುಂಜಾನೆ ಭಗವಾನರು ಮಹಾಕರುಣಾ ಸಮಾಪತ್ತಿಯಲ್ಲಿ ಅರಹಂತರಾಗಲು ಅರ್ಹತೆಯಿರುವ ವ್ಯಕ್ತಿಗಳನ್ನು ಹುಡುಕುವಾಗ ಅವರಿಗೆ ಅಗ್ಗಿದತ್ತ ಮತ್ತು ಆತನ ಶಿಷ್ಯರು ಕಾಣಿಸಿಕೊಂಡರು. ಆಗ ಅವರು ಪೂಜ್ಯ ಮೊಗ್ಗಲ್ಲಾನರವರಿಗೆ ಕರೆಸಿ ಹೀಗೆ ಹೇಳಿದರು: ಮೊಗ್ಗಲ್ಲಾನ, ಈ ಅಗ್ಗಿದತ್ತ ಬೃಹತ್ ಸಮೂಹಕ್ಕೆ ದಾರಿ ತಪ್ಪಿಸುತ್ತಿದ್ದಾನೆ ಹೊರತು ಯೋಗ್ಯ ಪಥಕ್ಕೆ ಕರೆದೊಯ್ಯುತ್ತಿಲ್ಲ. ಆತನಿಗೆ ಜ್ಞಾನೋದಯವನ್ನುಂಟು ಮಾಡು. ಆಗ ಮೊಗ್ಗಲ್ಲಾನರು ಹೀಗೆ ಹೇಳಿದರು: ಭಗವಾನ್, ಆತನಿಗೆ ಇಲ್ಲಿ ಅಪಾರ ಅನುಯಾಯಿಗಳಿದ್ದಾರೆ, ನಾನು ಒಬ್ಬನೇ ಹೋದರೆ ಅವರು ಅವಿಧೇಯರಾಗಿ ಅನಾಹುತ ಮಾಡಬಹುದೆಂದು ಭಾವಿಸುತ್ತೇನೆ. ಆದರೆ ನೀವು ಹೋದರೆ ಅವರೆಲ್ಲಾ ವಿಧೇಯರಾಗಬಹುದು.

ಮೊಗ್ಗಲ್ಲಾನ ನಾನೂ ಬರುವೆ, ಆದರೆ ಮೊದಲು ನೀನೇ ಹೋಗುವವನಾಗು.

ದಾರಿಯಲ್ಲಿ ಮೊಗ್ಗಲ್ಲಾನರು ಹೀಗೆ ಚಿಂತನೆ ಮಾಡಿದರು: ಈತನಿಗೆ ಇಲ್ಲಿ ಆಪಾರ ಶಿಷ್ಯರಿದ್ದಾರೆ. ಅವರಿಗೆ ಅಪ್ರಿಯವಾಗಿ ಒಂದು ಪದವನ್ನು ಹೇಳಿದರೂ ಸಹಾ, ಅವರು ನನ್ನ ಮೇಲೆ ಸೈನ್ಯದಂತೆ ಬೀಳುತ್ತಾರೆ. ಆದ್ದರಿಂದ ನಾನು ಅತೀಂದ್ರಿಯ ಶಕ್ತಿಯಿಂದ ಭಾರಿ ಮಳೆಯನ್ನೇ ಸೃಷ್ಟಿಸುವೆ ಎಂದು ಮಹಾಮೊಗ್ಗಲ್ಲಾನರು ಹಿಂಸೆ, ವಾದವಿವಾದ ಇಷ್ಟವಿಲ್ಲದೆ ಭಾರಿ ಮಳೆಯನ್ನು ಸುರಿಸಿದರು. ಆಗ ಅಗ್ಗಿದತ್ತನ ಅನುಯಾಯಿಗಳೆಲ್ಲಾ ಒಬ್ಬೊಬ್ಬರಂತೆ ತಮ್ಮ ಕುಟೀರವನ್ನು ಸೇರಿದರು. ಆಗ ಪರಮಪೂಜ್ಯ ಮಹಾಮೊಗ್ಗಲ್ಲಾನರು ಅಗ್ಗಿದತ್ತನ ಬಾಗಿಲಿನ ಬಳಿ ನಿಂತುಕೊಂಡು ಅಗ್ಗಿದತ್ತ ಎಂದು ಕೂಗಿದರು. ಆಗ ಅಗ್ಗಿದತ್ತನಿಗೆ ಆಶ್ಚರ್ಯವಾಯಿತು. ಆತನಿಗೆ ಈವರೆಗೆ ಯಾರು ಸಹಾ ಹೀಗೆ ಹೆಸರಿಡಿದು ಕೂಗಿರಲಿಲ್ಲ. ಆತನ ಅಹಂಕಾರ ಕೆರಳಿದಂತಾಗಿ ಯಾರದು? ಎಂದನು. 

ನಾನು ಬ್ರಾಹ್ಮಣ.

ಏತಕ್ಕಾಗಿ ಕರೆದಿದ್ದು.

ನನಗೆ ರಾತ್ರಿ ಕಳೆಯುವುದಕ್ಕಾಗಿ ದಯವಿಟ್ಟು ಸ್ಥಳವನ್ನು ತೋರಿಸಿ.

ಇಲ್ಲಿ ಉಳಿಯುವುದಕ್ಕಾಗಿ ಸ್ಥಳವಿಲ್ಲ, ಕೇವಲ ಸಮಣನಿಗಾಗಿ ಒಂದೇ ಕುಟೀರವಿದೆ.

ಅಗ್ಗಿದತ್ತ, ಮಾನವ ಮಾನವರ ಮನೆಗೆ ಹೋಗುತ್ತಾನೆ, ದನಗಳು ದನಗಳ ಕೊಟ್ಟಿಗೆಗೆ ಹೋಗುತ್ತವೆ. ಸಮಣರು ಸಮಣರ ಕುಟೀರಕ್ಕೆ ಹೋಗುವರು. ಆದ್ದರಿಂದ ನಿರಾಕರಿಸದೆ ಇರಲು ಸ್ಥಳವನ್ನು ನೀಡುವವನಾಗು.

ನೀನು ಸಮಣನೇ?

ಹೌದು.

ಹಾಗಾದರೆ ನಿಮ್ಮ ಪಿಂಡಪಾತ್ರೆ ಎಲ್ಲಿ ?

ನನ್ನಲ್ಲಿ ಪಿಂಡಪಾತ್ರೆ ಇದೆ, ಆದರೆ ಪ್ರಯಾಣದಲ್ಲಿ ತೊಂದರೆಯಾಗುವುದೆಂದು ಬಿಟ್ಟು ಬಂದಿದ್ದೇನೆ. ಅಗ್ಗಿದತ್ತ ಕೋಪಗೊಳ್ಳಬೇಡ, ನಾನು ರಾತ್ರಿ ಕಳೆಯುವುದಕ್ಕಾಗಿ ಸ್ಥಳವನ್ನು ತೋರಿಸು.

ಇಲ್ಲಿ ಯಾವ ಸ್ಥಳವೂ ಮಲಗಲಿಕ್ಕಾಗಿ ಇಲ್ಲ.

ಸರಿ, ಆ ಮರಳಿನ ರಾಶಿಯಲ್ಲಿ ಯಾರು ಜೀವಿಸುತ್ತಿದ್ದಾರೆ.

ಅಲ್ಲಿ ನಾಗರಾಜನು (ದಿವ್ಯಸರ್ಪ) ವಾಸಿಸುತ್ತಿದ್ದಾನೆ.

ನನಗೆ ಆ ಮರಳಲ್ಲಿ ನೆಲೆ ನೀಡಬಲ್ಲಿರಾ?

ನಾನು ಆ ಮರಳನ್ನು ನೀಡಲಾರೆ, ಅದು ಆ ನಾಗರಾಜನಿಗೆ ಭಾರಿ ಅಪಮಾನ ಮಾಡಿದಂತೆ ಆಗುವುದು.

ಪರವಾಗಿಲ್ಲ, ನನಗೆ ನೀಡಿ.

ಸರಿ ನಿಮಗೆ ಗೊತ್ತಾಗುವುದು ಎಂದನು ಅಗ್ಗಿದತ್ತ.

ಆಗ ಪರಮಪೂಜ್ಯ ಮೊಗ್ಗಲ್ಲಾನರು ಆ ಮರಳಿನ ರಾಶಿಯೆಡೆಗೆ ನಡೆಯಲು ಆರಂಭಿಸಿದರು. ಆಗ ನಾಗರಾಜನಿಗೆ ಮೊಗ್ಗಲ್ಲಾನರು ತನ್ನಡೆಗೆ ಬರುತ್ತಿರುವುದು ಕಾಣಿಸಿತು. ಆಗ ನಾಗರಾಜನು ಹೀಗೆ ಯೊಚಿಸಿದನು: ಈ ಭಿಕ್ಷುವು ಇಲ್ಲಿಗೆ ಸಮೀಪಿಸುತ್ತಿದ್ದಾನೆ, ಆತನಿಗೆ ನಾನಿರುವುದು ತಿಳಿದಿಲ್ಲ, ನಾನು ಆತನಿಗೆ ಬೆಂಕಿ ಉಗುಳಿ ಕೊಲ್ಲುತ್ತೇನೆ. ಆಗ ಮೊಗ್ಗಲ್ಲಾನರು ಆ ನಾಗರಾಜನ ಚಿತ್ತವನ್ನು ಓದಿ, ಅರಿತುಕೊಂಡು ಆತನಂತೆಯೇ ಅವರು ಬೆಂಕಿ ಉಗುಳಿದರು. ಇಬ್ಬರೂ ಪರಸ್ಪರ ಬೆಂಕಿ ಮತ್ತು ಹೊಗೆ ಉಗುಳಿದರು. ಆ ಬೆಂಕಿ ಮತ್ತು ಹೊಗೆಯಿಂದ ಮೊಗ್ಗಲ್ಲಾನರವರಿಗೆ ಏನೂ ಆಗಲಿಲ್ಲ. ಆದರೆ ಮೊಗ್ಗಲ್ಲಾನರ ಬೆಂಕಿ ಮತ್ತು ಹೊಗೆಯನ್ನು ನಾಗರಾಜನು ತಡೆದುಕೊಳ್ಳಲಾಗಲಿಲ್ಲ. ಏಕೆಂದರೆ ಮಹಾಮೊಗ್ಗಲ್ಲಾನರು ತೇಜೋ ಕಸಿಣಾ ಧ್ಯಾನವನ್ನು ಸಿದ್ಧಿಪಡೆದಿದ್ದರು. ಹೀಗಾಗಿ ಅವರು ಬೆಂಕಿ ಉಗುಳಿದರೆ ಅದು ಬ್ರಹ್ಮಲೋಕದವರೆಗೂ ವ್ಯಾಪಿಸುತ್ತಿತ್ತು. ಅವರು ತೇಜೋಕಸಿನಾ ಧ್ಯಾನದಲ್ಲಿ ಕ್ಷಣದಲ್ಲಿ ಚತುರ್ಥಧ್ಯಾನ ತಲುಪಿ ನಂತರ ತೀಕ್ಷ್ಣವಾಗಿ ಅಗ್ನಿಯನ್ನು ಉಗುಳುತ್ತಿದ್ದರು. ಆಗ ಅವರ ಶರೀರವಿಡೀ ಬೆಂಕಿಯಿಂದ ಆವೃತವಾಗಿರುವಂತೆ ಕಾಣಿಸುತ್ತಿತ್ತು. ಆಗ ಅಗ್ಗಿದತ್ತ ಮತ್ತು ಆತನ ಅನುಯಾಯಿಗಳು ಮೊಗ್ಗಲ್ಲಾನರನ್ನು ಆ ನಾಗರಾಜನು ಸುಡುತ್ತಿದ್ದಾನೆ ಎಂದು ಭಾವಿಸಿದರು. ನಮ್ಮ ಮಾತು ಕೇಳದೆ ಆತನು ನಾಶವಾದನಲ್ಲ ಎಂದು ವ್ಯಥೆಪಟ್ಟರು. ಆದರೆ ಅವರು ಭಯದಿಂದ ಹೊರಬರಲಿಲ್ಲ. ಆದರೆ ಮೊಗ್ಗಲ್ಲಾನರವರು ನಾಗರಾಜನನ್ನು ದಮಿಸಿಬಿಟ್ಟರು. ಆತನು ಶರಣಾಗತನಾದನು. ತಾನು ಮಾಡುತ್ತಿದ್ದ ಕುಕಾರ್ಯ ನಿಲ್ಲಿಸಿ ಶರಣು ಹೊಂದಿದನು. ಈಗ ಮೊಗ್ಗಲ್ಲಾನರವರು ಮರಳುರಾಶಿಯ ಮೇಲೆ ಕುಳಿತರು. ನಂತರ ನಾಗರಾಜನು ಅವರಿಗೆ ತಿಂಡಿ ತಿನಿಸು ಮುಂದಿಟ್ಟು, ನಂತರ ಅವರಿಗೆ ಛತ್ರಿ ಹಿಡಿಯುವಂತೆ ತನ್ನ ವಿಶಾಲವಾದ ಹೆಡೆಯನ್ನು ವಿಕಸಿಸಿ, ಪೂಜ್ಯ ಮೊಗ್ಗಲ್ಲಾನರವರ ತಲೆಯ ಮೇಲೆ ನೆರಳು ನೀಡುವಂತೆ ಚಾಚಿದನು.

ಮುಂಜಾನೆ ಅಗ್ಗಿದತ್ತ ಮತ್ತು ಇನ್ನಿತರ ಋಷಿಗಳು ಮೊಗ್ಗಲ್ಲಾನರವರು ಬದುಕಿರುವರೋ ಅಥವಾ ಇಲ್ಲವೋ ಎಂದು ಪರೀಕ್ಷಿಸಲು ಬಂದರು. ಆದರೆ ಅವರಿಗೆ ಆಶ್ಚರ್ಯವಾಯಿತು. ಮೊಗ್ಗಲ್ಲಾನರು ಕುಳಿತೇ ಇದ್ದರು ಮತ್ತು ನಾಗರಾಜನು ಅವರ ತಲೆಯ ಮೇಲೆ ಹಡೆಯಾಡಿಸುತ್ತ ಅವರಿಗೆ ನೆರಳು ನೀಡುತ್ತಾ ಇದ್ದನು. ಓಹ್! ಈ ಭಿಕ್ಷುವು ಪ್ರಬಲವಾದ ನಾಗರಾಜನನ್ನೇ ಜಯಿಸಿದ್ದಾನೆ ಎಂದು ಆತನನ್ನು ಅಭಿನಂದಿಸುತ್ತಾ ಆತನ ಸುತ್ತಲೂ ನಿಂತರು.

ಅದೇ ಸಮಯದಲ್ಲಿ ಭಗವಾನರು ಅತ್ತಲಿಂದ ಬರುತ್ತಿದ್ದರು. ತಕ್ಷಣ ಮೊಗ್ಗಲ್ಲಾನರು ಅವರಿಗೆ ವಂದಿಸಿದರು. ಇವರು ನಿಮಗಿಂತ ಶ್ರೇಷ್ಠರೇ? ಎಂದು ಅಗ್ಗಿದತ್ತ ಕೇಳಿದಾಗ, ಇವರೇ ಮಹಾಮಹೀಮರಾದ ಬುದ್ಧರು, ಸಮ್ಮಾಸಂಬೋಧಿ ಪಡೆದವರು, ನಿಬ್ಬಾಣಕ್ಕೆ ಮಾರ್ಗದಶರ್ಿಯೂ. ನಾನು ಕೇವಲ ಅವರ ಶಿಷ್ಯನಷ್ಟೇ ಆಗಿದ್ದೇನೆ. ನಂತರ ಭಗವಾನರು ಆಸನದಲ್ಲಿ ಕುಳಿತರು. ಆಗ ಅಗ್ಗಿದತ್ತ ಮತ್ತು ಇತರ ಋಷಿಗಳು ಹೀಗೆ ಮಾತನಾಡಿಕೊಂಡರು. ಕೇವಲ ಶಿಷ್ಯನ ಅತೀಂದ್ರಿಯ ಸಾಮಥ್ರ್ಯ ಹೀಗಿರಬೇಕಾದರೆ ಅವರ ಗುರುಗಳಾದ ಬುದ್ಧರ ಸಾಮಥ್ರ್ಯ ಹೇಗಿರಬೇಕು! ಎಂದು ಯೋಚಿಸಿ ಶ್ರದ್ಧೆಯುಳ್ಳವರಾದರು. ಭಗವಾನರಿಗೆ ವಂದಿಸಿದರು. ಆಗ ಭಗವಾನರು ಅಗ್ಗಿದತ್ತನಿಗೆ ನಿನ್ನ ಶಿಷ್ಯರಿಗೆ ಏನೆಂದು ಉಪದೇಶ ನೀಡುವೆ ಎಂದು ವಿಚಾರಿಸಿದಾಗ, ಆತನು ಬೆಟ್ಟ, ಮರ, ಮಂದಿರಗಳಿಗೆ ಶರಣು ಹೋದರೆ ಒಬ್ಬನು ದುಃಖದಿಂದ ಮುಕ್ತರಾಗುವರು ಎಂದು ಹೇಳಿದ್ದೇನೆ ಎಂದನು.

ಯಾವಾಗ ಭಯವು ಪೀಡಿಸುವುದೋ ಆಗ ಬಹಳಷ್ಟು ಮಾನವನು ಬೆಟ್ಟಗಳಿಗೆ, ಕಾಡುಗಳಿಗೆ, ಮರಗಳಿಗೆ, ಮಂದಿರಗಳಿಗೆ, (ಪೂಜಾ ಸ್ಥಳಗಳಿಗೆ) ಶರಣು ಹೋಗುತ್ತಾರೆ. (188)

ಆದರೆ ಅಂತಹ ಯಾವ ಶರಣು ಕ್ಷೇಮಕರವಲ್ಲ ಮತ್ತು ಅಂತಹ ಯಾವುದೂ ಉತ್ತಮ ಶರಣು ಅಲ್ಲ! ಅಂತಹ ಶರಣುವಿನಿಂದ ಯಾರೊಬ್ಬರೂ ದುಃಖಗಳಿಂದ ಮುಕ್ತರಾಗಲು ಸಾಧ್ಯವಿಲ್ಲ. (189)

ಆದರೆ ಯಾರು ಬುದ್ಧರಲ್ಲಿ, ಧಮ್ಮದಲ್ಲಿ ಮತ್ತು ಸಂಘದಲ್ಲಿ ಶರಣು ಹೋಗುವರೋ ಅಂತಹವರು ಮಾತ್ರ ಸಮ್ಮಾ ಪ್ರಜ್ಞಾದಿಂದಾಗಿ ನಾಲ್ಕು ಆರ್ಯಸತ್ಯಗಳನ್ನು ಅರಿಯುತ್ತಾರೆ.   (190)

ಅದೆಂದರೆ ದುಃಖ ಸತ್ಯ, ದುಃಖ ಸಮುದಾಯ ಸತ್ಯ (ಕಾರಣ) ದುಃಖ ನಿರೋಧ ಸತ್ಯ ಮತ್ತು ಆರ್ಯ ಅಷ್ಠಾಂಗಿಕ ಮಾರ್ಗ ಸತ್ಯ, ಇವುಗಳನ್ನು ಅರಿಯುತ್ತಾರೆ. (191)

ಇಂತಹ ಶರಣು ಕ್ಷೇಮಕರವಾಗಿದೆ, ಇಂತಹ ಶರಣು ಉತ್ತಮೋತ್ತಮವಾಗಿದೆ, ಇಂತಹ ಶರಣುವಿನಲ್ಲಿ ಶರಣು ಹೋದಾಗ ದುಃಖವೆಲ್ಲದರಿಂದ ಮುಕ್ತರಾಗಬಹುದು. (192)

ಆಗ ಭಗವಾನರು ಆತನಿಗೆ ಈ ಮೇಲಿನ ಗಾಥೆಗಳನ್ನು ನುಡಿದು ತಿದ್ದಿದರು. ನಂತರದ ಸುತ್ತದ ಅಂತ್ಯದಲ್ಲಿ ಅವರೆಲ್ಲಾ ಅರಹಂತರಾದರು. ಜೊತೆಗೆ ಅತೀಂದ್ರಿಯ ಶಕ್ತಿಗಳನ್ನು ಹೊಂದಿದರು. ನಂತರ ಭಿಕ್ಷುಗಳಾಗಿ, ಭಗವಾನರನ್ನು ಹಿಂಬಾಲಿಸಿ ಬರುತ್ತಿದ್ದರು. ಆಗ ಇವರನ್ನು ಕಂಡ ಜನರಲ್ಲಿ ಗೊಂದಲ ಉಂಟಾಯಿತು. ಏನೆಂದರೆ: ಅಗ್ಗಿದತ್ತ ಋಷಿಯು ಶ್ರೇಷ್ಠನೋ ಅಥವಾ ಬುದ್ಧ ಭಗವಾನರು ಶ್ರೇಷ್ಠರೋ? ಎಂದು.

ಆಗ ಭಗವಾನರಿಗೆ ಅವರ ಗೊಂದಲು ಅರ್ಥವಾಯಿತು. ಅವರು ಅಗ್ಗಿದತ್ತನಿಗೆ ಅಗ್ಗಿದತ್ತ, ನಿನ್ನ ಶಿಷ್ಯರ ಸಂದೇಹ ನಿವಾರಿಸು ಎಂದರು. ಆಗ ಅವರಿಗೂ ಪರಿಸ್ಥಿತಿ ಅರ್ಥವಾಗಿ ಆತನೂ ತನ್ನ ಅತೀಂದ್ರಿಯ ಶಕ್ತಿಯಿಂದಾಗಿ ಏಳುಬಾರಿ ಆಕಾಶಕ್ಕೆ ಹಾರಿ ನಂತರ ಭಗವಾನರ ಪಾದದಡಿ ಶಿರಬಾಗಿ ವಂದಿಸಿ ಇವರೇ ನನ್ನ ಗುರುಗಳು, ನಾನು ಇವರ ಶಿಷ್ಯ ಮಾತ್ರನಾಗಿದ್ದೇನೆ, ಇವರಿಂದಲೇ ನಾನು ಸಮ್ಮಾದೃಷ್ಟಿ ಪಡೆದಿದ್ದೇನೆ, ಮಿಥ್ಯ ಶರಣುಗಳನ್ನು ತೊರೆದಿದ್ದೇನೆ, ಅವರ ಅನುಗ್ರಹದಿಂದಲೇ ಅರಹಂತನು, ಅತೀಂದ್ರಿಯ ಶಕ್ತಿವಂತನು ಆಗಿದ್ದೇನೆ ಎಂದು.

6.2 ಜಿಪುಣಾಗ್ರೇಸನ ಲೋಭ ದಮನ

ಒಂದು ದಿನ ಭಗವಾನರು ಮುಂಜಾನೆ ಮಹಾಕರುಣಾ ಸಮಾಪತ್ತಿಯಲ್ಲಿ ಇಂದು ಯಾರು ಜ್ಞಾನೋದಯವನ್ನು ಪಡೆಯುವರು ಎಂದು ವೀಕ್ಷಿಸುವಾಗ ಅವರಿಗೆ ರಾಜಗೃಹದ ಬೆಲ್ಲವೆಂಬ ಪಟ್ಟಣದ ಶ್ರೇಷ್ಟಿಯು ಕಂಡು ಬಂದನು. ಆತನು ಮಹಾ ಜಿಪುಣನಾಗಿದ್ದನು. ಆತನು ಕೇವಲ ಬೋಧನೆಯಿಂದ ಬದಲಾಗುವುದಿಲ್ಲ ಜೊತೆಗೆ ಇದ್ದಿಶಕ್ತಿಯು ಅವಶ್ಯಕ ಎಂದು ಅವರಿಗೆ ತಿಳಿಯಿತು. ಹೀಗಾಗಿ ಇದಕ್ಕೆ ಬಹು ಸಮರ್ಥ ಕೇವಲ ಮೊಗ್ಗಲಾನರೇ ಸರಿ ಎಂದು ನಿರ್ಧರಿಸಿ ಅವರು ಮೊಗ್ಗಲಾನರವರಿಗೆ ಕರೆಸಿ  ಆ ದಿನವೇ  ಶ್ರೇಷ್ಟಿಯನ್ನು ಪರಿವತರ್ಿಸಿ ಆತನಿಂದ ದಾನವನ್ನು ಬುಧ್ಧರ ಸಹಿತ ಭಿಕ್ಖುಸಂಘಕ್ಕೆ ನೀಡುವಂತೆ ಮಾಡಬೇಕೆಂದು ಹೇಳಿದರು. ಇದರಿಂದಾಗಿ ಶ್ರೇಷ್ಟಿಗೆ ಆಪಾರ ಪುಣ್ಯವು ಸಿಗುವುದೆಂದು ಹಾಗೇ ಲೋಕೋತ್ತರ ಫಲಪ್ರಾಪ್ತಿಗೂ ಸಹಾಯವಾಗುವುದು ಎಂದು ಅವರು ಹಾಗೇ ನುಡಿದರು. ಹಾಗೆ ಮಾಡಲು ಮೊಗ್ಗಲಾನರು ಒಪ್ಪಿದರು.  

ಆ ದಿನ ಬೆಳಿಗ್ಗೆ ಶ್ರೇಷ್ಟಿಯು ದಾರಿಯಲ್ಲಿ ಒಬ್ಬ ಹಳ್ಳಿಯವನು ಕಜ್ಜಾಯದಂತಹ ಸಿಹಿ ತಿಂಡಿಯನ್ನು ತಿನ್ನುವುದನ್ನು ಕಂಡನು. ಆತನಲ್ಲಿ ರಸತೃಷ್ಣೆಯು ಆರಂಭವಾಯಿತು.. ಹೀಗಾಗಿ ಆತನಿಗೆ ಬೇರೆ ಯಾವ ವಿಷಯದಲ್ಲೂ ಆಸಕ್ತಿಯು ಇಲ್ಲದಂತಾಯಿತು. ಅದರೆ ಅದನ್ನು ಮನೆಯಲ್ಲಿ ಮಾಡಿಸಿದರೆ ಪರರಿಗೂ ಕೊಡಬೇಕಾಗುತ್ತದೆ. ಇದರಿಂದ ಹಣವು ನಷ್ಟವಾಗುತ್ತದೆ ಎಂದು ಆತನು ಯಾರಿಗೂ ಹೇಳಲಾರದೆ ಹಾಗೆಯೇ ಆಸೆಯನ್ನು ಬಿಡಲಾರದೇ ಕ್ಷೊಭೆಯನ್ನು ಅನುಭವಿಸಿದನು. 

ಈತನ ಪರಿಸ್ಥಿತಿಯನ್ನು ಕಂಡು ಆತನ ಹೆಂಡತಿಯು ಉಪಾಯವಾಗಿ ಮಾತಾನಾಡಿಸಿ ವಿಷಯವನ್ನು ಹೊರಹಾಕಿಸಿದಳು. ಹಾಗೂ ಇಷ್ಟೆನಾ ಮನೆಯಲ್ಲಿ ಮಾಡಿದರಾಯಿತು ಎಂದು ಹೇಳಲು ಆತನು ಒಪ್ಪಲಿಲ್ಲ ಕೇವಲ ತನಗಾಗಿಯೇ ಮಾಡಬೇಕೆಂದು ಕರಾರು ಹಾಕಿದನು. ಅದಕ್ಕೆ ಒಪ್ಪಿದ ಆತನ ಹೆಂಡತಿಯು ಆತನನ್ನು  ಮಹಡಿಯ ಮೇಲಕ್ಕೆ ಕರೆದೂಯ್ದು ಎಲ್ಲಾ ಚಿಲಕವನ್ನು ಹಾಕಿ ಅಲ್ಲಿ ಅಡುಗೆಯನ್ನು ಆರಂಭಿಸಿದಳು. 

ಇನ್ನೇನು ತಟ್ಟೆಗೆ ಹಾಕಬೇಕು ಎನ್ನುವಷ್ಟರಲ್ಲಿ ಅಲ್ಲಿ ಆಕಾಶದಲ್ಲಿ ಮೊಗ್ಗಲಾನರು ಪ್ರತ್ಯಕ್ಷರಾದರು. ಅವರನ್ನು ಕಂಡ ಶ್ರೇಷ್ಟಿಯು ಗಾಬರಿಯಾದನು ,ಇಂತಹವರಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದರೇ ಇಲ್ಲು ಸಹಾ ನಿರಾಳವಿಲ್ಲವಲ್ಲ ಎಂದು ಭಾವಿಸಿ ಆತನು ಮೊಗ್ಗಲಾನರಿಗೆ ಹೀಗೆ ಹೇಳೀದನು ಓ ಸಮಣನೇ ಆಕಾಶದಲ್ಲಿ ನಿಂತ ಮಾತ್ರಕ್ಕೆ ನಿಮಗೆ ಆಹಾರ ಸಿಗುವುದು ಎಂದು ಭಾವಿಸಿದಿರಾ, ಆ ಆಕಾಶದಲ್ಲೇ ನಡೆದಾಡಿದರೂ ಸಹಾ ಈ ಕಜ್ಜಾಯಗಳು ನಿಮಗೆ ಸಿಗಲಾರದು ಅದನ್ನು ಆಲಿಸಿದ ಮೊಗ್ಗಲಾನರು ಆಕಾಶದಲ್ಲೆ ನಡೆದಾಡಿದರು. ಅದನ್ನು ನೋಡಿದಂತಹ ಶ್ರೇಷ್ಟಿಯು ಹೀಗೆ ನುಡಿದನು,ಕೇವಲ ಆಕಾಶದಲ್ಲಿ ನಡೆದಾಡಿದ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಆಕಾಶದಲ್ಲೇ ಪದ್ಮಾಸನ ಹಾಕಿ ಕುಳಿತರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಆಲಿಸಿದ ಮೊಗ್ಗಲಾನರು ಆಕಾಶದಲ್ಲೆ ಪದ್ಮಾಸನದಲ್ಲಿ ಕುಳಿತರು. ಅದನ್ನು ನೋಡಿದಂತಹ ಶ್ರೇಷ್ಟಿಯು ಹೀಗೆ ನುಡಿದನು,ಕೇವಲ ಆಕಾಶದಲ್ಲೇ ಪದ್ಮಾಸನ ಹಾಕಿ ಕುಳಿತ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಈ ಕಿಟಕಿಯ ಬಳಿ ಬಂದು ನಿಂತರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಆಲಿಸಿ ಮೊಗ್ಗಲಾನರು ಹಾಗೆಯೇ ಕಿಟಕಿಯ ಬಳಿ ಬಂದು ನಿಂತರು. ಕೇವಲ ಈ ಕಿಟಕಿಯ ಬಳಿ ಬಂದು ನಿಂತ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಇಲ್ಲಿ ಭಾರಿ ಹೊಗೆ ಎಬ್ಬಿಸಿದರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಎಂದನು. ಇದನ್ನು ಕೇಳಿದ ಮೊಗ್ಗಲಾನರು ಭಾರಿ ಹೊಗೆಯನ್ನು ಸೃಷ್ಟಿಸಿಬಿಟ್ಟರು. ಇದರಿಂದ ಆ ಮಹಡಿಯ ಮೇಲ್ಭಾಗವೆಲ್ಲಾ ಹೊಗೆಯಿಂದ ಆವೃತವಾಯಿತು. ಇದರಿಂದ ಶ್ರೇಷ್ಟಿಗೂ ದಿಕ್ಕೇ ತೋಚದಂತಾಯಿತು. 

ಆಗ ಆತನ ಮನಸ್ಸಿನಲ್ಲಿ ಈ ಬಗೆಯ ಯೋಚನೆಯುಂಟಾಯಿತು.ಕೇವಲ ಹೊಗೆ ಎಬ್ಬಿಸಿದ ಮಾತ್ರಕ್ಕೆ ಕಜ್ಜಾಯ ಸಿಗುವುದು ಎಂದು ಭಾವಿಸಿದಿರಾ, ಇಲ್ಲಿ ಭಾರಿ ಬೆಂಕಿ ಸೃಷ್ಟಿಸಿದರೂ ಸಹಾ ಈ ಕಜ್ಜಾಯಗಳು ನಿಮಗೆ ದೊರೆಯಲಾರವು ಅದರೆ ಅದನ್ನು ಹೇಳಲು ಹೆದರಿದನು ಏಕೆಂದರೇ ಮೊಗ್ಗಲಾನರು ಹಾಗೇಯೇ ಮಾಡುವರೆಂಬ ಭಯವಿತ್ತು. ಆಗ ಶ್ರೇಷ್ಟಿಯು ಹೀಗೂ ಯೋಚಿಸಿದನು ಈ ಸಮಣನು ಹಠವಾದಿಯಂತೆ ಕಾಣುವನು ಈತನು ಬರಿಗೈಯಲ್ಲಿ ಹೋಗುವವನಂತೆ ಕಾಣುತ್ತಿಲ್ಲ. ನಾನು ಈತನಿಗೆ ಒಂದು ಕಜ್ಜಾಯ ಕೊಟ್ಟು ಕಳುಹಿಸಬೇಕು. 

ಪತ್ನಿಯೇ ಈತನಿಗೆ ಒಂದು ಚಿಕ್ಕ ಕಜ್ಜಾಯ ಕೊಟ್ಟು ಕಳುಹಿಸು. ಎಂದನು. ಆಗ ಆಕೆಯು ಬಾಣಲಿಯಲ್ಲಿನ ಎಣ್ಣೆಗೆ  ಸ್ವಲ್ಪ ಹಿಟ್ಟನ್ನು ಹಾಕಿದಳು. ಅದರೆ ಅದು ಇಡೀ ಬಾಣಲೆಯನ್ನು ಆಕ್ರಮಿಸಿತು. ಒಹ್ ನೀನೂ ತಂಬಾ ಹಾಕಿರುವೆ ಎಂದು ಬಯ್ದು ತಾನೇ ಚಮಚದಿಂದ ಸ್ವಲ್ಪ ತಗೆದುಕೊಂಡು ಹಾಕಿದನು. ಅದರೆ ಅದು ಮೊದಲಗಿಂತ ದೊಡ್ಡದಾಗಿಬಿಟ್ಟಿತು. ಆಗ ಚಕಿದನಾದ ಆತನು ಇನ್ನೊಂದು, ಮತ್ತೊಂದು, ನಂತರ ಮಗದೊಂದು ಹಾಕಿದನು ಅದರೆ ಅವೆಲ್ಲವೂ ಹಾಗೆ ಆದವು. 

ಇದರಿಂದ ದಣಿದ ಆತನು ಹೀಗೆ ಹೇಳಿದನು.ಪತ್ನಿಯೇ ಇತನಿಗೆ ನೀನೇ ಒಂದು ಕಜ್ಜಾಯವನ್ನು ನೀಡಿಬಿಡು ಆಗ ಆಕೆಯು ಆತನ ಅಜ್ಞೆಯಂತೆ ಒಂದು  ಕಜ್ಜಾಯವನ್ನು ನೀಡಲು  ಹೋದರೆ ಅವೆಲ್ಲವೂ ಅಂಟಿಕೊಂಡಿದ್ದವು. ಹಾಗೂ ಅವನ್ನು ಆಕೆಯಿಂದ ಬೇಪರ್ಾಡು ಮಾಡಲು ಆಗಲಿಲ್ಲ. ಆಗ ಕೆಂಗೆಟ್ಟ ಆತನು ತಾನೇ ಅವನ್ನು ಬಿಡಿಸಲು ಹೋದನು. ಅದರೆ ಸಾಧ್ಯವಾಗಲಿಲ್ಲ. ನಂತರ ಪತಿ, ಪತ್ನಿ ಇಬ್ಬರೂ ಸೇರಿ ಬೇರೆ ಮಾಡಲು ಯತ್ನಿಸಿದರು.. ಅವರ ಶತಾಯಾಗತಾಯ ಪ್ರಯತ್ನವೂ ಫಲಕಾರಿಯಾಗಲಿಲ್ಲ. ಇಬ್ಬರಿಗೂ ಬೆವರು ಹರಿದಿತ್ತು, ಶರೀರವೂ ಅಪಾರ ದಣಿಯಿತು. ಅದರೆ ಅವನ್ನು ಬೇರೆ ಮಾಡಲು ಸಾಧ್ಯವಾಗಲೇ ಇಲ್ಲ.

ಇಷ್ಟರ ಹೊತ್ತಿಗೆ ಆತನ ಬಯಕೆಯು ನಿರಾಸೆಯಾಗಿ ಕೊನೆಗೆ ಆ ತಿಂಡಿಯಿಂದಲೇ  ಆತನಿಗೆ ವಿರಕ್ತಿ ಉಂಟಾಯಿತು. ಆಗ ಆತನು ಪತ್ನಿಗೆ ಹೀಗೆ ಹೇಳಿದನು. ಪತ್ನಿಯೇ ನನಗೆ ಈ ಕಜ್ಜಾಯಗಳು ಬೇಡ ಎಲ್ಲವೂ ಆತನಿಗೆ ಕೊಟ್ಟುಬಿಡು ಎಂದನು. ಆಗ ಆಕೆಯು ಮೊಗ್ಗಲಾನರಿಗೆ ಬುಟ್ಟಿ ತುಂಬಾ ಕಜ್ಜಾಯವನ್ನು ನೀಡಲು ಬಂದಳು. ಆಗ ಮೊಗ್ಗಲಾನರು ಅವರಿರ್ವರಿಗೂ ಬೋಧನೆ ನೀಡಿದರು. ದಾನದ ಮಹತ್ವ, ತಿಸರಣದ ಉತ್ಕೃಷ್ಟತೆ, ತ್ಯಾಗದ ಪರಮ ಲಾಭಗಳು, ಶೀಲದ ಮಹೋನ್ನತೆ ಇತ್ಯಾದಿಗಳನ್ನು ತಿಳಿಸಿದರು. ಇದರಿಂದಾಗಿ ಅವರಿರ್ವರು ಪ್ರಭಾವಿತರಾದರು.  ಬನ್ನಿ ಭಂತೆ ಈ ವೈಭವಯುತ ಪೀಠದಲ್ಲಿ ಕುಳಿತು ಈ ಕಜ್ಜಾಯಗಳನ್ನು ತಿನ್ನಿರಿ. ಎಂದರು..

ಆಗ ಮೊಗ್ಗಲಾನರು ಹೀಗೆ ನುಡಿದರು. ಭಗವಾನರು ಹಾಗೂ 500 ಭಿಕ್ಖುಗಳು ಅಲ್ಲಿ ನಿಮಗಾಗಿ ಕಾಯುತ್ತಿದ್ದಾರೆ. ನಾವು ಈ ಕಜ್ಜಾಯಗಳ ಸಮೇತ ಅಲ್ಲಿಗೆ ಹೋಗೋಣ ನಿಮ್ಮ ಕೈಯಾರೇ ದಾನ ನೀಡುವಿರಂತೆ .

ಭಗವಾನರು ಈಗ ಎಲ್ಲಿಹರು?.

ಇಲ್ಲಿಂದ 45 ಯೋಜನ ದೂರದ ಜೇತವನದಲ್ಲಿ 

ಅಷ್ಟು ದೂರದಲ್ಲಿ ಹೋಗುವುದು ಹೇಗೆಂದು ಅವರು ಗೊಂದಲದಲ್ಲಿ ಇದ್ದಾಗ, ಮೊಗ್ಗಲಾನರು ತಮ್ಮ ಅತಿಮಾನಸ ಶಕ್ತಿಯಿಂದ ಕರೆದೊಯ್ಯುವೆ ಎಂದು ನುಡಿದರು. ನಂತರ ಮೊಗ್ಗಲಾನರು ತಾವು ಶ್ರೇಷ್ಟಿಗಳ ಹಾಗೂ ಕಜ್ಜಾಯಗಳ ಸಮೇತ ಜೇತವನದ ಹೆಬ್ಬಾಗಿಲಿನಲ್ಲಿ ಇರುವಂತಾಗಲಿ ಎಂದು ಸಂಕಲ್ಪಿಸಿದರು..ಅದರಂತೆಯೇ ಅವರೆಲ್ಲರೂ ಕ್ಷಣದಲ್ಲಿ ಜೇತವನದಲ್ಲಿದ್ದರು. ನಂತರ ಅಲ್ಲಿ ಅವರು ತಮ್ಮ ಕೈಯಾರೆ ದಾನ ಮಾಡಿದರು. ಅದರೂ ಆ ಕಜ್ಜಾಯಗಳು ಮುಗಿಯಲಿಲ್ಲ. ನಂತರ ಅವರಿಗೆ ಭಗವಾನರು ಧಮ್ಮ ಬೋಧಿಸಿದಾಗ ಅವರಿರ್ವರು ಸೋತಪತ್ತಿ ಫಲ ಪಡೆದರು. ನಂತರ ಮೊಗ್ಗಲಾನರ ಇಚ್ಚೆಯಂತೆ ಅವರು ಪುನಃ ತಮ್ಮ ಮನೆಯಲ್ಲಿದ್ದರು. ನಂತರ ಅವರು ತಮ್ಮ ಐಶ್ವರ್ಯವನ್ನು ಸಂಘಕ್ಕೆ ಮೀಸಲಾಗಿಟ್ಟರು.

6.3 ನಂದೋಪನಂದನ ರೋಷ ದಮನ

ಒಂದು ದಿನ ಶ್ರಾವಸ್ಥಿಯ ಕೋಟ್ಯಾಧಿಶರಾದ ಆನಾಥಪಿಂಡಿಕರು ಜೇತವನಕ್ಕೆ ಭಗವಾನರ ಬಳಿಗೆ ಬಂದರು. ಹಾಗೂ ಮಾರನೆಯ ದಿನ 500 ಭಿಕ್ಷುಗಳೊಂದಿಗೆ ಭಗವಾನರಿಗೆ ಔತಣಕ್ಕೆ ಆಹ್ವಾನ ನೀಡಿದರು. ಭಗವಾನರು ಮೌನದಿಂದ ಒಪ್ಪಿಗೆ ನೀಡಿದರು.

   ಮಾರನೆಯ ದಿನ ಭಗವಾನರು ಮುಂಜಾನೆ ಕರುಣಾ ಸಮಾಪತ್ತಿಯಲ್ಲಿರುವಾಗ ಇಂದು ಯಾರಿಗೆ ಜ್ಞಾನೋದಯವನ್ನುಂಟು ಮಾಡಲಿ ಎಂದು ವೀಕ್ಷಿಸಿದಾಗ ಅವರಿಗೆ ನಂದೋಪನಂದನು ಕಾಣಿಸಿಕೊಂಡನು.

ನಂದೋಪನಂದನು ದಿವ್ಯ ನಾಗನಾಗಿದ್ದನು. ನಾಗರಲ್ಲಿ 3 ವಿಧ, ಅಂಡಜ ಅಂದರೆ ಮೊಟ್ಟೆಯಿಂದ ಜನಿಸುವವರು, ಗರ್ಭಜ ಗರ್ಭದಿಂದ ಜನಿಸುವವರು, ಮತ್ತು ಓಪಪಾತಿಕ ಅಂದರೆ ದೇವ ಹಾಗೂ ಪೇತಗಳಂತೆ ಮಾನವರಿಂದ ನೇರವಾಗಿ ಆ ನಿದರ್ಿಷ್ಟ ರೂಪ ಪಡೆಯುವುದು. ನಂದೋಪನಂದನು ಒಪಪಾತಿಕ ನಾಗನಾಗಿದ್ದನು. ಈ ನಂದೋಪನಂದನು ಆಪಾರ ದಿವ್ಯ ಶಕ್ತಿಗಳಿಂದ ಕೂಡಿದ್ದನು. ಅದರೆ ಆತನಲ್ಲಿ ಅಹಂನಿಂದಾಗಿ ಆತನಿಗೆ ಧಮ್ಮವು ಅರ್ಥವಾಗಲೂ ಪ್ರಧಾನ ಅಡ್ಡಿಯಾಗಿತ್ತು. ಆತನ ಗರ್ವಭಂಗ ಕೇವಲ ಮೊಗ್ಗಲಾನರಿಂದ ಸಾಧ್ಯ ಎಂದು ಭಗವಾನರಿಗೆ ತಿಳಿದಿತ್ತು.. ಹೀಗಾಗಿ ಆತನಿಂದಲೇ ನಂದೊಪನಂದನ ದಮನ ಮಾಡಲು ಭಗವಾನರು ನಿರ್ಧರಿಸಿದರು. ನಂತರ ಭಗವಾನರು ಆನಂದರವರನ್ನು ಕರೆದು 500 ಭಿಕ್ಖುಗಳೊಂದಿಗೆ ದಿವ್ಯಲೋಕಗಳಿಗೆ ಭೇಟಿ ನೀಡಲು ಬೇಕಾದ ಸಿದ್ಧತೆ ಆರಂಭಿಸು ಎಂದರು.

ನಂದೋಪನಂದನು ದಿವ್ಯವಾಧ ವೈಭವದಿಂದ ಕೂಡಿದ್ದನು. ಈ ನಂದೋಪನಂದನ ವಾಸಸ್ಥಳದ ಮೇಲ್ಭಾಗದಲ್ಲೇ ತಾವತಿಂಸ ಲೋಕವಿತ್ತು. ಹೀಗಾಗಿ ಭಗವಾನರು ಭಿಕ್ಖುಗಳನ್ನು ಕರೆದುಕೊಂಡು ಆತನ ವಾಸಸ್ಥಳದ ಮೇಲ್ಭಾಗದಿಂದ ಹಾರಿಹೋಗುತ್ತಿದ್ದರು. ಅವರ ಪಾದದ ಧೂಳು ನಾಗರ ಮೇಲೆ ಬೀಳಲಾರಂಬಿಸಿತು. ಇದರಿಂದಾಗಿ ನಂದೋಪನಂದನು ಕೆರಳಿಹೋದನು. ನಾನು ಹೀಗೆ ಹೋಗಲೂ ಬಿಡಲಾರೆ ಎಂದು ಸಂಕಲ್ಪ ಮಾಡಿದನು. ನಂತರ ನಂದೋಪನಂದನು ಬೃಹತ್ ಆಕಾರವನ್ನು ತಾಳಿ ಮೇರು ಪರ್ವತವನ್ನು 7 ಸುತ್ತು ಸುತ್ತುವರೆದು ತನ್ನ ಬೃಹತ್ ಹೆಡೆಯನ್ನು ತಾವತಿಂಸ ಲೋಕಕ್ಕೆ ಅಡ್ಡವಾಗಿರಿಸಿದನು. ನಂತರ ಅಪಾರವಾದ ಕತ್ತಲೆಯನ್ನು ಸೃಷ್ಟಿಸಿ ಕತ್ತಲೆಯನ್ನುಂಟು ಮಾಡಿದನು..

    ಈ ತಕ್ಷಣದ ಕತ್ತಲೆ ಕಂಡು ಪೂಜ್ಯ ಅರಹಂತ ರತ್ನಪಾಲರು ಹೀಗೆ ಹೇಳಿದರು :  ಭಗವಾನ್ ನಾವು ಯಾವಾಗಲೇ ಆಗಲಿ ಈ ಮಾರ್ಗದಲ್ಲಿ ಸಾಗಬೇಕಾದರೆ ಸುನೇರು ಪರ್ವತವು ಕಾಣಿಸುತ್ತಿತ್ತು ಹಾಗೆಯೇ ಮೇಲೆ ತಾವತಿಂಸವು ಹಾಗೂ ಅಲ್ಲಿನ ವೈಜಯಂತ ವಿಮಾನ ಅರಮನೆಯು ಮತ್ತು ಅದರ ದಿವ್ಯ ಧ್ವಜವೂ ಕಾಣುತ್ತಿತ್ತು. ಈಗ ಅವೆಲ್ಲ ಏಕೆ ಕಾಣುತ್ತಿಲ್ಲ. ?

ರತ್ನಪಾಲ ನಂದೋಪನಂದ ನಾಗನು ಕೋಪಾರೋಷದಿಂದಾಗಿ ಬೃಹದಾಕಾರ ತಾಳಿ ಸುಮೇರುವನ್ನು ಸುತ್ತುವರೆದು ತನ್ನ ಹೆಡೆಯಿಂದ ತಾವತಿಂಸವನ್ನು ಅಡಗಿಸಿ, ತನ್ನ ದಿವ್ಯಶಕ್ತಿಯಿಂದ ಕತ್ತಲೆಯನ್ನುಂಟು ಮಾಡಿದ್ದಾನೆ. ಎಂದು ಭಗವಾನರು ಉತ್ತರಿಸಿದರು.

ಆಗ ರತ್ನಪಾಲರು ಹೀಗೆ ಕೇಳಿದರು ;ಭಂತೆ ನಾನು ಆತನ ದಮನ ಮಾಡಲೇ?

ಅದರೆ ಭಗವಾನರು ನಿರಾಕರಿಸಿದರು. ನಂತರ ಭಂತೆ ಭದ್ಧಿಯಾ, ಭಂತೆ ರಾಹುಲ, ಮತ್ತು ಇತರರು ನಂದೋಪನಂದನನ್ನು ದಮಿಸಲು ಅಪ್ಪಣೆ ಕೇಳಿದರು . ಅದರೆ ಭಗವಾನರು ಎಲ್ಲರನ್ನೂ ನಿರಾಕರಿಸಿದರು.

ನಂತರ ಪೂಜ್ಯ ಮಹಾಮೊಗ್ಗಲಾನರು ಭಗವಾನ್ ನಾನು ಆತನನ್ನು ದಮಿಸಲೇ?

ಆಗ ಭಗವಾನರು ಮೊಗ್ಗಲಾನ ದಮಿಸು ಎಂದರು.

ತಕ್ಷಣ ಮೊಗ್ಗಲಾನರು ನಂದೊಪನಂದನಿಗಿಂತ ಬೃಹತಾಕಾರ ತಾಳಿ ಆತನನ್ನೆ 14 ಬಾರಿ ಸುತ್ತುವರೆದು ಆತನ ಹೆಡೆಯ ಮೇಲೇ ಬೃಹತ್ ಹೆಡೆ ಆವರಿಸಿ ಆತನಿಗೆ ಅದುಮತೊಡಗಿದರು. ಆಗ ನಾಗನು ಹೊಗೆಯನ್ನು ಬಿಡಲಾರಂಬಿಸಿದನು. ಆ ಹೊಗೆಯು ಮೊಗ್ಗಲಾನರಿಗೆ ಏನೂ ಮಾಡಲಿಲ್ಲ. ಈಗ ಮೊಗ್ಗಲಾನರು ಇನ್ನಷ್ಟು ತೀಕ್ಷ್ಣವಾದ ಹೊಗೆಯನ್ನು ಬಿಟ್ಟರು. ಅದು ನಾಗನಿಗೆ ಕ್ಷೊಭೆಯನ್ನುಂಟು ಮಾಡಿತು. ನಂತರ ನಾಗನು ಬೆಂಕಿಯನ್ನು ಉಗುಳತೊಡಗಿದನು. ಅದು ಮೊಗ್ಗಲಾನರಿಗೆ ಏನೂ ಹಾನಿ ಮಾಡಲಿಲ್ಲ. ಆಗ ಮೊಗ್ಗಲಾನರು ತಾವು ಬೆಂಕಿಯನ್ನು ಉಗುಳಲಾರಂಬಿಸಿದರು. ಅದು ನಾಗನಿಗೆ ಉರಿಯನ್ನುಂಟು ಮಾಡಿತು. ಮೊದಲೆ ಪರ್ವತಕ್ಕೆ ಅಮುಕಿಕೊಂಡು ನಂತರ ಹೊಗೆ ಬೆಂಕಿಗಳಿಂದ ತೀವ್ರ ಒತ್ತಡಕ್ಕೆ ಗುರಿ ಮಾಡಿದಾಗ ತಲ್ಲಣಿಸಿದ ನಾಗನು ಮೊಗ್ಗಲಾನರಿಗೆ ಹೀಗೆ ಕೇಳಿದನು : ಪೂಜ್ಯರೇ ತಾವು ಯಾರು?

ನಾನು ಮೊಗ್ಗಲಾನ

ದಯವಿಟ್ಟು ತಮ್ಮ ಭಿಕ್ಷುರೂಪವನ್ನು ಪ್ರಕಟಪಡಿಸಿ.

ಆಗ ಮೊಗ್ಗಲಾನರು ತಮ್ಮ ಭಿಕ್ಷು ರೂಪದಲ್ಲಿ ಕಾಣಿಸಿದರು. ತಕ್ಷಣ ನಾಗನು ಅವರ ಬಲಕಿವಿಯಿಂದ ನುಗ್ಗಿ ಎಡ ಕಿವಿಯಿಂದ ಹೊರಗೆ ಬಂದನು. ನಂತರ ಎಡ ಕಿವಿಯಿಂದ ನುಗ್ಗಿ ಬಲಕಿವಿಯಿಂದ ಹೊರಗೆ ಬಂದನು. ಅದೇ ರೀತಿಯುಲ್ಲಿ ಬಲ ಮೂಗಿನ ಹೊಳ್ಳೆಯಲ್ಲಿ ನುಗ್ಗಿ ಎಡ ಹೊಳ್ಳೆಯಿಂದ ಹೊರ ಬಂದನು , ನಂತರ ಎಡ ಮೂಗಿನ ಹೊಳ್ಳೆಯಲ್ಲಿ ನುಗ್ಗಿ ಬಲ ಮೂಗಿನ ಹೊಳ್ಳೆಯಿಂದ ಹೊರಗೆ ಬಂದನು. ಆಗ ತಕ್ಷಣ ಮೊಗ್ಗಲಾನರು ಕಿರಿಯ ರೂಪ ತಾಳಿ ಆತನ ಬಾಯಿಯ ಮೂಲಕ ಪ್ರವೇಶಿಸಿ ಆತನ ಹೊಟ್ಟೆಯಲ್ಲಿ ಚಂಕ್ರಮಣ ನಡಿಗೆಯನ್ನು ಆರಂಭಿಸಿದರು. ಆಗ ತಕ್ಷಣ ಭಗವಾನರು ಈ ರೀತಿಯಲ್ಲಿ ಎಚ್ಚರಿಸಿದರು ಎಚ್ಚರ ಮೊಗ್ಗಲಾನ ಈತನು ಪ್ರಬಲ ನಾಗ ಎಂದರು.

ಭಗವಾನ್ ನಾಲ್ಕು ಇದ್ಧಿಪಾದಗಳು ನನ್ನಲ್ಲಿ ಚೆನ್ನಾಗಿ ಅಭಿವೃದ್ಧಿಯಾಗಿವೆ ಹಾಗೂ ನಿರಂತರ ಪುನಾರಾವತರ್ಿತವಾಗಿವೆ. ಆಭ್ಯಸಿತವಾಗಿವೆ,  ವಾಹನದಂತೆ ನಿಮರ್ಿತವಾಗಿವೆ, ಸುಸ್ಥಾಪಿತವಾಗಿದೆ, ಮತ್ತು ಚೆನ್ನಾಗಿ ನೆಲೆಯೂರಿದೆ, ಏಕತ್ರಗೂಡಿ ಘನಿಕೃತವಾಗಿದೆ, ಸರಿಯಾಗಿ ಸಾಧಿಸಲ್ಪಟ್ಟಿದೆ, ನಾನೂ ಇಂತಹ ಲಕ್ಷ ನಂದೂಪನಂದರನ್ನು ದಮಿಸಬಲ್ಲೆ ಈ ಒಬ್ಬ ನಂದೋಪನಂದ ಯಾವ ಮಹಾ ಎಂದರು.

  ಆಗ ನಾಗನು ಈ ರೀತಿಯ ಕುತಂತ್ರವನ್ನು ಯೋಚಿಸಿದನು. : ಈ ಭಿಕ್ಖುವು ಒಳ ಹೋಗಿದ್ದೇ ನನಗೆ ತಿಳಿಯಲಿಲ್ಲ ಅದರೆ ಆತನನ್ನು ಹೊರಗೆ ಕರೆಸಿಕೊಂಡು ಹೊರ ಬರುವಾಗ ಆತನನ್ನು ಹಲ್ಲುಗಳಲ್ಲಿ ಸಿಕ್ಕಿಸಿಕೊಂಡು ತಿಂದು ಬಿಡುವೆನು..ಹೀಗೆ ಯೋಜನೆಯನ್ನು ಹಾಕಿ ಆತನು ಅವರಿಗೆ ಹೀಗೆ ಮಾತಾನಾಡಿಸಿದನು.ಭಂತೆ ದಯವಿಟ್ಟು ಹೊರ ಬನ್ನಿ ನನ್ನ ಹೊಟ್ಟೆಯಲ್ಲಿ ನಡೆದಾಡುತ್ತಾ ತೊಂದರೆ ನೀಡಬೇಡಿ .ಆತನ ಮಾತನ್ನು ನಂಬಿ ಮೊಗ್ಗಲಾನರು ಹೊರ ಬಂದು ಆತನ ಮುಂದೆ ನಿಂತರು.ಅವರನ್ನು ನೋಡಿ ಒಹ್ ಇದು ಇವರ ಕೆಲಸವೇ ಎಂದು ಕೋಪೊದ್ರೇಕನಾಗಿ ತಕ್ಷಣ ನಾಗನು ಅವರ ಮೇಲೆ ವಿಷವಾಯುವನ್ನು ತನ್ನ ಮೂಗಿನಿಂದ ಬಿಟ್ಟನು. ತಕ್ಷಣ ಮೊಗ್ಗಲಾನರು ಚತುರ್ಥ ಸಮಾಧಿಗೆ ಪ್ರವೇಶಿಸಿದರು. ಈ ರೀತಿಯಾಗಿ ಮೊಗ್ಗಲಾನರು ತಮ್ಮ ಮೇಲಿನ ಆಪಾಯವನ್ನು ತಪ್ಪಿಸಿಕೊಂಡರು. ಚತುರ್ಥ ಸಮಾಧಿಯಲ್ಲಿರುವಾಗ ಒಬ್ಬನನ್ನು ಯಾರು ನಾಷವಾಗಲಿ ಗಾಯವನ್ನು ಸಹಾ ಉಂಟುಮಾಡಲಾರರು. ಅವರ ಕೂದಲಿಗೂ ಸಹಾ ಯಾವುದೇ ಹಾನಿಯಾಗಲಿಲ್ಲ. ಇದೇ ಕಾರಣಕ್ಕಾಗಿ ಭಗವಾನರು ಬೇರೆ ಯಾರನ್ನು ಸಹಾ ಆಯ್ಕೆ ಮಾಡಲಿಲ್ಲ. ಅಷ್ಟು ಕ್ಷಿಪ್ರವಾಗಿ ಚತುರ್ಥ ಸಮಾಧಿಗೆ ತಲುಪುವವರು ಬುದ್ಧರನ್ನು ಬಿಟ್ಟರೆ ಅದು ಮಹಾಮೊಗ್ಗಲಾನರೇ ಆಗಿದ್ದರು. ಈ ರೀತಿಯಾಗಿ ಮೊಗ್ಗಲಾನರು ವಿಷವನ್ನು ತಟಸ್ಥಗೊಳಿಸಿದರು.. ಅವರು ಅರಾಮವಾಗಿರುವುದನ್ನು ಕಂಡು ನಾಗನಿಗೂ ಆಶ್ಚರ್ಯವಾಯಿತು. ಅವರ ಕೂದಲಿಗೂ ಹಾನಿಯಾಗಲಿಲ್ಲವಲ್ಲ ಎಂದು ಆತನು ವಿಸ್ಮಯಗೊಂಡನು.

ಈಗ ಮೊಗ್ಗಲಾನರು ಬೃಹತ್ ಸುಪಣ್ಣದ(ಗರುಡ) ರೂಪತಾಳಿದರು. ಸುಪರ್ಣವು ನಾಗರ ಶತ್ರುವೆಂದೆ ಖ್ಯಾತಿ. ಈಗ ಸುಪಣ್ಣವು ನಂದೊಪನಂದರನ್ನು ಬೆನ್ನಟ್ಟಿತು. ಮುಂದಿನ ಭೀಕರತೆ ಅರಿತು ನಾಗನು ಯುವಕನ ರೂಪ ತಾಳಿ ಮೊಗ್ಗಲಾನರ ಪಾದಕ್ಕೆ ಬಿದ್ದನು. ಭಂತೆ ನಾನು ತಮ್ಮಲ್ಲಿ ಶರಣು ಹೋಗುತ್ತೇನೆ ಎಂದನು. ಹಾಗೂ ಅವರ ಪೂಜೆ ಮಾಡಿದನು.

ಆಗ ಮೊಗ್ಗಲಾನರು ಹೀಗೆಂದರು : ನಂದ ಭಗವಾನರು ಇಲ್ಲೆ ಇದ್ದಾರೆ ಅವರಲ್ಲಿಗೆ ಹೋಗೋಣ ಎಂದರು. ಹಾಗೂ ಭಗವಾನರಲ್ಲಿಗೆ ಕರೆದೂಯ್ದರು. ಆಗ ನಾಗನು ಭಗವಾನರಿಗೂ ವಂದಿಸಿ ಅವರ ಶರಣು ಹೋದನು..  ನಾಗರಾಜ ನೀನು ಸುಖಿಯಾಗಿರು ಎಂದು ಭಗವಾನರು ಆತನಿಗೆ ಆಶಿವರ್ಾದ ಮಾಡಿದರು. ಹಾಗೂ ಆತನಿಗೆ ಶೀಲದಲ್ಲಿ ಪ್ರತಿಷ್ಠಾಪನೆ ಮಾಡಿದರು. ನಂತರ ಭಗವಾನರು ಹಾಗೂ ಭಿಕ್ಖುಗಳು ಅಲ್ಲಿಂದ ಆನಾಥಪಿಂಡಿಕನ ಮನೆಗೆ ಹೋದರು.

ಅಲ್ಲಿ ಆನಾಥಪಿಂಡಿಕರು ಕುಶಲ ವಿಚಾರಿಸಿ ಇಂದು ತಡವೇಕೆ ಎಂದು ವಿಚಾರಿಸಿದಾಗ ಮೊಗ್ಗಲಾನರಿಗೂ ಹಾಗೂ ನಂದೊಪನಂದರಿಗೂ ಅತಿಮಾನಸ ಸ್ಪಧರ್ೆಯಿತ್ತು.

ಯಾರು ಗೆದ್ದರು?

ಮೊಗ್ಗಲಾನರು ಗೆದ್ದರು ಮತ್ತು ನಂದನು ಸೋತನು.

ಇದರಿಂದ ಆನಂದಿತನಾದ ಆನಾಥಪಿಂಡಿಕನು ಭಗವಾನರ ಸಹಿತ ಭಿಕ್ಖುಗಣಕ್ಕೆ ಮತ್ತೆ ಏಳು ದಿನ ದಾನಕ್ಕೆ ಆಹ್ವಾನ ನೀಡಿದನು.

6.4 ಅಗ್ರಶ್ರಾವಕರ ಬಗ್ಗೆ ಎಂದಿಗೂ ದ್ವೇಷ ಬೇಡ

(ಅಗ್ರಶ್ರಾವಕ ಆಯುಷ್ಮಂತ ಸಾರಿಪುತ್ತ ಮತ್ತು ಆಯುಷ್ಮಂತ ಮೊಗ್ಗಲ್ಲಾನರಿಗೆ ನಿಂದಿಸಿ ಕೋಕಾಲಿಕನು ನರಕದಲ್ಲಿ ಹುಟ್ಟಿದನು. ಸಂತರನ್ನು ನಿಂದಿಸುವುದು ಮಹಾ ಪಾಪವಾಗಿದೆ.)

ಕೋಕಾಲಿಕನು ದುಶ್ಶೀಲ ಭಿಕ್ಷು ದೇವದತ್ತನ ಶಿಷ್ಯನಾಗಿದ್ದನು. ಇವರಿಬ್ಬರು ಪರಸ್ಪರ ಹೊಗಳಿಕೊಳ್ಳುತ್ತಾ ಭಿಕ್ಷೆಯಲ್ಲಿ ಲಾಭವನ್ನು ಪಡೆಯುತ್ತಿದ್ದರು. ಒಮ್ಮೆ ಕೋಕಾಲಿಕನು ಧಮ್ಮೋಪದೇಶ ಮಾಡಲು ಹೋಗಿ ಅಸಮರ್ಥನಾಗಿ ಅಪಮಾನಿತನಾಗಿದ್ದನು.

ಈ ಕೋಕಾಲಿಕನು ಇರುವೆಡೆ ಒಮ್ಮೆ ಸಾರಿಪುತ್ರ ಮತ್ತು ಮೊಗ್ಗಲ್ಲಾನರು ಮೂರು ತಿಂಗಳ ಕಾಲ ವರ್ಷವಾಸ ಕಳೆದರು. ನಂತರ ಅಲ್ಲಿದ್ದ ಜನರು ಅಗ್ರಶ್ರಾವಕರಾದ ಸಾರಿಪುತ್ರ ಮತ್ತು ಮೊಗ್ಗಲ್ಲಾನರಿಗೆ ಸತ್ಕಾರ, ದಾನಗಳೆಲ್ಲಾ ಮಾಡಲು ಬಂದಿದ್ದರು, ಆದರೆ ಸಂತೃಪ್ತರಾದ ಅವರು ಏನನ್ನೂ ಸ್ವೀರಿಸಲಿಲ್ಲ. ಹಾಗೆಯೇ ಅವರು ಕೋಕಾಲಿಕನಿಗೂ ಏನನ್ನೂ ಕೊಡಿಸಲಿಲ್ಲ. ಇದರಿಂದ ಕ್ರುದ್ಧನಾದ ಕೋಕಾಲಿಕನು ಹೀಗೆ ಯೋಚಿಸಿದನು: ಈ ಥೇರರು ತಾವು ಸ್ವೀಕರಿಸಲಿಲ್ಲ, ನನಗೂ ಕೊಡಿಸಲಿಲ್ಲ. ಹಾಗೆಯೇ ಅಸೂಯಪರ ವರ್ತನೆ ಮಾಡಲಾರಂಭಿಸಿದಾಗ ಅವರು ಅಲ್ಲಿಂದ ಹೊರಟರು. ಇದು ಜನರಿಗೆ ಗೊತ್ತಾಗಿ ಅವರು ಕೋಕಾಲಿಕನಿಗೂ ದೂರ ಅಟ್ಟಿದರು. 

ಹೀಗೆ ನಾನು ಕೇಳಿದ್ದೇನೆ. ಒಮ್ಮೆ ಭಗವಾನರು ಶ್ರಾವಸ್ತಿಯಲ್ಲಿ ಅನಾಥಪಿಂಡಿಕನ ಜೇತವನ ಆರಾಮದಲ್ಲಿ ತಂಗಿದ್ದರು. ಆಗ ಕೋಕಾಲಿಕನು ಭಗವಾನರು ಇರುವೆಡೆಗೆ ಬಂದನು. ಭಗವಾನರಿಗೆ ವಂದಿಸಿ ಒಂದುಕಡೆ ಕುಳಿತನು. ಒಂದುಕಡೆ ಕುಳಿತ ಕೋಕಾಲಿಕನು ಭಗವಾನರಿಗೆ ಹೀಗೆ ಹೇಳಿದನು- ಭಂತೆ, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರಾಗಿದ್ದಾರೆ, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ.

ಹೀಗೆ ಹೇಳಿದ ಕೋಕಾಲಿಕ ಭಿಕ್ಷುವಿಗೆ ಭಗವಾನರು ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಉತ್ತಮರಾಗಿದ್ದಾರೆ.

ಎರಡನೆಯ ಬಾರಿಯೂ ಮತ್ತು ಮೂರನೆಯ ಬಾರಿಯೂ ಕೋಕಾಲಿಕ ಭಿಕ್ಷುವು ಭಗವಾನರಿಗೆ ಈ ರೀತಿ ಹೇಳಿದನು: ಭಂತೆ! ಯಾದಾಪಿ ನಾನು ಭಗವಾನರಲ್ಲಿ ಶ್ರದ್ಧೆ ಇಡುವೆನು ಹಾಗು ಪ್ರಸನ್ನನಾಗಿರುವೆನು. ಆದರೂ ಸಹಾ ಸಾರಿಪುತ್ತ ಹಾಗು ಮೊಗ್ಗಲ್ಲಾನರು ಕೆಟ್ಟ ವಿಚಾರವುಳ್ಳವರು, ಕೆಟ್ಟ ಇಚ್ಛೆಗಳಿಗೆ ವಶಿಯಾಗಿದ್ದಾರೆ. ಮೂರನೆಯ ಬಾರಿಯೂ ಸಹಾ ಭಗವಾನರು ಕೋಕಾಲಿಕನಿಗೆ ಈ ರೀತಿ ಹೇಳಿದರು- ಕೋಕಾಲಿಕ, ಹೀಗೆ ಹೇಳದಿರು, ಹೀಗೆ ಹೇಳದಿರು, ಕೋಕಾಲಿಕ, ಸಾರಿಪುತ್ತ ಹಾಗು ಮೊಗ್ಗಲ್ಲಾನರಲ್ಲಿ ನಿನ್ನ ಚಿತ್ತವನ್ನು ಪ್ರಸನ್ನವಾಗಿಡು, ಸಾರಿಪುತ್ತ ಹಾಗು ಮೊಗ್ಗಲ್ಲಾನರು ಅತ್ಯಂತ ಅತ್ಯುತ್ತಮರಾಗಿದ್ದಾರೆ.

ಆಗ ಕೋಕಾಲಿಕ ಭಿಕ್ಷು ಆಸನದಿಂದ ಎದ್ದು ಭಗವಾನರಿಗೆ ಪ್ರಣಾಮ ಮಾಡಿ ಪ್ರದಕ್ಷಿಣೆ ಹಾಕಿ ಹೊರಟನು. ಕೋಕಾಲಿಕ ಭಿಕ್ಷು ಹೋದ ಅಲ್ಪಕಾಲದಲ್ಲೇ ಆತನ ಶರೀರದಲ್ಲೆಲ್ಲಾ ಸಾಸುವೆ ಕಾಳಿನಷ್ಟು ಗುಳ್ಳೆಗಳು ಎದ್ದವು. ಸಾಸುವೆ ಕಾಳಿನಿಂದ ಆ ಗುಳ್ಳೆಗಳ ಆಕಾರ ಹೆಸರುಕಾಳಿನಷ್ಟಾದವು. ಹೆಸರುಕಾಳಿನಿಂದ ಅದರ ಗಾತ್ರವು ಬಟಾಣಿಕಾಳಿನಷ್ಟಾಯಿತು. ಬಟಾಣಿ ಕಾಳಿನಿಂದ ಆ ಗುಳ್ಳೆಗಳ ಗಾತ್ರವು ಗೊರಟಿನಷ್ಟಾಯಿತು. ಗೊರಟಿಯ ಗಾತ್ರದಿಂದ ಆ ಗುಳ್ಳೆಗಳು ಬೊರೆಹಣ್ಣಿನಷ್ಟಾಯಿತು. ಬೋರೆ ಹಣ್ಣಿನ ಗಾತ್ರದಿಂದ ಆ ಗುಳ್ಳೆಗಳು ನಲ್ಲಿಕಾಯಿಯಷ್ಟು ದಪ್ಪಗಾದವು. ನಲ್ಲಿಕಾಯಿ ಗಾತ್ರದಿಂದ ಆ ಗುಳ್ಳೆಗಳು ಬೇಲದಹಣ್ಣಿನಷ್ಟಾಯಿತು. ಬೇಲದಹಣ್ಣಿನಷ್ಟು ಆದಮೇಲೆ ಗುಳ್ಳೆಗಳು ಹಿಗ್ಗಿ ಒಡೆದುಹೋದವು. ಕೀವು ಹಾಗು ರಕ್ತವು ಹರಿಯಿತು. ನಂತರ ಕೋಕಾಲಿಕನು ಅದೇ ರೋಗದಿಂದ ಮರಣಿಸಿದನು. ಸಾರಿಪುತ್ತ ಹಾಗು ಮೊಗ್ಗಲ್ಲಾನರ ದ್ವೇಷಚಿತ್ತದ ಪರಿಣಾಮವಾಗಿ ಆತನು ಪದ್ಮನರಕದಲ್ಲಿ ಉದ್ಭವಿಸಿದನು.

ಆಗ ಸಹಂಪತಿ ಬ್ರಹ್ಮನು ರಾತ್ರಿ ಕಳೆಯುತ್ತಿದ್ದಂತೆ ತನ್ನ ಕಾಂತಿಯಿಂದ ಸಂಪೂರ್ಣ ಜೇತವನವನ್ನು ಪ್ರಕಾಶಗೊಳಿಸುತ್ತಾ ಭಗವಾನರು ಇರುವಲ್ಲಿಗೆ ಬಂದನು. ಭಗವಾನರ ಬಳಿಗೆ ಬಂದು ವಂದಿಸಿ ಒಂದುಕಡೆ ನಿಂತುಕೊಂಡನು. ಒಂದುಕಡೆ ನಿಂತ ಸಹಂಪತಿ ಬ್ರಹ್ಮನು ಭಗವಾನರಿಗೆ ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ಭಗವಾನರಿಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.

ಆಗ ಭಗವಾನರು ಆ ರಾತ್ರಿ ಕಳೆದನಂತರ ಭಿಕ್ಷುಗಳಿಗೆ ಆಮಂತ್ರಿಸಿದರು. ನಂತರ ಹೀಗೆ ನುಡಿದರು- ಭಿಕ್ಷುಗಳೇ, ಇಂದು ರಾತ್ರಿ ಸಹಂಪತಿ ಬ್ರಹ್ಮನು ಈ ರೀತಿ ಹೇಳಿದನು- ಭಂತೆ, ಕೋಕಾಲಿಕ ಭಿಕ್ಷುವು ಮೃತ್ಯು ಹೊಂದಿದ್ದಾನೆ, ಸತ್ತ ಕೋಕಾಲಿಕ ಭಿಕ್ಷುವು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಬಗ್ಗೆ ದ್ವೇಷಚಿತ್ತವುಳ್ಳ ಕಾರಣದಿಂದ ಪದ್ಮ ನರಕದಲ್ಲಿ ಉತ್ಪನ್ನನಾಗಿದ್ದಾನೆ. ಹೀಗೆ ಹೇಳಿ ನಂತರ ನನಗೆ ವಂದಿಸಿ, ಪ್ರದಕ್ಷಿಣೆ ಮಾಡಿ ಅಲ್ಲಿಯೇ ಅಂತದರ್ಾನನಾದನು.

ಹೀಗೆ ನುಡಿದ ನಂತರ ಓರ್ವ ಭಿಕ್ಷುವು ಭಗವಾನರೊಡನೆ ಹೀಗೆ ಕೇಳಿದನು- ಭಂತೆ, ಪದ್ಮ ನರಕದ ಆಯುವು ಎಷ್ಟು ದೀರ್ಘವಾಗಿರುತ್ತದೆ?

ಭಿಕ್ಷು, ಪದ್ಮ ನರಕದ ಆಯುವು ದೀರ್ಘವಾಗಿರುತ್ತದೆ. ಅದರ ಗಣಿಕೆ ಇಷ್ಟು ಸಹಜವಾಗಿಲ್ಲ. ಅದು ಇಷ್ಟು ವರ್ಷ, ನೂರು ವರ್ಷ ಅಥವಾ ಇಷ್ಟು ಲಕ್ಷ ವರ್ಷವೆಂದು ಸೀಮಿತವಾಗಿಲ್ಲ?

ಭಂತೆ, ಉಪಮೆ ನೀಡಬಲ್ಲಿರಾ?

ಭಿಕ್ಷು, ನೀಡಬಹುದು ಎಂದು ಭಗವಾನರು ಹೀಗೆ ನುಡಿದರು- ಭಿಕ್ಷು ಹೇಗೆ ಇಪ್ಪತ್ತು ಖಾರಿ (1 ಖಾರಿ=4 ಮಣ) ಎಳ್ಳನ್ನು ಕೊಂಡೊಯ್ಯುತ್ತಿರುವ ಕೋಸಲದ ಯಾವ ಬಂಡಿಯಿದೆಯೋ ಅದರಿಂದ ಒಬ್ಬ ಪುರುಷನು ಸಾವಿರ ವರ್ಷದ ನಂತರ ಒಂದು ಎಳ್ಳುಕಾಳನ್ನು ತೆಗೆದರೆ, ಇದೇ ಕ್ರಮದಲ್ಲಿ ಕಾಲಾಂತರದಲ್ಲಿ ಇಪ್ಪತ್ತು ಖಾರಿ ಎಳ್ಳನ್ನು ತೆಗೆಯುತ್ತಾ ಮುಗಿಸಿದರೂ ಅದು ಅಬರ್ುದ ನರಕದ ಆಯುವಿನ 20 ಜೀವನಕ್ಕೆ ಸಮನಾಗಿದೆ ಹಾಗು ನಿರಬರ್ುದ ನರಕದ ಒಂದು ಜೀವನ ಕಾಲಕ್ಕೆ ಸಮನಾಗಿದೆ. ಭಿಕ್ಷು ಅಬಬ ನರಕದ 20 ಜೀವನಗಳಿಗೆ ಸಮನಾಗಿ ಅಹಹದ ನರಕದ ಒಂದು ಜೀವನ ಸಮವಾಗಿದೆ. ಭಿಕ್ಷು ಅಹಹ ನರಕದ 20 ಜೀವನಕ್ಕೆ ಸಮವಾದುದು ಅಟಟ ನರಕದ ಒಂದು ಜೀವನ ಕಾಲ. ಅಟಟ ನರಕದ 20 ಜೀವನಗಳಿಗೆ ಸಮನಾದುದು ಕುಮುದ ನರಕದ ಒಂದು ಜೀವನ. ಭಿಕ್ಷು ಕುಮುದ ನರಕದ 20 ಜೀವನಗಳಿಗೆ ಸಮನಾದುದು ಸೌಗಂಧಿಕಾ ನರಕದ ಒಂದು ಜೀವನಕಾಲ. ಭಿಕ್ಷು ಸೌಗಂಧಿಕಾ ನರಕದ 20 ಜೀವನಕ್ಕೆ ಸಮನಾದುದು ಉತ್ಪಲ ನರಕದ ಒಂದು ಜೀವನಕಾಲ. ಉತ್ಪಲ ನರಕದ 20 ಜೀವನಕ್ಕೆ ಸಮನಾದುದು ಪುಂಡರಿಕ ನರಕದ ಒಂದು ಜೀವನ ಕಾಲ. ಪುಂಡರಿಕ ನರಕದ 20 ಜೀವನ ಕಾಲಕ್ಕೆ ಸಮನಾದುದು ಪದ್ಮ ನರಕದ ಒಂದು ಜೀವನಕಾಲ. ಭಿಕ್ಷು ಸಾರಿಪುತ್ತ ಹಾಗು ಮೊಗ್ಗಲ್ಲಾನರ ಪ್ರತಿ ದ್ವೇಷಚಿತ್ತ ಮಾಡಿ ಕೋಕಾಲಿಕನು ಪದ್ಮ ನರಕದಲ್ಲಿ ಉತ್ಪತ್ತಿಯಾಗಿದ್ದಾನೆ. ಹೀಗೆ ಹೇಳಿ ಸುಗತರಾದ ಶಾಸ್ತರು ಹೀಗೆ ಹೇಳಿದರು-

1. ಅಲ್ಲಿ ಉತ್ಪನ್ನವಾಗುವ ಪುರುಷರ ಮುಖದಲ್ಲಿ ಕೊಡಲಿಯು ಉದ್ಭವಿಸುತ್ತದೆ. ಮೂರ್ಖ ಕೆಟ್ಟ ಮಾತು ಆಡುತ್ತಾ ಅದರಿಂದಲೇ ಕತ್ತರಿಸಲ್ಪಡುತ್ತಾನೆ.

2. ಯಾರು ನಿಂದನೀಯನ ಪ್ರಶಂಸೆ ಮಾಡುವನೋ ಅಥವಾ ಪ್ರಶಂಸನೀಯರ ನಿಂದೆ ಮಾಡುತ್ತಾನೋ ಆ ಮೂರ್ಖನು ಪಾಪ ಮಾಡುತ್ತಾನೆ ಮತ್ತು ಆ ಪಾಪದ ಕಾರಣದಿಂದ ಆತನು ಸುಖವನ್ನು ಪ್ರಾಪ್ತಿಮಾಡುವುದಿಲ್ಲ. 

3. ಯಾರು ಜೂಜಿನಲ್ಲಿ ತನ್ನ ಸರ್ವಸ್ವ ಧನವನ್ನು ಕಳೆದುಕೊಳ್ಳುವನೋ ಅದು ಅಲ್ಪಹಾನಿಯೇ ಆಗಿದೆ. ಆದರೆ ಎಲ್ಲಕ್ಕಿಂತ ದೊಡ್ಡ ಹಾನಿ ಯಾವುದೆಂದರೆ ತಥಾಗತರ ಬಗ್ಗೆ ಮನವನ್ನು ದೂಷಿತ ಮಾಡುವುದಾಗಿದೆ.

4. ಆರ್ಯ ಪುರುಷರ ನಿಂದೆ ಮಾಡುವವನು ತನ್ನ ಮನ ಮತ್ತು ವಚನವನ್ನು ಪಾಪದಲ್ಲಿ ಹಾಕಿ ನರಕದಲ್ಲಿ ಉದ್ಭವಿಸುತ್ತಾನೆ. ಅಲ್ಲಿನ ಆಯು ಒಂದು ಲಕ್ಷ ನಿರಬರ್ುದ ಹಾಗು 41 ಅಬರ್ುದವಾಗಿದೆ.

5. ಅಸತ್ಯವಾದಿಯು ನರಕಕ್ಕೆ ಹೋಗುವನು ಮತ್ತು ಯಾರು ಮಾಡಿರುವುದನ್ನು ಇಲ್ಲವೆನ್ನುತ್ತಾನೋ ಆತನು ಸಹಾ ಹೀನಕರ್ಮ ಮಾಡುವ ಈ ಇಬ್ಬರು ಪರಲೋಕದಲ್ಲಿ ಸಮಾನರಾಗುತ್ತಾರೆ.

6. ಯಾರು ದೋಷರಹಿತರಾದ ಶುದ್ಧ, ನಿರ್ಮಲ, ಪುರುಷರಿಗೆ ದೋಷಿಸುತ್ತಾರೋ ಅವರ ಪಾಪ ಎದುರು ದಿಕ್ಕಿನಲ್ಲಿ ಬರುತ್ತಿರುವ ಗಾಳಿಗೆ ಧೂಳನ್ನು ಎಸೆದಂತೆ ಅದೇ ಮೂರ್ಖನ ಮೇಲೆ ಬೀಳುತ್ತದೆ.

7. ಯಾರು ಶ್ರದ್ಧಾರಹಿತನೋ, ಯಾರು ಬೇರೆಯವರು ದಾನ ಮಾಡುತ್ತಿದ್ದರೆ ಸಹಿಸಲಾರನೋ, ಯಾರ ಮಾತನ್ನು ಕೇಳುವುದಿಲ್ಲವೋ, ಜಿಪುಣನೋ, ಚಾಡಿತನದಲ್ಲಿ ತಲ್ಲೀನನೋ, ಲೋಭದಲ್ಲಿ ಬಿದ್ದಿರುವನೋ, ಅವನು ವಚನದಿಂದ ಪರರನ್ನು ನಿಂದಿಸುವನು.

8. ದುರ್ವಚನಿಯು, ಸುಳ್ಳುಗಾರನು, ಅನಾರ್ಯನೂ ಬುದ್ಧಿನಾಶಕನೂ, ಪಾಪಿಯು, ಕೆಟ್ಟಕರ್ಮನೂ, ಅಧಮ ಪುರುಷನು ಮತ್ತು ಕೆಳನರಕದಲ್ಲಿ ಹೋಗುವಂತಹ ನೀನು ಇಲ್ಲಿ ಹೆಚ್ಚು ಮಾತು ಆಡದಿರು.

9. ನೀನು ಪಾಪಿ ಆಗಿದ್ದೂ ಅಲ್ಲದೆ, ನಂತರ ನಿಂದೆಮಾಡಿ ನಿನ್ನ ಅಹಿತವನ್ನು ಮಾಡಿಕೊಳ್ಳುತ್ತಿದ್ದೀಯೆ. ಅನೇಕ ಪಾಪಮಾಡಿ ಬಹುಕಾಲ ಹಳ್ಳದಲ್ಲಿ ಬೀಳುವೆ.

10. ಯಾರ ಕರ್ಮವು ನಷ್ಟವಾಗುವುದಿಲ್ಲ, ಮಾಡುವವನು ಅದರ ಫಲ ಪ್ರಾಪ್ತಿಮಾಡುತ್ತಾನೆ. ಪಾಪಕಾರಿ ಮೂರ್ಖನು ತಾನಾಗಿಯೇ ಪರಲೋಕದಲ್ಲಿ ದುಃಖದಲ್ಲಿ ಬೀಳುತ್ತಾನೆ.

11. ಆತನು ಮುಳ್ಳುಗಳಿಂದ ಹಾಗು ತೀಕ್ಷ್ಣ ಅಗ್ರವುಳ್ಳ ಲೋಹದ ಭಜರ್ಿಗಳಿಂದ ಆವೃತವಾದ ನರಕದಲ್ಲಿ ಬೀಳುತ್ತಾನೆ. ಅಲ್ಲಿ ಕಾದ ಲೋಹದ ಗುಂಡುಗಳೇ ಅವನ ಭೋಜನವಾಗಿರುತ್ತದೆ.

12. ನರಕವಾಸಿಗಳಾದ ಯಾರು ಅಲ್ಲಿ ಪ್ರಿಯವಚನ ನುಡಿಯಲಾರರು. ಪ್ರಸನ್ನ ಮುಖದವರು ಹಾಗು ರಕ್ಷಕರೂ ಅಲ್ಲಿ ದೊರೆಯಲಾರದ ಬೆಂಕಿಯಿಂದ ಆವೃತರಾದ ಅವರು ಬೆಂಕಿಯ ಹಾಸಿಗೆಯಲ್ಲಿ ಮಲಗುತ್ತಾರೆ. ಪ್ರಜ್ವಲಿಸುತ್ತಿರುವ ಬೆಂಕಿಯಲ್ಲೇ ಪ್ರವೇಶಿಸಬೇಕಾಗುತ್ತದೆ.

13. ನರಕವಾಸಿಗಳು ಜಾಲಗಳಲ್ಲಿ ಬಂಧಿತರಾಗಿ ಸುತ್ತಿಗೆಗಳಿಂದ ಹೊಡೆದಾಡಿಕೊಳ್ಳುವರು (ಹೊಡೆಯುವರು). ಅವರು ಬಹು ಘೋರ ಅಂಧಕಾರದಲ್ಲಿ ಬೀಳುವರು ಹಾಗು ಅದು ಉನ್ನತ ಪೃಥ್ವಿಯ ರೀತಿ ಹರಡಿರುತ್ತದೆ.

14. ಬೆಂಕಿಯ ಸಮಾನವಾದ ಲೋಹದ ದೊಡ್ಡ ಪಾತ್ರೆಯಲ್ಲಿ ಬೀಳುವರು ಮತ್ತು ಬೆಂಕಿಯ ರೀತಿ ಅದರಲ್ಲಿ ಚಿರಕಾಲ ಮೇಲೆ-ಕೆಳಗೆ ಬಂದು ಹೋಗುತ್ತಾ ಬೇಯುವರು.

15. ಆಗ ಕೀವು ಹಾಗು ರಕ್ತದಿಂದ ಆ ಪಾಪಕಾರಿಯು ಒದ್ದಾಡುತ್ತಾ ಬೇಯುತ್ತಾನೆ. ಯಾವರೀತಿ ಎಂದರೆ ಎಲ್ಲೆಲ್ಲಿ ಒದ್ದಾಡುತ್ತಾನೋ ಅಲ್ಲೆಲ್ಲಾ ಕೀವುರಕ್ತದಿಂದ ಸ್ರವಿಸಿ ಮಲಿನವಾಗುತ್ತಾನೆ.

16. ಪಾಪಿಯು ಮಲಿನವಾದ ನೀರಿನಲ್ಲಿ ಈ ರೀತಿಯಾಗಿ ಬೇಯುತ್ತಾನೆ. ಹೇಗೆಂದರೆ ಆತನು ಈಜಲಾರ. ಏಕೆಂದರೆ ನಾಲ್ಕು ಕಡೆಯೂ ಕಡಾಯಿಗಳಿರುತ್ತವೆ.

17. ಗಾಯಗೊಂಡ ಶರೀರದಿಂದ ಆತನು ತೀಕ್ಷ್ಣವಾದ ಅಸಿಪತ್ರ ವನದಲ್ಲಿ ಪ್ರವೇಶಿಸುತ್ತಾನೆ. ನರಕವಾಸಿಗಳು ಆತನ ನಾಲಿಗೆಯನ್ನು ಹಿಡಿದು ಮುಳ್ಳುಗಳಿಂದ ವಧಿಸುತ್ತಾರೆ.

18. ಆಗ ಆತನ ತೀಕ್ಷ್ಣಧಾರೆಯ ಕತ್ತಿಗೆ ಸಮಾನವಾದ ತೀಕ್ಷ್ಣ ಧಾರೆಯುಳ್ಳ ದುಸ್ತರವಾದ ವೈತರಿಣಿ ನದಿಯಲ್ಲಿ ಬೀಳುತ್ತಾನೆ. ಪಾಪಿಯಾಗಿರುವ ಮೂರ್ಖನು ಅದರಲ್ಲೇ ಬೀಳುತ್ತಾನೆ.

19. ಅಲ್ಲಿ ಕಪ್ಪಾದ ಮತ್ತು ಬಣ್ಣಗಳ ಕಾಗೆಯು ಅವರನ್ನು ತಿನ್ನುತ್ತದೆ. ನಾಯಿಗಳು, ನರಿಗಳು, ವ್ಯಾಘ್ರ, ಹದ್ದುಗಳು ಮತ್ತು ಕಾಗೆಗಳು ಅವರನ್ನು ತಿನ್ನುತ್ತವೆ.

20. ಪಾಪಕಾರಿ ಮಾನವ ನರಕದಲ್ಲಿ ಯಾವ ಜೀವನದ ಅನುಭವ ಪಡೆಯುವನೋ,  ಅದು ದುಃಖಕರವಾಗಿದೆ. ಆದ್ದರಿಂದ ಮನುಷ್ಯನು ಪ್ರಮಾದರಹಿತನಾಗಿ ತನ್ನ ಉಳಿದ ಜೀವನವನ್ನು ಒಳ್ಳೆಯ ಕರ್ಮದಿಂದ ಜೀವಿಸಲಿ.

21. ಪದ್ಮ ನರಕವು ಉತ್ಪನ್ನವಾಗುವವರ ಆಯುವು ಪಂಡಿತರ ಗಣಕದಿಂದ ಎಳ್ಳನ್ನು ಒಂದೊಂದಾಗಿ ಎಣಿಸುವಷ್ಟು ದೀರ್ಘಯುತವಾಗಿದೆ. ಅದು 4 ನರಕ ಕೋಟಿ ಮತ್ತು 1200 ಕೋಟಿಗೆ ಸಮನಾಗಿದೆ.

22. ಇಲ್ಲಿ ಎಷ್ಟೆಲ್ಲವೂ ದುಃಖವನ್ನು ನೀಡಲಾಗಿದೆಯೋ, ಅದೆಲ್ಲವನ್ನು ಅವರು ಅನುಭವಿಸಬೇಕಾಗಿದೆ. ಆದ್ದರಿಂದ ಪವಿತ್ರ ಉತ್ತಮ ಸಾಧುಗಳಲ್ಲಿ ಪ್ರತಿ ತಮ್ಮ ಮನಸ್ಸನ್ನು ಹಾಗು ವಚನವನ್ನು ಸದಾ ಸಂಯಮವಾಗಿಡಿ.

ಒಮ್ಮೆ ಭಿಕ್ಷುಗಳು ಆತನ ಬಗ್ಗೆ ಚಚರ್ಿಸುತ್ತಿರುವಾಗ ಅಲ್ಲಿಗೆ ಬಂದಂತಹ ಭಗವಾನರು ಹೀಗೆ ಹೇಳಿದರು: ಭಿಕ್ಷುಗಳೇ, ಕೋಕಾಲಿಕನು ಈಗ ಮಾತ್ರವಲ್ಲ, ಹಿಂದಿನ ಜನ್ಮದಲ್ಲಿಯೂ ಸಹಾ ತನ್ನ ನಾಲಿಗೆಯ ನಿಯಂತ್ರಣ ತಪ್ಪಿ ಸಾವನ್ನು ಅಪ್ಪಿದ್ದಾನೆ ಎಂದರು. ನಂತರ ಭಿಕ್ಷುಗಳ ಕೋರಿಕೆಯಂತೆ ಆತನ ಹಿಂದಿನ ಜನ್ಮವನ್ನು ತಿಳಿಸಿದರು.

ಒಮ್ಮೆ ಹಿಮಾಲಯದ ಸರೋವರದಲ್ಲಿ ಆಮೆಯೊಂದು ಇರುತ್ತಿತ್ತು. ಒಂದುದಿನ ಎರಡು ಯುವ ಹಂಸಗಳು ಆಹಾರವನ್ನು ಅನ್ವೇಷಿಸುವಾಗ ಆತನೊಂದಿಗೆ ಪರಿಚಯ ಬೆಳೆಸಿದವು. ಅಲ್ಪಕಾಲದಲ್ಲೇ ಅವರೆಲ್ಲಾ ಮಿತ್ರರಾದರು. ಒಂದುದಿನ ಹಂಸವು ಆಮೆಗೆ ಹೀಗೆ ಹೇಳಿತು: ಮಿತ್ರ ಹಿಮಾಲಯದಲ್ಲಿ ಚಿತ್ರಕೂಟ ಪರ್ವತವೆಂಬುದೊಂದಿದೆ. ಅದು ಸುವರ್ಣ ವರ್ಣದ್ದು. ಅದು ವಾಸಿಸಲು ಅತ್ಯಂತ ಮಧುರವಾದುದು, ನಮ್ಮೊಂದಿಗೆ ಅಲ್ಲಿ ಬರಲು ಇಚ್ಛಿಸುವೆಯಾ?

ನನಗೆ ಅಂತಹ ಆಸೆಯಿದೆ, ಆದರೆ ನಾನು ಅಲ್ಲಿಗೆ ಹೇಗೆತಾನೇ ಬರಬಲ್ಲೆ.

ನೀನು ಪೂರ್ಣವಾಗಿ ಬಾಯಲ್ಲಿ ನಿಯಂತ್ರಣವಿರಿಸಿದ್ದೇ ಆದರೆ ನಾವು ಕರೆದೊಯ್ಯಬಲ್ಲೆವು.

ಅದಕ್ಕೆ ಆಮೆ ಒಪ್ಪಿತು. ಆಗ ಹಂಸಗಳು ಗಟ್ಟಿಯಾದ ಕೋಲೊಂದನ್ನು ತೆಗೆದುಕೊಂಡು ಬಂದವು. ಆಮೆಗೆ ನಡುವೆ ಕಚ್ಚಿಕೊಂಡು ಬಾಯ್ಬಿಡದೆ ಹಾಗೇ ಇರಲು ಸೂಚಿಸಿ, ತಾವು ಎರಡು ಬದಿಯಲ್ಲಿ ಕಚ್ಚಿಕೊಂಡು ಆಕಾಶದಲ್ಲಿ ಹಾರಿದವು. 

ಹಾಗೆ ಅವು ಆಕಾಶದಲ್ಲಿ ಹಾರುತ್ತಿರುವಾಗ, ಭೂಮಿಯಲ್ಲಿದ್ದ ಕೆಲ ಹುಡುಗರು ನೋಡಲ್ಲಿ, ಹೇಗೆ ಆ ಹಂಸಗಳು ಆಮೆಯನ್ನು ತೆಗೆದುಕೊಂಡು ಹೋಗುತ್ತಿವೆ ಎಂದರು. ಅದು ಕೇಳಿದ ಆಮೆಗೆ ಕೋಪವುಂಟಾಗಿ ಇದರಿಂದ ನಿಮಗೇನು? ಎಂದು ಹೇಳಲು ಬಾಯಿಬಿಟ್ಟಿತು. ತಕ್ಷಣ ಅಕಾಶದಿಂದ ವಾರಣಾಸಿಯ ನಗರದ ಅರಮನೆಯ ಭೂಮಿಗೆ ಬಿದ್ದು ಎರಡು ತುಂಡಾಗಿ ಸತ್ತಿತು. 

ಹೀಗೆ ಕೋಕಾಲಿಕನ ಹಿಂದಿನ ಜನ್ಮದ ವಿವರ ತಿಳಿಸಿ, ಈ ಗಾಥೆಯನ್ನು ತಿಳಿಸಿದರು.

ಯಾವ ಭಿಕ್ಷುವು ನಾಲಿಗೆಯಲ್ಲಿ ಸಂಯಮದಿಂದಿರುವನೋ, ಪ್ರಾಜ್ಞನಂತೆ ಮಾತನಾಡಬಲ್ಲನೋ, ಯಾರು ಅಹಂಕಾರಿಯಲ್ಲದೆ ನಮ್ರನೋ, ಯಾರು ಧಮ್ಮವನ್ನು ಅಕ್ಷರ ಹಾಗು ಅರ್ಥವೊಂದರಲ್ಲಿಯೇ ವಿವರಿಸಬಲ್ಲನೋ, ಅಂತಹವನ ನುಡಿಗಳು ಅತ್ಯಂತ ಮಧುರವಾಗಿರುತ್ತದೆ.

- ಂ0ಂ  

Saturday, November 5, 2022

5. ಮೊಗ್ಗಲಾನರ ಅತಿಮಾನಸ ಶಕ್ತಿಗಳು

 5. ಮೊಗ್ಗಲಾನರ ಅತಿಮಾನಸ ಶಕ್ತಿಗಳು



   ಬುಧ್ಧಭಗವಾನರ ಶಿಷ್ಯಗಣವು ಸಮಾನ್ಯವಾದುದಲ್ಲ ಒಬ್ಬೊಬ್ಬರಿಗೆ ಒಂದೊಂದು ಪ್ರತಿಭೆಯಿತ್ತು. ಉದಾಹರಣೆಗೆ ಅಯುಷ್ಮಂತ ಅನುರುದ್ಧರವರಿಗೆ ಹಾಗೇಯೆ ಭಿಕ್ಖುಣಿ ಸಕುಲರವರಿಗೆ ದಿವ್ಯದೃಷ್ಟಿಯಿತ್ತು, ಅವರು ಮಾನವಾತೀತವಾದ  ಕರ್ಮಫಲಗಳನ್ನು ಅದಕ್ಕೆ ಕಾರಣವಾದ ಹಿಂದಿನ ಜನ್ಮಗಳ ಕರ್ಮಗಳನ್ನು ಅರಿಯುತ್ತಿದ್ದರು, ಹಾಗೆಯೇ  ಭವಿಷ್ಯದ ಆಗುಹೋಗುಗಳನ್ನು ಇತ್ಯಾದಿಗಳನ್ನು ದಿವ್ಯದೃಷ್ಟಿಯಿಂದ ಅರಿಯುತ್ತಿದ್ದರು. ಅದರಂತೆಯೇ ಭಿಕ್ಖು ಶೋಭಿತರವರು ಮತ್ತು ಭಿಕ್ಖುಣಿ ಭದ್ದ ಕಪಿಲಾನಿರವರು ಇಷ್ಟಪಟ್ಟಷ್ಟು ಹಿಂದಿನ ಜನ್ಮಗಳನ್ನು ಅರಿಯುವ ಅತಿಮಾನಸ ಶಕ್ತಿಯನ್ನು ಹೊಂದಿದ್ದರು. ಹಾಗೇಯೇ ಬಿಕ್ಖು ಸಗಾಲೊರವರು ತೇಜೋಕಸಿಣದ ಮೇಲೆ ಅಪಾರವಾದ ಪ್ರಭುತ್ವವನ್ನು ಹೊಂದಿದ್ದರು. ಹಾಗೆಯೇ ಚುಲ್ಲ ಪಂಥಕರವರು ತನ್ನಂತೆ ಇರುವ ಬೇಕಾದಷ್ಟು ಶರೀರಗಳನ್ನು ಸೃಷ್ಟಿಸುತ್ತಿದ್ದರು. ಹಾಗೆಯೇ ಪಿಲಿಂದ ಭಿಕ್ಖುವು ದಿವ್ಯ ಜೀವಿಗಳ ಸಂಪರ್ಕದಲ್ಲಿ ಇರುತ್ತಿದ್ದರು. ಪಿಂಡೋಲ ಭಾರದ್ವಜರು ಗಾಳಿಯಲ್ಲಿ ಹಾರುವ ಶಕ್ತಿಯನ್ನು ಪಡೆದಿದ್ದರು, ಹೀಗೆಯೇ ಅನೇಕ ಭಿಕ್ಖುಗಳು ಅನೇಕಾನೇಕ ಅತಿಮಾನಸ ಶಕ್ತಿಗಳನ್ನು ಪಡೆದಿದ್ದರು. ಅದರೇ ಮಹಾ ಮೊಗ್ಗಲಾನರವರು ಅವರೆಲ್ಲರ ಶಕ್ತಿಗಳನ್ನು ಅಡಕವಾಗಿರಿಸಿಕೊಂಡಿದ್ದರು. ಇದ್ದಿ ಶಕ್ತಿಗಳಲ್ಲಿ ಹಾಗೂ ಅಭಿಜ್ಞಾಶಕ್ತಿಗಳಲ್ಲಿ ಬುದ್ಧರ ನಂತರ ಅವರೇ ದ್ವಿತೀಯರಾಗಿದ್ದರು. ಅವರಂತೆಯೇ ಸ್ತ್ರೀಯರಲ್ಲಿ ಭಿಕ್ಖುಣಿ ಉಪ್ಪಲಾವಣ್ಣರವರು ಇದ್ದಿಗಳಲ್ಲಿ ಅಗ್ರರಾಗಿದ್ದರು. ಇಲ್ಲಿ ಮೊಗ್ಗಲಾನರ ಅತಿಮಾನಸ ಶಕ್ತಿಗಳ ಪರಿಚಯವನ್ನು ನೀಡಲಿದ್ದೇನೆ. ಅವರು ತಾವು ಇಷ್ಟ ಪಟ್ಟ ರೂಪವನ್ನು ಪಡೆಯಬಲ್ಲವರಾಗಿದ್ದರು. ಅನೇಕ ರೂಪಗಳನ್ನು ಏಕ ಕಾಲದಲ್ಲಿ ಪಡೆಯಬಲ್ಲವ ರಾಗಿದ್ದರು. ಅವರು ಸುನೇರು ಪರ್ವತವನ್ನೇ ಹುರುಳಿ ಬೀಜದಂತೆ ಅಪ್ಪಚ್ಚಿ ಮಾಡಬಲ್ಲರು. ಇಡೀ ಪೃಥ್ವಿಯನ್ನು ತಮ್ಮ ಕೈಯಲ್ಲಿ ಬುಗುರಿಯಂತೆ ಆಡಿಸುವವರಾಗಿದ್ದರು. ಹಾಗೆಯೇ ಮಿಗಾರ ಮಾತೆ ಭವನದ ನಿಮರ್ಾಣಕ್ಕೂ ಮೇಲ್ವಿಚಾರಕರಾಗಿಯು ಅವರೇ ಸಾರಥ್ಯವನ್ನು ವಹಿಸಿದ್ದರು. ಸಿಲಾವ ಎಂಬುವವನಿಗೆ ಅಜಾತಶತ್ರುವು ಕೊಲ್ಲಲು ಯೋಜನೆ ಹಾಕಿದಾಗ ಮೊಗ್ಗಲಾನರು ಅದನ್ನು ಆತನಿಗೆ ತಿಳಿಸಿ ಆತನನ್ನು ಕಾಪಾಡುತ್ತಾರೆ. ಹಾಗೇಯೇ ಕೋಲಿಯಪುತ್ತನೆಂಬುವವನು ಮೊಗ್ಗಲಾನರ ಶಿಷ್ಯನಾಗಿದ್ದನು ಆತನು ಅಕಾಲಮರಣಕ್ಕೆ ಗುರಿಯಾಗಿ ನಂತರ ಮನೊಕಾಯಕ ದೇವನಾಗುತ್ತಾನೆ. ಯಾವಾಗ ದೇವದತ್ತನು ಬುದ್ದರ ವಿರುದ್ಧ ಕೊಲ್ಲಲು ಯೋಜನೆಗಳನ್ನು ಹಾಕುತ್ತಾನೋ ಆಗ ಇದು ಮನೋಕಾಯಕ ದೇವನಿಗೆ ಗೊತ್ತಾಗಿ ಆತನು ಮೊಗ್ಗಲಾನರಿಗೆ ತಿಳಿಸುತ್ತಾನೆ. ಅವರು ತಮ್ಮ ದಿವ್ಯ ದೃಷ್ಟಿಯಲ್ಲಿ ಅದನ್ನು ಪರೀಕ್ಷಿಸಿ ಅದನ್ನು ಭಗವಾನರಿಗೆ ತಿಳಿಸುತ್ತಾರೆ. ಅದರೆ ಭಗವಾನರು ಎಲ್ಲವನ್ನು ಬಲ್ಲವರು ಅವರು ತಥಾಗತರನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ.ಬೋದಿಸತ್ವರ ಪುತ್ರ ರಾಹುಲನಿಗೂ ಸಾರಿಪುತ್ತರು ಉಪದೇಶಕರಾಗಿದ್ದರೆ ಮೊಗ್ಗಲಾನರು ಕಮ್ಮವಾಚಾರಿಯ ಅಂದರೆ ಗುರುಗಳಾಗಿದ್ದರು. ಹಾಗೆಯೇ ಸದಾಕಾಲ ಭಿಕ್ಖುಗಳ ಮೇಲೆ ಅವರ ಸಾಧನೆಗಳ ಮೇಲೆ ಅವರು ಸದಾ ಗಮನವನ್ನು ಇಟ್ಟಿರುತ್ತಿದ್ದರು.   ಅವರ ಅತೀಂದ್ರಿಯ ಸಾಧನೆ ಹಾಗೂ ಮಹಾ ಬಿಕ್ಖುಸಂಘದ ನಿರ್ವಹಣೆ ಕುರಿತು ವಂಗೀಸರು ಬುದ್ಧರ ಉಪಸ್ಥಿತಿಯಲ್ಲಿಯೇ ಗಾಥೆಗಳಿಂದ ವಣರ್ಿಸಿದ್ದಾರೆ. 

ವಂಗೀಸ ಥೇರರು ಮೊಗ್ಗಲಾನರಿಗೇ ಹೀಗೆ ಪ್ರಶಂಸಸಿದರು :

ಭಿಕ್ಖುಗಳೆ ತ್ರಿವಿಧದ ಜ್ಞಾನವನ್ನು ಪಡೆದು, 

ಯಾರು ಮೃತ್ಯುವನ್ನೇ ಹಿಂದೆ ಹಾಕಿದರೋ

ಅಂತಹ ಋಷಿಯನ್ನು ಸೇವಿಸಿ,  ಅವರು ಪರ್ವತದ ಬದಿಯಲ್ಲಿಹರು

ಅವರು ತೀರಗಳನ್ನು ದಾಟಿದವರು ದುಃಖಕ್ಕೆ ಅತೀತರು.

ಮೊಗ್ಗಲಾನರು ಇದ್ಧಿಶಕ್ತಿಯುಳ್ಳವರಲ್ಲೆ ಪರಮಶ್ರೇಷ್ಟರು

ಪ್ರತಿಯೊರ್ವರ ಚಿತ್ತಗಳನ್ನು ತಮ್ಮ ಚಿತ್ತದಿಂದ ನೋಡಬಲ್ಲವರು

ಮನಸ್ಸುಗಳನ್ನು ಹುಡುಕುವವರು

ಪೂರ್ಣವಾಗಿ ಮುಕ್ತವಾದವರು, ಅಂಟುವಿಕೆಯಿಂದ ಮುಕ್ತರಾದವರು

ಹೀಗಿದ್ದರೂ ಅವರು ಗೋತಮರನ್ನು ಸೇವೆ ಮಾಡುವರು

ಅವರು ಅನೇಕಾನೇಕ ಸದ್ಗುಣ ಸಂಪನ್ನರು

ಋಷಿಯು ಎಲ್ಲ ಶೀಲಗಳನ್ನು ಹೊಂದಿದ್ದಾರೆ

ಅವರು ತೀರಗಳನ್ನು ದಾಟಿದವರು ದುಃಖಕ್ಕೆ ಅತೀತರು.

5.1 ಭಗವಾನರೇ ಮೊಗ್ಗಲಾನರಿಗೇ ಪ್ರಶಂಸೆ ಮಾಡಿದ ಸುತ್ತ

್ತಪಸಾದ ಕಂಪನ ಸುತ್ತ (ಮೊಗ್ಗಲಾನ ಸುತ್ತ)

    ಒಮ್ಮೆ ಭಗವಾನರು ಶ್ರಾವಸ್ಥಿಯ ಪೂರ್ವ ಆರಾಮದ ವಿಗಾರಪಸಾದದಲ್ಲಿ(ಭವನದಲ್ಲಿ)  ತಂಗಿದ್ದರು. ಆ ಸಮಯದಲ್ಲಿ ಆ ಭವನದ ಕೆಳ ಮಹಡಿಯಲ್ಲಿ ಅಸಂಖ್ಯಾತ ಭಿಕ್ಷುಗಳು ವಾಸಿಸುತ್ತ್ತಿದ್ದರು. ಅವರು ಅಲ್ಲಿ ಅತಿಬಿಗಿಯಾದ ವಾತವರಣ ನಿಮರ್ಿಸಿದ್ದರು, ಅಪಾರ ಗದ್ದಲ, ಜೋರುಧನಿಯಲ್ಲಿ ಮಾತುಗಳು, ಸಡಿಲವಾದ ಮಾತುಗಳು, ಹೊಣೆಗಾರಿಕೆಯಿಲ್ಲದ ಮಾತುಕತೆ,ಎಚ್ಚರವಿಲ್ಲದ ಮನಸ್ಥಿತಿ, ಜಾಗಾರೂಕಹೀನತೆ, ಏಕಾಗ್ರತಾಹೀನತೆ, ಮತ್ತು ಚದುರಿದ ಮನಸ್ಸನ್ನು ಹೊಂದಿ ಇಲ್ಲಿ ಭಿಕ್ಖುಗಳು ಸೇರಿದ್ದರು. ಅವರ ಇಂದ್ರಿಯಗಳು ಸಡಿಲವಾಗಿತ್ತು.

    ಆಗ ಭಗವಾನರು ಮೊಗ್ಗಲಾನರಿಗೆ ಹೀಗೆ ಹೇಳಿದರು, ಮೊಗ್ಗಲಾನ ನಿನ್ನ ಸಹ ಭಿಕ್ಖುಗಳು ಕೆಳ ಮಹಡಿಯಲ್ಲಿ ಅಸಂಖ್ಯಾತ ಭಿಕ್ಷುಗಳು ವಾಸಿಸುತ್ತ್ತಿದ್ದಾರೆ. ಅವರು ಅಲ್ಲಿ ಅತಿಬಿಗಿಯಾದ ವಾತವರಣ ನಿಮರ್ಿಸಿದ್ದರು, ಅಪಾರ ಗದ್ದಲ, ಜೋರುಧನಿಯಲ್ಲಿ ಮಾತುಗಳು, ಸಡಿಲವಾದ ಮಾತುಗಳು, ಹೊಣೆಗಾರಿಕೆಯಿಲ್ಲದ ಮಾತುಕತೆ,ಎಚ್ಚರವಿಲ್ಲದ ಮನಸ್ಥಿತಿ, ಜಾಗಾರೂಕಹೀನತೆ, ಏಕಾಗ್ರತಾಹೀನತೆ, ಮತ್ತು ಚದುರಿದ ಮನಸ್ಸನ್ನು ಹೊಂದಿದ್ದಾರೆ. ಹೋಗು ಮೊಗ್ಗಲಾನ ಅವರಲ್ಲಿ ಭೀತಿಯನ್ನುಂಟು ಮಾಡು.

ಅದಕ್ಕೆ ಪ್ರತಿಕ್ರಿಯೆಸಿದ ಮೊಗ್ಗಲಾನರು, ಸರಿ ಭಗವಾನ್ ಎಂದು ತಮ್ಮ ಪಾದದ ಅಂಗುಷ್ಟದಿಂದ ನೆಲವನ್ನು ಅದುಮಿದರು. ತಕ್ಷಣ ಇಢೀ ಮಿಗಾರ ಭವನವು ನಡುಗಿತು.. ಆಗ ಆ ಭಿಕ್ಖುಗಳೆಲ್ಲಾ ಭಯಭೀತರಾಗಿ ಭವನದ ಒಂದು ಭಾಗದಲ್ಲಿ ನಿಂತರು. ಅವರ ಕೂದಲುಗಳೆಲ್ಲಾ ನಿಂತುಬಿಟ್ಟಿತ್ತು..

  ಆಗ ಭಗವಾನರು ಅವರಿಗೆ ಈ ರೀತಿಯಲ್ಲಿ ಏಕೆ ನಿಂತಿರುವಿರಿ ಎಂದು ಕೇಳಿದರು.. ಅವರು ಭವನದ ಕಂಪನಮಯವೇ ಈ ಭೀತಿಗೆ ಕಾರಣವೆಂದರು. ಆಗ ಭಗವಾನರು ಅವರ ಗದ್ದಲದಿಂದಾಗಿ ಮೊಗ್ಗಲಾನರು ಹೀಗೆ ತಮ್ಮ ಹೆಬ್ಬರುಳಿನಿಂದ ಹೀಗೆ ಮಾಡಿದ್ದಾರೆ ಎಂದರು.. .ನಂತರ ಭಗವಾನರು ಹೀಗೇ ಪ್ರಶ್ನಿಸಿದರು.ಯಾವ ಗುಣಗಳಿಂದಾಗಿ, ಯಾವ ವೃದ್ದಿಕಾರಕ ಅಂಶಗಳಿಂದಾಗಿ ಮೊಗ್ಗಲಾನರಿಗೆ ಇಂತಹ ಶಕ್ತಿಯು ಬಂದಿತು ಎಂಬುದು ತಿಳಿದಿದೆಯೇ ?

  ನಮಗೆ ಭಗವಾನರಿಂದಲೇ ಧಮ್ಮವು ಸಿಕ್ಕಿದೆ, ತಾವೇ ಮೂಲವು, ತಾವೇ ಮಾರ್ಗದಶರ್ಿಯು, ಮತ್ತು ತಾವೇ ನಿಣರ್ಾಯಕರು. ತಾವೇ ತಿಳಿಸಿದರೆ ನಮಗೆಲ್ಲಾ ಒಳಿತಾಗುವುದು.. ಆಗ ನಾವು ನೆನಪಿಡುವೆವು. ಎಂದರು.

ಹಾಗಾದರೇ ಭಿಕ್ಖುಗಳೆ ಗಮನವಿಟ್ಟು ಕೇಳಿರಿ, ನಾಲ್ಕು ಇದ್ಧಿಪಾದಗಳನ್ನು ಮೊಗ್ಗಲಾನರು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರಿಗೆ ಈ ಬಗೆಯ ಶಕ್ತಿಯು ಸಿಕ್ಕಿದೆ.

ಇಲ್ಲಿ ಮೊಗ್ಗಲಾನರು ಇಚ್ಚೆಯುತ ಸಮಾಧಿಯಿಂದಾದ ಆಧಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಇಚ್ಚೆಯು ಅತಿಯಾಗಿ ಮಂದವಾಗುವುದು ಬೇಡ ಹಾಗೆಯೇ ಅತಿ ಸಂಘರ್ಷಮಯವಾಗುವುದು ಬೇಡ.; ಆಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೆಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆಯಿದೆಯೋ ಅವನೆಲ್ಲಾ ಗ್ರಹಿಸುತ್ತಲೇೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ ಅದೇ ಹಿಂದೆಯು ಇದೆ. ಹಾಗೆಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯು ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯು ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ ಅದೇ ಕೆಳಗೆಯು ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ.

   ಇಲ್ಲಿ ಮೊಗ್ಗಲಾನರು ವಿರಿಯಾಯುತ(ಪ್ರಯತ್ನಯುತ) ಸಮಾಧಿಯಿಂದಾದ ಆದಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಪ್ರಯತ್ನವು  ಅತಿಯಾಗಿ ಮಂದವಾಗುವುದು ಬೇಡ ಹಾಗೇಯೇ ಅತಿ ಸಂಘರ್ಷಮಯವಾಗುವುದು ಬೇಡ.; ಅಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೇಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆ ಇದೆಯೋ ಅವನೆಲ್ಲಾ ಗ್ರಹಿಸುತ್ತಲೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ  ಅದೇ ಹಿಂದೆಂಯೂ ಇದೆ. ಹಾಗೇಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯೂ ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯೂ ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ  ಅದೇ ಕೆಳಗಡೆಯೂ ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ.

    ಇಲ್ಲಿ ಮೊಗ್ಗಲಾನರು ಚಿತ್ತಯುತ ಸಮಾಧಿಯಿಂದಾದ ಆಧಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಚಿತ್ತವು ಅತಿಯಾಗಿ ಮಂದವಾಗುವುದು ಬೇಡ ಹಾಗೇಯೇ ಅತಿ ಸಂಘರ್ಷಮಯವಾಗುವುದು ಬೇಡ.; ಅಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೇಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆ ಇದೆಯೋ ಅವನೆಲ್ಲಾ ಗ್ರಹಿಸುತ್ತಲೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ  ಅದೇ ಹಿಂದೆಂಯೂ ಇದೆ. ಹಾಗೇಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯೂ ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯೂ ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ  ಅದೇ ಕೆಳಗಡೆಯೂ ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ..

  ಇಲ್ಲಿ ಮೊಗ್ಗಲಾನರು ಮಿಮಾಂಸಯುತ ಸಮಾಧಿಯಿಂದಾದ ಆದಾರದ ಬಲವನ್ನು ವೃದ್ಧಿಸಿರುತ್ತಾರೆ. ಹಾಗೂ ಈ ರೀತಿ ಯೋಚಿಸುತ್ತಾರೆ.  ಈ ನನ್ನ ಮಿಮಾಂಸವು  ಅತಿಯಾಗಿ ಮಂದವಾಗುವುದು ಬೇಡ ಹಾಗೇಯೇ ಅತಿ ಸಂಘರ್ಷಮಯವಾಗುವುದು ಬೇಡ.; ಅಂತರಿಕವಾಗಿ ಸಂಕುಚಿತವಾಗುವುದು ಬೇಡ ಹಾಗೇಯೇ ಬಾಹ್ಯದಲ್ಲಿ ಚದುರುವುದು ಬೇಡ ;ನಂತರ ಆತನು ನಿರಂತರವಾಗಿ ಯಾವುದು ಮುಂದಿದೆಯೋ ಹಾಗೂ ಹಿಂದೆ ಇದೆಯೋ ಅವನೆಲ್ಲಾ ಗ್ರಹಿಸುತ್ತಲೆ ಇರುತ್ತಾನೆ. ಅಂದರೇ ಯಾವುದು ಮುಂದೆ ಇದೆಯೋ  ಅದೇ ಹಿಂದೆಂಯೂ ಇದೆ. ಹಾಗೇಯೇ ಯಾವುದು ಹಿಂದೆ ಇದೆಯೋ  ಅದೇ ಮುಂದೆಯೂ ಇದೆ. ಹಾಗೆಯೇ  ಯಾವುದು ಕೆಳಗೆ ಇದೆಯೋ  ಅದೇ ಮೇಲೆಯೂ ಇದೆ. ಹಾಗೇಯೇ ಯಾವುದು ಮೇಲೆ ಇದೆಯೋ  ಅದೇ ಕೆಳಗಡೆಯೂ ಇದೆ. ಅದೇ ರೀತಿಯಲ್ಲಿ ರಾತ್ರಿಯನ್ನು ಹಗಲಿನಂತೆ ಹಾಗೆಯೇ ಹಗಲನ್ನು ರಾತ್ರಿಯಂತೆ ಗ್ರಹಿಸುತ್ತ ವಿಹರಿಸುತ್ತಾನೆ. ಈ ರೀತಿಯಾದ ತೆರೆದ ಹಾಗೂ ತಡೆಗಳರಹಿತವಾದ ಜಾಗರೂಕತೆಯಿಂದ ಆತನು ಪ್ರಭಾಯುತ ಮನಸ್ಸನ್ನು ವೃದ್ಧಿಸುತ್ತಾನೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರಿಗೆ ಈ ಬಗೆಯ ಶಕ್ತಿಯು ಸಿಕ್ಕಿದೆ.

  ಈ ರೀತಿಯಾಗಿ ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರವರು ವಿವಿಧ ಇದ್ಧಿ ಅಥವಾ ಅತಿಮಾನಸ ಶಕ್ತಿಗಳನ್ನು ಪಡೆದಿದ್ದಾರೆ. ಹೇಗೆಂದರೆ ಒಂದು ಶರೀರದಿಂದ ಅನೇಕ ಶರೀರಗಳನ್ನುಂಟು ಮಾಡುವುದು.. ಹಾಗೇಯೇ ಹಲವಾರು ಶರೀರಗಳಿಂದ ಒಂದೇ ಶರೀರದವರಾಗುವುದು. ಹಾಗೇಯೇ ಪ್ರತ್ಯಕ್ಷವಾಗುವುದು ಹಾಗೇಯೇ ಅದೃಷ್ಯವಾಗುವುದು. ಹಾಗೆಯೇ ಗೋಡೆಗಳಲ್ಲಿ ಮತ್ತು ಪರ್ವತಗಳನ್ನು ಅಲ್ಲಿ ಆಕಾಶವಿರುವಂತೆ ತೂರಿ ಹೋಗುವುದು. ಹಾಗೆಯೇ ನೀರಿನಲ್ಲಿ ಮುಳುಗಿ ಪುನಃ ಏಳುವಂತೆ ಆತನು ನೆಲದಲ್ಲಿ ಮುಳಗಿ ಪುನಃ ಏಳುತ್ತಾನೆ. ಹಾಗೇಯೇ ನೆಲದಲ್ಲಿ ನಡೆಯುವಂತೆ ನೀರಿನ ಮೇಲೆ ಮುಳುಗದೇ ನಡೆಯುತ್ತಾನೆ. ಹಾಗೇಯೇ ಪಕ್ಷಿಯು ಆಕಾಶದಲ್ಲಿ ಹಾರಾಡುವಂತೆ ಆತನು ಪದ್ಮಾಸನದಲ್ಲೇ ಆಕಾಶದಲ್ಲಿ ಹಾರಾಡುತ್ತಾನೆ. ಆತನು ಸೂರ್ಯ ಹಾಗೂ ಚಂದಿರರನ್ನು ಸ್ಪಶರ್ಿಸಬಲ್ಲನು. ಅಂತಹ ಶಕ್ತಿಶಾಲಿಯಾಗಿರುತ್ತಾನೆ. ಈ ರೀತಿಯಾಗಿ ಶರೀರದ ಮೂಲಕ ಆತನು ಬ್ರಹ್ಮಲೋಕಗಳವರೆಗೂ ಪ್ರಭಾವ ಬೀರುವಂತೆ ಅಭ್ಯಸಿಸುತ್ತಾನೆ.

ಈ ರೀತಿಯಾಗಿ ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರವರು ದಿವ್ಯಕರ್ಣವನ್ನು ಪಡೆದಿದ್ದಾರೆ. ಅದರಿಂದಾಗಿ ಅವರು ಮಾನವರ ಹಾಗೂ ದೇವತೆಗಳ ಧ್ವನಿಯನ್ನು ಹತ್ತಿರದಲ್ಲೆ ಆಗಲಿ ಅಥವಾ ದೂರದಲ್ಲೆ ಆಗಲಿ ಆಲಿಸುವವರಾಗುತ್ತಾರೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರಿಗೆ ಪರ ಜೀವಿಗಳ ಚಿತ್ತವನ್ನು ಯಾಥಾವತ್ತಾಗಿ ಅರಿಯುತ್ತಾರೆ.(ಅಂದರೆ ಚಿತ್ತಗಳನ್ನು ಓದುವವರಾಗುತ್ತಾರೆ.) ಹೇಗೆಂದರೆ  ಹೇಳುವುದಾದರೆ ರಾಗದಿಂದ ಆವೃತವಾದ ಚಿತ್ತವನ್ನು ಸರಾಗ ಚಿತ್ತವೆಂದು ಹಾಗೆಯೇ ವೀತರಾಗದಿಂದ ಕೂಡಿರುವ ಚಿತ್ತವನ್ನು ವೀತರಾಗ ಚಿತ್ತವೆಂದು ಹಾಗೆಯೇ ದ್ವೇಷದಿಂದ ಆವೃತವಾದ ಚಿತ್ತವನ್ನು ದ್ವೇಷಚಿತ್ತವೆಂದು, ದ್ವೇಷರಹಿತವಾದ ಚಿತ್ತವನ್ನು ಅದ್ವೇಷಚಿತ್ತವೆಂದು, ಮೋಹದಿಂದ ಕೂಡಿರುವ ಚಿತ್ತವನ್ನು ಮೋಹಚಿತ್ತವೆಂದು, ಅಮೋಹದಿಂದ ಇರುವ ಚಿತ್ತವನ್ನು ಅಮೋಹಚಿತ್ತವೆಂದು, ಒತ್ತಡಕ್ಕೆ ಒಳಗಾಗಿ ಕುಗ್ಗಿದ ಚಿತ್ತವನ್ನು ಸಂಕ್ಷಿಪ್ತಚಿತ್ತವೆಂದು ಹಾಗೆಯೇ ಚದುರಿದ ಚಿತ್ತವನ್ನು ವಿಕ್ಷಿಪ್ತ ಚಿತ್ತವೆಂದು, ಉನ್ನತ್ತವಾಗಿರುವ ಚಿತ್ತವನ್ನು ಮಹಗ್ಗತ (ಉನ್ನತ) ಚಿತ್ತವೆಂದು, ಉನ್ನತವಾಗಿಲ್ಲದ ಚಿತ್ತವನ್ನು ಅಮಹಗ್ಗತ ಚಿತ್ತವೆಂದು ಅರಿಯುತ್ತಾರೆ. ಶ್ರೇಷ್ಠ ಚಿತ್ತವನ್ನು ಶ್ರೇಷ್ಠ ಚಿತ್ತವೆಂದು ಹಾಗೆಯೇ ಅನುತ್ತರವಾದ ಚಿತ್ತವನ್ನು ಅನುತ್ತರಚಿತ್ತವೆಂದು ಅರಿಯುತ್ತಾರೆ,. ಸಮಾಹಿತವಾದ ಚಿತ್ತವನ್ನು ಸಮಾಹಿತ ಚಿತ್ತವೆಂದು ಅರಿಯುತ್ತಾರೆ, ಹಾಗೆಯೇ ವಿಮುಕ್ತ ಚಿತ್ತವನ್ನು ವಿಮುಕ್ತಿ ಚಿತ್ತವೆಂದು ಅವಿಮುಕ್ತ ಚಿತ್ತವನ್ನು ಅವಿಮುಕ್ತ ಚಿತ್ತವೆಂದು ಅರಿಯುತ್ತಾರೆೆ. ಹೀಗೆ ಚೇತೋ ಪರಿಜ್ಞಾನವುಳ್ಳ ಭಿಕ್ಷುವು ಸರ್ವ ಪ್ರಕಾರದಲ್ಲಿ ಇದು ಸರಾಗ, ಇದು ವೀತರಾಗ.... ಅವಿಮುಕ್ತ ಚಿತ್ತವೆಂದು ಯಥಾಭೂತವಾಗಿ ಅರಿಯುತ್ತಾರೆ.ೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರು  ಪೂರ್ವ ಜನ್ಮಗಳ ಸ್ಮರಣಾ ಜ್ಞಾನಕ್ಕಾಗಿ ಮನಸ್ಸನ್ನು ಆ ಕಡೆಯೇ ನಿದರ್ೆಶಿಸುತ್ತಾರೆ, ವಾಲಿಸುತ್ತಾರೆ, ಆವರು ತಮ್ಮ ಪೂರ್ವಜನ್ಮ ವೃತ್ತಾಂತಗಳನ್ನು ನೆನೆಸಿಕೊಳ್ಳುತ್ತಾರೆ ಹೇಗೆಂದರೆ ಒಂದು ಜನ್ಮ, ಎರಡು ಜನ್ಮ, ಮೂರು ಜನ್ಮ, ನಾಲ್ಕು ಜನ್ಮ, ಐದು ಜನ್ಮಗಳು, ಹತ್ತು ಜನ್ಮಗಳು, ಇಪ್ಪತ್ತು ಜನ್ಮಗಳು, ಮೂವತ್ತು ಜನ್ಮಗಳು, ನಲ್ವತ್ತು ಜನ್ಮಗಳು, ಐವತ್ತು ಜನ್ಮಗಳು, ನೂರು ಜನ್ಮಗಳು, ಸಾವಿರ ಜನ್ಮಗಳು, ಲಕ್ಷ ಜನ್ಮಗಳು, ಕೋಟಿ ಜನ್ಮಗಳು ಅಥವಾ ವಿಶ್ವದ ಕುಗ್ಗುವಿಕೆಯ ಸಂವಟ್ಟಿ ಅನೇಕ ಕಲ್ಪಗಳು ಅಥವಾ ವಿಶ್ವದ ವಿಕಸಿಸುವಿಕೆಯ ಅನೇಕ ಕಲ್ಪಗಳ (ವಿವಟ್ಟಿಗಳು) ವರೆವಿಗೂ ಸ್ಮರಣೆ ಮಾಡಿಕೊಳ್ಳುವರು. ಹೇಗೆಂದರೆ ನನಗೆ ಆಗ ಆ ಹೆಸರಿತ್ತು, ಅಂತಹ ಜನಾಂಗದಲ್ಲಿ ಹುಟ್ಟಿದ್ದೆನು, ಅಂತಹ ರೂಪವಿತ್ತು, ಅಂತಹ ಆಹಾರವನ್ನು ಸೇವಿಸಿದ್ದೆನು, ಅಂತಹ ಸುಖ-ದುಃಖಗಳನ್ನು ಅನುಭವಿಸಿದೆನು. ಆ ರೀತಿಯಲ್ಲಿ ತನ್ನ ಜೀವನವೂ ಆಗ ಕೊನೆಯಾಯಿತು. ನಂತರ ಅಲ್ಲಿಂದ ಬೇರೆಡೆಯಲ್ಲಿ ಹುಟ್ಟಿದೆನು ಮತ್ತು ಅಲ್ಲಿಯೂ ನನಗೆ ಇಂತಹ ಹೆಸರಿತ್ತು, ಇಂತಹ ಜನಾಂಗದಲ್ಲಿ, ಇಂತಹ ರೂಪಪಡೆದು ಇಂತಿಂಥಹ ಆಹಾರ ಸೇವಿಸಿದ್ದೆನು. ಇಂತಿಂಥಹ ಸುಖ-ದುಃಖಗಳನ್ನು ಅನುಭವಿಸಿ ಈ ರೀತಿಯಲ್ಲಿ ಜೀವನ ಕೊನೆಗೊಂಡಿತು. ನಂತರ ಹೀಗೆಯೇ ಜನನ ಮರಣಗಳಲ್ಲಿ ಸಿಲುಕುತ್ತ ಈ ಜನ್ಮದಲ್ಲಿ ಈ ರೀತಿಯಾಗಿ ಹುಟ್ಟಿದ್ದೇನೆ. ಹೀಗೆ ಈ ರೀತಿಯಲ್ಲಿ ಅಪಾರ ಪೂರ್ವಜನ್ಮಗಳನ್ನು  ನೆನಪಿಸಿಕೊಳ್ಳುತ್ತಾರೆ. 

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿ ಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರು ಜೀವಿಗಳ ಚ್ಯುತಿ ಹಾಗು ಉತ್ಪತ್ತಿಗಳ ಬಗ್ಗೆ ಜ್ಞಾನವನ್ನು  ಅಂದರೆ ಜೀವಿಗಳ ಸಾವು ಮತ್ತು ಪುನರ್ಜನ್ಮಗಳ ವಿಸ್ತಾರ ಜ್ಞಾನವನ್ನು ಪಡೆಯುತ್ತಾರೆ.. ಇಲ್ಲಿ ಆತನು ತನ್ನ ದಿವ್ಯದೃಷ್ಠಿಯಿಂದ ವಿಶುದ್ಧವಾದ, ಮಾನವಾತೀತವಾದ ದಿವ್ಯದೃಷ್ಟಿಯಿಂದಾಗಿ ಜೀವಿಗಳ ಸಾವು, ಮರುಹುಟ್ಟು ಹಾಗು ಅದಕ್ಕೆ ಇರುವ ಕಾರಣಗಳನ್ನು ಅರಿಯುತ್ತಾನೆ. ಇಲ್ಲಿ ಆತನು ಜೀವಿಗಳ ಉನ್ನತ ಸ್ಥಾನ ಮತ್ತು ನೀಚಸ್ಥಿತಿಗಳಿಗೆ ಹಾಗೆಯೇ ಸುಂದರತೆಗೆ ಹಾಗು ಕುರೂಪತೆ ಸುಖಕ್ಕೆ ಮತ್ತು ದುರ್ಗತಿಗೆ ಇವೆಲ್ಲಕ್ಕೂ ಕಾರಣವು ಅವರ ಕರ್ಮಗಳೇ ಕಾರಣ ಎಂದು ಸ್ಪಷ್ಟವಾಗಿ ಅರಿಯುತ್ತಾನೆ. ಯಾವ ಜೀವಿಗಳು ಶರೀರ, ವಾಚ ಮತ್ತು ಮನಸ್ಸಿನಿಂದ ಕರ್ಮಗಳನ್ನು ಮಾಡಿವೆಯೋ ಆರ್ಯಧಮ್ಮವನ್ನು ನಿಂದಿಸುವರೋ, ಮಿಥ್ಯಾದೃಷ್ಟಿಕೋನಗಳನ್ನು ಹೊಂದಿರುವರೋ ಆ ಮಿಥ್ಯಾದೃಷ್ಟಿಗೆ ಅನುಸಾರವಾಗಿ ಕೆಟ್ಟ ಕರ್ಮಗಳನ್ನು ಮಾಡುತ್ತಾರೋ ಅಂತಹವರೋ ಶರೀರ ವಿಘಟಿತರ ನಂತರ (ಸಾವಿನ ನಂತರ) ದುರ್ಗತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅದು ಸುಖರಹಿತ ಗತಿಯಾಗಿರುತ್ತದೆ, ನಿರಯದಲ್ಲಿ ಹುಟ್ಟುತ್ತಾನೆ. ಅದೇರೀತಿಯಲ್ಲಿ ಯಾವ ಜೀವಿಗಳು ಶರೀರ ಪಾಪ ಮತ್ತು ಮನಸ್ಸಿನಿಂದ ಸುಕರ್ಮಗಳನ್ನು ಮಾಡಿವೆಯೋ, ಆರ್ಯಧಮ್ಮವನ್ನು ನಿಂದಿಸದೆ ಪ್ರಶಂಸಿಸುವರೋ, ಸಮ್ಯಕ್ ದೃಷ್ಟಿಕೋನಗಳನ್ನು ಹೊಂದಿರುವರೋ ಮತ್ತು ಅಂತಹ ಸಮ್ಮಾದೃಷ್ಟಿಯಿಂದಾಗಿ ಸುಕರ್ಮಗಳನ್ನು ಮಾಡುತ್ತಾನೆ. ಅಂತಹವನು ಸಾವಿನ ನಂತರ ಸುಗತಿಯನ್ನು ಹೊಂದುವನು. ಹೀಗೆ ಇಲ್ಲಿ ಆತನು ತನ್ನ ದಿವ್ಯದೃಷ್ಠಿಯಿಂದ ವಿಶುದ್ಧವಾದ, ಮಾನವಾತೀತವಾದ ದಿವ್ಯದೃಷ್ಟಿಯಿಂದಾಗಿ ಜೀವಿಗಳ ಸಾವು, ಮರುಹುಟ್ಟು , ಜೀವಿಗಳ ದುರ್ಗತಿ ಮತ್ತು ಉನ್ನತಿ, ಅವರ ಸುಂದರತೆ, ಮತ್ತು ಕುರೂಪತೆ ಮತ್ತು ಭಾಗ್ಯ ಹಾಗು ದೌಭರ್ಾಗ್ಯಗಳಿಗೆ ಅದಕ್ಕೆ ಇರುವ ಕಮ್ಮಗಳ ಕಾರಣಗಳನ್ನು ಅರಿಯುತ್ತಾನೆ.

ಈ ರೀತಿಯಾಗಿ ಮೊಗ್ಗಲಾನರು ನಾಲ್ಕು ಇದ್ದಿಪಾದಗಳನ್ನು ಅಭಿವೃದ್ಧಿಗೊಳಿಸಿದ್ದರಿಂದಾಗಿ ಅವನ್ನು ಹಿಂಬಾಲಿಸಿರುವುದರಿಂದಾಗಿ ಮೊಗ್ಗಲಾನರು ಅಸವಗಳ ಅಂತ್ಯವನ್ನು ಸಾಧಿಸಿ, ಅಸವಮುಕ್ತರಾಗಿ, ಮತ್ತು ಅಸವ ಮುಕ್ತ ಜ್ಞಾನದಿಂದಲೂ ಮುಕ್ತರಾಗಿ, ಅಭಿಜ್ಞಾದಿಂದ ನೇರವಾಗಿ ಅರಿತವರಾಗಿ ಇಲ್ಲಿಯೇ ಹಾಗೂ ಈಗಲೇ ತಮಗೆ ತಾವೇ ಅರಿತು ಮುಕ್ತರಾಗಿದ್ದಾರೆ.

ಹಾಗೇಯೇ ಸಚ್ಚವಿಭಂಗ ಸುತ್ತದಲ್ಲಿ ಹೀಗೆ ಪ್ರಶಂಸೆ ಮಾಡುತ್ತರೆ. :

  ಭಿಕ್ಖುಗಳೇ ನೀವುಗಳು ಸಾರಿಪುತ್ರ ಹಾಗೂ ಮೊಗ್ಗಲಾನರ  ಸೇವನೆ(ಮಿತ್ರತ್ವ)ೆ  ಮಾಡಿರಿ, ಅವರ ಒಡನಾಟದಿಂದ ಬೆರೆಯಿರಿ, ಅವರು ಪಂಡಿತ(ಜ್ಞಾನಿ) ಭಿಕ್ಖುಗಳಾಗಿದ್ದಾರೆ, ಅವರು ಬ್ರಹ್ಮಚರಿಯದ ಶ್ರೇಷ್ಟ ಜೀವನಕ್ಕೆ ಅನುಗ್ರಹ ತೋರುತ್ತಾರೆ, ಅದರಲ್ಲಿ ಸಾರಿಪುತ್ತರು  ಜನ್ಮನೀಡಿದ ಮಾತೆಯ ತರಹ, ಹಾಗೆಯೇ ಮೋಗ್ಗಲಾನರು ಮಗುವನ್ನು ಸಲಹುವಂತಹವರ ತರಹ, ಸಾರಿಪುತ್ತರು ಎಲ್ಲರನ್ನು ಸೋತಪತ್ತಿ ಫಲವನ್ನು ಪಡೆಯುವ ಹಾಗೇ ಮಾರ್ಗದಶರ್ಿತರಾಗುವರು. ಮತ್ತು ಮೊಗ್ಗಲಾನರು ಇದ್ಧಿಪಾಟಿಹಾರಿಯದೆಡೆಗೆ ,ಉನ್ನತ ಗುರಿಯೆಡೆಗೆ ಸಾಗಿಸುವಂತಹವರು. ಸಾರಿಪುತ್ರರು ಆರ್ಯಸತ್ಯಗಳನ್ನು ಬೋಧಿಸುವಲ್ಲಿ ಸಮರ್ಥರು ಅವರು ಆರ್ಯಸತ್ಯಗಳನ್ನು ವಿವರಿಸುತ್ತಾರೆ, ಒತ್ತಿಹೇಳುತ್ತಾರೆ, ಸ್ಥಾಪಿಸುತ್ತಾರೆ, ಸ್ಪಷ್ಟಿಕರಿಸುತ್ತಾರೆ, ವಿಶ್ಲೇಷಿಸುತ್ತಾರೆ, ಮತ್ತು ಪ್ರಕಟಪಡಿಸುತ್ತಾರೆ. ಹೀಗೆ ನುಡಿದ ಭಗವಾನರು ತಮ್ಮ ಆಸನದಿಂದ ಎದ್ದು ತಮ್ಮ ವಿಹಾರದೆಡೆಗೆ ವಿಶ್ರಮಿಸಲು ಹೋರಟರು.

5.2 ಪರರ ಮನಸ್ಸನ್ನು ಓದುವಿಕೆ ಅಥವಾ ಅರಿಯುವಿಕೆಯ ಅತಿಮಾನಸ ಶಕ್ತಿ

ಒಮ್ಮೆ ಉಪೋಸಥದ ದಿನದಂದು ಭಗವಾನರು ಇಡೀ ರಾತ್ರಿ ನಿಶಬ್ಧವಾಗಿ ಕುಳಿತಿದ್ದರು.ಯಾವಾಗ ಹಗಲಾಯಿತೋ ಆಗ ಭಗವಾನರು ಸಂಘವು ಅಪರಿಶುದ್ಧವಾಗಿದೆ ಎಂದಷ್ಟೆ ಹೇಳಿದರು. ಆಗ ಮೊಗ್ಗಲಾನರು ತಮ್ಮ ಪರರ ಚಿತ್ತವನ್ನು ಅರಿಯುವ ಸಾಮಾಥ್ರ್ಯದಿಂದ ಆ ಪಾಪಿ ಭಿಕ್ಖುವನ್ನು ಹುಡುಕಿದರು ಹಾಗೂ ಹೊರಹೋಗಲು ಕೇಳಿಕೊಂಡರು. ಆತನು ಒಪ್ಪದಿದ್ದಾಗ 3 ಬಾರಿ ವಿನಂತಿಸಿಕೊಂಡರು. ಆಗಲೂ ಆತನು ಜಗ್ಗದಿದ್ದಾಗ ಆತನನ್ನು ಸಂಘದಿಂದ ಹಾಗೂ ಉಪೋಸಥದ ಸಭಾಂಗಣದಿಂದ ಹೊರಗೆ ಕಳುಹಿಸಿದರು. ನಂತರ ಸಂಘವು ಶುದ್ದಿಯಾಗಿರುವುದನ್ನು ಪುನಃ ಪರೀಕ್ಷಿಸಿ ಭಗವಾನರಲ್ಲಿ ಪಾತಿಮೋಕ್ಖ ಪಠಿಸಲು ಕೇಳಿಕೊಂಡರು. ಇದು ಅವರ ಚಿತ್ತವನ್ನು ಒದುವ ಅತಿಮಾನಸ ಶಕ್ತಿಗೆ ಉದಾಹರಣೆಯಾಗಿದೆ.

*********************

ಒಮ್ಮೆ ಭಗವಾನರು 500 ಭಿಕ್ಖುಗಳೊಡನೆ ಕುಳಿತ್ತಿದ್ದರು ಆಗ ಅಲ್ಲಿ ಮೊಗ್ಗಲಾನರು ಬಂದು ಕುಳಿತರು. ಅವರು ಅಲ್ಲಿ ಕುಳಿತಿದ್ದ ಎಲ್ಲರ ಚಿತ್ತವನ್ನು ವಿಶ್ಲೇಷಿಸಿದರು ಆಗ ಅವರಿಗೆ ಅವರೆಲ್ಲರೂ ಅಸವರಹಿತ ಅರಹಂತರು  ಎಂದು ತಿಳಿಯಿತು. ಇವರ ಈ ಅಸಮಾನ್ಯ ಸಮಾಥ್ರ್ಯ ತಿಳಿದ ಅರಹಂತರೊಬ್ಬರು ತಮ್ಮ ಆಸನದಿಂದ ಎದ್ದು ಅವರಿಗೆ ವಂದಿಸಿ ಹೀಗೆ ನುಡಿದರು.:

ಯಾರು ಪರ್ವತದ ಇಳಿಜಾರಿನಲ್ಲಿ ಪ್ರಶಾಂತವಾಗಿ ಕುಳಿತಿರುವರೊ

ಯಾವ ಋಷಿಯು ಪಾಪ ಧಮ್ಮವನೆಲ್ಲವನ್ನು ದಾಟಿರುವರೊ

ಅಂತಹವರಿಗೆ ತಿಜ್ಞಾನವುಳ್ಳ ಹಾಗೂ ಮೃತ್ಯುಂಜಯರಾದ ಶಿಷ್ಯರು ವಂದಿಸುತ್ತಾರೆ.

ಅವರನ್ನು ತನ್ನ ಅತಿಮಾನಸಶಕ್ತಿಯಿಂದ ಸಂತರನ್ನೇ ಅರಿಯುವನೊ

ಅಂತಹ ಅತಿಮಾನಸತೆಯಲ್ಲಿ ಪ್ರವೀಣರಾದ ಮೊಗ್ಗಲಾನರು 

ಅವರ ಚಿತ್ತಗಳನ್ನು ಪರೀಕ್ಷಿಸಿ ಅವರು ಮುಕ್ತರೆಂದು ಹಾಗೂ ಅಂಟುವಿಕೆಯಿಂದ 

ಪಾರಾಗಿದ್ದಾರೆಂದು ತಿಳಿದರು. ಸಂ.ನಿ.8.10

*************************** 

ಒಮ್ಮೆ ಅಯುಷ್ಮಂತ ಅನುರುದ್ದರವರು ಏಕಾಂತದಲ್ಲಿ ಧ್ಯಾನಿಸುತ್ತಿದ್ದರು ಆಗ ಅವರ ಮನಸ್ಸಿನಲ್ಲಿ ಈ ಬಗೆಯ ಪ್ರಶ್ನೆಯು ಉದಯಿಸಿತು  ನಾಲ್ಕು ಸತಿಪಟ್ಟಾನಗಳ ಉದಾತ್ತ ಮಾರ್ಗದಿಂದ ಯಾವ ರೀತಿ ದುಃಖ ಸಮೂಹವನ್ನು ಅಂತ್ಯಗೊಳಿಸಬಹುದು.. ತಕ್ಷಣ ಅವರ ಮನಸ್ಸಿನ ಈ ವಾಕ್ಯ ಒದಿದ ಮೊಗ್ಗಲಾನರು ನೀವು ಅಭ್ಯಸಿಸುತ್ತಿರುವ ಸಾಧನಾಕ್ರಮವನ್ನು ತಿಳಿಸಿದರೆ ಅದರ ಪೂರ್ಣ ವಿವರ ತಿಳಿಸುವೆ ಎಂದು ತಿಳಿಸುತ್ತಾರೆ. ಸ.ನಿ.52.1-2

5.3 ದಿವ್ಯ ಶ್ರೋತದ ಅತಿಮಾನಸ ಶಕ್ತಿ

ಒಮ್ಮೆ ಮೊಗ್ಗಲಾನರವರು ಸಮಾಧಿಯಿಂದ ಎದ್ದು ಸಾರಿಪುತ್ತರಲ್ಲಿಗೆ ಬಂದರು. ಅವರ ಪ್ರಶಾಂತತೆಯನ್ನು ಮುಖದಲ್ಲಿ ಗಮನಿಸಿದ ಸಾರಿಪುತ್ತರು ಅವರಿಗೆ ಹೀಗೆ ಕೇಳಿದರು :ಚಿತ್ತದ ಪ್ರಶಾಂತತೆಯ ಉನ್ನತ ಸಮಾಧಿಯಲ್ಲಿ ಮುಳುಗಿದ್ದಿರಾ?

ಇಲ್ಲ ಹಾಗೇನೂ ಇಲ್ಲ ಇಂದು ಕೇವಲ ಕಿರಿಯ ಹಂತದ ಸಮಾಧಿಗಳಲ್ಲಿ ಮಾತ್ರ ಮನಸ್ಸನ್ನು ಹರಿಸಿದ್ದೇ ಹಾಗೇಯೇ ಧಮ್ಮ ಚಚರ್ೆಗಳಲ್ಲಿ ತಲ್ಲಿನನಾಗಿದ್ದೆ, 

ಆಗ ಸಾರಿಪುತ್ತರು ಹೀಗೆ ಪ್ರಶ್ನಿಸಿದರು :ಯಾರೊಂದಿಗೆ ಚಚರ್ಿಸಿ ಈ ಉತ್ತರವನ್ನು ಪಡೆದಿರಿ.

ಭಗವಾನರಿಂದಲೇ.

ಅದು ಹೇಗೆ ಸಾಧ್ಯ ! ಈ ಸಮಯದಲ್ಲಿ ಭಗವಾನರು ಶ್ರಾವಸ್ತಿಯಲ್ಲಿದ್ದಾರೆ ಅದರೆ ನಾವು ರಾಜಗೃಹದಲ್ಲಿದ್ದೇವೆ. ನೀವು ಅತಿಮಾನಸ ಶಕ್ತಿಯಿಂದ ಅಲ್ಲಿಗೆ ಹೋಗಿದ್ದಿರಾ ಅಥವಾ ಭಗವಾನರೇ ಇಲ್ಲಿಗೆ ಬಂದಿದ್ದರಾ ?

ಎರಡು ಅಲ್ಲ,  ಕೇವಲ ವಿಶುದ್ಧವಾದ ದಿವ್ಯ ಚಕ್ಷು ಹಾಗೂ ದಿವ್ಯ ಕರ್ಣ ಬಳಸಿ ಭಗವಾನರೊಂದಿಗೆ ಸಂಭಾಷಿಸಿ ಉತ್ತರವನ್ನು ಪಡೆದೆನು.

ಎಂತಹ ಧಮ್ಮಚಚರ್ೆಯನ್ನು ಮಾಡಿದಿರಿ.

ನಾನೂ ಭಗವಾನರೊಂದಿಗೆ ಒಬ್ಬನು ಯಾವ ಮಟ್ಟದಲ್ಲಿ ಪ್ರಯತ್ನಶೀಲತೆಯನ್ನು ವೃದ್ಧಿಸಬಲ್ಲನು ಎಂದು ಕೇಳಿದೆನು ಅದಕ್ಕೆ ಭಗವಾನರು ಹೀಗೆ ನುಡಿದರು ;ಮೊಗ್ಗಲಾನ ಪ್ರಯತ್ನಶಾಲಿಯೊಬ್ಬನು ಹೀಗೆ ತನ್ನ ಚಿಂತನೆಯನ್ನು ಮಾಡಬೇಕು ಹೇಗೆಂದರೆ :ನನ್ನ ಮಾಂಸ ಹಾಗೂ ರಕ್ತಗಳು ಒಣಗಿಹೋದರು ಸರಿಯೇ ಕೇವಲ ಚರ್ಮ, ಮೂಳೆ ಹಾಗೂ ನರಗಳು ಉಳಿದರೂ ಸರಿಯೇ ನಾನೂ ಸಾಧಿಸಬೇಕಾಗಿರುವುದನ್ನು ನನ್ನ ಧೃಡತೆಯಿಂದ ಅವಿಶ್ರಾಂತವಾಗಿ ಸತತ ಯತ್ನಶೀಲನಾಗಿ ಅದನ್ನು ಸಾಧಿಸುವವರೆಗೆ ವಿಶ್ರಮಿಸುವುದಿಲ್ಲ.ಎಂಬಂತಹ ಮನೋಭಾವ ಉಳ್ಳವನೇ ಆ ಮಟ್ಟದಲ್ಲಿ ಪ್ರಯತ್ನಶೀಲವನ್ನು ವಿಕಾಸಿಸಬಲ್ಲನು. ಎಂದರು

ಓಹ್ ಮೊಗ್ಗಲಾನರೇ ನೀವು ಹಿಮಾಲಯದಂತಹವರು, ಇಂತಹ ದಿವ್ಯ ಶಕ್ತಿ ಪಡೆದಿರುವ ನೀವು ಧನ್ಯರು. ಬುದ್ಧರಂತೆ ನಿಮಗೂ ಸಹಾ ಇಚ್ಚಿಸಿದರೇ ಈ ಇಡೀ ಕಲ್ಪವೇ ಜೀವಿಸಬಹುದು.

ೆಓಹ್ ಸಾರಿಪುತ್ತರೇ ಉಪ್ಪಿನ ದೊಡ್ಡ ಘಟದ ಪಕ್ಕದಲ್ಲಿ ಸಣ್ಣ ಉಪ್ಪಿನ ಹರಳಿನಂತೆ ನಾನಿದ್ದೇನೆ, ತಮಗೆ ಭಗವಾನರೇ ಹಲವಾರು ರೀತಿಯಲ್ಲಿ ಪ್ರಶಂಸಿಹರು ......ಎಂದು ಅವರು ಸಹಾ ಸಾರಿಪುತ್ತರನ್ನು ಪ್ರಶಂಸಿಸಿದರು.

ದೇವ ವಾಣಿಗಳ ಆಲಿಸುವಿಕೆ 

ತಮ್ಮ ದಿವ್ಯವಾದ ಕರ್ಣದಿಂದ ಮೊಗ್ಗಾಲಾನರು ಅಮನುಷ್ಯರಾದಂತಹ ದೇವ, ಅಸುರ, ಪ್ರೇತ, ಯಕ್ಷ ಇತ್ಯಾದಿ ಜೀವಿಗಳ ಧ್ವನಿಯನ್ನು ಆಲಿಸಿ ಅವರಿಂದ ಸಂದೇಶಗಳನ್ನು ಪಡೆಯುತ್ತಿದ್ದರು. ಒಮ್ಮೆ ಒಂದು ದೇವ ಮೊಗ್ಗಲಾನರಿಗೆ ಹೀಗೆ ನುಡಿಯಿತು ಅದೇನೆಂದರೆ ದೇವದತ್ತನಿಂದ ಭಗವಾನರಿಗೆ ಆಪಾಯವಿದೆ ಆತನು ಆ ಬಗೆಯ ದುಷ್ಟ ಸಂಕಲ್ಪಗಳಲ್ಲಿ ತೊಡಗಿದ್ದಾನೆ ಎಂದು ತಿಳಿಸಿತು.

   ಈಗಾಗಲೇ ಹಿಂದಿನ ಪುಟದಲ್ಲಿ ದಿವ್ಯ ಕರ್ಣ ಹಾಗೂ ದಿವ್ಯ ಚಕ್ಷು ಬಗ್ಗೆ ತಿಳಿಸಿರುವೆನು (ಸಂ.ನಿ.21.,3)

5.4.1 ಯಕ್ಷನ ನೋಡಿದ್ದು

ಒಮ್ಮೆ ಸಾರಿಪುತ್ತರು ಮೊಗ್ಗಲಾನರೊಡನೆ ಕಪೋತಕಂದಾರದಲ್ಲಿ ಪೂರ್ಣಮಿಯ ದಿನದಂದು ಧ್ಯಾನದಲ್ಲಿ ತಲ್ಲೀನರಾಗಿದ್ದರು. ಅವರ ಶಿರವು ಅಂದೇ ಕ್ಷೌರ ಮಾಡಲ್ಪಟ್ಟು ಪಳಪಳನೆ ಹೊಳೆಯುತ್ತಿತ್ತು. ಆಗ ದುಷ್ಟ ಯಕ್ಷನೊಬ್ಬನು ಅವರ ತಲೆಯ ಮೇಲಿಂದ ಹಾದು ಹೋಗುತ್ತಿದ್ದನು. ಸಾರಿಪುತ್ತರ ಘನತೆಯನ್ನು ಅರಿಯದ ಆ ಯಕ್ಷನು ಹಿಂಸಾತ್ಮಕ ಮೋದದಲ್ಲಿ ಬಂದು ಸಾರಿಪುತ್ತರ ತಲೆಗೆ ಅತ್ಯಂತ ಭೀಕರವಾದ ಹೊಡೆತವನ್ನು ನೀಡಿದನು. ಆದರೆ ಧ್ಯಾನದ ಆಳದಲ್ಲಿ ತಲ್ಲೀನರಾಗಿದ್ದ ಸಾರಿಪುತ್ತರಿಗೆ ಹಾನಿಯೇನು ಆಗಲಿಲ್ಲ. ಆ ದೃಶ್ಯವನ್ನು ಕಣ್ಣಾರೆ ಕಂಡಂತಹ ಮಹಾಮೊಗ್ಗಲಾನರು ತಕ್ಷಣ ಧಾವಿಸಿ ಸಾರಿಪುತ್ತರಿಗೆ  ಹೀಗೆ ಕೇಳಿದರು: ಆಯುಷ್ಮಂತ, ನೀನು ಕ್ಷೇಮವಾಗಿರುವೆಯಾ, ನಿನಗೇನೂ ಹಾನಿಯಾಗಲಿಲ್ಲವಷ್ಟೇ? ನಾನು ಕ್ಷೇಮವಾಗಿರುವೆನು ಮೊಗ್ಗಲಾನ, ಕೇವಲ ಸಣ್ಣ ತಲೆನೋವಿನ ಭಾಸವಾಗುತ್ತಿದೆಯಷ್ಟೆ. ಆಗ ಮೊಗ್ಗಲಾನರು ಹೀಗೆ ಉದ್ಗಾರ ಮಾಡಿದರು: ಇದು ಆಶ್ಚರ್ಯಕರ ಆಯುಷ್ಮಂತ ಸಾರಿಪುತ್ತ, ಅದ್ಭುತವಾದುದು. ತಮ್ಮ ಮಾನಸಿಕ ಶಕ್ತಿಯು ಅತ್ಯಂತ ಮಹೋನ್ನತವಾಗಿದೆ. ಯಕ್ಷನೊಬ್ಬನ ಇಡೀ ಶಕ್ತಿಯಿಂದ ಪ್ರಹರಿಸಲ್ಪಟ್ಟ ಹೊಡೆತ ತಮಗೆ ಬಿದ್ದಿದ್ದರೂ ಸಹಾ ತಾವು ಕೇವಲ ಸಣ್ಣ ತಲೆನೋವಿನ ಭಾಸವೆಂದು ಹೇಳುತ್ತಿರುವಿರಿ. ಆ ಹೊಡೆತಕ್ಕೆ ಆನೆಯೇ ಕೆಳಬಿದ್ದು ವಿಲಿವಿಲಿ ಒದ್ದಾಡುತ್ತಿತ್ತು ಅಥವಾ ಬೃಹತ್ ಬಂಡೆಯೇ ಹೋಳಾಗುತ್ತಿತ್ತು.

ಅದನ್ನು ಆಲಿಸಿದ ಸಾರಿಪುತ್ತರು ಹೀಗೆ ನುಡಿದರು: ಆಶ್ಚರ್ಯ ಮೊಗ್ಗಲಾನ, ಅದ್ಭುತವಾದದು ಮೊಗ್ಗಲಾನರ ಇದ್ದಿಶಕ್ತಿಯು ಅದ್ಭುತವಾದುದು. ತಾವು ಯಕ್ಷಾದಿ ಅನೇಕ ಅಗೋಚರ ಜೀವಿಗಳನ್ನು ಕಾಣುತ್ತಿರುವಿರಿ. ನಾನಂತು ದೆವ್ವವನ್ನು ಸಹಾ ಇದುವರೆವಿಗೆ ಕಾಣಲಿಲ್ಲ.

ಇಡೀ ಘಟನೆಯನ್ನು ತಮ್ಮ ದಿವ್ಯದೃಷ್ಟಿಯಲ್ಲಿ ಕಂಡಂತಹ ಭಗವಾನರು ಹೀಗೆ ಉದಾನವನ್ನು ನುಡಿದರು: ಯಾರ ಚಿತ್ತವು ಶಿಲೆಯಂತೆ ಅಚಲವೋ, ಆಸಕ್ತಿದಾಯಕ ವಿಷಯಗಳಲ್ಲಿ ಅನಾಸಕ್ತನೋ, ಉದ್ದೇಶಕಾರಿ ವಿಷಯಗಳಲ್ಲೂ ಕೋಪಗೊಳ್ಳನೋ, ಅಂತಹವನ ಚಿತ್ತವು ಹೀಗೆ ವಿಕಸಿತವಾದಾಗ ಅಂತಹವನಿಗೆ ದುಃಖವಾದರೂ ಹೇಗೆ ತಾನೆ ಉಂಟಾಗುವುದು. (ಉ.4.4)

***********************

5.4.2 ಹೆಬ್ಬಾವು ಆಕೃತಿಯ ಪ್ರೇತದ ಪ್ರಸಂಗ

ಒಮ್ಮೆ ಪರಮಪೂಜ್ಯ ಮೊಗ್ಗಲ್ಲಾನರವರು, ಪೂಜ್ಯ ಲಕ್ಖಣರೊಂದಿಗೆ ಗೃದ್ಧಕೂಟ ಪರ್ವತದಿಂದ ಇಳಿಯುತ್ತಿದ್ದರು. ಆಗ ಅವರಿಗೆ ತಮ್ಮ ದಿವ್ಯದೃಷ್ಟಿಯಿಂದ 25 ಯೋಜನ ಉದ್ದದ ಹೆಬ್ಬಾವಿನ ಆಕೃತಿಯ ಪ್ರೇತವು ಕಂಡುಬಂದಿತು. ಆ ಹಾವಿನ ಆಕೃತಿಯ ಪ್ರೇತಕ್ಕೆ ಎಲ್ಲಾಕಡೆಗಳಿಂದ ಬೆಂಕಿಯು ಆವೃತವಾಗಿ ಅದು ಅತಿ ಯಾತನೆ ಅನುಭವಿಸುತ್ತಿತ್ತು. ಅದರ ಅವಸ್ಥೆಯನ್ನು ಕಂಡಂತಹ ಮೊಗ್ಗಲ್ಲಾನರವರು ವಿಷಾದದ ನಗೆ ಬೀರಿದರು. ಆಗ ಲಕ್ಖಣರವರು ಆ ವಿಷಾದದ ನಗೆಗೆ ಕಾರಣ ಕೇಲಿದರು. ಆಗ ಮೊಗ್ಗಲ್ಲಾನರು ಹೀಗೆ ಪ್ರತಿಕ್ರಿಯಿಸಿದರು: ಸೋದರ, ಈ ಪ್ರಶ್ನೆಗೆ ಉತ್ತರಿಸಲು ಇದು ಸಕಾಲವಲ್ಲ, ಬುದ್ಧರನ್ನು ಭೇಟಿಯಾಗುವವರೆಗೂ ಸುಮ್ಮನಿದ್ದು ನಂತರ ಪ್ರಶ್ನಿಸುವವನಾಗು.

ನಂತರ ಅವರು ಬುದ್ಧರನ್ನು ಭೇಟಿ ಮಾಡಿದರು. ಆಗ ಪುನಃ ಲಕ್ಖನರವರು ವಿಷಾಧದ ನಗೆಗೆ ಕಾರಣ ಕೇಳಿದರು. ಆಗ ಮೊಗ್ಗಲ್ಲಾನರವರು ಹೀಗೆ ನುಡಿದರು: ಸೋದರನೇ, ಆ ಸ್ಥಳದಲ್ಲಿ ನಾನು ಪ್ರೇತವೊಂದನ್ನು ಕಂಡೆನು, ಅದರ ಸ್ವರೂಪ ಹೀಗಿತ್ತು. ಅಂತಹ ಪ್ರೇತವನ್ನೇ ನಾನು ಕಂಡಿರಲಿಲ್ಲ. ಅದಕ್ಕಾಗಿ ನಾನು ನಗೆ ಬೀರಿದೆನು.

ಆಗ ಭಗವಾನರು ಹೀಗೆ ನುಡಿದರು: ಭಿಕ್ಷುಗಳೇ, ನಿಜಕ್ಕೂ ಮೊಗ್ಗಲ್ಲಾನ ಅಂತಹ ಶಕ್ತಿಯನ್ನು ಹೊಂದಿಹನು. ಅವುಗಳ ಸದ್ಭಳಕೆಯನ್ನು ಸಹಾ ಮಾಡಲು ಬಲ್ಲನು. ಭಿಕ್ಷುಗಳೇ, ಮೊಗ್ಗಲ್ಲಾನನಷ್ಟೇ ಅಲ್ಲ, ನಾನು ಸಹಾ ಆ ಪ್ರೇತವನ್ನು ಕಂಡಿರುವೆನು. ಬೋಧಿವೃಕ್ಷದ ವಜ್ರಾಸನದಲ್ಲಿರುವಾಗ, ಈ ಪ್ರೇತವೇ ಅಲ್ಲಿಗೂ ಬಂದಿತ್ತು. ಅಲೌಕಿಕ ವಿಷಯಗಳಲ್ಲಿ ಶ್ರದ್ಧೆಯಿಲ್ಲದವರಲ್ಲಿ ಹೇಳಿದರೆ ನಂಬುವುದಿಲ್ಲ ಎಂದು ಅರಿತು, ನಾನು ಯಾರಲ್ಲಿಯೂ ಹೇಳಿರಲಿಲ್ಲ. ಈಗ ಮೊಗ್ಗಲ್ಲಾನರು ನೋಡಿರುವುದರಿಂದಾಗಿ ನಾನು ಸಕಾಲವೆಂದು ನಾನು ನುಡಿಯುತ್ತಿರುವೆ.

ಆಗ ಭಿಕ್ಷುಗಳು ಆ ಪ್ರೇತದ ದುಃಸ್ಥಿತಿಗೆ ಕಾರಣ ವಿವರಿಸುವಂತೆ ಕೇಳಿಕೊಂಡರು. ಆಗ ಭಗವಾನರು ಆ ಪ್ರೇತದ ಪೂರ್ವಜನ್ಮದ ವೃತ್ತಾಂತ ತಿಳಿಸಿದರು. ಹಿಂದೆ ಕಸ್ಸಪ ಬುದ್ಧರ ಕಾಲದಲ್ಲಿ ಸುಮಂಗಲನೆಂಬ ಕೋಶಾಧ್ಯಕ್ಷನಿದ್ದನು. ಆತನು ಪರಮ ದಾನಿಯಾಗಿದ್ದನು. ಆತನು 20 ಉಸಭಗಳಷ್ಟು ವಿಶಾಲ ಸ್ಥಳದಲ್ಲಿ ಚಿನ್ನದ ಇಟ್ಟಿಗೆಗಳ ಮೌಲ್ಯದಷ್ಟು ಹಣ ಖಚರ್ು ಮಾಡಿ ವಿಹಾರದ ಭವ್ಯ ಆರಂಭಣೆ ಮಾಡಿಸಿ ಮಹತ್ ದಾನ ಮಾಡಿದನು. ಒಂದುದಿನ ಆತನು ಬುದ್ಧರಿಗೆ ಪೂಜಿಸಲೆಂದು ದಾರಿಯಲ್ಲಿ ಹೋಗುವಾಗ, ಕಳ್ಳನೊಬ್ಬನು ಕೆಸರಾದ ಪಾದಗಳಿಂದ ಹಾಗು ತಲೆಯ ಮೇಲೆ ಬಟ್ಟೆಯನ್ನು ಹೊದ್ದು ಅಡಗಿರುವುದನ್ನು ಕಂಡನು. ಆದರೆ ಆತನನ್ನು ಕಂಡು ಬೇಟೆಗಾರನೆಂದು ಭಾವಿಸಿದನು. ಆದರೆ ಕಳ್ಳನು ದ್ವೇಷಾಸೂಯೆಯಿಂದಾಗಿ ಕೋಶಾಧ್ಯಕ್ಷನ ಹೊಲವನ್ನು ಏಳುಬಾರಿ ಸುಟ್ಟುಹಾಕಿದನು. ಅಷ್ಟೇ ಅಲ್ಲ, ಕೋಶಾಧ್ಯಕ್ಷನ ದನಕರುಗಳ ಕಾಲುಗಳನ್ನು ಏಳುಬಾರಿ ಕತ್ತರಿಸಿದನು. ಅಷ್ಟಕ್ಕೂ ತೃಪ್ತನಾಗದೆ, ಕೋಶಾಧ್ಯಕ್ಷನು ಆನಂದಿಸುವುದು ಭಗವಾನರ ಗಂಧಕುಟೀರದಲ್ಲೇ ಎಂದು ತಿಳಿದು ಭಗವಾನರು ಇಲ್ಲದ ವೇಳೆ ಗಮನಿಸಿ ಅದನ್ನು ಸುಟ್ಟು ಹಾಕಿದನು. ಅಲ್ಲಿದ್ದ ಸಾಮಗ್ರಿಗಳನ್ನು ಒಡೆದು ಎಸೆದಿದ್ದನು. ಗಂಧ ಕುಟೀರವು ಸುಟ್ಟು ಭಸ್ಮವಾಗಿತ್ತು. ಈ ಕರ್ಮಫಲದಿಂದಾಗಿ ಆ ಕಳ್ಳನು ಸತ್ತು ಈ ರೀತಿ ಅಗ್ನಿಯ ಜ್ವಾಲೆಗಳಿಂದ ಆವೃತವಾದ ಪ್ರೇತವಾದನು. ಆ ಕೋಶಾಧ್ಯಕ್ಷನು ಆ ಕಳ್ಳನನ್ನು ಕ್ಷಮಿಸಿ, ಪುನ ಗಂಧಕುಟಿಯನ್ನು ನಿಮರ್ಿಸಿದನು. ಆ ಸಮಯದಲ್ಲಿ ಈ ಗಾಥೆಯನ್ನು ಭಗವಾನರು ನುಡಿದಿದ್ದರು.

ಮೂರ್ಖನು ಪಾಪ ಮಾಡುವಾಗ, ಅವುಗಳ ಭೀಕರ ಪರಿಣಾಮ ಅರಿಯುವುದಿಲ್ಲ, ಅಂತಹ ದುಮರ್ೇಧನು (ದಡ್ಡನು) ಬೆಂಕಿಯಿಂದ ಆಹುತಿಯಾಗುವವನ ರೀತಿ ಯಾತನೆಗೆ ಗುರಿಯಾಗುತ್ತಾನೆ. (ದ.ಪ. 136)

5.4.3ಸ್ವಾರ್ಥದ ಪರಿಣಾಮ

ಒಮ್ಮೆ ಪೂಜ್ಯ ಮೊಗ್ಗಲ್ಲಾನರವರು ಗಿಜ್ಝಕೂಟ ಪರ್ವತದ ಹತ್ತಿರ ನಡೆಯುತ್ತಿರುವಾಗ ಅವರು ದುಃಸ್ಥಿತಿಯಲ್ಲಿದ್ದಂತಹ ಪ್ರೇತವನ್ನು ನೋಡಿದರು. ಆ ಪ್ರೇತದ ಮುಖವು ಹಂದಿಯದ್ದಾಗಿದ್ದರೆ, ಶರೀರವು ಮನುಷ್ಯನಂತೆಯೇ ಇತ್ತು. ಈ ಪ್ರೇತವನ್ನು ನೋಡಿ ಮೊಗ್ಗಲ್ಲಾನರು ವಿಷಾದದ ನಗೆ ಬೀರಿದರು. ನಂತರ ವಿಹಾರಕ್ಕೆ ಮರಳಿದರು, ಭಗವಾನರ ಬಳಿಗೆ ಹೋಗಿ ಕಂಡಂತಹ ವಿಷಯವನ್ನು ನುಡಿದರು: ಭಗವಾನ್, ಈ ಪ್ರೇತದ ಬಾಯಿಯಲ್ಲಿ ಹುಳುಗಳ ಹಿಂಡು ಹರಿದಾಡುತ್ತಿತ್ತು.

ಓ ಮೊಗ್ಗಲ್ಲಾನ ನಾನು ಸಹಾ ಆ ಪ್ರೇತವನ್ನು ಸಮ್ಮಾಸಂಬೋಧಿ ಪ್ರಾಪ್ತಿಯ ಬಳಿಕ ಕಂಡಿದ್ದೆನು. ಆದರೆ ಜನರಿಗೆ ಇದರ ಬಗ್ಗೆ ನಂಬಿಕೆ ಉಂಟಾಗದೆ ನನ್ನನ್ನೇ ತಪ್ಪಾಗಿ ಭಾವಿಸುವ ಸಾಧ್ಯತೆ ಇದ್ದುದರಿಂದಾಗಿ ನಾನು ಈ ಹಿಂದೆ ಯಾರಿಗೂ ತಿಳಿಸಿರಲಿಲ್ಲ.

ಓ ಮೊಗ್ಗಲ್ಲಾನ, ಈ ಹಿಂದಿದ್ದ ಕಸ್ಸಪ ಬುದ್ಧರ ಕಾಲದಲ್ಲಿ ಈ ಪ್ರೇತವು ಕಸ್ಸಪ ಬುದ್ಧರ ಶಾಸನದಲ್ಲಿಯೇ ಭಿಕ್ಷುವಾಗಿದ್ದನು. ಆತನು ಒಂದುದಿನ ಇಬ್ಬರು ಭಿಕ್ಷುಗಳು ವಾಸಿಸುತ್ತಿದ್ದಂತಹ ವಿಹಾರದ ಒಂದು ಭಾಗಕ್ಕೆ ಬಂದನು. ನಂತರ ತಾನು ಸಹಾ ಅವರೊಂದಿಗೆ ವಾಸಿಸತೊಡಗಿದನು, ಈತನ ಪ್ರವಚನ ಶೈಲಿಯನ್ನು ಜನರು ಮೆಚ್ಚತೊಡಗಿದರು. ಆಗ ಆತನಿಗೆ ಸತ್ಕಾರ ಲಾಭಗಳು ಸಿಗುತ್ತಿತ್ತು. ಆಗ ಆತನಿಗೆ ಈ ಇಬ್ಬರು ಭಿಕ್ಷುಗಳು ಇಲ್ಲದಿದ್ದರೆ ತನಗೆ ಇನ್ನೂ ಹೆಚ್ಚು ಲಾಭವಾಗಬಹುದು ಎಂದೆನಿಸಿ, ಅವರಿಬ್ಬರ ನಡುವೆ ಇಲ್ಲಸಲ್ಲದ್ದನ್ನು ಹೇಳಿ ಜಗಳ ತಂದಿಟ್ಟನು. ಪರಿಣಾಮವಾಗಿ ಆ ಇಬ್ಬರು ಭಿಕ್ಷುಗಳು ಜಗಳವಾಡಿ ಆ ವಿಹಾರವನ್ನೇ ತೊರೆದುಬಿಟ್ಟು ಬೇರೆ ಬೇರೆ ಕಡೆ ಹೋಗಿಬಿಟ್ಟರು. 

ಈ ಪಾಪಕೃತ್ಯದ ಪರಿಣಾಮವಾಗಿ ಆತನು ಸತ್ತನಂತರ ಅವೀಚಿ ನರಕದಲ್ಲಿ ಪುನರ್ಜನ್ಮ ತಾಳಿದನು. ನಂತರ ಅಲ್ಲಿಯೂ ಸತ್ತು ಈ ಪ್ರೇತವಾದನು. ಆತನ ಕುಕರ್ಮದಿಂದಲೇ ಆತನಿಗೆ ಈ ವಿಕೃತರೂಪವಿದೆ. ಆದ್ದರಿಂದ ಭಿಕ್ಷುಗಳೇ, ಒಬ್ಬನು ಕಾಯಾ-ವಾಚಾ ಮತ್ತು ಮನಸಾ ಪರಿಶುದ್ಧತೆಯಿಂದಲೇ ಇರಬೇಕು ಎಂದು ನುಡಿದು ಈ  ಗಾಥೆಯನ್ನು ನುಡಿದರು.

ಮಾತಿನೆಡೆ ಸದಾ ರಕ್ಷಣೆಯಿರಲಿ, ಮನಸ್ಸಿನಲ್ಲೂ ಸುಸಂಯಮಿತನಾಗು,

ಕಾಯದಿಂದ ಯಾವುದೇ ಅಕುಶಲ ಕರ್ಮವನ್ನು ಮಾಡಿದಿರು,

ಈ ಮೂರು ರೀತಿಯ ಕಮ್ಮಗಳ ಮಾರ್ಗದಲ್ಲಿ ಪರಿಶುದ್ಧನಾಗು ಮತ್ತು

ಋಷಿಯು ತೋರಿಸಿರುವ ಮಾರ್ಗವನ್ನು ಗಳಿಸುವಂತಾಗು. (281)

5.4.4 ಬೆಂಕಿಯಿಂದ ಆವೃತವಾಗಿರುವ ಅಸ್ತಿಪಂಜರ ರೂಪದ ಪ್ರೇತಗಳು

ಒಮ್ಮೆ ಪೂಜ್ಯ ಮೊಗ್ಗಲ್ಲಾನರವರು ಗೃದ್ಧಕೂಟ ಪರ್ವತದಿಂದ ಪೂಜ್ಯ ಲಕ್ಖಣರ ಸಹಿತ ಇಳಿದು ಬರುತ್ತಿದ್ದರು. ಆಗ ಮೊಗ್ಗಲ್ಲಾನರು ಕೆಲವು ಪ್ರೇತಗಳನ್ನು ಕಂಡರು. ಜೇತವನ ವಿಹಾರಕ್ಕೆ ಹಿಂತಿರುಗಿದ ನಂತರ ಭಗವಾನರೊಂದಿಗೆ ಹೀಗೆ ಹೇಳಿದರು: ಭಗವಾನ್, ನಾನು ಇಂದು ಐದು ಪ್ರೇತಗಳನ್ನು ಕಂಡೆನು. ಆದರೆ ಅವುಗಳ ರೂಪವು ಅಸ್ತಿಪಂಜರದ್ದಾಗಿದ್ದು, ಕಾಷಾಯವಸ್ತ್ರ ಹೊಂದಿದ್ದ ಅವುಗಳ ಸುತ್ತಲೂ ಬೆಂಕಿಯ ಜ್ವಾಲೆಯು ಆವೃತವಾಗಿತ್ತು.

ಆಗ ಭಗವಾನರು ಅವರಿಗೆಲ್ಲಾ ಅದರ ಬಗ್ಗೆ ವಿವರಣೆ ನೀಡಿದರು. ಈ ಪ್ರೇತಗಳು ಕಸ್ಸಪ ಬುದ್ಧರ ಕಾಲದಲ್ಲಿ ಭಿಕ್ಷುಗಳಾಗಿದ್ದರು ಹಾಗು ಕಾಷಾಯವಸ್ತ್ರ ಧರಿಸಿಯೂ ಅಪಾರ ಪಾಪ ಮಾಡಿದ್ದರು. ಅದರ ಪರಿಣಾಮವಾಗಿ ಅವರು ನಿರಯದಲ್ಲಿ ಜನಿಸಿದರು. ನಂತರ ಹೀಗೆ ಈ ರೀತಿಯ ಪ್ರೇತಗಳಾಗಿಯೂ ಜ್ವಾಲೆಗಳ ದುಃಖ ಅನುಭವಿಸುತ್ತಿದ್ದಾರೆ ಎಂದು ಹೇಳಿ ಈ ಗಾಥೆಯನ್ನು ನುಡಿದರು.

ಬಹಳಷ್ಟು ಜನರು ಕಾಷಾಯವಸ್ತ್ರ ಧರಿಸಿಯು ಸಹಾ

ಪಾಪಧಮ್ಮದಲ್ಲಿ ತೊಡಗುತ್ತಾ ಅನಿಯಂತ್ರಿತರಾಗಿದ್ದಾರೆ,

ಪಾಪಕರ್ಮದಿಂದಾಗಿ ಈ ಪಾಪಿಗಳು 

ನಿರಯದಲ್ಲಿ ಹುಟ್ಟುವರು. (307)

5.4.5 ವರ್ತಮಾನದ ವೀಕ್ಷಣೆ

ಒಮ್ಮೆ ಮೊಗ್ಗಲಾನರು ತಮ್ಮ ದಿವ್ಯ ದೃಷ್ಟಿಯಲ್ಲಿ  ಪಸೇನದಿ ರಾಜರು ಲಿಚ್ಚವಿಗಳಿಂದ ಯುದ್ಧದಲ್ಲಿ ಸೋತುಹೋಗುತ್ತಿರುವುದು ಕಂಡರು. ಅದನ್ನು ಭಿಕ್ಖುಗಳಲ್ಲಿ ಹೇಳಿಕೊಂಡರು. ಅದರೆ ಪಸೇನದಿಯು ಪುನಃ ಸೈನ್ಯಗಳನ್ನು ಸೇರಿಸಿಕೊಂಡು ಪುನರಾಕ್ರಮಣ ಮಾಡಿ ಲಿಚ್ಚವಿಗಳನ್ನು ಗೆದ್ದನು .ಈ ವಿಷಯವನ್ನು ತಿಳಿದ ಕೆಲ ಭಿಕ್ಷುಗಳು ಮೊಗ್ಗಲಾನರಿಗೆ ಸುಳ್ಳು ಬಡಾಯಿ ಮಾಡಿದರೆಂದು ಆಪಾದಿಸಿದರು. ಅದರೆ ಸರ್ವವನ್ನು ಅರಿತ ಭಗವಾನರು ಸತ್ಯವನ್ನು ತಿಳಿಸಿ, ಮೊಗ್ಗಲಾನರು ಆಗಿನ ವರ್ತಮಾನವನ್ನಷ್ಟೆ ತಿಳಿಸಿದರು. ಅದು ಆಗ ಸತ್ಯವಾಗಿತ್ತು ಅದರೆ ನಂತರದಲ್ಲಿ ಪಸೇನದಿಯ ಪರಾಕ್ರಮದಿಂದ ಪರಿಣಾಮವು ಬದಲಾಯಿತು ಎಂದು ತಿಳಿಸಿದರು. (ವಿ.ಪಿ.ಪಾರಾಜಿಕ 4.95.17) 

5.4.6.ಸಪರ್ಾಕೃತಿಯ ಪ್ರೇತದ ಘಟನೆ

ಒಮ್ಮೆ ಮಹಾಮೊಗ್ಗಲಾನ ಮತ್ತು ಪೂಜ್ಯ ಲಕ್ಕಣ್ಣನವರು ಒಂದು ಸಾವಿರ ಜಟಾಧಾರಿ ಸನ್ಯಾಸಿಗಳ ಸಮೇತ ರಾಜಗೃಹದಲ್ಲಿ ಭಿಕ್ಷಾಟನೆಗೆ ಹೊರಟರು. ಪೂಜ್ಯ ಮೊಗ್ಗಲಾನರವರು ಸರ್ಪಪ್ರೇತವನ್ನು ನೋಡಿ ಮುಗುಳ್ನಗೆ ಬೀರಿದರು. ಇದರ ಬಗ್ಗೆ ಲಕ್ಕಣ್ಣನವರು ವಿಚಾರಿಸಿದಾಗ ಸಹೋದರ ಪ್ರಶ್ನೆ ಕೇಳಲು ಇದು ಸಕಾಲವಲ್ಲ. ಬುದ್ಧರ ಬಳಿ ಹೋಗುವವರೆಗೂ ಸುಮ್ಮನಿದ್ದು ನಂತರ ಕೇಳು ಎಂದರು ಮೊಗ್ಗಲಾನರವರು. ಹಾಗೆಯೇ ಬುದ್ಧರ ಬಳಿಗೆ ಬಂದು ನಮಸ್ಕರಿಸಿ ಕುಳಿತರು. ಆಗ ಲಕ್ಕಣ್ಣನವರು ಮುಗುಳ್ನಗೆಗೆ ಕಾರಣವನ್ನು ಕೇಳಿದಾಗ ಅದಕ್ಕೆ ಮೊಗ್ಗಲಾನರವರು ಈ ರೀತಿ ಉತ್ತರಿಸಿದರು: ಸೋದರ ನನ್ನ ನಗೆಯ ಕಾರಣವೇನೆಂದರೆ ನಾನು ಒಂದು ಸರ್ಪಪ್ರೇತವನ್ನು ಕಂಡೆನು. ಅದರ ತಲೆಯು ಮಾನವನಂತೆ ಇತ್ತು. ಆದರೆ ಮುಂಡವು ಸರ್ಪದಂತೆ ಇತ್ತು. ಅದು 25 ಯೋಜನ ಉದ್ದವಿತ್ತು. ಅದರ ತಲೆಯಿಂದ ಹೊರಟ ಜ್ವಾಲೆಗಳು ಅದರ ಬಾಲವನ್ನು ಮುಟ್ಟುತ್ತಿತ್ತು. ಅದರ ಬಾಲದಿಂದ ಹೊರಟ ಜ್ವಾಲೆಗಳು ಅದರ ತಲೆಯನ್ನು ಮುಟ್ಟುತ್ತಿತ್ತು. ಈ ರೀತಿ ಅದು ಜ್ವಾಲೆಯಿಂದ ಆವೃತವಾಗಿತ್ತು. ಅಲ್ಲಿಯೇ ಇನ್ನೊಂದು ಕಾಗೆಯ ಪ್ರೇತವಿತ್ತು. ಅದೂ ಸಹಾ ಅಷ್ಟೇ ಉದ್ದವಿತ್ತು.

ಕಾಗೆಯ ಆಕೃತಿಯ ಪ್ರೇತವನ್ನು ಮೊಗ್ಗಲಾನರವರು ಮಾತನಾಡಿಸಿ ಅದರ ಸ್ಥಿತಿ ಕಾರಣ ಕೇಳಿದಾಗ ಆ ಪ್ರೇತವು ಈ ರೀತಿ ಉತ್ತರಿಸಿತ್ತು:

ನಾನು ಹಿಂದಿನ ಜನ್ಮದಲ್ಲಿ ಪೂಜ್ಯರ ಆಹಾರವನ್ನು ಕದ್ದುತಿಂದು ಅವರನ್ನು ಉಪವಾಸಕ್ಕೆ ದೂಡಿದ ಫಲದಿಂದಾಗಿ ಸತ್ತು ಅವೀಚಿ ನರಕದಲ್ಲಿ ಹುಟ್ಟಿ ನಂತರ ಹೀಗೆ ಫಲವನ್ನು ಈಗ ಈ ರೀತಿ ಅನುಭವಿಸುತ್ತಿರುವೆ ಎಂದಿತು.

ಪ್ರೇತಸರ್ಪದ ಕತೆಯೂ ಹಾಗೆಯೇ ಇತ್ತು. ಅದು ಹಿಂದಿನ ಜನ್ಮದಲ್ಲಿ ಬನಾರಸ್ನ ವಾಸಿಯಾಗಿದ್ದನು. ಆತನು ವಾಸವಾಗಿರುವ ಕಡೆಯಲ್ಲೇ ಪಚ್ಚೇಕ ಬುದ್ಧರು ವಾಸವಾಗಿದ್ದರು. ಅವರನ್ನು ಕಾಣಲು ಜನರು ಈತನ ಹೊಲವನ್ನು ತುಳಿದು ಹಾದು ಹೋಗುತ್ತಿದ್ದರು. ಈ ರೈತನು ಇದನ್ನು ತಡೆಯಲು ಪ್ರಯತ್ನಿಸಿ ವಿಫಲನಾದನು. ಕೊನೆಗೆ ಆಕ್ರೋಶಗೊಂಡು ಅವರು ಆಹಾರವನ್ನು ಹುಡುಕುತ್ತಾ ನಗರಕ್ಕೆ ಹೋಗಿರುವಾಗ ಪಾತ್ರೆಗಳನ್ನು ಒಡೆದು ವಾಸಸ್ಥಳಕ್ಕೆ ಬೆಂಕಿಯಿಟ್ಟನು. ಆಗ ಜನಗಳಿಗೆ ಅತಿ ಕ್ರೋಧವುಂಟಾಗಿ ಆತನನ್ನು ಕೊಂದರು. ಮರಣದ ನಂತರ ಅವೀಚಿ ನರಕದಲ್ಲಿ ಹುಟ್ಟಿ ನಂತರ ಗೃದಕೂಟ ಪರ್ವತದಲ್ಲಿ ಪ್ರೇತಸರ್ಪವಾದನು. ಇದಕ್ಕಾಗಿಯೇ ನಾನು ನಗೆ ಬೀರಿದೆ ಎಂದು ಹೇಳಿದರು. 

ಆಗ ಭಗವಾನರು ಈ ರೀತಿ ಹೇಳಿದರು : ಭಿಕ್ಷುಗಳೇ, ಮೊಗ್ಗಲಾನರವರು ಹೇಳಿದ್ದು ನಿಜವಾಗಿದೆ. ನಾನು ಸಹಾ ಅದನ್ನು ಸಂಬೋಧಿಪ್ರಾಪ್ತಿಯ ನಂತರ ನೋಡಿರುವೆ, ಆದರೆ ಬಹುಜನ ಹಿತಕ್ಕಾಗಿ ನಾನು ಹೇಳಿಲ್ಲ. ಏಕೆಂದರೆ ನನ್ನ ಮಾತನ್ನು ನಂಬದವರಿಗೆ ಅದು ಲಾಭಕಾರಿಯಾಗಿಲ್ಲ.

ಆಗ ಭಗವಾನರು ಈ ಗಾಥೆಯನ್ನು ನುಡಿದರು : ಪಾಪಕಮ್ಮವು ತಕ್ಷಣ ಪಲನೀಡದು, ಹಾಲು ತಕ್ಷಣ ಹುಳಿಯಾಗದಂತೆ, ಬೂದಿಮುಚ್ಚಿದ ಕೆಂಡದಂತೆ, ಮೂರ್ಖನಿಗೆ ಮೆಲ್ಲನೆ ಉರಿಯುತ್ತ ಸುಡುವುದು.

5.4.7 ಹಿಂಸೆಯ ಪರಿಣಾಮ ಪ್ರೇತ

ಒಮ್ಮೆ ಪೂಜ್ಯ ಮಹಾ ಮೊಗ್ಗಲಾನರವರು ಗೃದ್ಧಕೂಟದ ಬಳಿ ಒಂದು ಪ್ರೇತವನ್ನು ಕಂಡರು. ಆ ಪ್ರೇತಕ್ಕೇ ಸುಮಾರು 60000 ಸುತ್ತಿಗೆಗಳಿಂದ ತಲೆಗೆ ಪೆಟ್ಟುಗಳು ಒಂದಾದ ಮೇಲೊಂದರಂತೆ ಸುತ್ತಿಗೆಗಳು ಬಂದು ಆಕ್ರಮಣ ಮಾಡುತ್ತಿದ್ದವು. ಆ ದೃಶ್ಯವು ಅತಿ ಭಯಂಕರವಾಗಿತ್ತು. ನಂತರ ಮೊಗ್ಗಲಾನರು ಅದರ ಬಗ್ಗೆ ಬುದ್ಧರಿಗೆ ವಿಚಾರಿಸಿದಾಗ ಭಗವಾನರು ಆ ಪ್ರೇತದ ಬಗ್ಗೆ ಹೀಗೆ ಹೇಳಿದರು. 

ಹಿಂದೆ ಸಮ್ಮಸಂಬುದ್ದರು ಇಲ್ಲದ ಕಾಲದಲ್ಲಿ ಸತ್ಥಿಕುಟ ಎಂಬುವವನು ಕಲ್ಲು ಎಸೆಯುವುದರಲ್ಲಿ ಕುಶಲಿಯಾಗಿದ್ದನು. ಒಮ್ಮೆ ಆತನು ತನ್ನ ಗುರುವಿನಲ್ಲಿ ತನ್ನ ಕೌಶಲ್ಯವನ್ನು ಪ್ರಯತ್ನಿಸುವೆ ಎಂದಾಗ ಆ ಗುರುವು ಆತನಿಗೆ ಹಸು ಅಥವಾ ಮನುಷ್ಯನಿಗೆ ಮಾತ್ರ ಕಲ್ಲಿನಿಂದ ಹೊಡೆಯಬೇಡ ಎಂದು ಎಚ್ಚರಿಕೆ ನೀಡಿದನು. ಅದರೆ ಆತನು ಆ ಹಿತವಚನವನ್ನು ಕಿವಿಗೆ ಹಾಕಿಕೊಳ್ಳಲಿಲ್ಲ.

ಒಂದುದಿನ  ಸುನೆತ್ತ ಎಂಬ ಪಚ್ಚೇಕ ಬುದ್ಧರು ಆಹಾರಕ್ಕಾಗಿ ದಾರಿಯಲ್ಲಿ ಹೋಗುತ್ತಿದ್ದರು. ಆಗ ಆ ಮೂರ್ಖನು ಅವರನ್ನೇ ಗುರಿಯಾಗಿ ಆರಿಸಿದನು. ಏಕೆಂದರೆ ಅವರನ್ನು ಆತನು ಭಿಕ್ಷುಕನೆಂದು ಭಾವಿಸಿ, ಇವರನ್ನು ಹೊಡೆದರೆ ಅವರನ್ನು ಕೇಳಲು ಯಾವುದೇ ಬಂಧುವಾಗಲಿ, ಪೋಷಕರಾಗಲಿ ಮತ್ತು ಅವರು ಪ್ರಾಣಿಯೂ ಅಲ್ಲ ಎಂದು ಭಾವಿಸಿ ಕಲ್ಲನ್ನು ಅವರತ್ತ ಎಸೆದನು. ಆತನು ಎಸೆದ ಕಲ್ಲಿನ ವೇಗಕ್ಕೆ ಆ ಕಲ್ಲು ಪಚ್ಚೇಕ ಬುದ್ಧರ ಬಲಕಿವಿಯಿಂದ ತೂರಿ ಎಡಕಿವಿಯಲ್ಲಿ ಹೊರಗೆ ಬಂದಿತು. ಆ ನೋವಿನಿಂದ ಅವರು ಪರಿನಿಬ್ಬಾಣ ಪ್ರಾಪ್ತಿಮಾಡಿದರು.

ಆಗ ಜನರಿಗೆ ಸತ್ಥಿಕೂಟನ ಮೇಲೆ ಅಪಾರ ಕೋಪ ಉಂಟಾಗಿ ಆತನಿಗೆ ಹೊಡೆದು ಕೊಂದರು. ನಂತರ ಅವನು ಅವಿಚಿ ನರಕದಲ್ಲಿ ಹುಟ್ಟಿದನು. ನಂತರ ಅಲ್ಲಿಂದ ಮೃತನಾಗಿ ಗೃದ್ಧಕೂಟದ ಪರ್ವತದ ಬಳಿ ಪ್ರೇತವಾಗಿ ಹುಟ್ಟಿದನು. ಆ ಪ್ರೇತಕ್ಕೆ ನಿರಂತರ ಕೆಂಪಗೆ ಕಾದ 60000 ಸುತ್ತಿಗೆಯಿಂದ ಪೆಟ್ಟುಗಳು ಬೀಳುತ್ತಿದ್ದವು. 

ಹೀಗೆ ಭಗವಾನರು ಆ ಪ್ರೇತದ ಬಗ್ಗೆ ಹೇಳಿ ಮೂರ್ಖರಿಗೆ ಯಾವ ಜ್ಞಾನ, ವಿದ್ಯೆಯು ಫಲನೀಡದೆ, ಅವರನ್ನು ಬದಲಾಗಿ ಹಾನಿಯುಂಟುಮಾಡುತ್ತದೆ ಎಂದು ಹೇಳಿ ಮೇಲಿನ ಗಾಥೆ ನುಡಿದರು.

ಏನೆಲ್ಲ ಜ್ಞಾನವನ್ನು ಮೂರ್ಖನು ಗಳಿಸಿರುವನೋ, ಅದೆಲ್ಲಾ ಆತನ ಅನರ್ಥಕ್ಕಾಗಿಯೇ. ಅದು ಮೂರ್ಖನ ಪುಣ್ಯವನ್ನು, ತಲೆಯನ್ನು ಕತ್ತರಿಸಿ ಹಾಕುತ್ತದೆ. (72)

5.4.8 ಸುಜ್ಞಾನಿಗಳು ಸಮಚಿತ್ತತೆಯಿಂದಿರುತ್ತಾರೆ

ವೇರಂಜಾದ ಬ್ರಾಹ್ಮಣನ ಕೋರಿಕೆಯಂತೆ ಬುದ್ಧರು ವೇರಂಜಾದಲ್ಲಿ ತಂಗಿದ್ದರು. ಆದರೆ ಅವರು ಅಲ್ಲಿದ್ದಾಗ ಆ ಬ್ರಾಹ್ಮಣ ಅವರಿಗೆ ನೋಡಿಕೊಳ್ಳಲಿಲ್ಲ. ಅದೂ ಅಲ್ಲದೆ ವೇರಂಜ ಜನರು ಕ್ಷಾಮವನ್ನು ಎದುರಿಸುತ್ತಿದ್ದರು. ಆದ್ದರಿಂದ ಭಿಕ್ಷುಗಳಿಗೆ ಅತಿಅಲ್ಪವಾದ ಆಹಾರ ದೊರೆಯುತ್ತಿತ್ತು. ಪರಮಪೂಜ್ಯ ಮೊಗ್ಗಲಾನರವರು ತಮ್ಮ ಪವಾಡಶಕ್ತಿಯಿಂದ ಆಹಾರವನ್ನು ತಂದು ನೀಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಅಂದರೆ ಬುದ್ಧರು ಅದಕ್ಕೆ ಅನುಮತಿ ನೀಡಲಿಲ್ಲ. ಈ ಎಲ್ಲಾ ಕಷ್ಟಗಳಿದ್ದರೂ ಭಿಕ್ಷುಗಳು ಎದೆಗುಂದಲಿಲ್ಲ. ಅವರು ಸಿಕ್ಕಿರುವಷ್ಟರಲ್ಲಿ ಸಂತೃಪ್ತರಾಗಿ ಧ್ಯಾನಜೀವನ ನಡೆಸಿದರು. ಕುದುರೆಯ ವ್ಯಾಪಾರಿಗಳು ಆಗ ಅವರಿಗೆ ಅಲ್ಪಸ್ವಲ್ಪ ಧಾನ್ಯ ನೀಡುತ್ತಿದ್ದರು.

ವರ್ಷವಾಸವು ಮುಗಿಯಿತು. ಆಗ ಬುದ್ಧರು ಮತ್ತು ಇತರ ಭಿಕ್ಷುಗಳು ಜೇತವನಕ್ಕೆ ಹಿಂತಿರುಗಿದರು. ಶ್ರಾವಸ್ತಿಯ ಜನರಂತು ಆನಂದದಿಂದ ಬುದ್ಧರಿಗೆ ಮತ್ತು ಭಿಕ್ಷುಗಳಿಗೆ ಆಹಾರೋಪಚಾರವನ್ನು ಮಾಡಿದರು.

ಆ ಸಂದರ್ಭದಲ್ಲಿ ಭಿಕ್ಷುಗಳೊಡನೆ ವೇರಂಜಾದ ಕೆಲವು ಜನರು ಸಹಾ ವಿಹಾರದಲ್ಲಿ ಉಳಿದರು ಅವರಂತು ತಿಂದುತೇಗಿ ನಿದ್ದೆಹೋದರು. ನಂತರ ಎದ್ದ ಆ ಜನರು ನದಿಯ ದಂಡೆಗೆ ಹೋಗಿ ಈಜಾಡಿ, ಕೂಗಾಡುತ್ತಾ, ಕುಣಿದಾಡುತ್ತಾ, ಕುಸ್ತಿಯಾಡುತ್ತಾ, ಗದ್ದಲ ಎಬ್ಬಿಸುತ್ತಾ ಸಭ್ಯತೆ ಉಲ್ಲಂಘಿಸಿದರು.

ಈ ವಿಷಯ ಭಗವಾನರ ಬಳಿಗೆ ಬಂದಿತು. ಆಗ ಭಗವಾನರು ಹೀಗೆಂದರು: ಇದು ಅಜ್ಞಾನಿ ಜನಗಳ ಸ್ವಭಾವವಾಗಿದೆ. ಅವರು ದುಃಖದಲ್ಲಿ ಕುಗ್ಗುವರು ಮತ್ತು ಸುಖದಲ್ಲಿ ಹಿಗ್ಗುವರು. ಆದರೆ ಜ್ಞಾನಿಗಳು ಸುಖ-ದುಃಖಗಳಲ್ಲೂ ಸ್ಥಿರವಾಗಿರುವರು ಎಂದು ಹೇಳಿ ನಂತರ ಈ ಗಾಥೆಯನ್ನು ಹೇಳಿದರು. 

ಸತ್ಪುರುಷರು ಸರ್ವವನ್ನು ತ್ಯಾಗ ಮಾಡುತ್ತಾರೆ. ಸಂತರು ಕಾಮಭೋಗಗಳ ಮಾತುಗಳಲ್ಲಿ ತೊಡಗುವುದಿಲ್ಲ. ಪಂಡಿತರು ಸುಖ-ದುಃಖಗಳ ಸ್ಪರ್ಶಗಳಿಂದ ಸುಖವಾಗಲಿ, ದುಃಖವಾಗಲಿ ವ್ಯಕ್ತಪಡಿಸುವುದಿಲ್ಲ.

ಚೋರನಿಂದ ಜಾಗ್ರತೆ

   ಒಮ್ಮೆ ಮೊಗ್ಗಲಾನರು ರಾಜಗೃಹದ ಅರಣ್ಯದಲ್ಲಿನ ಕುಟೀರದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಕಳ್ಳನೊಬ್ಬನು ಹಳ್ಳಿಯಲ್ಲಿ ಕಳ್ಳತನ ಮಾಡಿ, ಕಾಡಿನಲ್ಲಿ ಬಂದನು. ಅಲ್ಲಿದ್ದಂತಹ ಕುಟೀರವನ್ನು ನೋಡಿ ಇಲ್ಲಿ ಮಲಗಿದ್ದರೆ ತಾನು ಕ್ಷೇಮವೆಂದು ಯೋಚಿಸಿ ಅಲ್ಲಿ ಕುಟೀರದ ಮುಂಭಾಗದಲ್ಲಿ ಎಲೆಗಳನ್ನು ಹಾಸಿಕೊಂಡು ಮಲಗಿದನು. ಮೊಗ್ಗಲಾನರಿಗೆ ವಿಷಯವೆಲ್ಲಾ ಅರಿವಾಗಿ ಆತನಿಗೆ ನೀನೂ ಇಲ್ಲಿ ಮಲಗಬೇಡವೆಂದು ಹೇಳಿ ಆತನನ್ನು ಅಲ್ಲಿಂದ ಓಡಿಸಿದರು.

5.5. ಸುಗತಿಗಳ ಪ್ರತ್ಯಕ್ಷದಶರ್ಿ 

ಅವರು ಕರ್ಮಗಳನ್ನು ಹಾಗೂ ಅವುಗಳ ಫಲಗಳನ್ನು ಸ್ಪಷ್ಟವಾಗಿ ವೀಕ್ಷಿಸಿದ್ದರು. ಹೇಗೆ ಮಾನವರು ತಮ್ಮ ಕಮ್ಮಾನುಸಾರ ಸುಗತಿಗಳನ್ನು ,ನಾನ ಹಂತಗಳ ಸ್ವರ್ಗಗಳನ್ನು ನೋಡಿ ಬೇಟಿ ನೀಡಿ ಸುಕರ್ಮದ ಫಲಗಳನ್ನು ಅರಿಯುತ್ತಿದ್ದರು. ಹಾಗೇಯೆ ಹೇಗೆ ಮಾನವರು ತಮ್ಮ ಕುಕರ್ಮದಿಂದಾಗಿ ಪ್ರೇತಲೋಕಗಳಲ್ಲಿ ಪ್ರಾಣಿಲೋಕದಲ್ಲಿ ಹಾಗೂ ನರಕಗಳಲ್ಲಿ ಹುಟ್ಟಿ ಹೇಗೆ ನರಳುತ್ತಾರೆ ಎಂಬುದನ್ನು ಸ್ವಯಂ ನೋಡಿ ಅದನ್ನು ಜನರಿಗೂ ತಿಳಿಸಿ ಅವರಿಗೂ ಎಚ್ಚರಿಸುತ್ತಿದ್ದರು. ಅವುಗಳ ಬಗೆಗೆ ತಿಪಿಟಕದಲ್ಲಿರುವ ಸುತ್ತಪಿಟಕದಲ್ಲಿರುವ ಖುದ್ದಕ ನಿಕಾಯದಲ್ಲಿನ ವಿಮಾನವತ್ತು ಹಾಗೂ ಪೇತ ವತ್ತುವಿನಲ್ಲಿ  ಹಾಗೂ ಸಂ.ನಿಕಾಯದ 19.1-21 ಹಾಗೂ ವಿನಯ ಪಿಟಿಕದ ಪರಾಜಿಕ4.9.15 ರಲ್ಲಿಯು ಹಾಗೂ ಧಮ್ಮಪದ ಅಟ್ಟಕಥೆ ಹಾಗೂ ಜಾತಕದಲ್ಲಿಯು ಸುದೀರ್ಘ ವಿವರಣೆಯಿದೆ .ಇಲ್ಲಿ ಕೆಲವು ಉದಾಹರಣೆ ನೀಡಲಾಗಿದೆ.

5.5.1 ನಂದಿಯನ ದಾನ ವೃತ್ತಾಂತ

ನಂದಿಯನು ಬನಾರಸ್ನ ಶ್ರೀಮಂತ ಪುತ್ರನಾಗಿದ್ದನು. ಆತನ ತಂದೆ-ತಾಯಿಗಳು ಸಹಾ ನಂದಿಯನ ತರಹ ಧಾಮರ್ಿಕರಾಗಿದ್ದರು. ಅವರು ತಮ್ಮ ಪುತ್ರನು ಸಹಾ ಅವರಂತೆ ಬುದ್ಧ, ಸಂಘಕ್ಕೆ ಸೇವಕನಾಗಿ, ಸಹಾಯಕನಾಗಿ, ಧಾಮರ್ಿಕನಾಗಿ ಜೀವಿಸಲಿ ಎಂದು ಬಯಸುತ್ತಿದ್ದರು. ಆತನ ತಂದೆ-ತಾಯಿಗಳು ಆತನಿಗಾಗಿ ತಮ್ಮ ಬಂಧುವೋರ್ವನ ಪುತ್ರಿ ರೇವತಿ ಎಂಬುವವಳ ಸಂಗಡ ವಿವಾಹ ಮಾಡಲು ಸಿದ್ಧರಾದಾಗ ನಂದಿಯ ಈ ವಿವಾಹಕ್ಕೆ ಒಪ್ಪಲಿಲ್ಲ. ಕಾರಣ ಆಕೆ ತ್ರಿರತ್ನದಲ್ಲಿ ನಂಬಿಕೆವುಳ್ಳವರಾಗಿರಲಿಲ್ಲ ಮತ್ತು ದಾನಾದಿ ಪುಣ್ಯಕಾರ್ಯಗಳನ್ನು ಮಾಡುತ್ತಿರಲಿಲ್ಲ. ಆಗ ನಂದಿಯನ ತಾಯಿಯು ರೇವತಿಗೆ ಮಗಳೇ, ಮನೆಯನ್ನು ಶುಭ್ರವಾಗಿಡು, ಭಿಕ್ಷುಗಳ ಸೇವೆ ಮಾಡು, ಸತ್ಕರಿಸು. ತ್ರಿಶರಣು, ದಾನ, ಶೀಲದಲ್ಲಿ ತಲ್ಲೀನಳಾಗು, ಆಗ ಮಾತ್ರ ನೀನು ನನ್ನ ಮಗನಿಗೆ ಒಪ್ಪಿಗೆಯಾಗುವೆ.

ಇದನ್ನು ಆಲಿಸಿದ ರೇವತಿ ಹಾಗೆಯೇ ನಡೆದುಕೊಂಡಳು. ಇದರಿಂದ ಸಂತುಷ್ಟನಾದ ನಂದಿಯ ಆಕೆಯೊಂದಿಗೆ ವಿವಾಹವಾದನು. ಕಾಲಾನಂತರ ಆತನ ತಂದೆ-ತಾಯಿಗಳು ಸ್ವರ್ಗಸ್ಥರಾದರು. ನಂದಿಯ ಮತ್ತು ರೇವತಿ ತಮ್ಮ ಎರಡು ಮಕ್ಕಳೊಂದಿಗೆ ಸುಖವಾಗಿದ್ದರು. ಮುಂದೆ ನಂದಿಯನು ಭಿಕ್ಷುಗಳಿಗೆ ದಾನ ಮಾಡುತ್ತಲೇ ಇದ್ದನು. ಆತನು ಧಮರ್ೊಪದೇಶ ಆಲಿಸಿ ಭಿಕ್ಷುಗಳಿಗಾಗಿ ದೊಡ್ಡ ವಿಹಾರವನ್ನು ಕಟ್ಟಿಸಿದನು. ಅದರಲ್ಲಿ ನೆಲೆಸಲು ಸ್ಥಳ, ಧ್ಯಾನಮಂದಿರ, ಸಭಾಂಗಣ ಎಲ್ಲವೂ ಇದ್ದವು. ಅಷ್ಟೇ ಅಲ್ಲದೆ ಭಿಕ್ಷುಗಳಿಗಾಗಿ ಸರ್ವ ಸೌಕರ್ಯದಿಂದ ಕೂಡಿತ್ತು. ಇವೆಲ್ಲಾ ನಿಮರ್ಾಣವಾದ ಮೇಲೆ ಆತನು ಬುದ್ಧರ ಬಳಿಗೆ ಬಂದು ಅವರಿಗೆ ಇಸಿಪಟ್ಟಣದ ಈ ವಿಹಾರ ದಾನಗೈಯ್ಯಲು ನಿರ್ಧರಿಸಿ ಕುಳಿತನು. ನಂತರ ಬುದ್ಧರ ಕೈಯಲ್ಲಿ ಸಾಂಕೇತಿಕವಾಗಿ ನೀರನ್ನು ಸುರಿದು ದಾನ ಮಾಡಿದನು. ಆ ನೀರು ಬುದ್ಧರ ಬಲಗೈಗೆ ಸೋಕಿದ ಕೂಡಲೇ ತಾವತಿಂಸ ಸುಗತಿ ಲೋಕದಲ್ಲಿ 12 ಯೋಜನ ಉದ್ದಗಲದ ಭವ್ಯ ಭವನವು ಸೃಷ್ಟಿಯಾಯಿತು. ಅದು ಹಲವು ನೂರು ಯೋಜನಗಳಷ್ಟು ಎತ್ತರವಾಗಿತ್ತು. ಏಳು ರೀತಿಯ ರತ್ನಗಳಿಂದ ಹಾಗು ಸತ್ಕರಿಸಲು ಅಪ್ಸರೆಯರಿಂದ ಕೂಡಿತ್ತು. 

ಅಲೌಕಿಕ ಸಿದ್ಧಿಗಳಲ್ಲಿ ಬುದ್ಧರ ನಂತರ ಎರಡನೆಯವರಾಗಿ ಅದ್ವಿತೀಯ ಸಾಮಥ್ರ್ಯ ಹೊಂದಿದ್ದ ಮೊಗ್ಗಲ್ಲಾನರು ಆಗಾಗ ಸುಗತಿ ಲೋಕಗಳಿಗೆ ಪ್ರಯಾಣ ಮಾಡುತ್ತಿದ್ದರು. ಈ ಭವ್ಯ ಭವನವನ್ನು ಕಂಡು ಮೊಗ್ಗಲ್ಲಾನರು ದೇವತೆಗಳಲ್ಲಿ ಈ ಭವನವು ಯಾರಿಗಾಗಿ? ಎಂದು ವಿಚಾರಿಸಿದಾಗ ಇದು ನಂದಿಯನು ಬುದ್ಧರಿಗೆ ಮತ್ತು ಸಂಘಕ್ಕೆ ದಾನಗೈದ ಫಲದ ಪ್ರತಿಫಲ ಎಂದು ತಿಳಿಯಿತು. ಮೊಗ್ಗಲ್ಲಾನರಿಗೆ ದಾನಾದಿ ಪುಣ್ಯಕರ್ಮಗಳ ಫಲಗಳು ಸತ್ತಮೇಲೆ ಸಿಗುವುದೆಂದು ತಿಳಿದಿತ್ತು. ಆದರೆ ಆತ ಬದುಕಿರುವಂತೆಯೇ ಆತನಿಗಾಗಿ ಭವ್ಯ ಭವನ ನಿಮರ್ಾಣವಾಗುವುದು ಅವರಿಗೆ ಆಶ್ಚರ್ಯವಾಯಿತು. ಸಂದೇಹ ಪರಿಹರಿಸಿಕೊಳ್ಳಲು ಬುದ್ಧರಲ್ಲಿಗೆ ಬಂದರು ಮತ್ತು ಪ್ರಶ್ನಿಸಿದರು. 

ಅದಕ್ಕೆ ಉತ್ತರವಾಗಿ ಭಗವಾನರು ಈ ರೀತಿ ಹೇಳಿದರು: ಓ ಮೊಗ್ಗಲ್ಲಾನ, ನಿನ್ನ ಕಣ್ಣಿಂದಲೇ ಸುಗತಿಯಲ್ಲೂ ಕಂಡು ಸಹಾ ನನಗೇಕೆ ಪ್ರಶ್ನಿಸುವೆ? ಚಿರಕಾಲ ಮನೆಯಿಂದ ದೂರವಿದ್ದು ಪುನಃ ಮನೆಗೆ ಹಿಂದಿರುಗಿ ಬಂದಾಗ ಬಂಧು-ಮಿತ್ರರು ಸ್ವಾಗತಿಸುವುದಿಲ್ಲವೇ? ಹಾಗೆಯೇ ಪುಣ್ಯಶಾಲಿಗೆ ಪುಣ್ಯವು ಪರಲೋಕದಲ್ಲಿ ಸ್ವಾಗತಿಸುತ್ತದೆ ಎಂದು ಹೇಳಿ  ಈ ಎರಡು ಗಾಥೆಗಳು ಹೇಳಿದರು

ಚಿರಕಾಲ ಮನೆಯಿಂದ ದೂರವಿದ್ದ ಪುರುಷನು

ದೂರದಿಂದ ಕ್ಷೇಮವಾಗಿ ಹಿಂತಿರುಗಿದಾಗ

ಆತನ ಮಿತ್ರರು ಶ್ರೇಯೋಭಿಲಾಷಿಗಳು, ಬಂಧುಗಳು

ಆತನ ಬರುವಿಕೆಗಾಗಿ ಅಭಿನಂದಿಸುತ್ತಾರೆ. (219)

ಹಾಗೆಯೇ ಪುಣ್ಯ ಮಾಡಿದವನಿಗೆ,

ಈ ಲೋಕ ತೊರೆದು ಪರಗತಿಗೆ ಹೊರಟಾಗ

ಪುಣ್ಯ ಕಾರ್ಯಗಳು ಬಂಧುಗಳಂತೆ ಪ್ರಿಯಬಾಂಧವರಂತೆ ಸ್ವಾಗತಿಸುತ್ತವೆ.  (220)

5.5.2ದೇವ ದೇವತೆಗಳಾಗುವುದು ಹೇಗೆ ?

ಒಮ್ಮೆ ಪರಮಪೂಜ್ಯ ಮಹಾ ಮೊಗ್ಗಾಲಾನರವರು ದೇವಲೋಕಕ್ಕೆ ಭೇಟಿಯಿತ್ತರು. ಅಲ್ಲಿ ಹಲವಾರು ದೇವ-ದೇವತೆಗಳು ಸುಖಪೂರ್ವಕವಾಗಿ ವೈಭೋಗಗಳಿಂದ ಕೂಡಿದ್ದರು. ಆಗ ಮೊಗ್ಗಲಾನರವರಿಗೆ ಇವರು ಯಾವ ಪುಣ್ಯಗಳಿಂದ ಹೀಗಾಗಿರುವರು ಎಂಬ ಜಿಜ್ಞಾಸೆ ಉಂಟಾಗಿ ಅವರೆಲ್ಲರಿಗೂ ಪ್ರತ್ಯೇಕವಾಗಿ ಪ್ರಶ್ನೆಯನ್ನು ಕೇಳಿದರು.

ನೀವು ಯಾವ ಪುಣ್ಯ ಕರ್ಮ ಮಾಡಿದ್ದರಿಂದಾಗಿ ದೇವ ಜನ್ಮ ತಾಳಿರುವಿರಿ?

ಆಗ ಅವರೆಲ್ಲರೂ ವಿವಿಧರೀತಿಯಲ್ಲಿ ಹೀಗೆ ಉತ್ತರಿಸಿದರು:

ನಾನು ಐಶ್ವರ್ಯವನ್ನು ದಾನ ಮಾಡಿದೆನು.

ನಾನು ಧಮ್ಮವನ್ನು ಸದಾ ಆಲಿಸುತ್ತಿದ್ದೆನು.

ನಾನು ಸದಾ ಸತ್ಯವನ್ನು ನುಡಿದೆನು.

ನಾನು ಕೋಪವನ್ನೇ ಮಾಡಿಕೊಳ್ಳಲಿಲ್ಲ.

ನಾನು ನನಗೆ ಹಿಂಸಿಸಿದವರ ಮೇಲೆ ದ್ವೇಷಿಸಲಿಲ್ಲ.

ನಾನು ಕಬ್ಬನ್ನು ಭಿಕ್ಷುಗಳಿಗೆ ದಾನ ಮಾಡಿದೆನು.

ನಾನು ಹಣ್ಣನ್ನು ಭಿಕ್ಷುಗಳಿಗೆ ದಾನ ಮಾಡಿದೆನು.

ನಾನು ತರಕಾರಿಯನ್ನು ಭಿಕ್ಷುಗಳಿಗೆ ದಾನ ಮಾಡಿದೆನು.

ಅಲ್ಲಿಂದ ಹಿಂತಿರುಗಿದ ಮಹಾ ಮೊಗ್ಗಲಾನರು ಭಗವಾನರಲ್ಲಿ ಇದು ಸಾಧ್ಯವೇ? ಎಂದು ಪ್ರಶ್ನಿಸಿದರು.

ಆಗ ಭಗವಾನರು ಓ ಮೊಗ್ಗಲಾನ, ನೀನೇ ಸ್ವತಃ ನೋಡಿ, ಕೇಳಿ ಸಂಶಯಪಡುವೆ ಏಕೆ? ಅಲ್ಪ ಪುಣ್ಯ ಕರ್ಮಗಳಿಂದಲೂ ಸಹಾ ದೈವತ್ವವನ್ನು ಪಡೆಯಬಹುದು ಎಂದು ಹೇಳಿ ಈ ಗಾಥೆಯನ್ನು ನುಡಿದರು:

ಸತ್ಯವನ್ನೇ ನುಡಿ, ಕೋಪಗೊಳ್ಳಬೇಡ ಮತ್ತು

ಯಾಚಿಸಿದವರಿಗೆ ಅಲ್ಪದಾನವನ್ನದರೂ ನೀಡು,

ಈ ಮೂರರಿಂದಲೇ ದೇವತೆಗಳ ಸಮೀಪ ಹೋಗಬಹುದು. (224)

5.5.3 ಗುಟ್ಟಿಲನ ಪ್ರಶ್ನೆಗಳು

  ಒಮ್ಮೆ ಭಗವಾನರು ರಾಜಗೃಹದಲ್ಲಿ ವಿಹರಿಸುತ್ತಿದ್ದರು. ಆ ಸಮಯದಲ್ಲಿ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ  ಹೋಗಿದ್ದರು. ಆ ಲೋಕದಲ್ಲಿ ಒಂದೆಡೆ 36 ದೇವತೆಗಳ ಅರಮನೆಯು ಇತ್ತು .ಆ ದೇವತೆಗಳಿಗೆ ಸಹಸ್ರಾರು ಅಪ್ಸರೆಯರು ಸಹಾಯಕ್ಕಾಗಿ ಇದ್ದರು. ಅಲ್ಲಿಗೆ ಮೊಗ್ಗಲಾನರು ಹೋಗಿ ಆ ದೇವತೆಗಳ ವೈಭವ, ತೇಜಸ್ಸು, ಇತ್ಯಾದಿಗಳನ್ನು ಪ್ರಶಂಸಿಸುತ್ತಾ ಯಾವ ಕುಶಲ ಕಮ್ಮಗಳನ್ನು ಮಾಡಿದ್ದರಿಂದಾಗಿ ಅವರಿಗೆ ಈ ಬಗೆಯ ಭವ್ಯವಾದ ಸುಗತಿಯು ಸಿಕ್ಕಿತು ಎಂದು ಕೇಳಿದರು. ಆಗ ಅವರಲ್ಲಿ ಒಬ್ಬರು ಉಡುಗೆಗಳನ್ನು ನೀಡಿದೆ ಎಂದರು. ಹೀಗೆಯೇ  ಪ್ರತಿಯೊಬ್ಬರು ತಮ್ಮ ತಮ್ಮ ದಾನದ ವಿಧಗಳನ್ನು ನೀಡಿದ ವಸ್ತುಗಳನ್ನು ಹೇಳಿದರು. ಅದನೆಲ್ಲಾ ಆಲಿಸಿದಂತಹ ಮೊಗ್ಗಾಲಾನರು ನಂತರ ಭಗವಾನರ ಬಳಿಗೆ ಬಂದರು. ಹಾಗೂ ನಡೆದ ಘಟನೆಗಳೆಲ್ಲವನ್ನು ತಿಳಿಸಿದರು. ಆಗ ಭಗವಾನರು ಹೀಗೆ ಪ್ರತಿಕ್ರಿಯೆ ನೀಡಿದರು.:

ಮೊಗ್ಗಲಾನ ಈ ರೀತಿಯಲ್ಲಿ ದೇವತೆಗಳ ಬಳಿಗೆ ಹೋಗಿ ಈ ಬಗೆಯ ಪ್ರಶ್ನೆಗಳನ್ನು ಕೇಳಿರುವುದು ನೀನೆ ಮೊದಲಲ್ಲ. ಹಿಂದಿನ ಜನ್ಮವೊಂದರಲಿ ್ಲ ನನ್ನಿಂದಲೂ ಸಹಾ ಇದೇ ರೀತಿ ಪ್ರಶ್ನೆ ಕೇಳಲ್ಪಟ್ಟಾಗ ಅವರು ಇದೇ ರೀತಿ ಉತ್ತರವನ್ನು ನೀಡಿದ್ದರು. ಆಗ ಅವರು ತಮ್ಮ ಹಿಂದಿನ ಜನ್ಮದಲ್ಲಿ ಗುಟ್ಟಿಲನಾಗಿದ್ದಾಗ ನಡೆದ ಘಟನೆ ಹೇಳಿದರು. ಆ ಜನ್ಮದಲ್ಲಿ ಗುಟ್ಟಿಲನೆಂಬ ವೀಣಾವಾದಕದವರಾಗಿದ್ದರು. ಆಗ ದೇವದತ್ತನು ಆ ಜನ್ಮದಲ್ಲಿ ಅವರ ಶಿಷ್ಯನಾಗಿದ್ದನು. ಆತನು ಆ ಜನ್ಮದಲ್ಲಿ ವಿಧ್ಯೆ ಕಲಿಸಿದಂತಹ ಗುರುವಿಗೇ ಸವಾಲು ಮಾಡಿದನು. ಆಗ ಆ ಜನ್ಮದಲ್ಲಿ ಅವರಿಗೇ ಸಕ್ಕನು ಸಹಾಯ ಮಾಡಲು ಬರುತ್ತಾರೆ ಆಗ ಸಕ್ಕನು ಹೀಗೆ ನುಡಿಯುತ್ತಾನೆ:

ಏಳು ತಂತಿಗಳ ವಾಧ್ಯದಿಂದ ಮಧುರವಾಗಿ, ಎಲ್ಲರಿಗೂ ಒಪ್ಪುವ ರೀತಿ ನಾನೂ ಮೀಟುತ್ತಿರುತ್ತೇನೆ, ಅವುಗಳಿಂದ ಮಾಧುರ್ಯವನ್ನು ನುಡಿಸುತ್ತಿರುತ್ತೇನೆ. ಅಲ್ಲಿ ಮೂಸಿಲನು (ಹಿಂದಿನ ಜನ್ಮದ ದೇವದತ್ತನು) ಪಂದ್ಯಾಹ್ವಾನ ಮಾಡಿರುವನು. ಕೋಸಿಯಾ(ಸಕ್ಕ) ನನಗೆ ಶರಣು ನೀಡು

ಅದಕ್ಕೆ ಸಕ್ಕನು ಹೀಗೆ ಉತ್ತರಿಸುತ್ತಾನೆ. ನಾನು ಶರಣು ನೀಡುವೆನು. ನಾನೂ ಸಹಾ ಗುರುಗಳಿಗೆ ಗೌರವಿಸುವವನೇ , ನಿಮ್ಮ ಶಿಷ್ಯನು ನಿಮಗೆ ಜಯಿಸಲಾರನು. ಗುರುವೇ ನೀವೇ ಶಿಷ್ಯನನ್ನು ಜಯಿಸುವಿರಿ. ನಂತರ ಆ ಪಂದ್ಯದಲ್ಲಿ ಬೋಧಿಸತ್ವರೇ ಜಯಿಸುವರು.

  ಯಾವ ಸ್ತ್ರೀಯರನ್ನು ಮೊಗ್ಗಲಾನರು  ಅಥವಾ ಗುಟ್ಟಿಲ ಬೋಧಿಸತ್ವರು ನೋಡಿದ್ದರೋ  ಅವರು ಕಸ್ಸಪ ಬುದ್ದರ ಕಾಲದಲ್ಲಿದ್ದವರು. ಆ ಕಾಲದಲ್ಲಿ ದಾನ, ಶೀಲ, ಸಹನೆ ಇತ್ಯಾದಿಗಳನ್ನು ಪಾಲಿಸಿ ಈಗ ತಾವತಿಂಸ ದೇವತೆಗಳಾಗಿಹರು. ಈ ಬಗೆಯ ವೈಭವದಲ್ಲಿಹರು.

ಆಗ ಗುಟ್ಟಿಲರು ಆ ದೇವತೆಗಳನ್ನು ಹೀಗೆ ಪ್ರಶ್ನಿಸಿದರು.:ಓ ದೇವತಾ ನೀನು ಅತಿಶಯವಾದ ಸೌಂದರ್ಯವನ್ನು ಪಡೆದಿರುವೆ, ನಾಲ್ಕು ದಿಕ್ಕುಗಳಿಗೂ ಬೆಳಕನ್ನು ನೀಡುವಂತಹ ದಿವ್ಯ ತೇಜಸನ್ನು ಹೊಂದಿರುವೆ. ಯಾವುದರಿಂದಾಗಿ ಈ ದಿವ್ಯವಾದ ರೂಪವು ನಿನಗೆ ಸಿಕ್ಕಿತು, ಯಾವುದರಿಂದಾಗಿ ನೀನೂ ಇಲ್ಲಿ ಪ್ರಗತಿಯಲ್ಲಿರುವೇ ? ಓ ದೇವಿಯೇ ನೀನೂ ಮಾನವಳಾಗಿದ್ದಾಗ ಎಂತಹ ಕಮ್ಮವನ್ನು ಮಾಡಿದ್ದೆ ? ಯಾವುದರಿಂದಾಗಿ ಇಂತಹ ದಿವ್ಯಪ್ರಭೆಯಿಂದ ಕೂಡಿರುವೇ ?

ಯಾವಾಗ ಮೊಗ್ಗಲಾನರು ಈ ರೀತಿಯಲ್ಲಿ ಪ್ರಶ್ನಿಸಿದರೋ ಆಗ ದೇವತೆಯು ಆನಂದಿತಳಾಗಿ ಈ ರೀತಿಯಲ್ಲಿ ಉತ್ತರಿಸಿದಳು :ನಾನು ಅತ್ಯಂತ ಉತ್ಕೃಷ್ಟವಾದ ವಸ್ತ್ರಗಳನ್ನು ಸ್ತ್ರೀಪುರುಷರಿಗೆ ದಾನ ನೀಡಿದ್ದರಿಂದ ನಾನು ಇಂತಹ ದೇವ ರೂಪವನ್ನು ಪಡೆದೆನು ಹಾಗೂ ನನ್ನ ಸುತ್ತಲೂ ಸಹಸ್ರ ಅಪ್ಸರೆಯರು ಸುತ್ತುವರೆದಿದ್ದಾರೆ. ಅಷ್ಟೆ ಅಲ್ಲದೇ ನಾನು ಇಚ್ಚಿಸುವ ರೂಪವನ್ನು ಪಡೆಯುತ್ತೇನೆ. ಈ ಭವ್ಯವಾದ ವಿಮಾನವು ಅದರ ಫಲವೇ ನನ್ನ ದಿವ್ಯವಾದ ಪ್ರಭೆಯು ಸಹಾ ಅದರ ಫಲವೇ ಆಗಿದೆ. ನಂತರ ಅದೇ ರೀತಿಯಾಗಿ ಗುಟ್ಟಿಲರು  ಒಬ್ಬರಿಗೆ ಈ ಹಿಂದಿನ ರೀತಿಯಲ್ಲಿಯೇ ಪ್ರಶ್ನಿಸಿದಾಗ ಅವರು ಹೀಗೆ ಉತ್ತರಿಸಿದರು.

ನಾನೂ ಉತ್ಕೃಷ್ಟವಾದ ಹೂಗಳನ್ನು ನೀಡಿದೆ...

ನಾನೂ ಉತ್ಕೃಷ್ಟವಾದ ಸುಗಂಧದ್ರವ್ಯಗಳನ್ನು ನೀಡಿದೆ....

ನಾನೂ ಉತ್ಕೃಷ್ಟವಾದ ಹಣ್ಣುಗಳನ್ನು ನೀಡಿದೆನು....

ನಾನೂ ಉತ್ಕೃಷ್ಟವಾದ  ರುಚಿಕರವಾದ ಭಕ್ಷ್ಯಗಳನ್ನು ನೀಡಿದೆನು....

ನಾನೂ ಕೇವಲ 5 ಅಂಗುಲದಷ್ಟು ಉತ್ಕೃಷ್ಟವಾದ ಸುಗಂಧದ್ರವ್ಯವನ್ನು ಕಸ್ಸಪ ಥೇರರ ಸ್ಥೂಪಕ್ಕೆ ಭಕ್ತಿಯಿಂದ ಅಪರ್ಿಸಿದೆನು. ಇದರ ಫಲವಾಗಿ 5 ಬೆರಳುಗಳ ಚಿಹ್ನೆಯು ಆ ವಿಮಾನದಲ್ಲಿತ್ತು.

ನಾನೂ ಭಿಕ್ಖುಗಳಿಂದ ಧಮ್ಮವನ್ನು ಆಲಿಸಿ ಒಂದು ದಿನ ಉಪೋಸಥವನ್ನು(ಶೀಲಗಳ ಸಮೇತ ಉಪವಾಸ) ಆಚರಿಸಿದೆನು...

ನಾನೂ ಉತ್ಕೃಷ್ಟವಾದ ನೀರನ್ನು ಭಕ್ತಿಯಿಂದ ಬಿಕ್ಖುವಿಗೆ ನೀಡಿದೆನು...

ನಾನೂ ಅತ್ತೆ ಮಾವಂದಿರ ದುರಾವರ್ತನೆಯನ್ನು ಸಹನೆಯಿಂದ ಸಹಿಸಿದೆನು ಅವರ ಮೇಲೆ ದ್ವೇಷವನ್ನು ತಾಳಲಿಲ್ಲ...

ನಾನೂ ದಾಸಿಯಾಗಿದ್ದಾಗ ಕೋಪ ಪಡಲಿಲ್ಲ ಹಾಗೂ ಅಹಂಕಾರವನ್ನು ಪಡಲಿಲ್ಲ....

ನಾನೂ ಉತ್ಕೃಷ್ಟವಾದ ಹಾಲು ಅನ್ನವನ್ನು ಭಿಕ್ಖುವಿಗೆ ನೀಡಿದೆನು....

ಇದುವರೆಗೂ 25 ದೇವತೆಗಳಿಂದ ಸತ್ಯವು ಹೊರ ಬಂದಿತು. ನಂತರ ಗುಟ್ಟಿಲರು  ಇನ್ನಿತರ ವಿಮಾನಗಳಲ್ಲಿ ಅವರು ಮಾಡಿದ್ದಂತಹ ಸುಕಮ್ಮವನ್ನು ವಿಚಾರಿಸಿದಾಗ..ಅವರು ಹೀಗೆ ಹೇಳಿದರು..

ನಾನೂ ಉತ್ಕೃಷ್ಟವಾದ ಕಾಕಂಬಿಯನ್ನು ನೀಡಿದೆನು....

ನಾನೂ ಕಬ್ಬಿನ ತುಂಡನ್ನು ನೀಡಿದೆನು.

ನಾನು ತಿಂಬರು ಹಣ್ಣನ್ನು ನೀಡಿದೆನು.

ನಾನು ಸಿಹಿಯಾದ ಸೌತೆಕಾಯಿಯನ್ನು (ಕಕ್ಕಾರಿಕ)ನೀಡಿದೆನು

ನಾನೂ ಸೌತೆಕಾಯಿಯನ್ನು (ಎಲಾಲುಕ)ನೀಡಿದೆನು.

ನಾನು ಹಣ್ಣಿನ ಬಳ್ಳಿಯನ್ನು ನೀಡಿದೆನು.

ನಾನು ಫರುಸ್ಸಕ ಹೂವನ್ನು ನೀಡಿದೆನು.

ನಾನು ಅಗ್ನಿ ಪಾತ್ರೆಯನ್ನು ನೀಡಿದೆನು.

ನಾನು ಕೈತುಂಬಾ ಹಸಿರು ಹಣ್ಣನ್ನು ನೀಡಿದೆನು.

ನಾನು ಕೈತುಂಬಾ ಚಿಕ್ಕ ಹೂಗಳನ್ನು ನೀಡಿದೆನು.

ನಾನು ಕಮಲದ ಬೇರುಗಳನ್ನು  ನೀಡಿದೆನು.

ನಾನು ಕೈತುಂಬಾ ನಿಂಬೆ ಹಣ್ಣನ್ನು ನೀಡಿದೆನು.

ನಾನು ಮಾವಿನ ಸಾರನ್ನು ನೀಡಿದೆನು.

ನಾನು ಎಣ್ಣೆ ಬೀಜಗಳಿಂದಾದ ರೊಟ್ಟಿಯನ್ನು ನೀಡಿದೆನು.

ನಾನು ಮಣಿಪಟ್ಟಿಯನ್ನು ನೀಡಿದೆನು.

ನಾನು ಭುಜದ ಪಟ್ಟಿಯನ್ನು  ನೀಡಿದೆನು.

ನಾನು ಗಾಯದ ಪಟ್ಟಿಯನ್ನು ನೀಡಿ ಕಟ್ಟಿ ಸಹಾಯ ನೀಡಿದೆನು.

ನಾನು  ಬೀಸಣಿಗೆೆ ನೀಡಿದೆನು.

ನಾನು  ತಾಳೆ ಬೀಸಣಿಗೆೆ  ನೀಡಿದೆನು.

ನಾನು  ನವಿಲಿನ ಬೀಸಣಿಗೆೆ  ನೀಡಿದೆನು.

ನಾನು ಕೊಡೆಯನ್ನು  ನೀಡಿದೆನು.

ನಾನು ಚಪ್ಪಲಿಯನ್ನು ನೀಡಿದೆನು.

ನಾನು ರೊಟ್ಟಿಯನ್ನು  ನೀಡಿದೆನು.

ನಾನು  ಸಿಹಿತಿಂಡಿಯನ್ನು ನೀಡಿದೆನು.

ನಾನು  ಬಿಕ್ಖುವಿಗೆ ಸಿಹಿರೊಟ್ಟಿಯನ್ನು ನೀಡಿದೆನು. ಅದರ ಪರಿಣಾಮವೇ ನಾನು ಇಂತಹ ದೇವ ರೂಪವನ್ನು ಪಡೆದೆನು ಹಾಗೂ ನನ್ನ ಸುತ್ತಲೂ ಸಹಸ್ರ ಅಪ್ಸರೆಯರು ಸುತ್ತುವರೆದಿದ್ದಾರೆ. ಅಷ್ಟೆ ಅಲ್ಲದೇ ನಾನೂ ಇಚ್ಚಿಸುವ ರೂಪವನ್ನು ಪಡೆಯುತ್ತೇನೆ. ಈ ಭವ್ಯವಾದ ವಿಮಾನವು ಅದರ ಫಲವೇ ನನ್ನ ದಿವ್ಯವಾದ ಪ್ರಭೆಯು ಸಹಾ ಅದರ ಫಲವೇ ಆಗಿದೆ.ಈ ರೀತಿಯಾಗಿ ಅವರಿಂದ ಧಮ್ಮವನ್ನು ಆಲಿಸಿ ನಾನೂ ಪುಣ್ಯದಲ್ಲಿ ಅತಿಕುಶಲನಾದೆನು. ಅಂದಿನಿಂದ ನಾನೂ ಇನ್ನಷ್ಟು ದಾನ, ಸತ್ಯ, ಸಮಚಿತ್ತತೆ, ನಿಯಂತ್ರಣ, ದಮ ಇತ್ಯಾದಿಗಳ ವಿಕಾಸ ಮಾಡಿದೆನು. ಹೀಗಾಗಿ ನನಗೆ ದುಃಖ ಒದಗಲಿಲ್ಲ. ಎಂದು ಭಗವಾನರು ನುಡಿದರು.

5.5.4 ದೀಪ ದಾನದ ಫಲ

ಒಮ್ಮೆ ಶ್ರಾವಸ್ಥಿಯಲ್ಲಿ ಭಗವಾನರು ಇದ್ದಾಗ, ಒಂದು  ಉಪೋಸಥ ದಿನದಂದು  ಎಲ್ಲಡೆ ಸಂಭ್ರಮದ ವಾತಾವರಣವಿತ್ತು. ಎಲ್ಲರೂ ಅಷ್ಟಾಂಗ ಶೀಲದ ಆಚರಣೆಯಲ್ಲಿದ್ದರು. ಆಗ ಒಬ್ಬ ಸ್ತ್ರೀಗೆ ವಿಹಾರದಲ್ಲಿ ದೀಪಗಳನ್ನು ಬೆಳಗಬೇಕೆಂಬ ಇಚ್ಚೆಯುಂಟಾಯಿತು. ಅದರಂತೆ ಆಕೆಯು ಮನೆಗೆ ತೆರಳಿ ದೀಪಗಳನ್ನು ತಂದು ಅವನ್ನು ಹಚ್ಚಿ ವಿಹಾರವನ್ನು ಬೆಳಗಿದಳು. ಹಾಗೂ ಆನಂದಿತಳಾದಳು. ಹಾಗೂ ಕಾಲ ನಂತರ ಸಾವಿನ ನಂತರ ಆಕೆಯು ತಾವತಿಂಸ ದೇವಲೋಕದಲ್ಲಿ ಜನಿಸಿದಳು. ನಂತರ ಮೊಗ್ಗಲಾನರು  ಆಕೆಗೆ ದೇವಲೋಕದಲ್ಲಿ ಭೇಟಿಯಾದಾಗ ಆ ದೇವತೆಯು ಈ ವಿಷಯವನ್ನು ತಿಳಿಸಿದಳು, 

5.5.5 ಶೀಲವಂತೆಯ ವಿಮಾನ

ಆಗ ಭಗವಾನರು ಶ್ರಾವಸ್ತಿಯಲ್ಲಿ ವಿಹರಿಸುತ್ತಿದ್ದರು. ಆ ನಗರದಲ್ಲಿ ಶೀಲವತಿಯಾದ ಪತ್ನಿಯಿದ್ದಳು. ಆಕೆಯು ತನ್ನ ಪತಿಯೊಡನೆ, ಸೌಹಾರ್ದತೆಯಿಂದ , ಸಹನೆಯಿಂದ ಮತ್ತು ಪ್ರಜ್ಞೆಯಿಂದ ಒಡಗೂಡಿ ಜೀವಿಸುತ್ತಿದ್ದಳು. ಆಕೆಯು ಗದರುತ್ತಿರಲಿಲ್ಲ ಕನಿಷ್ಟ ಕೋಪವೂ ತಾಳುತ್ತಿರಲಿಲ್ಲ. ಆಕೆಯ ನುಡಿಗಳು ಸಭ್ಯವಾಗಿ, ಸತ್ಯವಾಗಿ, ನಂಬಿಕೆಯದ್ದಾಗಿರುತ್ತಿದ್ದವು,.ಆಕೆಯು ತನ್ನ ಸಾಮಥ್ಯರ್ಾನುಸಾರವಾಗಿ ದಾನವನ್ನು ಮಾಡುತ್ತಿದ್ದಳು. ಅದರೆ ಯಾವುದೋ ರೋಗಕ್ಕಿಡಾಗಿ ಆಕೆಯು ತೀರಿಹೋಗಿ ನಂತರ ತಾವತಿಂಸ ಲೋಕದಲ್ಲಿ ಉಗಮಿಸಿದಳು.

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ಆಕೆಯ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆಕೆಯ ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆಕೆಯು ತನ್ನ ಶೀಲವನ್ನು ಕುರಿತು ಹೀಗೆ ಹೇಳಿದಳು  ನಾನು ಮಾನವಳಾಗಿದ್ದಾಗ ಶೀಲವಂತ ಪತ್ನಿಯಾಗಿದ್ದೆನು, ಪರ ಪುರುಷರನ್ನು ಕುರಿತು ಯೋಚಿಸುತ್ತಿರಲಿಲ್ಲ, ಮಾತೆಯೊಬ್ಬಳು ಹೇಗೆ ತನ್ನ ಪುತ್ರನನ್ನು ಸಲಹುತ್ತಿದ್ದಳೋ ಹಾಗೆ ನಾನು ನನ್ನ ಗಂಡನನ್ನು ನೋಡಿಕೊಳ್ಳುತ್ತಿದ್ದೆನು, ಎಂದಿಗೂ ಕೋಪ ತಾಳುತ್ತಿರಲಿಲ್ಲ. ಸತ್ಯ, ದಾನ, ಸಹಾನುಭೂತಿ ಹಾಗೂ ಶ್ರದ್ಧೆಯಿಂದ ಕೂಡಿದ್ದೇನು. ಅವೆಲ್ಲರ ಪಲಿತಾಂಶವೇ ಈ ನನ್ನಯ ಸುಗತಿ ಎಂದಳು. 

5.5.6 ಕರಣಿಯ ವಿಮಾನ 

ಭಗವಾನರು ರಾಜಗೃಹದಲ್ಲಿದ್ದಾಗ ಒಬ್ಬ ಉಪಾಸಕನು ಅಚಿರಾವತಿ ನದಿಯಲ್ಲಿ ಸ್ನಾನ ಮಾಡಿ ಹಿಂತಿರುಗುತ್ತಿದ್ದನು. ಅಲ್ಲಿ ಆತನು ಭಗವಾನರನ್ನು  ಕಂಡು  ಅವರಿಗೆ ಔತಣಕ್ಕೆ ಕರೆದನು. ಅಲ್ಲಿ ಅವರಿಗೆ ಗೌರವಯುತವಾಗಿ ಆಹಾರ ದಾನ ನೀಡಿದನು. ನಂತರ ಆತನು ಕಾರಣಾಂತರಗಳಿಂದ ಮೃತನಾಗಿ ತಾವತಿಂಸ ದೇವದಲ್ಲಿ ಉಗಮಿಸಿದನು. 

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ಆತನ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು ಹೇಳಿದನು.

5.5.7 ದ್ವಾರ ಪಾಲಕ ವಿಮಾನ 

ಒಮ್ಮೆ ಭಗವಾನರು ರಾಜಗೃಹದಲ್ಲಿದ್ದಾಗ ಒಬ್ಬ ಉಪಾಸಕನು ಸಂಘಕ್ಕೆ ಆಗಾಗ್ಗೆ ದಾನವನ್ನು ನೀಡುತ್ತಿದ್ದನು. ಅದರೆ ಆತನ ಮನೆಯು ನಗರದ ಹೊರಗಿತ್ತು .ಅದರೆ ಕಳ್ಳರ ಭಯದಿಂದ ಆತನು ಸದಾ ಮನೆಯ ಬಾಗಿಲನ್ನು ಮುಚ್ಚಿರುತ್ತಿದ್ದನು. ಹೀಗಾಗಿ ಕೆಲವೊಮ್ಮೆ ಭಿಕ್ಷುಗಳು ದಾನಕ್ಕಾಗಿ ಬಂದರು ಸಹಾ ಬಾಗಿಲನ್ನು ನೋಡಿಕೊಂಡು ಹಾಗೆ ಹಸಿವಿನಿಂದ ಹೋಗಿಬಿಡುತ್ತಿದ್ದರು. ಈ ವಿಷಯವನ್ನು ಹೆಂಡತಿಯಿಂದ ತಿಳಿದ ಆತನು ಭಿಕ್ಖುಗಳನ್ನು ಸ್ವಾಗತಿಸಲು ಒಬ್ಬ ದ್ವಾರಪಾಲಕನನ್ನು ನೇಮಿಸಿದನು. ನಂತರ ಬಿಕ್ಖುಗಳು ಆಹಾರವನ್ನು ಸೇವಿಸಿಯೇ ಹೋಗುತ್ತಿದ್ದರು.

ಅದರೆ ಕಾಲನಂತರ ಆ ಉಪಾಸಕನು ಹಾಗೂ ಆ ದ್ವಾರಪಾಲಕನು ಇಬ್ಬರು ತೀರಿಹೋದರು. ಉಪಾಸಕನು ಯಾಮಾ ದೇವಲೋಕದಲ್ಲಿ ಉಗಮಿಸಿದರೆ, ದ್ವಾರಪಾಲಕನು ತಾವತಿಂಸ ದೇವಲೋಕದಲ್ಲಿ ಉಗಮಿಸಿದರು. ಈ ವಿಷಯವನ್ನು ಮೊಗ್ಗಲಾನರು ಅವರಿಗೆ ಭೇಟಿ ಮಾಡಿದ ಬಳಿಕ ತಿಳಿಯುವುದು. ಹೀಗೆ ಈ ಪ್ರಸಂಗದಲ್ಲಿ ತಿಳಿಯುವುದು ಏನೆಂದರೆ ದಾನಿ ಮಾತ್ರವಲ್ಲದೆ, ಆತನ ಸಹಾಯಕರು ಸಹಾ ಮನಸ್ಸನ್ನು ಪ್ರಸನ್ನವಾಗಿಟ್ಟರೆ ಅವರಿಗೂ ಸಹಾ ಸುಗತಿಯು ಲಭಿಸುವುದು.

5.5.8 ಸೂಚಿ ವಿಮಾನ 

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು  ಹೀಗೆ ಹೇಳಿದನು.  ನಾನು ಪೂರ್ವಜನ್ಮದಲ್ಲಿದ್ದಾಗ ಕಮ್ಮಾರ ನಾಗಿದ್ದೆನು. ಒಮ್ಮೆ ನನ್ನ ಬಳಿಗೆ ಪೂಜ್ಯ ಸಾರಿಪುತ್ತರು ಬಂದು ಸೂಜಿಯನ್ನು ಕೇಳಿದರು. ನಾನೂ ಅವರಿಗೆ ಎರಡು ಸೂಜಿಗಳನ್ನು ಭಕ್ತಿಭಾವದಿಂದ ನೀಡಿದೆನು. ಅದರ ಫಲಿತಾಂಶವೇ ಈ ವೈಭವ ಎಂದನು.

5.5.9  ಸುವಣ್ಣವಿಮಾನ :

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು  ಹೀಗೆ ಹೇಳಿದನು.: ನಾನು ಪೂರ್ವಜನ್ಮದಲ್ಲಿ ಅಂದಕವಿಂದ ನಿವಾಸಿ ಯಾಗಿದ್ದೇನು ಅಲ್ಲಿ ಭಗವಾನರನ್ನು ಕಂಡು ಅವರಿಗೆ ಬೆಟ್ಟದ ಪಕ್ಕದಲ್ಲಿ ಸುವಾಸಿತವಾದ ಕುಟೀರವನ್ನು ನಿಮರ್ಿಸಿ ದಾನ ಮಾಡಿದೆನು. ಅದರ ಫಲಿತಾಂಶವೇ ಈ ವೈಭವ .

5.5.10 ಕಂಥಕ ವಿಮಾನ (ಸಿದ್ಧಾರ್ಥರ ಕುದುರೆ ಸೋತಪನ್ನವಾಗಿದ್ದು):

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ಕುರಿತು ಹೀಗೆ ಹೇಳಿದನು : ನಾನೂ ಪೂರ್ವಜನ್ಮದಲ್ಲಿ ಶಾಕ್ಯರ ವೈಭವದ ಕಪಿಲವಸ್ತುವಿನಲ್ಲಿ ಶುದ್ಧೊದನರ ಪುತ್ರರಾದ ಸಿದ್ಧಾರ್ಥ ಗೋತಮರಿಗೆ ಕುದರೆಯಾಗಿದ್ದೆನು. 

ಅವರು ತಮ್ಮ ಅಭಿನಿಷ್ಕ್ರಮಣ ದಿನದ ಮಧ್ಯರಾತ್ರಿಯಂದು ನನ್ನ ಬಳಿಗೆ ಬಂದು ನನ್ನ ಬೆನ್ನನ್ನು  ತನ್ನ ಜಾಲದ ರೇಖೆಗಳುಳ್ಳ ಕೈಗಳಿಂದ ತಟ್ಟಿ ಹೀಗೆ ನುಡಿದರು :ಸಹಿಸಿಕೊ ಮಿತ್ರನೇ ನಾನೂ ಅನುತ್ತರವಾದ ಸಂಯಕ್ ಸಂಬೋಧಿಯನ್ನು ಪಡೆಯಬೇಕಿದೆ. ಈ ಜಗದ ಜೀವಿಗಳಿಗೆಲ್ಲಾ ಸಹಾಯ ಮಾಡಬೇಕಿದೆ. ಅವರ ಮಧುರವಾದ ನುಡಿಗಳನ್ನು ಆಲಿಸಿ ನಾನೂ ಹೇಷಾರವವನ್ನು ಮಾಡಿದೆನು.

ನಂತರ ಅವರನ್ನು ಕುಳಿಸಿಕೊಂಡು ಸೂರ್ಯೋದಯಕ್ಕೆ ಮುಂಚೆಯೇ ಅವರ ಗಮ್ಯ ಸ್ಥಾನವನ್ನು ತಲುಪಿಸಿದೆನು. ಅದರೆ ನನ್ನ ಹಾಗೂ ಚನ್ನನ ಬಿಟ್ಟು ಹೋಗಲು ಅವರು ಸಿದ್ದರಾದರು. ನಾನೂ ಅವರ ಪಾದಗಳ ಉಗುರುಗಳನ್ನು ನೆಕ್ಕಿದೆನು. ಹಾಗೂ ಅಪಾರವಾಗಿ ಅತ್ತೆನು. ಏಕೆಂದರೆ ನಂತರ ಅವರನ್ನು ನಾನೂ ನೋಡಲಾರದೇ ಹೋಗುತ್ತೇನೆ. ನನ್ನಲ್ಲಿ ಉಂಟಾದ ಶೋಕವು ಯಾವ ಮಟ್ಟಕ್ಕೆ ಹೋಯಿತೆಂದರೆ ನಾನೂ ಕೂಡಲೇ ಅಸ್ತವ್ಯಸ್ತನಾದೆನು ಹಾಗೂ ಕುಸಿದೆನು ಹಾಗೇಯೇ ಮೃತನಾದೆನು.

ಹಾಗೇ ಸತ್ತು ಇಲ್ಲಿ ಈಗ ವೈಭವಯುತವಾಗಿ ಇಲ್ಲಿದ್ದೇನೆ. ತಮ್ಮಲ್ಲಿ ನನ್ನ ವಿನಂತಿ ಏನೆಂದರೆ ತಾವು ಭಗವಾನರ ಬಳಿಗೆ ಹೋದಾಗ ಅವರ ಪಾದಕ್ಕೆ ನನ್ನ ವಂದನೆ ಸಮಪರ್ಿಸುವುದು. ನಾನೂ ಸಹಾ ಅಸಮಾನರಾದ ಅವರನ್ನು ನೋಡಲು ಹೋಗುತ್ತೇನೆ.

 ಹಾಗೇಯೇ ಮುಂದೆ ಆ ದೇವಪುತ್ತರು ಭಗವಾನರನ್ನು ಬೇಟಿಯಾದಾಗ ಅವರ ರೂಪ ಹಾಗೂ ಅವರ ಧ್ವನಿಯನ್ನು ಆಲಿಸಿ ಆನಂದದಿಂದ ಕೂಡಿಹೋದನು. ನಂತರ ಅವರ ಬೋಧನೆಯನ್ನು ಆಲಿಸಿ ಆತನು ಸೋತಪನ್ನನಾಗಿ ಅಲ್ಲಿಂದ ಅದೃಷ್ಯನಾದನು.

5.5.11 ಅನೇಕವಣ್ಣ ವಿಮಾನ ;  

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವಿಭಿನ್ನ ವರ್ಣಗಳ ವಿಮಾನದ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ಕುರಿತು ಹೀಗೆ ಹೇಳಿದನು :  ನಾನು ಸುಮೇಧ ಬುದ್ಧರ ಕಾಲದವನು. ಆಗ ಭಿಕ್ಖುವಾಗಿದ್ದೆನು ಅದರೆ ಯಾವುಧೇ ಲೋಕೋತ್ತರ ಫಲಗಳನ್ನು ಗಳಿಸಿರಲಿಲ್ಲ. ನಾನೂ ಮಾಡಿದಂತಹ ಪುಣ್ಯ ಕಾರ್ಯ ಏನೆಂದರೆ ಅವರ ರತ್ನಮಯ ಸ್ತೂಪಕ್ಕೆ ನಾನು ಸದಾ ವಂದಿಸುತ್ತಿದ್ದೆನು ಇದರಿಂದಾಗಿ ನನಗೆ ಚಿತ್ತಶಾಂತಿ ದೊರೆಯುತ್ತಿತ್ತು. ಅದರ ಫಲಿತಾಂಶವೇ ಈಗಿನ ದೇವತ್ವ..

5.5.12  ಸುನಿಕ್ಖಿತ ವಿಮಾನ : 

ಒಮ್ಮೆ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ ವಿಮಾನದ ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ಕುರಿತು ಹೀಗೆ ಹೇಳಿದನು :ನಾನು ಕಸ್ಸಪ ಭಗವಾನರ ಸ್ತೂಪಕ್ಕೆ ಹೂಗಳನ್ನು ಸಮಪರ್ಿಸುತ್ತಿದ್ದೆನು ಹಾಗೂ ಬೇರೆಯವರು ಸರಿಯಾಗಿ ಜೋಡಿಸಿರದ ಹೂಗಳನ್ನು ಸರಿಯಾಗಿ ಜೋಡಿಸಿದೆನು. ಆ ಸ್ತೂಪವನ್ನೇ ಧ್ಯಾನ ವಿಷಯವಾಗಿ ಮಾಡಿಕೊಂಡು ಧ್ಯಾನಿಸುತ್ತಿದ್ದೆನು. ಹಾಗೂ ಬುದ್ಧಾನುಸತಿಯಲ್ಲಿ ತೊಡಗುತ್ತಿದ್ದೆನು. ಇವೆಲ್ಲದರ ಫಲಿತಾಂಶವೇ ಈ ದೇವತ್ವ ಹಾಗೂ ಇವೆಲ್ಲಾ ವೈಭವ.

5.6 ದುರ್ಗತಿಗಳ ಪ್ರತ್ಯಕ್ಷದಶರ್ಿ     

5.6.1 ಸಾರಿಪುತ್ತರ ತಾಯಿಯ ದುಗ್ಗತಿ ಹಾಗೂ ಸುಗತಿ

ಕಾಶಿಯಲ್ಲಿ ಆಪಾರ ಸಿರಿವಂತನಾದ ಬ್ರಾಹ್ಮಣನಿದ್ದನು. ಆತನು ಆಪಾರ ದಾನಿಯಾಗಿದ್ದನು. ಆತನಿಗೆ ಭಿಕ್ಖುಗಳ ಬಗ್ಗೆ ಹಾಗೂ ಬಡವರ ಬಗ್ಗೆ ಅಪಾರ ಕಾಳಜಿಯಿತ್ತು. ಅತನು ಸರ್ವರಿಗೂ ದಾನ ಮಾಡುತ್ತಿದ್ದನು. ಹಾಗೇಯೇ ಆತನು ತನ್ನ ಪತ್ನಿಗೂ ದಾನ ಮಾಡುವಂತೆ ಪ್ರ್ರೋತ್ಸಾಹ ಮಾಡುತ್ತಿದ್ದನು. ಅದರೆ ಆಕೆಯು ಆತನ ಮುಂದೆ ದಾನ ಮಾಡುತ್ತಿದ್ದಳು ಅದರೆ ಆತನು ಇಲ್ಲದ ವೇಳೆ ಆಕೆ ಕಠೋರ ಭಾವನೆ ತಾಳುತ್ತಿದ್ದಳು. ಭಿಕ್ಖುಗಳಿಗೆ ಅಲ್ಪ ದಾನ ಮಾಡುತ್ತಿದ್ದಳು ಹಾಗೂ ಬಡವರ ಹಾಗೂ ಯಾತ್ರಿಕರ ಮೇಲೆ ಆಕೆ ಹೀಗೆ ಕೆಂಡ ಕಾರುತ್ತಿದ್ದಳು. ; ಸಗಣಿಯನ್ನು ತಿನ್ನಿ, ಮೂತ್ರವನ್ನು ಕುಡಿಯಿರಿ, ರಕ್ತವನ್ನು ಕುಡಿಯಿರಿ, ನಿಮ್ಮ ತಾಯಿಯ ಮೆದಳನ್ನು ತಿನ್ನಿ.. ಕಾಲನಂತರ ಆಕೆಯು ಮೃತ್ಯುವಶಳಾದಳು. ಮೃತ್ಯವಿನ ನಂತರ ಆಕೆಯು ಪ್ರೇತಿಯಾದಳು (ಸ್ತ್ರೀ ಪ್ರೇತ). 

ಹೀಗೆ ಪ್ರೇತ ಜನ್ಮತಾಳಿದ ಆಕೆಯು ಸದಾ ದುಃಖದಲ್ಲಿ ಸಿಲುಕಿದಳು. ಆಕೆಗೆ ಆಹಾರ ಸೇವಿಸಲು ಆಗುತ್ತಿರಲಿಲ್ಲ. ಒಂದು ದಿನ ಆಕೆಯು ಸಾರಿಪುತ್ತರಿಗೆ ನೋಡಿದಳು. ಆಗ ಆಕೆಗೆ ತಾನು ಹಿಂದಿನ ಒಂದು ಜನ್ಮದಲ್ಲಿ ತಾನು ಆತನಿಗೆ ತಾಯಿಯು ಆಗಿದ್ದೆ ಎಂದು ಆಕೆಗೆ ತಿಳಿಯಿತು. ಇದರಿಂದ ಆಕೆಯು ಸಾರಿಪುತ್ತರ ವಾಸ ಸ್ಥಳಕ್ಕೆ ಬಂದಳು. ಅದರೆ ಸಾರಿಪುತ್ತರ ವಾಸ ಸ್ಥಳವನ್ನು ಸದಾ ದೇವತೆಗಳು ಕಾಯುತ್ತಿದ್ದರು. ಹೀಗಾಗಿ ಅವರು ಆಕೆಯನ್ನು ತಡೆದರು. ಆಗ ದುಃಖಿತಳಾದ ಆಕೆಯು ಹೀಗೆ ಹೇಳಿದಳು ;ನಾನು 5 ಜನ್ಮಗಳ ಹಿಂದೆ ಸಾರಿಪುತ್ತರಿಗೆ ತಾಯಿಯಾಗಿದ್ದೆನು. ಎಂದಳು. ಆಗ ಅಕೆಗೆ  ಒಳ ಹೋಗಲು ಅಪ್ಪಣೆ ಸಿಕ್ಕಿತು. 

ಸಾರಿಪುತ್ತರಿಗೆ ಕಾಣುವಂತೆ ದೂರದಲ್ಲಿ ಆಕೆಯು ನಿಂತಳು. ಆಕೆಯ ದಯಾನಿಯಾ ಸ್ಥಿತಿಯನ್ನು ಕಂಡಂತಹ ಸಾರಿಪುತ್ತರು ದಯೆಯಿಂದ  ಆಕೆಗೆ ಹೀಗೆ ವಿಚಾರಿಸಿದರು. ;ನಗ್ನವಾಗಿರುವ, ಅತ್ಯಂತ ಕುರೂಪವಾಗಿರುವ, ತೆಳ್ಳಗೆ ದುರ್ಬಲವಾಗಿರುವ, ನರಗಳು ಹಾಗೂ ಪಕ್ಕೆಲಬುಗಳೆಲ್ಲಾ ಹೊರ ಬಂದಿರುವ ನೀನು ಯಾರು.?

ಆಗ ಆಕೆಯು ಹೀಗೆ ಉತ್ತರಿಸಿದಳು : ನಾನೂ ನಿಮ್ಮ ಹಿಂದಿನ ಜನ್ಮದ ತಾಯಿಯಾಗಿರುವೆನು. ಅದರೆ ಈಗ ನಾನೂ ಪ್ರೇತ ಲೋಕದಲ್ಲಿ ಜನಿಸಿ ಹಸಿವು ಹಾಗೂ ಬಾಯಾರಿಕೆಗಳಿಂದ ಕೂಡಿರುವೆನು.

ನನಗೆ ಸುಲಭವಾಗಿ ದೊರೆಯುವ ಆಹಾರಗಳೆಂದರೆ ಎಂಜಲು, ಗೊಣ್ಣೆ, ಕಫದ ದ್ರವ, ಸುಡುವ ಶವಗಳ ಕೊಬ್ಬು, ಗಭರ್ಿಣಿಯರಿಂದ ಸ್ರಾವವಾಗುವ ರಕ್ತ, ಗಾಯಗೊಂಡಿರುವವರ ರಕ್ತ, ಅಂಗಾಂಗಗಳು ಕತ್ತರಿಸಲ್ಪಟ್ಟವರ ರಕ್ತ, ಹೀಗಾಗಿ ನಾನು ಅರ್ಧ ಸತ್ತಂತೆ ಇರುವೆನು.  

ನಾನು ಮಾನವರ ಹಾಗೂ ಪ್ರಾಣಿಗಳ ರಕ್ತವನ್ನು ಸೇವಿಸುತ್ತ ಜೀವಿಸುತ್ತಿರುವೆನು. ನಾನು ಯಾವ ಶರಣುಯಿಲ್ಲದೆ, ಯಾವ ವಾಸ ಸ್ಥಳವೂ ಇಲ್ಲದೆ ಶವ ಸುಡುವ ಸ್ಥಳದಲ್ಲಿ ಮಲಗುತ್ತಿದ್ದೇನೆ.

ಹೀಗಾಗಿ ಮಗುವೇ ನನಗಾಗಿ ಆಹಾರವನ್ನು ದಾನ ಮಾಡು. ನೀನೂ ಹೀಗೆ ನನಗಾಗಿ ದಾನ ಮಾಡಿದರೆ ಅದು ನನಗೆ ಸಿಗುವುದು ಹಾಗೂ ನಾನು ಈ ರಕ್ತ ಹಾಗೂ ಕೀವು ಸೇವಿಸುವುದು ತಪ್ಪುವುದು. ಆಗ ಸಾರಿಪುತ್ತರು ಹಾಗೆ ಮಾಡುವೆನೆಂದು ವಚನ ನೀಡಿ ಸಮಾದಾನ ಪಡಿಸಿದರು.

ನಂತರ ಸಾರಿಪುತ್ತರು ಮೊಗ್ಗಲಾನರೊಡನೆ ಕೂಡಿ ರಾಜ ಬಿಂಬಸಾರನ ಬಳಿಗೆ ಬಂದು ವಿಷಯವನ್ನೆಲ್ಲಾ ತಿಳಿಸಿದರು. ಆಗ ಬಿಂಬಸಾರರು ಅದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿದರು. ಆಗ ಸಾರಿಪುತ್ತರು ಬುದ್ಧಭಗವಾನರ ಸಮೇತ ಬಿಕ್ಖುಸಂಘಕ್ಕೇ ಆಹಾರ ,ವಸ್ತ್ರ, ಹಾಗೂ ವಸತಿಯನ್ನು ದಾನ ಮಾಡಿದರು ಹಾಗೂ ಆ ಪುಣ್ಯವನ್ನು ತಮ್ಮ ತಾಯಿಗೆ ವಗರ್ಾಯಿಸಿದರು.

   ನಂತರ ಆ ರಾತ್ರಿಯಂದು ಮೊಗ್ಗಲಾನರ ಬಳಿಗೆ ಅತ್ಯಂತ ಪ್ರಜ್ವಲಿಸುವ ತೇಜಸ್ಸಿನ ದೇವತೆಯೊಬ್ಬಳು ಪ್ರತ್ಯಕ್ಷಳಾದಳು .ಆಗ ಮೊಗ್ಗಲಾನರು ಆಕೆಗೆ ಯಾರೆಂದು ವಿಚಾರಿಸಿದರು.ಆಗ ಆಕೆಯು ಹೀಗೆ ಉತ್ತರಿಸಿದಳು.; ಪೂಜ್ಯರೇ ನನ್ನ ಪುತ್ರ ಸಾರಿಪುತ್ತ ನೀಡಿದ ಅನುತ್ತರವಾದ ದಾನದಿಂದ ನಾನೂ ದೇವಿಯಾಗಿರುವೆನು. ನಾನೂ ಈಗ ಸುಖಿಯಾಗಿರುವೆನು, ಯಾವ ದಿಕ್ಕಿನಿಂದಲೂ ನನಗೆ ಭಯವಿಲ್ಲ, ನನ್ನ ಪುತ್ರನಿಗೆ ವಿಷಯ ತಿಳಿಸಿ. ಪೂಜ್ಯರಾದ ದಯಾಮಯಿಯಾದ ತಮ್ಮ ಬಳಿಗೆ ಪೂಜಿಸಲು ಬಂದಿರುವೆನು. ಎಂದು ಹೇಳಿ ವಂದಿಸಿ ಹೊರಟು ಹೋದಳು.

5.6.2 ಕಣ್ಣಮುಂಡ ಪೇತಿಯ ವಿಶಾಧ ಕಥೆ

   ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿದ್ದಾಗ ಮೊಗ್ಗಲಾನರು ಹಿಮಾಲಯದ ಕಡೆಗೆ ಆಕಾಶಯಾತ್ರೆಯಲ್ಲಿ ತೊಡಗಿರುವಾಗ ಹಿಮಾಲಯದ ಸಮೀಪದ ಕಣ್ಣಮುಂಡ ಸರೋವರದ ಬಳಿಯ ಮಹಲಿನಲ್ಲಿದ್ದಂತಹ ಸುಂದರವಾಗಿರುವ ಅದರೆ ದುಃಖದಿಂದ ಕೂಡಿದ್ದಂತಹ ಪೇತಿಯನ್ನು ಕಂಡರು. ಬಹುಷಃ ಈಕೆಯ ಜೀವನವು ಬೇರೆಯವರಿಗೆ ಪಾಠವಾಗಬಹುದೆಂಬ ಕಾರಣದಿಂದ ಆಕೆಗೆ ಮಾತಾನಾಡಿಸಿದರು. ಹಾಗೂ ಆಕೆಯ ಈಗಿನ ಅವಸ್ಥೆಗೆ ಕಾರಣ ಕೇಳಿದರು. ಆಗ ಆಕೆಯು ತನ್ನ ಜೀವನದ ಕುರಿತು ಹೀಗೇ ಹೇಳಿದಳು:

ನಾನು ಕಸ್ಸಪ ಬುದ್ಧರ ಕಾಲದವಳು. ಆಗ ಕಿಂಬಿಲವೆಂಬ ನಗರದಲ್ಲಿ ಧಾಮರ್ಿಕನೊಬ್ಬನ ಮಡದಿಯಾಗಿದ್ದೆನು.  ನನ್ನ ಪತಿಯು ಬೌದ್ಧೋಪಾಸಕನಾಗಿದ್ದನು. ಅಪಾರ ಪುಣ್ಯಕರ್ಮಗಳನ್ನು ಆತನು ಮಾಡುತ್ತಿದ್ದನು. ಆತನು ಸುಂದರವಾದ ಮರಗಳ ತೋಪುಗಳನ್ನು ನಿಮರ್ಾಣ ಮಾಡುತ್ತಿದ್ದನು. ಸೇತುವೆಗಳ ನಿಮರ್ಾಣ ,ರಸ್ತೆಗಳ ನಿಮರ್ಾಣ ಇತ್ಯಾದಿ ಪ್ರಜಾಹಿತಕಾರ್ಯಗಳಲ್ಲಿ ತೊಡಗುತ್ತಿದ್ದನು,. ಅತನಿಗೆ ಸಮಾನಮನಸ್ಕರಾದ ಸ್ನೇಹಿತರು ಇದ್ದರು ಅವರು ಸಹಾ ಅಂತಹುದೇ ಕಾರ್ಯದಲ್ಲಿ ತೊಡಗುತ್ತಿದ್ದರು. ಅವರ ಪತ್ನಿಯರು ನನ್ನ ಸ್ನೇಹಿತರಾಗಿದ್ದರು. ನಾವೂ ಸಹಾ ವಿಹಾರಗಳಿಗೆ ತೆರಳಿ ಸುಗಂಧಾದಿಗಳನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಒಮ್ಮೆ ಕೆಲವು ಧೂರ್ತರು ನಮ್ಮ ಶೀಲದಿಂದ ನಮ್ಮನ್ನು ಜಾರಿಸುವಂತಹ ಪಂದ್ಯವನ್ನು ಕಟ್ಟಿಕೊಂಡರು. ನಮ್ಮನ್ನು ಹೊಗಳಿ ಇತ್ಯಾದಿಗಳಿಂದ ಸೆಳೆಯಲು ಯತ್ನಿಸಿದರು. ಅವರಿಂದ ಅಕಷರ್ಿತಳಾಗಿ ನಾನು ಶೀಲವಂಚಿತಳಾದೆನು. ಹೀಗೆ ಅವರಲ್ಲಿ ಒಬ್ಬ ಪಂದ್ಯವನ್ನು ಗೆದ್ದನು. ಈ ವಿಷಯವು ಹೇಗೋ ನನ್ನ ಪತಿಗೆ ಗೊತ್ತಾಗಿ ನನ್ನ ಬಳಿ ಈ ಬಗ್ಗೆ ವಿಚಾರಿಸಿದನು.ಆಗ ನಾನು ಈ ರೀತಿಯ ಸಂಗತಿ ನನಗೆ ತಿಳಿಯದು ಎಂದೆನು ಆಗಲೂ ಸಂಶಯ ಪಡುತ್ತಿದ್ದಂಹ ನನ್ನ ಪತಿಗೆ ಹೀಗೆ ಹೇಳಿದೆನು;ನನ್ನಿಂದ ಏನಾದರೂ ಇಂತಹ ಕೃತ್ಯ ನಡೆದಿದ್ದರೆ ನಾನು ಪುನಃ ಹುಟ್ಟಿದಾಗ ಈ ಬಗೆಯ ಕರಿನಾಯಿಯು ನನ್ನನ್ನು ತಿನ್ನಲಿ ಎಂದು ಕರಿ ನಾಯಿಯನ್ನು ತೋರಿಸಿ ಹೇಳಿದೆನು.. ನಂತರ ನನ್ನ ಪತಿ ಹಾಗೂ ಗೆಳತಿಯ ಪತಿಯರು ನನ್ನ ಸ್ನೇಹಿತೆಯರನ್ನು ಈ ವಿಷಯದ ಕುರಿತು ಕೇಳಿದಾಗ ಅವರು ಸಹಾ ವಿಷಯ ಗೊತ್ತಿದ್ದರು ಸಹಾ ಅವರು ಹೀಗೆ ಉತ್ತರಿಸಿದರು.;ನಮಗೆನಾದರೂ ಈ ವಿಷಯ ಗೊತ್ತಿದ್ದರೇ ನಾವು ನಂತರದ ಜನ್ಮದಲ್ಲಿ ಈಕೆಯ ಗುಲಾಮರಾಗಲಿ.

    ಅದರೆ ನಮ್ಮ ನಿಧನದ ನಂತರ ಹಾಗೇ ಆಯಿತು. ನಾನೂ ಈ ಹಿಮಾಲಯದ ಪ್ರಾಂತ್ಯದ ಕಣ್ಣಮುಂಡ ಸರೋವರದ ಹತ್ತಿರದ ಮಹಲಿನಲ್ಲಿನ ಪೇತಿಯಾದೇನು. ನನ್ನ ಗೆಳತಿಯರು ನನ್ನ ಗುಲಾಮರಾದರು. ಹಾಗೂ ನಾವು ಮಾಡಿದ ಪುಣ್ಯದಿಂದ ನಾವು ಹಗಲು ಹೊತ್ತು ಸುಖವಾಗಿರುತ್ತಿದ್ದೆವು. ಅದರೆ ಪ್ರತಿರಾತ್ರಿ ನನ್ನನ್ನು ಕರಿನಾಯಿಯು ತಿಂದು ಬಿಡುತ್ತಿತ್ತು. ಪುನಃ  ಹಗಲಿನಲ್ಲಿ ಜೀವಂತಳಾಗುತ್ತಿದ್ದೆನು. ಇಧೇ ರೀತಿಯಲ್ಲಿ ಜೀವನ ಸಾಗುತ್ತಿತ್ತು. ಇಲ್ಲಿನ ಸರೋವರದ ಪಕ್ಕದ ಮಾವಿನ ಹಣ್ಣುಗಳು ಯವ್ವನ ಪ್ರಸಾದಿಸುವುದರಿಂದಾಗಿ ಒಮ್ಮೆ ರಾಜನು ಇಲ್ಲಿಗೆ ಬಂದನು,. ಆತನು ನನ್ನ ದೀನ ಅವಸ್ಥೆ ಗಮನಿಸಿ ಆ ನಾಯಿಯನ್ನು ತನ್ನ ಬಾಣದಿಂದ ಕೊಂದನು. ಅಂದಿನಿಂದ ನನಗೆ ರಾತ್ರಿಯಲ್ಲಿ ಈಗ ನಾಯಿಯಿಂದ ತಿನ್ನಲ್ಪಡುವ ಹಾಗಿಲ್ಲ. ನಂತರ ಕೆಲವು ಕಾಲ ನನ್ನ ಬಳಿ ವಾಸಿಸಿದ ರಾಜನು ಸಹಾ ಹೊರಟುಹೋದನು. ಅಂದಿನಿಂದ ಹೀಗೆ ಜೀವಿಸುತ್ತಿದ್ದೇನೆ. ಎಂದಳು. 

ನಂತರ ಮೊಗ್ಗಲಾನರು ಆಕೆಯ ಚರಿತೆಯನ್ನು ಭಗವಾನರಿಗೂ ತಿಳಿಸಿದರು.

5.6.3 ನಾಲ್ಕು ಪೇತಗಳ ಕಥೆ

ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿದ್ದಾಗ,  ಮೊಗ್ಗಲಾನರು ವಿಂದ್ಯ ಪರ್ವತ ಶ್ರೇಣಿಯ ಪಕ್ಕದ ಕಾಡಿನಲ್ಲಿ ಸಂಚರಿಸುತ್ತಿದ್ದಾಗ ನಾಲ್ಕು ಪ್ರೇತಗಳನ್ನು ಕಂಡರು ಹಾಗೂ ಅವರ ಬಗ್ಗೆ ಹಾಗೂ ಅವರ ಕಮ್ಮಗಳ ಬಗ್ಗೆ ಕೇಳಿದರು. ಆಗ ಆ ನಾಲ್ಕು ಪ್ರೇತಗಳು ಒಬ್ಬ ದುಶ್ಶೀಲ ವ್ಯಾಪಾರಿ, ಆತನ ಪತ್ನಿ, ಆತನ ಮಗ ಹಾಗೂ ಆತನ ಸೊಸೆಯದು ಎಂದು ತಿಳಿಯಿತು.. ಆಗ ಮೊಗ್ಗಲಾನರು ಅವರ ಕಮ್ಮಗಳ ಬಗ್ಗೆ ಕೇಳಿದರು. ಆಗ ಅವರು ತಮ್ಮ ತಮ್ಮ ಕಮ್ಮಗಳ ಕುರಿತು ಹೀಗೇ ಹೇಳಿಕೊಂಡರು. 

ನಾನೂ ಕೆಟ್ಟ ವ್ಯಾಪಾರಿಯಾಗಿದ್ದೆನು ನಾನು ತಪ್ಪು ತಕ್ಕಡಿಗಳನ್ನು ಇಟ್ಟುಕೊಂಡು ಮೋಸ ಮಾಡುತ್ತಿದ್ದೆನು. ಆಹಾರದಲ್ಲಿ ಕಲಬೆರಕೆ ಮಾಡುತ್ತಿದ್ದೆನು. ಪರಿಣಾಮವಾಗಿ ಹುಳುಗಳಿರುವ ಕೊಳೆತ ವಾಸನೆಯ ಸಗಣಿಯನ್ನು ಸೇವಿಸುತ್ತಿದ್ದೇನೆ.

ನನ್ನ ಪುತ್ರನು ತನ್ನ ತಾಯಿಯನ್ನು ಗಾಯಗೊಳಿಸಿದನು. ನನ್ನ ಸೊಸೆಯು ಮಾಂಸವನ್ನು ತಿಂದು ಇಲ್ಲವೆಂದು ಸುಳ್ಳು ಹೇಳುತ್ತಿದ್ದಳು. ಹೀಗಾಗಿ ಆಕೆಯ ರಕ್ತವನ್ನು ಆಕೆಯೇ ಕುಡಿಯುವಳು. .ನನ್ನ ಪತ್ನಿಯು ನನ್ನ ವಸ್ತುಗಳನ್ನು ಅಡಗಿಸಿ ಅದರ ಕುರಿತು  ಏನಾದರೂ ಕೇಳಿದರೇ ಆಕೆ ಹೀಗೆ ಹೇಳುತ್ತಿದ್ದಳು. : ನಾನು ಏನಾದರೂ ನಿಮ್ಮ ವಸ್ತುಗಳನ್ನು ಅಡಗಿಸಿದ್ದರೇ ನನ್ನ ಆಹಾರವು ಸಗಣಿಯಾಗಲಿ.

 ಹೀಗಾಗಿ ಅಕೆಯು ಸೇವಿಸುವ  ಸಿಹಿ ವಾಸನೆಯ ಅನ್ನವೂ ಸಗಣಿಯಾಗುತ್ತದೆ. ಹೀಗೆ ಅವರಿಂದ ಕೇಳಿದ ಮೊಗ್ಗಲಾನರು ಅವರ ವಿಷಯವನ್ನು ಕುರಿತು ನಂತರ ಭಗವಾನರಿಗೆ ತಿಳಿಸಿದರು.

5.7 ದೇಹ ರೂಪಾಂತರದ ಇದ್ಧಿ

ಒಮ್ಮೆ ಶ್ರಾವಸ್ಥಿಯ ಜನರು ವಿಭಿನ್ನ ಧಮರ್ೀಯರಿಗೆ ಔತಣಕೂಟವನ್ನು ಏರ್ಪಡಿಸಿದರು. ಅದರಲ್ಲಿ ಅವರು ಮೊಗ್ಗಲಾನರವರನ್ನೇ ಮೊದಲಿಗರಾಗಿ ಆಯ್ಕೆ ಮಾಡಿದರು. ಈ ಔತಣಕೂಟವು ನದಿಯ ಎದುರಿನ ದೊಡ್ಡ ಚೌಕದಲ್ಲಿ ನಡೆಯಿತು.

ಅಲ್ಲಿಗೆ ಅನೇಕ ಪಂಗಡಗಳ ನಾಯಕರು ಬಂದಿದ್ದರು, ಅದರೆ ಅವರಲ್ಲಿ ತಾವೇ ಶ್ರೇಷ್ಟರೆಂಬ ಅಹಂಕಾರವೂ ಹಾಗೂ ಮಿಥ್ಯದೃಷ್ಟಿಯು ಇತ್ತು. ಅವರೆಲ್ಲಾ ಆ ಔತಣಕೂಟಕ್ಕೆ ಹೋಗಬೇಕಾದರೆ ನದಿಯನ್ನು ದಾಟಬೇಕಿತ್ತು. ಆಗ ದೂರದಲ್ಲಿ ಭಗವಾನರು ಭಿಕ್ಕೂಸಂಘದ ಸಮೇತ ಬರುತ್ತಿದ್ದರು. ಆಗ ಮೊಗ್ಗಲಾನರು ಭಗವಾನರಿಗೆ ಹಾಗೂ ಭಿಕ್ಖುಸಂಘಕ್ಕಾಗಿ ತಮ್ಮ ಶರೀರವನ್ನು ರತ್ನಗಳ ಬೃಹತ್ ಸೇತುವೆಯನ್ನಾಗಿಸಿದರು. ಈ ಸೇತುವೆಯಿಂದ ಅವರೆಲ್ಲಾ ದಾಟಲಿ ಎಂಬುದು ಅವರ ಇಚ್ಚೆಯಾಗಿತ್ತು. ಅದರೆ ತಕ್ಷಣ ಸೇತುವೆ ಪ್ರತ್ಯಕ್ಷವಾಗಿದ್ದಕ್ಕೆ ಪರಪಂಗಡಗಳ ನಾಯಕರು ಹಾಗೂ ಅವರ ಅನುಯಾಯಿಗಳೆಲ್ಲಾ ಸೇತುವೆ ಹತ್ತಿ ಒಡಲಾರಂಬಿಸಿದರು. ಅವರು   ಮಧ್ಯಭಾಗಕ್ಕೆ ಬಂದಾಗ ಸೇತುವೆಯು ಬಿದ್ದುಹೋಯಿತು. ತಕ್ಷಣ ಭಗವಾನರ ಮುಂದೆ ಸೇತುವೆ ಮತ್ತೊಮ್ಮೆ ಪ್ರತ್ಯಕ್ಷವಾಯಿತು. ಆಗ ಭಗವಾನರು ತಕ್ಷಣ ಪರಪಂಗಡಗಳ ಅವಸ್ತೆ ಗಮನಿಸಿ ಅವರು ಮುಳಗದಂತೆ ಸಂಕಲ್ಪಿಸಿದರು ಹಾಗೂ ತಮ್ಮ ಸಂಘದ ಹಿಂದೆ ಇರುವಂತೆ ಸಂಕಲ್ಪಿಸಿದರು. ಅದರಂತೆಯೇ ಅವರೆಲ್ಲಾ ಅವರ ಹಿಂದೆ ಕಾಣಿಸಿಕೊಂಡರು. ನಂತರ ಅವರೆಲ್ಲ ನದಿಯ ಆ ಕಡೆಯ ದಡ ತಲುಪಿದರು. ನಂತರ ಸೇತುವೆಯು ಅದೃಷ್ಯವಾಯಿತು. ಹಾಗೇಯೇ ಪರ ಫಂಗಡದವರಿಗೆ ಬುದ್ಧಭಗವಾನರ ಮಹೊನ್ನತೆ ಅರಿವಾಯಿತು. ಅವರಿಗೆ ತಮ್ಮ ಸೀಮಿತತೆಯ ಅರಿವು ಉಂಟಾಯಿತು.

5.8 ಮೊಗ್ಗಲಾನರಿಗೆ ನೀಡಿದ ದಾನಗಳ ಫಲ

5.8.1 ಸತ್ಕಾರದ ಫಲ:

ಮೊಗ್ಗಲಾನರು ಬುದ್ಧಭಗವಾನರ ಅಗ್ರ ಶ್ರಾವಕರು ಹೀಗಾಗಿ ಅವರಿಗೆ ನೀಡಿದ ದಾನಫಲವೂ ಸಮಾನ್ಯವಾದುದಲ್ಲ. ಅದರ ಕುರಿತು ದೇವೆಂದ್ರ ಸಕ್ಕನೇ ಹೀಗೆ ಹೇಳಿದ್ದಾನೆ.: ತಥಾಗತರಿಗೆ ಆಗಲಿ ಅಥವಾ ಅವರ ಅಗ್ರಶಿಷ್ಯರಿಗೇ ಆಗಲಿ ನೀಡುವ ಭಕ್ತಿಯುತ ದಾನ  ಸಾಧಾರಣವಾದುದಲ್ಲ. ಅದರ ಕುರಿತ ವಿವರಣೆ ಹೀಗಿದೆ.

ಒಮ್ಮೆ ಒಬ್ಬ ಶ್ರದ್ಧಾಯುತ ಹೆಣ್ಣು ಮೊಗ್ಗಲಾನರಿಗೆ ಮನೆಗೆ ಸ್ವಾಗತಿಸಿ ಪೀಠವನ್ನು ನೀಡಿ ಭಕ್ತಿಯಿಂದ ದಾನವನ್ನು ನೀಡಿದಳು ಹಾಗೂ ತುಂಬಾ ಆನಂದ ಪಟ್ಟಳು. ಇದಾದ ಕೆಲವು ದಿನಗಳ ನಂತರ ಆಕೆಯು ಕಾಯಿಲೆಯಿಂದ ಸಾವಿಗೇ ಈಡಾದಳು. ಅದರೆ ಆ ದಾನದ ಫಲದಿಂದ ಆಕೆಯು ತಾವತಿಂಸ ಸುಗತಿಯಲ್ಲಿ ಉಗಮಿಸಿದಳು.

5.8.2 ದಾನದ ಫಲಿತಾಂಶ : 

  ಭಗವಾನರು ರಾಜಗೃಹದ ವೇಳುವನದಲ್ಲಿ ನೆಲೆಸಿದ್ದಾಗ ರಾಜಗೃಹದಲ್ಲಿ ಸುಗೃಹಸ್ಥ ಕುಟುಂಬವೊಂದಿತ್ತು. ಆ ಮನೆಯಲ್ಲಿ ಪ್ರತಿಯೊಬ್ಬರು ಸಹಾ ದಾನದಲ್ಲಿ ಆನಂದಿಸುತ್ತಿದ್ದರು. ಆ ಮನೆಯ ಹುಡುಗಿಯು ಸಹಾ ದಾನದಲ್ಲಿ ಅತಿಯಾಗಿ ಆನಂದಿಸುತ್ತಿದ್ದಳು. ಆಕೆಯು ದಾನ ನೀಡದೇ ಆಹಾರವನ್ನೇ ಸೇವಿಸುತ್ತಿರಲಿಲ್ಲ. ಆಕೆಯು ಸದಾ ತನ್ನ ಭಾಗದ ಆಹಾರದಲ್ಲಿ ಅರ್ಧ ಭಾಗವನ್ನು ಇಟ್ಟೆ ನಂತರ ಊಟ ಮಾಡುತ್ತಿದ್ದಳು. ಇದನ್ನು ಕಂಡ ಆಕೆಯ ತಾಯಿಯು ಆಕೆಗೆ ದುಪ್ಪಟ್ಟು ಆಹಾರ ನೀಡಿದರೆ ಆ ಹುಡುಗಿಯು ಅದರಲ್ಲೂ ಸಹಾ ಭಾಗವನ್ನು ಮಾಡಿ ಅದನ್ನು ಹಂಚಿ ನಂತರ ಆಹಾರವನ್ನು ಸೇವಿಸುತ್ತಿದ್ದಳು.

ಕಾಲವು ಕಳೆದಂತೆ ಆಕೆಯು ಯುವತಿಯಾದಳು. ಅದರೆ ಆಕೆಗೆ ಮಿಥ್ಯದೃಷ್ಟಿಯುಳ್ಳವರ ಮನೆಯಲ್ಲಿ ವಿವಾಹ ಮಾಡಲಾಯಿತು. ಹೀಗಾಗಿ ಅವರೆಲ್ಲ ದಾನಕ್ಕೆ ಮಹತ್ವವೇ ನೀಡಿರಲಿಲ್ಲ.

ಒಮ್ಮೆ ಮಹಾಮೊಗ್ಗಲಾನರು ಆಹಾರಕ್ಕಾಗಿ ತಿರುಗಾಡುತ್ತಿರಬೇಕಾದರೇ ಆ ಯುವತಿಯು ಮೊಗ್ಗಲಾನರನ್ನು ಕಂಡು ಅವರನ್ನು ಮನೆಗೆ ಆಹ್ವಾನಿಸಿ ತನ್ನ ಅತ್ತೆಯು  ಪಕ್ಕದಲ್ಲಿಟ್ಟಿದ್ದಂಹ ಸಿಹಿರೊಟ್ಟಿಯನ್ನು ದಾನವಾಗಿ ನೀಡಿದಳು. ಇದನ್ನು ಕಂಡ ಆ ಅತ್ತೆಗೆ ಅತಿಯಾದ ಕೋಪವು ಉಂಟಾಯಿತು. ಆಕೆಯು ಬಯ್ಯುತ್ತಾ ಒನಕೆಯಿಂದ ಆ ಯುವತಿಯ ಭುಜಕ್ಕೆ ಹೊಡೆದಳು. ಅದರೆ ಆ ಯುವತಿಯು ಅತ್ಯಂತ ಕೋಮಲೆಯಾಗಿದ್ದರಿಂದ ಆಕೆಯು ನೋವು ಸಹಿಸಲಾರದೆ ಸ್ಥಳದಲ್ಲಿಯೇ ಮೃತಪಟ್ಟಳು ಅದರೆ ದಾನ ನೀಡಿದ್ದರಿಂದಾಗಿ ಆಕೆಯು ತಾವತಿಂಸ ದೇವಲೋಕದಲ್ಲಿ ಜನಿಸಿದಳು.

  ಒಮ್ಮೆ ಮೊಗ್ಗಲಾನರು ದೇವಯಾನದಲ್ಲಿ ತೊಡಗಿದ್ದಾಗ ಅವರು ತೇಜಸ್ವಿಯಾಗಿದ್ದ ದೇವಿಯನ್ನು ಕಂಡು ಆಕೆಯ ವೈಭವಕ್ಕೆ ಕಾರಣ ಕೇಳಿದಾಗ ಆಕೆಯು ತಾನು ಹಿಂದಿನ ಜನ್ಮದಲ್ಲಿ ಏನಾಗಿದ್ದೇನೆ ಎಂಬುದನ್ನು ತಿಳಿಸಿ ಆಕೆಯು ಅವರಿಗೆ ನೀಡಿದ್ದ ದಾನವೇ ಕಾರಣವೆಂದು ತಿಳಿಸಿದಳು. 

5.8.3 ಮಲ್ಲಿಗೆಯ ಪೂಜೆ : 

ಆ ಸಮಯದಲ್ಲಿ ಭಗವಾನರು ರಾಜಗೃಹದಲ್ಲಿ ವಾಸಿಸುತ್ತ್ತಿದ್ದರು.ಆ ರಾಜಗೃಹದಲ್ಲಿ ಮೊಗ್ಗಲಾನರ ಮೇಲೆ ಅಪಾರವಾದ ಶ್ರದ್ಧೆಯನ್ನು ಹೊಂದಿದ್ದಂತಹ ಗೃಹಸ್ಥನಿದ್ದನು. ಆತನಿಗೆ ಹಲವಾರು ಹೆಣ್ಣುಮಕ್ಕಳಿದ್ದರು . ಅವರಲ್ಲಿ ಒಬ್ಬ ಹುಡುಗಿಯು ಸಹಾ ಅದೇ ಬಗೆಯ ಶ್ರದ್ಧೆಯನ್ನು ಹೊಂದಿದ್ದಳು.ಒಮ್ಮೆ ಮೊಗ್ಗಲಾನರು ದಾರಿಯಲ್ಲಿ ಹೋಗುತ್ತಿರಬೇಕಾದರೆ ಆಕೆಯು ಮೊಗ್ಗಲಾನರನ್ನು ಮನೆಗೆ ಆಹ್ವಾನಿಸಿದಳು .ಅವರಿಗೆ ಪೀಠವನ್ನು ಹಾಕಿ ಮಲ್ಲಿಗೆಯ ಹೂಹಾರದಿಂದ ಪೂಜಿಸಿದಳು. ಹಾಗೂ ಮೊಗ್ಗಲಾನರ ಪಿಂಡಪಾತ್ರೆಗೆ ಜೇನುಬೆಲ್ಲವನ್ನು ಹಾಕಿದಳು. ಅವರಿಗೆ ಮೊಗ್ಗಲಾನರು ಧನ್ಯವಾದಗಳನ್ನು ತಿಳಿಸಿದರು. ಅದರೆ ಆ ಹುಡುಗಿಯು ಮನೆಕೆಲಸಗಳಲ್ಲಿ ತೊಡಗಿದ್ದರಿಂದಾಗಿ ಆಕೆಯಿಂದ ಬೋಧನೆ ಆಲಿಸಲು ಆಗಲಿಲ್ಲ. ಮುಂದೆ ಒಂದು ದಿನ ನಿಮ್ಮ ಬೋಧನೆ ಆಲಿಸುತ್ತೇನೆ ಎಂದು ಹೇಳಿ ಆಕೆಯು ಅಲ್ಲಿಂದ ಹೊರಟಳು.. ನಂತರ ಮೊಗ್ಗಲಾನರು ಅಲ್ಲಿಂದ ಹೊರಟರು.

ಅದರೆ ಆ ಹುಡುಗಿಯು ಅದೇ ದಿನದಂದು ಕಾರಾಣಾಂತರಗಳಿಂದ ಮೃತಪಟ್ಟಳು. ಹಾಗೇಯೇ ಆಕೆಯು ಆ ಕ್ಷಣವೇ ತಾವತಿಂಸ ದೇವಲೋಕದಲ್ಲಿ ಉಗಮಿಸಿದಳು.

   ಒಮ್ಮೆ ಮೊಗ್ಗಲಾನರು ದೇವಯಾನದಲ್ಲಿ ತೊಡಗಿದ್ದಾಗ ಅವರು ತೇಜಸ್ವಿಯಾಗಿದ್ದ ದೇವಿಯನ್ನು ಕಂಡು ಆಕೆಯ ವೈಭವಕ್ಕೆ ಕಾರಣ ಕೇಳಿದಾಗ ಆಕೆಯು ತಾನು ಹಿಂದಿನ ಜನ್ಮದಲ್ಲಿ ಏನಾಗಿದ್ದೇನೆ ಎಂಬುದನ್ನು ತಿಳಿಸಿ ಆಕೆಯು ಅವರಿಗೆ ನೀಡಿದ್ದ ದಾನವೇ ಕಾರಣವೆಂದು ತಿಳಿಸಿದಳು. 

5.8.4  ಫಲದಾಯಕ ವಿಮಾನ 

ಒಮ್ಮೆ ತಾವತಿಂಸ ದೇವಲೋಕಕ್ಕೆ ಹೋಗಿದ್ದಂತಹ ಮೊಗ್ಗಲಾನರು ದೇವನೊಬ್ಬನ  ವೈಭವ, ತೇಜಸ್ಸು ಇತ್ಯಾದಿಗಳನ್ನು ಕಂಡು ಆತನ  ಈ ಸುಗತಿಗೆ ಕಾರಣವನ್ನು ಕೇಳಿದರು. ಆಗ ಆತನು ತನ್ನ ದಾನವನ್ನು ಕುರಿತು  ಹೀಗೆ ಹೇಳಿದನು :ನಾನೂ ರಾಜ ಬಿಂಬಸಾರನ ಬಳಿ ಉಧ್ಯಾನವನ ಪಾಲಕನಾಗಿದ್ದೆನು ಅದರೂ ನಿಮ್ಮನ್ನು ಆಗ ಕಂಡು ಮಾವಿನ ಹಣ್ಣುಗಳನ್ನು ಶ್ರದ್ಧೆಯಿಂದ ನೀಡಿದೆನು ಹಾಗೇಯೇ ನಾನೂ ಒಮ್ಮೆ ಭಗವಾನರಿಗೂ ಮಾವಿನ ಹಣ್ಣುಗಳನ್ನು ನೀಡಿದೆನು ಅವರು ಅವನ್ನು ಪೂಜ್ಯ ಸಾರಿಪುತ್ತ, ಪೂಜ್ಯ ಮಹಾ ಕಸ್ಸಪ ಹಾಗೂ ತಮ್ಮೊಡನೆ ಹಂಚಿಕೊಂಡರು ಆ ದಾನದ ಫಲದಿಂದ ನನಗೆ ಆಗಲೇ ರಾಜನು ಒಡವೆ ವಸ್ತ್ರ ಹಾಗೂ ಹಳ್ಳಿಯನ್ನು ಉಡುಗೊರೆಯಾಗಿ ನೀಡಿದನು. ಹಾಗೂ ಸಾವಿನ ನಂತರ ಈ ಸ್ವರ್ಣಮಯ ವಿಮಾನದಲ್ಲಿ ವಾಸಿಸುತ್ತಿದ್ದೇನೆ. 

5.8.5  ಗೋಪಾಲಕ ವಿಮಾನ :

ಭಗವಾನರು ರಾಜಗೃಹದ ವೇಳುವನದಲ್ಲಿದ್ದಾಗ  ಒಬ್ಬ ಗೋಪಾಲಕನು(ದನಗಾಹಿ) ಹಸುಗಳನ್ನು ಮೇಯಿಸಲು ಹೋಗುತ್ತಿದ್ದನು. ಹಾಗೆ ಹೋಗಬೇಕಾದರೆ ಆತನು ಮೊಗ್ಗಲಾನರಿಗೆ ಎದುರಾಗಿ ಬಂದನು. ತಕ್ಷಣ ಮೊಗ್ಗಲಾನರಿಗೆ ಆತನ ಆಯಸ್ಸು ಅತಿ ಅಲ್ಪವೆಂದು ತಿಳಿಯಿತು. ಆ ಗೋಪಾಲಕನಿಗೂ ಮೊಗ್ಗಲಾನರನ್ನು ಕಂಡ ಕೂಡಲೇ ದಾನ ನೀಡಬೇಕೆಂಬ ಆಸೆಯಾಯಿತು. ಆಗ ಆತನ ಬಳಿಯಲ್ಲಿ ಕುಮ್ಮಾಸವೆಂಬ ಸಿಹಿ ತಿಂಡಿಯಿತ್ತು. ಮೊದಲಿಗೆ ಆತನಲ್ಲಿ ದಾನ ನೀಡಲೋ ಅಥವಾ ಬೇಡವೋ ಎಂಬ ಅನಿಧರ್ಾರ ಉಂಟಾಯಿತು. ನಂತರ ಈ ಮಹತ್ತರ ಅವಕಾಶ ತಪ್ಪಿಕೊಳ್ಳಬಾರದೆಂದುಕೊಂಡನು. ಆತನು ಮೊಗ್ಗಲಾನರಿಗೆ ಆ ಕುಮ್ಮಾಸಪಿಂಡವನ್ನು ನೀಡಿದಾಗ ಅವರು ಅನುಕಂಪೆಯಿಂದ ಸ್ವೀಕರಿಸಿದರು. ಹಾಗೂ ಸೇವಿಸತೊಡಗಿದರು. ಅವರು ಸೇವಿಸುವುದನ್ನು ಕಂಡು ಆತನಿಗೆ ಆಪಾರ ಅನಂದವೂ ಉಂಟಾಯಿತು. ಅದೇ ವೇಳೆಯಲ್ಲಿ ಆತನು ಹಸುಗಳನ್ನು ಓಡಿಸುವ ಆತುರದಲ್ಲಿ ಹಾವೊಂದನ್ನು ತುಳಿದನು. ಅದು ತಕ್ಷಣ ಕಚ್ಚಿತು. ಭೀಕರ ವಿಷವು ತಕ್ಷಣ ದೇಹವ್ಯಾಪಿ ಹರಡಿತು ಆತನು ಸತ್ತುಹೋದನು. ಅದರೆ ಸಾಯುವ ಸ್ಥಿತಿಯಲ್ಲಿಯೂ ಆತನು ದಾನದ ಆನಂದದಲ್ಲಿದ್ದನು. ಹೀಗಾಗಿ ಆತನು ತಾವತಿಂಸ ದೇವಲೋಕದಲ್ಲಿ ಉಗಮಿಸಿದನು.

5.8.6  ಕಬ್ಬಿನ ದಾನದಿಂದ ಪೇತವು ದೇವವಾಯಿತು

ಒಮ್ಮೆ ಭಗವಾನರು ವೇಲುವನದಲ್ಲದ್ದಾಗ ಮಹಾ ಮೊಗ್ಗಲಾನರು ರಾಜಗೃಹದ ಕಡೆಗೆ ಹೊರಟರು. ಅಲ್ಲಿ ಪೇತವೊಂದು ಅವರ ಬಳಿಗೆ ಬಂದು ಹೀಗೆ ಪ್ರಶ್ನಿಸಿತು. 

ಇಲ್ಲಿ ನನ್ನ ಎದುರಿಗೆ ಬೃಹತ್ ಕಬ್ಬಿನ ತೋಪು  ಕಾಣಿಸಿಕೊಳ್ಳುವುದು ಅದರೂ ನನಗೆ ತಿನ್ನಲು ಆಗುವುದಿಲ್ಲ. ಪೂಜ್ಯರೇ ಇದಕ್ಕೆ ಕಾರಣ ನೀಡಿ.?

ನಾನು ನರಳುತ್ತಿದ್ದೇನೆ, ತಿನ್ನಲು ಸಂಘರ್ಷ ಮಾಡುತ್ತಿರುತ್ತೇನೆ, ತಿಂದು ಹಾಕಲ್ಪಡುತ್ತಿದ್ದೇನೆ, ಸಾವಿಗೆ ಹತ್ತಿರವಾಗುತ್ತಿರುತ್ತೇನೆ, ಅಳುತ್ತಿದ್ದೇನೆ ಇದು ಯಾವ ಕಮ್ಮದ ಪರಿಣಾಮ ?

ನಾನು ಇವುಗಳಿಂದ ದಾಟಲು ಯತ್ನಿಸುತ್ತಿದ್ದೇನೆ, ನೆಲದ ಮೇಲೇ ಬಿದ್ದು ಮೀನಿನಂತೆ ಹೊರಳಾಡುತ್ತಿದ್ದೇನೆ, ಗೋಳಾಡುತ್ತಾ ಆಶ್ರುಮುಕನಾಗುತ್ತೇನೆ. ಇದು ಯಾವುದರ 

ಪರಿಣಾಮ ?

ನಾನೂ ಹಸಿದಿದ್ದೇನೆ, ಬಾಯಾರಿದ್ದೇನೆ, ಬಳಲಿ ಬೇಸತ್ತಿದ್ದೇನೆ, ಯಾವುದೇ ಸುಖ ಹಾಗೂ ಸಂತೋಷವಿಲ್ಲದೇ ಭಯಭೀತನಾಗಿದ್ದೇನೆ. ಓ ನಿಮಗೆ ಒಳ್ಳೆಯದಾಗಲಿ,  ನಾನೂ ಯಾವ ರೀತಿಯಲ್ಲಿ ಈ ಕಬ್ಬನ್ನಾದರೂ ಆಹಾರವಾಗಿ ಪಡೆಯಬಲ್ಲೇ?

ಆಗ ಮೊಗ್ಗಲಾನರು ಹೀಗೆ ಉತ್ತರಿಸಿದರು. ಇದಕ್ಕೆ ಕಾರಣವಿದೆ ಹಿಂದಿನ ಜನ್ಮದಲ್ಲಿ ನೀನು ಹೇರಳವಾದ ಕಬ್ಬನ್ನು ತಿನ್ನುತ್ತಾ ಸಾಗಿದೆ. ಹಿಂದಿನಿಂದ ಮಗುವೊಂದು ನಿನ್ನಲ್ಲಿ ಕಬ್ಬನ್ನು ಯಾಚಿಸಿತು ಅದರೂ ನೀನೂ ಯಾವ ಉತ್ತರವೂ ಹಾಗೂ ಕಬ್ಬನ್ನು ನೀಡದೇ ಹೋದೆ. ಅದರ ಪರಿಣಾಮವೇ ಇದು. .

ನೋಡಿಲ್ಲಿ ನಿನ್ನ ಹಿಂದೆ ಕಬ್ಬು ಕಾಣಿಸುವುದು ಈಗ ನೀನೂ ಹೃದಯಭರಿತವಾಗಿ ತಿನ್ನು. ನಿನ್ನ ದಾನ ಗುಣದಿಂದಾಗಿಯೇ ನೀನು ಸುಖವಾಗಿರುವೆ. ಎಂದು ಹೇಳಿ ಮೊಗ್ಗಲಾನರು ಹಿಂಬದಿಯಿಂದ ಕಬ್ಬನ್ನು ಹಿಡಿದುಕೊಂಡರು. 

ಯಾವಾಗ ಪೇತವು ಮೊಗ್ಗಲಾನರಿಗೇ ಒಳಿತನ್ನು ಬಯಸಿತೋ ಹಾಗೂ ಅವರ ಸಂಪರ್ಕಕ್ಕೆ ಬಂದಿತೋ ಹಾಗೂ ಮೊಗ್ಗಲಾನರಗೆ ದಾನ ಮಾಡಲು ಇಚ್ಚಿಸಿತೋ  ಮತ್ತು ಮೊಗ್ಗಲಾನರು ಬೆಂಬಲವಾಗಿ ತಿನ್ನಲು ಹಿಡಿದುಕೊಂಡು ಅದಕ್ಕೆ ಸಹಾಯ ಮಾಡಿದರೋ ಆಗ ಅದಕ್ಕೂ ತಿನ್ನಲು ಸಾಧ್ಯವಾಯಿತು. ಆಗ ಅದು ಹೃದಯ ಪೂರ್ವಕವಾಗಿ ತಿಂದಿತು. ಅದು ಅಪಾರ ಸಂತೋಷಿಸಿತು.

  ನಂತರ ಪೇತವು ಕಬ್ಬಿನ ಜಲ್ಲೆಗಳನ್ನು ಕಟ್ಟಿ ಅವನ್ನು ಮೊಗ್ಗಲಾನರಿಗೆ ನೀಡಿತು. ಅದನ್ನು ಮೊಗ್ಗಲಾನರು ಭಗವಾನರಿಗೇ ನೀಡಿದರು. ಭಗವಾನರು ಆಶೀವರ್ಾದ ಮಾಡಿದರು.ಈ ದಾನದಿಂದಾಗಿ ಅದು ತಾವತಿಂಸ ಲೋಕದಲ್ಲಿ ಉಗಮಿಸಿತು.

5.8.7 ಅಸೂಯೆಯಿಂದ ಸಗಣಿ ತಿನ್ನುವ ಪ್ರೇತವಾದನು

ಒಮ್ಮೆ ಮೊಗ್ಗಲಾನರು ಸಗಣಿ ತಿನ್ನುತ್ತಿದ್ದಂತಹ ಪೇತವನ್ನು ನೋಡಿದರು. ಹಾಗೂ ಅದಕ್ಕೆ ಆ ಸ್ಥಿತಿಗೆ ಕಾರಣ ಕೇಳಿದರು. ಆಗ ಆ ಪೇತವು ಹೀಗೆ ನುಡಿಯಿತು.:  ನನ್ನ ಮನೆಯಲ್ಲಿ  ಭಿಕ್ಖು ವಾಸ ಮಾಡುತ್ತಿದ್ದನು. ಅಲ್ಲಿಗೆ ಬೇರೆ ಬಿಕ್ಖುಗಳು ಸಹಾ  ಬರುತ್ತಿದ್ದರು. ಅವರಿಗೂ ನಾನು  ಉಪಚಾರ ಮಾಡುವುದನ್ನು ಕಂಡು ಅಲ್ಲಿ ಮೊದಲೇ ಇದ್ದಂತಹ ಬಿಕ್ಖು ಅಸೂಯೆಗೆ ಒಳಗಾಗಿ ಅವರಿಗೆ ಬಯ್ಯುತ್ತಿದ್ದನು. ನಾನೂ ಸಹಾ ಅತನನ್ನೇ ಅನುಕರಿಸಿದೆನು. ಈಗ ಇಬ್ಬರೂ ಸಹಾ ಪೇತಗಳಾಗಿರುವೆವು. ನಾನು ಈಗ ಆತನ ತಲೆಯ ಮೇಲೆಯೇ ನಿಂತಿದ್ದೇನೆ. ಬೇರೆಯವರು ತಿರಸ್ಕರಿಸಿದಂತಹ ಸಗಣಿ ಅಥವಾ ಸಗಣಿಯಂತಹ ಆಹಾರವು ನನಗೆ ಆಹಾರವಾಗುವುದು. ಹಾಗೂ ನಾನು ತಿರಸ್ಕರಿಸಿದ ಆಹಾರವನ್ನು ಆತನು ಪಡೆಯುತ್ತಾನೆ. ಇದನ್ನು ಆಲಿಸಿದ ಮೊಗ್ಗಲಾನರು ಈ ವಿಷಯವನ್ನು ಭಗವಾನರಿಗೆ ತಿಳಿಸಿದರು. ಆಗ ಭಗವಾನರು ಇದೆಲ್ಲಾ ಪರರ ತಪ್ಪು ಹುಡುಕುವುದರ ಪರಿಣಾಮವೆಂದರು.

5.8.8  ಶ್ರಾವಸ್ಥಿ ನಗರದ ಪೇತಗಳು 

ಒಮ್ಮೆ ಭಗವಾನರು ಶ್ರಾವಸ್ಥಿಯಲ್ಲಿದ್ದಾಗ ಮೊಗ್ಗಲಾನರು ಶ್ರಾವಸ್ಥಿಯ ಬೀದಿಗಳಲ್ಲಿ ಆಹಾರಕ್ಕಾಗಿ ಹೋಗುತ್ತಿರುವಾಗ ಅಲ್ಲಿ ಪೇತಗಳ ಗುಂಪನ್ನು ನೋಡಿದರು. ಆಗ ಮೊಗ್ಗಲಾನರು ಅವರ ಬಗ್ಗೆ ಅವರನ್ನೇ ಮಾತನಾಡಿಸಿ ಅವರ ಈ ಸ್ಥಿತಿಗೆ ಕಾರಣಗಳನ್ನು ಕೇಳಿದರು. ಅದಕ್ಕೆ ಅವರು ಪಾಪ ಕಮ್ಮಗಳೆಂದರು. ಆಗ ಮೊಗ್ಗಲಾನರು ಅವರಿಗೆ ಯಾವ ಪಾಪಕಮ್ಮದಿಂದ ಹೀಗೆ ಆಗಿರುವಿರಿ ಎಂದು ವಿಚಾರಿಸಿದಾಗ ಅವರು ಹೀಗೆ ಉತ್ತರಿಸಿದರು.: ನಾವು ಅಧಾಮರ್ಿಕರಾಗಿದ್ದೆವು. ನಮಗೆ ಧಮ್ಮ ಜೀವನದಲ್ಲಿ ನಂಬಿಕೆ ಇರಲಿಲ್ಲ. ನಾವು ಹಣದಾಹದಿಂದ ಕೂಡಿದ್ದು ಅದಕ್ಕಾಗಿ ಅನೇಕ ಪಾಪಗಳನ್ನು ಮಾಡಿದೆವು. ಕಳ್ಳತನ , ಮೋಸ, ಪರರ ಆಸ್ತಿಕಬಳಿಕೆ, ಸುಳ್ಳು ,ಅಪ್ರಮಾಣಿಕತೆ, ದಾನವನ್ನು ಸಹಾ ಯಾರಿಗೂ ನೀಡಲಿಲ್ಲ. ಅದರೇ ಈಗ ನಾವು ಪರರು ನೀಡುವ ದಾನಗಳ ಫಲಕ್ಕಾಗಿ ಜನರು ಉಳಿಯುವ ಸ್ಥಳಗಳಲ್ಲಿ ಉಳಿದಿದ್ದೇವೆ. ನಾವು ನದಿಗಳ ಸಮೀಪಕ್ಕೆ ಹೋದರೆ ಅದು ಸಹಾ ಬರಿದಾಗುವುದು. ಬಿಸಿಲಿಗೆ ನೆರಳಲ್ಲಿ ಹೋದರೂ ಅದು ಸಹಾ ಪರಮ ಬಿಸಿಯಾಗುವುದು. ನಮ್ಮ ಮೇಲೆ ಸುಡುವಂತಹ ಬಿಸಿ ಗಾಳಿಯು ಬೀಸುವುದು. ನಾವು ಇದಕ್ಕಿಂತ ಹೆಚ್ಚಿನದಕ್ಕೂ ಅರ್ಹರಾಗಿದ್ದೇವೆ

ನಾವು ಆಹಾರಕ್ಕೆ ಯೋಜನಗಳಷ್ಟು ದೂರ ಸಾಗುವೆವು. ಅದರೂ ಸಹಾ ನಮಗೇನು ಸಿಗದು. ಅಯ್ಯೋ ! ನಾವು ಅಲ್ಪ ಪುಣ್ಯಸ್ಥರಾಗಿದ್ದೇವೆ.

ನಾವು ಹಸಿವಿನಿಂದ ಕ್ಷೀಣವಾಗಿ ಮೂಚರ್ೆಹೋಗುತ್ತೇವೆ. ಭೂಮಿಗೆ ನಮ್ಮ ತಲೆಯೇ ಮೊದಲು ಬೀಳುವುದು. ನಾವು ನಮ್ಮ ತಲೆ ಹಾಗೂ ಎದೆಗಳನ್ನು ಬಡಿದುಕೊಂಡು ಅಯ್ಯೋ ! ನಾವು ಅಲ್ಪ ಪುಣ್ಯಸ್ಥರಾಗಿದ್ದೇವೆ ಎಂದು ಗೋಳಾಡುತ್ತೇವೆ..

ನಾವು ಇದಕ್ಕೆಲ್ಲಾ ಅರ್ಹರಾಗಿದ್ದೇವೆ, ನಮಗೆ ಇದಕ್ಕಿಂದ ಹೆಚ್ಚು ಸಿಗಲೂ ಅರ್ಹತೆ ಪಡೆದಿದ್ದೇವೆ. ನಾವೂ ಏನಾದರೂ ಈ ಸ್ಥಿತಿಯಿಂದ ಮುಕ್ತರಾಗಿ ಪುನಃ ಮಾನವರಾದರೇ ನಾವು ಶೀಲವಂತರಾಗುತ್ತೇವೆ. ಹಾಗೂ ದಾನಿಗಳಾಗುತ್ತೇವೆ. ಎಂದವು. 

ಮೊಗ್ಗಲಾನರು ಇವರ ವಿಷಯವನ್ನು ಭಗವಾನರಿಗೆ ತಿಳಿಸಿದರು.

5.9 ಸರ್ವಲೋಕಗಳ ಯಾನ

    ಬಲಶಾಲಿಯಾದ ವ್ಯಕ್ತಿಯೊಬ್ಬ ತೆರೆದ ಕೈಯನ್ನು ವೇಗವಾಗಿ ಮಡಚುವಷ್ಟು ಅಥವಾ     ಮಡಚಿರುವ ಕೈಯನ್ನು ತೆರೆಯುವಷ್ಟು ಕಾಲದಲ್ಲಿ ಮೊಗ್ಗಲಾನರು ಈ ಭೂಲೋಕವನ್ನು ಬಿಟ್ಟು ಉನ್ನತ ಸುಗತಿ ಲೋಕಗಳಿಗೆ ಅಥವಾ ಬ್ರಹ್ಮಲೋಕಗಳಿಗೆ ಕ್ಷಣಾರ್ಧದಲ್ಲಿ ಹೋಗುತ್ತಿದ್ದರು. ಈ ಸಾಮಾಥ್ರ್ಯವನ್ನು ಅವರು ಧ್ಯಾನದಲ್ಲಿ ಗಳಿಸಿದ್ದರು. ಹಾಗೆ ಅವರು ಆ ಲೋಕಗಳಿಗೆ ಹೋಗಿ ಅವರ ಸುಗತಿಗಳಿಗೆ ಕಾರಣವನ್ನು ತಿಳಿಯುತ್ತಿದ್ದರು. ಅಥವಾ ಅಲ್ಲಿಯು ಬೋಧನೆ ಮಾಡುತ್ತಿದ್ದರು. ಭಗವಾನರು 3 ತಿಂಗಳ ಕಾಲ ಅಭಿದಮ್ಮವನ್ನು ದೇವತೆಗಳಿಗೆ ಬೋಧಿಸುವಾಗ ಅಲ್ಲಿನ ವಾರ್ತವಿಶೇಷಗಳನ್ನು ಇಲ್ಲಿಗೆ ಬಂದು ತಿಳಿಸುತ್ತಿದ್ದರು. ಹಾಗೆಯೇ ಸಕ್ಕ -ದೇವತೆಗಳ ಒಡೆಯನನ್ನು ಸಹಾ ಹೋಗಿ ಪರೀಕ್ಷಿಸುತ್ತಿದ್ದರು.ಅವರು ಕೇವಲ ದೇವತೆಗಳನ್ನು ಮಾತ್ರವಲ್ಲ ಯಾವ ಸಮಣ ಬ್ರಾಹ್ಮಣರಿಗೂ ಅಥವಾ ಮನುಷ್ಯರಿಗೂ ಪ್ರವೇಶವಿಲ್ಲದ ಬ್ರಹ್ಮಲೋಕಗಳಿಗೂ ಹೋಗಿ ಅಲ್ಲಿಯು ಸಹಾ ಬ್ರಹ್ಮರಿಗೂ ಬೋಧನೆ ಮಾಡುತ್ತಿದ್ದರು. ಹಾಗೂ ಕೆಲವರಿಗೆ ಸೋತಪತ್ತಿ ಫಲ ಸಿಗುವಂತೆ ಮಾಡುತ್ತಿದ್ದರು. ಅವನ್ನು ನಾವು ಸಂ.ನಿ 6.5 ನಲ್ಲಿ ಹಾಗೂ ಅಂ.ನಿ.4.34:7.53 ರಲ್ಲಿ ಕಾಣಬಹುದು. ಈ ಕೆಳಕಂಡ ಉದಾಹರಣೆಯಲ್ಲಿ ಅವರು ಸಕ್ಕನಿಗೆ ಬೋಧನೆ ಮಾಡಿರುವುದು ಸಿಗುತ್ತದೆ.

5.9.1 ಸಕ್ಕ ಸುತ್ತಂ

ಒಮ್ಮೆ ಪರಮಪೂಜ್ಯ ಮೊಗ್ಗಲಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ಉಧ್ಯಾನದಲ್ಲಿ ವಿಹರಿಸುತ್ತಿದ್ದರು, ಆಗ ಬಲಶಾಲಿ ವ್ಯಕ್ತಿಯೊಬ್ಬ ಮಡಚಿದ ಕೈಯನ್ನು ವೇಗದಿಂದ ವಿಸ್ತಾರಮಾಡುವಷ್ಟು ಅಥವಾವಿಸ್ತರಿಸಿದ ಕೈಯನ್ನು ವೇಗದಿಂದ ಮಡಚುವಷ್ಟು ವೇಗದಲ್ಲಿ ಜೇತವನದಿಂದ ಕಣ್ಮರೆಯಾಗಿ ತಾವತಿಂಸ ದೇವಲೋಕದಲ್ಲಿ ಅವರ ನಡುವೆ ಪ್ರತ್ಯಕ್ಷರಾದರು. ಆಗ ಸಕ್ಕ ಹಾಗು 500 ದೇವತೆಗಳು ಭಕ್ತಿಯಿಂದ ಮೊಗ್ಗಲಾನರ ಬಳಿಗೆ ಸಮೀಪಿಸಿದರು ಹಾಗು ವಂದಿಸಿದರು ಹಾಗು ಗೌರವದಿಂದ ಒಂದೆಡೆ ನಿಂತರು. ಆಗ ಮೊಗ್ಗಲಾನರು ಅವರೊಂದಿಗೆ ಹೀಗೆ ಹೇಳಿದರು : 

ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು ,ಹಾಗೆಯೆ ಧಮ್ಮದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಧಮ್ಮರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು ,ಹಾಗೆಯೆ ಸಂಘದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ದೇವಾಧಿಗಳೊಡೆಯ ಸಾಧು.

ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು,ಬುದ್ಧರಲ್ಲಿ ಸರಣಾಗಮನವನ್ನು ಮಾಡುವುದು ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಏಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ ಮೊಗ್ಗಲಾನರವರೇ ಸಾಧು ,ಹಾಗೆಯೆ ಧಮ್ಮದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದೆ ಆಗಿದೆ ಏಕೆಂದರೆ ಧಮ್ಮರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ ಮಾರಿಸರಾದ ಮೊಗ್ಗಲಾನರೆ ಸಾಧು ,ಹಾಗೆಯೆ ಸಂಘದಲ್ಲಿ ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದೆ ಆಗಿದೆ, ಏಕೆಂದರೆ ಸಂಘದಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಹೀಗಾಗಿ  ಮೊಗ್ಗಲಾನರವರೆ ಸಾಧು.

ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಅದೆಂದರೆ, ಭಗವಾನರು ಹೀಗಿರುವರು ಅವರು ಅರಹಂತರು, ಸಮ್ಮಸಂಬುದ್ಧರು, ವಿಧ್ಯಾಚರಣಸಂಪನ್ನರು, ಸುಗತರು, ಲೋಕವಿದರು, ಅನುತ್ತರ ದಮ್ಯಸಾರಥಿಯು, ಬುದ್ಧರು ಹಾಗು ಭಗವಾನರು ಆಗಿದ್ದಾರೆ. ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.

ಸಾಧು ದೇವಾಧಿಗಳೊಡೆಯ ಸಾಧು, ಧಮ್ಮದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ,  ಭಗವಾನರಿಂದ ಧಮ್ಮವು ಬಹು ಚೆನ್ನಾಗಿ ವಿವರಿಸಲ್ಟಟ್ಟಿದೆ, ನೇರವಾಗಿ ನೋಡಬಹುದಾಗಿರುವಂತಹುದು, ಕಾಲವಿಳಂಬವಿಲ್ಲದೆ, ತಕ್ಷಣ ಫಲಕಾರಿಯು, ಬನ್ನಿ ಪರಿಕ್ಷಿಸಿ ಎಂದು ಆಹ್ವಾನಿಸುವಂತಹುದು, ಊದ್ರ್ವಗಾಮಿಯು ಉನ್ನತಿಕಾರಕವು, ಪ್ರತಿಯೊಬ್ಬ ಪ್ರಾಜ್ಞನಿಂದ ಅರಿಯಲ್ಪಡುವಂತಹುದು.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.

ಸಾಧು ದೇವಾಧಿಗಳೊಡೆಯ ಸಾಧು, ಸಂಘದಲ್ಲಿ ಹೀಗೆ ಶ್ರದ್ಧೆಯನ್ನು ಹೊಂದುವುದು ಖಂಡಿತ ಒಳ್ಳೆಯದು ಹೇಗೆಂದರೆ, ಭಗವಾನರ ಶ್ರಾವಕಸಂಘವು ಒಳ್ಳೆಯ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ನೇರವಾದ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಸತ್ಯದ ಮಾರ್ಗವನ್ನು ಅನುಸರಿಸುತ್ತಿದೆ, ಭಗವಾನರ ಶ್ರಾವಕಸಂಘವು ಯೋಗ್ಯವಾದ ಮಾರ್ಗವನ್ನು ಅನುಸರಿಸುತ್ತಿದೆ, ಈ ಶ್ರಾವಕ ಸಂಘವು ನಾಲ್ಕು ಜೊತೆಯ ವ್ಯಕ್ತಿಗಳಿಂದ ,ಎಂಟು ವಿಧದ ವ್ಯಕ್ತಿಗಳಿಂದ ಕೂಡಿದೆ, ಈ ಶ್ರೇಷ್ಟಸಂಘವು ದಾನಗಳಿಗೆ,ಆತೀಥ್ಯಕ್ಕೆ, ದಕ್ಷಣೆಗೆ, ಅಂಜಲಿಬದ್ಧರಾಗಿ ವಂದಿಸುವುದಕ್ಕೂ ಅರ್ಹವಾಗಿದೆ.ಲೋಕದಲ್ಲಿರುವ ಅನುತ್ತರವಾದ ಪುಣ್ಯಕ್ಷೇತ್ರವಾಗಿದೆ.ಹೀಗೆ ಈ ಬಗೆಯ ಧೃಡಶ್ರದ್ಧೆಯಿಂದ ಇಲ್ಲಿನ ಜೀವಿಗಳು ತಮ್ಮ ಮರಣದ ನಂತರ ಸುಗತಿಯಲ್ಲಿ ,ಸ್ವರ್ಗಲೋಕದಲ್ಲಿ ಉದಯಿಸುವರು.

ಸಾಧು ದೇವಾಧಿಗಳೊಡೆಯ ಸಾಧು, ಶೀಲಗಳ ಹೊಂದಿರುವಿಕೆ ಆರ್ಯರಿಗೆ ಪ್ರೀಯವಾಗಿರುತ್ತವೆ. ಅಖಂಡ ಶೀಲ, ಅಛಿದ್ರ ಶೀಲ, ಅಕಳಂಕಿತ ಶೀಲ, ಅನಿಂದನೀಯ ಶೀಲ, ಇವುಗಳೆಲ್ಲವೂ ಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿವೆ, ಅಂಟುಕೊಳ್ಳದಿರುವಿಕೆಗೆ ಸಹಾಯಕವಾಗಿದೆ,ಸಮಾಧಿಗೆ ಸಹಾಯಕಾರಿಯಾಗಿವೆ, ಏಕೆಂದರೆ ಶೀಲಗಳನ್ನು ಹೊಂದಿರುವಿಕೆ ಆರ್ಯರಿಗೆ ಪ್ರಿಯವಾದುದು, ಶೀಲಪಾಲನೆ ಮಾಡುವ ಜೀವಿಗಳು ಸಾವಿನ ನಂತರ ಸುಗತಿಯನ್ನು ಹೊಂದಿ, ಸ್ವರ್ಗಲೋಕಗಳಲ್ಲಿ ಉದಯಿಸುತ್ತವೆ.

ಸಾಧು ಮಾರಿಸರಾದ ಮೊಗ್ಗಲಾನರೇ ಸಾಧು,ಬುದ್ಧರಲ್ಲಿ ಧೃಡಶ್ರದ್ಧೆ ಹೊಂದಿರುವುದು  ತುಂಬಾ ಒಳ್ಳೆಯದು ,.................ಹಾಗೆಯೇ ಧಮ್ಮದಲ್ಲಿ ಧೃಡಶ್ರದ್ಧೆಹೊಂದಿರುವುದು ತುಂಬಾ ಒಳ್ಳೆಯದು ......................... ಹಾಗೆಯೇ ಸಂಘದಲ್ಲಿ  ಧೃಡಶ್ರದ್ಧೆ ಹೊಂದಿರುವುದು ತುಂಬಾ ಒಳ್ಳೆಯದು ...............,ಅದೇರೀತಿ ಶೀಲಗಳನ್ನು ಹೊಂದಿರುವುದು ಆರ್ಯರಿಗೆ ಪ್ರಿಯವಾಗಿರುತ್ತವೆ. ಅಖಂಡ ಶೀಲ, ಅಛಿದ್ರ ಶೀಲ, ಅಕಳಂಕಿತ ಶೀಲ, ಅನಿಂದನೀಯ ಶೀಲ, ಇವುಗಳೆಲ್ಲವೂ ಜ್ಞಾನಿಗಳಿಂದ ಪ್ರಶಂಸೆಗೆ ಪಾತ್ರವಾಗಿವೆ, ಅಂಟುಕೊಳ್ಳದಿರುವಿಕೆಗೆ ಸಹಾಯಕವಾಗಿದೆ,ಸಮಾಧಿಗೆ ಸಹಾಯಕಾರಿಯಾಗಿವೆ, ಏಕೆಂದರೆ ಶೀಲಗಳನ್ನು ಹೊಂದಿರುವಿಕೆ ಆರ್ಯರಿಗೆ ಪ್ರಿಯವಾದುದು, ಶೀಲಪಾಲನೆ ಮಾಡುವ ಜೀವಿಗಳು ಸಾವಿನ ನಂತರ ಸುಗತಿಯನ್ನು ಹೊಂದಿ ಸ್ವರ್ಗಲೋಕಗಳಲ್ಲಿ ಉದಯಿಸುತ್ತವೆ. 

ಸಾಧು ದೇವಾಧಿಗಳೊಡೆಯ ಸಾಧು ,ಬುದ್ಧರಲ್ಲಿ, ಧಮ್ಮದಲ್ಲಿ, ಸಂಘದಲ್ಲಿ, ಸರಣಾಗಮನವನ್ನು ಮಾಡಿ ಖಂಡಿತವಾಗಿಯು ಒಳ್ಳೆಯದನ್ನೇ ಮಾಡಿರುವೆ, ಏಕೆಂದರೆ ಬುದ್ಧರಲ್ಲಿ ಶರಣು ಹೊಂದಿದ ಇಲ್ಲಿನ ಹಲವಾರು ಜೀವಿಗಳು ಸಾವಿನ ನಂತರ ಸುಗತಿಯಲ್ಲಿಯೆ ಸ್ವರ್ಗದಲ್ಲಿಯೆ ಉಧ್ಭವಿಸಿವೆ, ಅಂತಹ ದೇವತೆಗಳು ಉಳಿದ ದೇವತೆಗಳಿಗಿಂತ 10 ವಿಧದಲ್ಲಿ ಮೀರಿಸುವಂತಿರುತ್ತವೆ. ಅವೆಂದರೆ: ಆ ದೇವತೆಗಳು ದಿವ್ಯವಾದ ಆಯಸ್ಸನ್ನು , ದಿವ್ಯವಾದ ಸೌಂದರ್ಯವನ್ನು,  ದಿವ್ಯವಾದ ಸುಖಗಳನ್ನು, ದಿವ್ಯವಾದ ಕೀತರ್ಿಯನ್ನು, ದಿವ್ಯವಾದ ಸಾರ್ವಬೌಮತ್ವವನ್ನು, ಮತ್ತು ದಿವ್ಯವಾದ ಆಕಾರಗಳನ್ನು, ಶಬ್ದಗಳನ್ನು, ದಿವ್ಯವಾದ ಸುಗಂಧವನ್ನು, ದಿವ್ಯವಾದ ರುಚಿಯನ್ನು, ದಿವ್ಯವಾದ ಸ್ಪಶ್ರ್ಯವನ್ನು ಹೊಂದಿರುತ್ತವೆ.

ನಂತರ ದೇವತೆಗಳೊಡೆಯ ಸಕ್ಕರು 600ದೇವತೆಗಳೊಂದಿಗೆ ಮೊಗ್ಗಲಾನರ ಬಳಿಗೆ ಬಂದರು ಹಾಗು.............700 ದೇವತೆಗಳೊಂದಿಗೆ.........800......80000 ದೇವತೆಗಳೊಂದಿಗೆ ಮೊಗ್ಗಲಾನರ ಬಳಿ ಸಮೀಪಿಸಿ ವಂದಿಸಿ ,ಗೌರವದಿಂದ ಒಂದೆಡೆ ನಿಂತರು, ಆಗ ಮಹಾಮೊಗ್ಗಲಾನರು ಅವರೊಂದಿಗೆ ಹೀಗೆ ನುಡಿದರು,; (ಆ ಸಂಭಾಷಣೆಯೆಲ್ಲಾ ಮೇಲಿನಂತೆಯೆ ಇದೆ.)

5.9.2 ಉತ್ತರಾಳ ಹಾಗೂ ಸಿರಿಮಾಳ ವಿಮಾನ

ರಾಜಗೃಹದ ವಾಸಿಯಾಗಿದ್ದ ಉತ್ತರಾಳು ರೈತ ಪುಣ್ಯನ ಮಗಳಾಗಿದ್ದಳು. ಪುಣ್ಣ (ಪುಣ್ಯ)ನು ಶ್ರೀಮಂತ ಸುಮನನಲ್ಲಿ ಕೆಲಸ ಮಾಡುತ್ತಿದ್ದನು. ಒಂದುದಿನ ಪುಣ್ಯ ಮತ್ತು ಆತನ ಹೆಂಡತಿ ಪೂಜ್ಯ ಸಾರಿಪುತ್ತರಿಗೆ ಆಹಾರವನ್ನು ನೀಡಿದರು. ಆಗ ಸಾರಿಪುತ್ರರು ಆಗಷ್ಟೇ ನಿರೋಧ ಸಮಾಪತ್ತಿಯಿಂದ ಹೊರಬಂದಿದ್ದರು. (ನಿರೋಧ ಸಮಾಪತ್ತಿ ಎಂದರೆ ನಿಬ್ಬಾಣ ಸಾಕ್ಷಾತ್ಕಾರವೇ ಆಗಿದೆ). ಆಗ ನೀಡಿದ ದಾನದಿಂದಾಗಿ ಮಹತ್ಫಲ ಸಿಗುವುದು. ಹೀಗಾಗಿ ಪುಣ್ಣ ಆ ಪುಣ್ಯ ಫಲದಿಂದಾಗಿ ತಕ್ಷಣವೇ ಶ್ರೀಮಂತನಾಗಿಬಿಟ್ಟನು. ಆತನು ಹೊಲವನ್ನು ಉತ್ತುತ್ತಿರುವಾಗ ಆತನಿಗೆ ಚಿನ್ನವು ಸಿಕ್ಕತು. ಮತ್ತು ರಾಜನು ಸಹಾ ಆತನಿಗೆ ಅಧಿಕೃತವಾಗಿ ರಾಜ ಸರಾಫನೆಂದು ಘೋಷಿಸಿಬಿಟ್ಟನು. ಒಂದು ಸಂದರ್ಭದಲ್ಲಿ ಪುಣ್ಯನ ಕುಟುಂಬವು ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಏಳು ದಿನಗಳ ಕಾಲ ಆತಿಥ್ಯ ನೀಡಿತು. ಹಾಗು ಏಳನೆಯ ದಿನದಂದು ಭಗವಾನರ ಬೋಧನೆ ಆಲಿಸಿ ಆ ಕುಟುಂಬದ ಮೂವರು ಸೋತಪತ್ತಿ ಫಲದಲ್ಲಿ ಪ್ರತಿಷ್ಠಿತರಾದರು. ನಂತರ ಉತ್ತರಾಳು ಶ್ರೀಮಂತ ಸುಮನನ ಮಗನೊಂದಿಗೆ ವಿವಾಹವಾದಳು. ಆದರೆ ಅವರು ಬೌದ್ಧರಾಗಿರಲಿಲ್ಲ. ಹೀಗಾಗಿ ಉತ್ತರಾಳು ಅಲ್ಲಿ ಸಂತೃಪ್ತವಾಗಿರಲಿಲ್ಲ. ಒಮ್ಮೆ ಆಕೆ ತನ್ನ ತಂದೆಯೊಂದಿಗೆ ಹೀಗೆ ಹೇಳಿದಳು: ಅಪ್ಪಾ, ನನಗೇಕೆ ಇಂತಹ ಪಂಜರದಲ್ಲಿ ಹಾಕಿಬಿಟ್ಟೆ. ಇಲ್ಲಿ ನಾನು ಯಾವ ಭಿಕ್ಷುವನ್ನು ನೋಡಿಲ್ಲ ಹಾಗು ಯಾವ ಭಿಕ್ಷುವಿಗೂ ದಾನವನ್ನೇ ನೀಡಿಲ್ಲ ಈ ಮಾತುಗಳನ್ನು ಕೇಳಿ ತಂದೆಗೂ ಅನುಕಂಪವಾಗಿ ಆತನು ಮಗಳಿಗಾಗಿ 15000 ರೂ.ಗಳನ್ನು ನೀಡಿದನು. ಗಂಡನ ಅಪ್ಪಣೆ ಪಡೆದು ಈ ಹಣದಿಂದ ಆಕೆಯು ಪತಿಗಾಗಿ ಸಿರಿಮಾ ಎಂಬ ವಾರಾಂಗನೆಯನ್ನು ಏಪರ್ಾಟು ಮಾಡಿ 15 ದಿನಗಳ ಕಾಲ ಪತಿಗೆ ಸೇವೆ ಮಾಡಲು ಆಕೆಗೆ ನೇಮಿಸಿದಳು. 

ನಂತರ ಉತ್ತರಾಳು ತಾನು 15 ದಿನಗಳ ಕಾಲ ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಆಹಾರ ದಾನ ನೀಡಿದಳು. 15ನೇ ದಿನದಂದು ಆಕೆಯು ಅಡುಗೆ ಮನೆಯಲ್ಲಿ ಆಹಾರ ಸಿದ್ಧಪಡಿಸುತ್ತಿರುವುದನ್ನು ಕಂಡು ಹೀಗೆ ಯೋಚಿಸಿದನು. ಈ ಉತ್ತರಾ ಅದೆಷ್ಟು ಮೂರ್ಖಳಾಗಿದ್ದಾಳೆ, ಈಕೆಗೆ ಸಂತೋಷವಾಗಿರುವುದು ಹೇಗೆ ಎಂಬುದೇ ತಿಳಿದಿಲ್ಲ. ಕೇವಲ ದಾನಗಳಲ್ಲಿಯೇ ಇರುತ್ತಾಳೆ, ನಂತರ ನಕ್ಕುಬಿಟ್ಟನು. ಆತನು ಉತ್ತರಾಳಿಗೆ ಕಂಡು ನಗೆಬೀರಿದ್ದನ್ನು ಸಿರಿಮಾ ನೋಡಿದಳು. ಆಕೆಗೆ ಅತಿಯಾದ ಅಸೂಯೆಯು ಉಂಟಾಯಿತು. ತಾನು ಕೇವಲ ಬಾಡಿಗೆ ಪತ್ನಿ ಎಂಬುದನ್ನು ಆಕೆ ಮರೆತಳು. ಸಿರಿಮಾಳು ಅಡುಗೆ ಮನೆಗೆ ನುಗ್ಗಿ, ಅಲ್ಲಿ ಕುದಿಯುತ್ತಿದ್ದ ಎಣ್ಣೆಯ ಪಾತ್ರೆ ಎತ್ತಿಕೊಂಡಳು. ನಂತರ ಉತ್ತರಾಳ ತಲೆಯ ಮೇಲೆ ಸುರಿಯುವ ಉದ್ದೇಶದಿಂದ ಅವಳತ್ತ ಧಾವಿಸಿದಳು. ಉತ್ತರಾಳಲ್ಲಿ ಏನೋ ಅಪಾಯ ಮುನ್ಸೂಚನೆ ಉಂಟಾಯಿತು. ತಕ್ಷಣ ಆಕೆಗೆ ಸಿರಿಮಾಳು ಬಿಸಿಯಾಗಿರುವ ಎಣ್ಣೆಯನ್ನು ಸುರಿಯಲು ಬರುತ್ತಿದ್ದಾಳೆ ಎಂದು ಅರ್ಥವಾಯಿತು. ತಕ್ಷಣ ಆಕೆಯು ಈ ರೀತಿಯ ಸತ್ಯಕ್ರಿಯೆ ಮಾಡಿದಳು ನನ್ನಲ್ಲಿ ಸಿರಿಮಾಳ ಮೇಲೆ ಯಾವುದೇ ರೀತಿಯ ದ್ವೇಷವೂ ಇಲ್ಲ, ಈ ಸತ್ಯವಚನದಿಂದಾಗಿ ನನಗೆ ಯಾವುದೇ ಸುಡುವ ಅನುಭವ ಆಗದಿರಲಿ, ಹಾಗೊಂದು ವೇಳೆ ನಾನು ಸಿರಿಮಾಳಿಗೆ ದ್ವೇಷಿಸಿದ್ದೇ ಆಗಿದ್ದರೆ, ಈ ಬಿಸಿ ಎಣ್ಣೆಯ ನನಗೆ ಸುಡಲಿ. ಆಗ ಸಿರಿಮಾಳು ಬಿಸಿಯಾದ ಎಣ್ಣೆಯನ್ನು ಉತ್ತರಾಳ ತಲೆಯ ಮೇಲಿಂದ ಸುರಿದೇಬಿಟ್ಟಳು. ಆಶ್ಚರ್ಯ ! ಆ ಬಿಸಿ ಎಣ್ಣೆಯು ಆಕೆಗೆ ಅಣುಮಾತ್ರವೂ ಹಾನಿ ಉಂಟು ಮಾಡಲಿಲ್ಲ. ಅದು ಸತ್ಯವೇ ಆಗಿತ್ತು. ಹೀಗಾಗಿಯೇ ಉತ್ತರಾಳ ಮೈತ್ರಿ, ದ್ವೇಷರಹಿತತೆ, ಸತ್ಯಕ್ರಿಯೆ ಸಮ್ಮಿಲನಗೊಂಡು ಆಕೆಗೆ ಸಂರಕ್ಷಿಸಿತು. ಆದ್ದರಿಂದಲೇ ಆಕೆಗೆ ಬಿಸಿ ಎಣ್ಣೆಯು ಸಹಾ ತಣ್ಣೀರಿನಂತೆ ಅನುಭವವಾಯಿತು. ಆಗ ಸಿರಿಮಾಳು ಈ ಎಣ್ಣೆಯು ತಣ್ಣದ್ದಾಗಿರಬೇಕು, ಆದ್ದರಿಂದಲೇ ಆಕೆಗೆ ಏನೂ ಆಗಲಿಲ್ಲ ಎಂದು ಭಾವಿಸಿ ಮತ್ತೊಂದು ಪಾತ್ರೆಯ ಬಿಸಿಯಾದ ಎಣ್ಣೆಯನ್ನು ಎತ್ತಿಕೊಳ್ಳಲು ಹೋದಳು. ತಕ್ಷಣ ಉತ್ತರಾಳ ಸೇವಕಿಯರು ಸಿರಮಾಳನ್ನು ತಡೆದು ಹಿಡಿದು ಬಾರಿಸಿದರು. ಆಗ ಉತ್ತರಾಳೇ ಅವರನ್ನು ತಡೆದು, ಸಿರಿಮಾಗೆ ಉಪಚಾರ ಮಾಡಿದಳು. 

ಆಗ ಸಿರಿಮಾಗೆ ತನ್ನ ನಿಜಸ್ಥಿತಿ ಅರಿವಾಯಿತು. ಹಾಗು ತಾನು ಉತ್ತರಾಳಿಗೆ ಮಾಡಿದ ಅನ್ಯಾಯಕ್ಕೆ ಪಶ್ಚಾತ್ತಾಪಪಟ್ಟಳು. ಮತ್ತು ಆಕೆಯಲ್ಲಿ ಕ್ಷಮೆಯಾಚಿಸಿದಳು. ಆಗ ಉತ್ತರಾಳು ಹೀಗೆ ಹೇಳಿದಳು: ಕೇವಲ ನನ್ನ ಮಹಾತಂದೆಯು ಒಪ್ಪಿದರೆ ಮಾತ್ರ ನಾನು ನಿನಗೆ ಕ್ಷಮಿಸುವೆ ಎಂದಳು. ಆಗ ಆಕೆಯು ಆ ಮಹಾತಂದೆಯನ್ನು ಭೇಟಿಮಾಡಲು ಒಪ್ಪಿದಳು. ಆ ಮಹಾತಂದೆಯು ಬುದ್ಧರಲ್ಲದೆ ಬೇರಾರು ಆಗಿರಲಿಲ್ಲ. ಆಕೆಯು ಜನ್ಮಗಳಿಂದ ಪಾರುಮಾಡುವ ಬುದ್ಧರನ್ನೇ ತನ್ನ ತಂದೆ ಎಂದು ಮಾಮರ್ಿಕವಾಗಿ ಹೇಳಿದ್ದಳು. ಧಮ್ಮ ಬೋಧಿಸಿದಂತಹ ಸತ್ಯದ ಅರಿವು ಮೂಡಿಸುವಂತಹ ಬುದ್ಧರನ್ನೇ ಆಕೆಯು ತಂದೆ ಎಂದು ಭಾವಿಸಿದ್ದಳು. ಸಿರಿಮಾಳು ಬುದ್ಧರನ್ನು ಕಾಣಲು ಇಚ್ಛಿಸಿದಳು. ಹೀಗಾಗಿ ಉತ್ತರಾಳು ಭಗವಾನರಿಗೆ ಮತ್ತು ಭಿಕ್ಷುಗಳಿಗೆ ಉತ್ತರಾಳ ಮನೆಯಲ್ಲಿಯೇ ಸಿರಿಮಾಳು ದಾನ ಅಪರ್ಿಸುವಂತೆ ಏಪರ್ಾಡು ಮಾಡಿದಳು. 

ಭಗವಾನರು ಅಲ್ಲಿಗೆ ಬಂದರು, ಆತಿಥ್ಯವನ್ನು ಪಡೆದರು. ಆಹಾರ ಸೇವನೆಯ ನಂತರ ಸಿರಿಮಾ ಮತ್ತು ಉತ್ತರಾಳ ನಡುವೆ ನಡೆದುದೆಲ್ಲವನ್ನು ಭಗವಾನರಿಗೆ ತಿಳಿಸಲಾಯಿತು. ನಂತರ ಸಿಮಾಳು ತನ್ನ ಅಪರಾಧಕ್ಕೆ ಕ್ಷಮೆ ಯಾಚಿಸಿದಳು. ಬುದ್ಧರಲ್ಲಿ ಉತ್ತರಾಳಿಂದ ಕ್ಷಮೆ ನೀಡಿಸಬೇಕೆಂದು ಯಾಚಿಸಿದಳು.

ಆಗ ಭಗವಾನರು ಉತ್ತರಾಳಿಗೆ ಹೀಗೆ ಪ್ರಶ್ನಿಸಿದರು: ಓ ಉತ್ತರಾ, ಸಿರಿಮಾಳು ನಿನ್ನ ಮೇಲೆ ಬಿಸಿಯಾದ  ಎಣ್ಣೆಯನ್ನು ಸುರಿದಾಗ ಯಾವರೀತಿಯ ಅನುಭೂತಿ ಪಡೆದೆ?

ಭಗವಾನ್, ಸಿರಿಮಾಳು ನನ್ನ ದಾನಾದಿ ಪುಣ್ಯಕಾರ್ಯಕ್ಕೆ ಸಹಾಯಕಳಾಗಿಯೇ (ನನ್ನ ಪತಿಯೊಂದಿಗೆ) ಇದ್ದುದರಿಂದಾಗಿ ನಾನಂತು ಆಕೆಯ ಮೇಲೆ ಕೃತಜ್ಞಳಾಗಿದ್ದೆ ಹೊರತು ಲವಲೇಶವೂ ಆಕೆಯಲ್ಲಿ ದ್ವೇಷಾಸೂಯೆಯಿಂದ ಕೂಡಿರಲಿಲ್ಲ. ನಾನು ಆಕೆಯಲ್ಲಿ ಮೈತ್ರಿಯುತ ಚಿತ್ತದಿಂದಲೇ ಇದ್ದೆನು. ಮೈತ್ರಿಯನ್ನು ಆಕೆಯತ್ತ ಪ್ರಸಾರ ಮಾಡುತ್ತಿದ್ದೆನು.

ಆಗ ಭಗವಾನರು ಆಕೆಗೆ ಹೀಗೆ ಪ್ರಶಂಸಿಸಿದರು: ಸಾಧು, ಸಾಧು ಉತ್ತರಾ ಸಾಧು, ಯಾವುದೇ ದ್ವೇಷ ಹೊಂದಿಲ್ಲದೆ ನಿನಗೆ ಹಾನಿ ಮಾಡಿದವರ ಮೇಲೆಯೇ ಮೈತ್ರಿಯಿಂದ ಜಯಿಸಿರುವ, ನಿನ್ನ ಸಹಾಯ ದಾನಗಳಿಂದ ಸ್ವಾರ್ಥದಿಂದಿರುವವರ ಮೇಲೆ ಜಯಿಸಿರುವೆ. ಸತ್ಯಕ್ರಿಯೆಯನ್ನು ಆಚರಿಸುತ್ತ ಸತ್ಯವನ್ನೇ ನುಡಿದು ಸುಳ್ಳುಗಾರರನ್ನು ಜಯಿಸಿರುವೆ ಎಂದು ಹೇಳಿ ಈ ಗಾಥೆಯನ್ನು ನುಡಿದರು.

ಅಕ್ರೋಧದಿಂದ ಕ್ರೋಧವನ್ನು ಜಯಿಸು,

ಅಸಾಧುವಾದುದನ್ನು (ಕೆಟ್ಟದ್ದನ್ನು) ಒಳ್ಳೆಯತನದಿಂದ ಜಯಿಸು,

ಜಯಿಸು ಜಿಪುಣನನ್ನು ದಾನದಿಂದಲೇ, 

ಸತ್ಯದಿಂದಲೇ ಸುಳ್ಳುಗಾರರನ್ನು ಜಯಿಸು. (223)

ನಂತರ ಉತ್ತರಾಳು ಈ ಘಟನೆ ನಡೆದಿರುವಾಗಲೇ ಕ್ಷಮಿಸಿದ್ದಳು. ಆದರೆ ಈಗ ಭಗವಾನರ ಸಮ್ಮುಖದಲ್ಲಿ ಭಗವಾನರ ಆದೇಶದಂತೆ ಮೌಖಿಕವಾಗಿಯು ಕ್ಷಮಿಸಿದಳು. ನಂತರ ಭಗವಾನರು 4 ಆರ್ಯಸತ್ಯಗಳನ್ನು ಬೋಧಿಸಿದರು.  ಬೋಧನೆಯ ಅಂತ್ಯದಲ್ಲಿ ಉತ್ತರಾಳು ಸಕದಾಗಾಮಿಯಾದಳು. ಹಾಗೂ ಉತ್ತರಾಳ ಪತಿ, ಅತ್ತೆ, ಮಾವ, ಸಿರಿಮಾ ಹಾಗೂ ಆಕೆಯ ಸಂಗಡವಿದ್ದಂತಹ 500 ವಾರಂಗನೆಯರು ಸಹಾ ಸೋತಪನ್ನರಾದರು.

ನಂತರ ಕಾಲನಂತರ ಉತ್ತರಾಳು ತೀರಿಹೋಗಿ ತಾವತಿಂಸ ದೇವಲೋಕದಲ್ಲಿ ಉಗಮಿಸಿದಳು.

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಉತ್ತರಾಳು ದೇವತೆಯಾಗಿರುವುದನ್ನು ಕಂಡು ಆಕೆಯನ್ನು ಮಾತನಾಡಿಸಿದರು ಹಾಗೂ ಆಕೆಯ ವೈಭೋಗವನ್ನು ಕಂಡು ಆಕೆಯ ಉನ್ನತಮಯ ಸ್ಥಿತಿಗೆ ಕಾರಣ ಕೇಳಿದರು ಆಗ ಆಕೆಯು ಸ್ವಾರ್ಥವಿಲ್ಲದಿರುವಿಕೆ, ಪತಿ ಸೇವೆ, ಕೋಪರಹಿತತೆ, ಶೀಲಪಾಲನೆ, ಉಪೋಸಥ, ದಾನ, ತಿಸರಣುವಿಗೆ ಶರಣು ಹೋಗಿರುವಿಕೆ, ಮೆತ್ತ ಹಾಗೂ ಆರ್ಯಸತ್ಯಗಳ ಪಾಲನೆಯೇ ಕಾರಣವೆಂದಳು.

ರಾಜಗೃಹದಲ್ಲಿ ಸಿರಿಮಾಳು ಭಗವಾನರ ಬೋಧನೆಯನ್ನು ಆಲಿಸಿ  ಸೋತಪನ್ನಳಾದ ಮೇಲೆ ಆಕೆಯು ತನ್ನ ಹಿಂದಿನ ಅಸಹ್ಯಕರ ವೃತ್ತಿಯನ್ನು ತೊರೆದಳು. ನಂತರ ಆಕೆಯೂ ಸಹ ಭಿಕ್ಷುಗಳಿಗೆ ಆಹಾರ ನೀಡುತ್ತಿದ್ದಳು. ಈಕೆಯ ಖ್ಯಾತಿಯ ಬಗ್ಗೆ ಕೇಳಿ ಒಬ್ಬ ಯುವಕ ಭಿಕ್ಷು ಮೋಹಗೊಂಡನು. ಮತ್ತು ಆಕೆಯನ್ನು ಕಾಣಲು ಹೋದನು. ಆಗ ಆಕೆ ರೋಗದಿಂದ ಕೂಡಿದ್ದು. ಆದರೂ ಸಹ ಭಿಕ್ಷುಗಳಿಗೆ ವಂದಿಸಿ ಆಹಾರ ನೀಡಿ ಹೊರಟಳು. ಯುವಕ ಭಿಕ್ಷುವು ಹೀಗೆ ಯೋಚಿಸಿದನು ರೋಗದಿಂದ ಇರುವಾಗಲೇ ಹೀಗಿರಬೇಕಾದರೆ ಚೆನ್ನಾಗಿರುವಾಗ ಇನ್ನೆಷ್ಟು ಸುಂದರಳಾಗಿ ಇದ್ದಿರಬಹುದು ಎಂದು ಯೋಚಿಸಿ ಮತ್ತಷ್ಟು ರಾಗಾಸಕ್ತನಾದನು.

ಆ ರಾತ್ರಿಯೇ ಆಕೆಯು ಸತ್ತುಹೋದಳು. ಈ ವಿಷಯವನ್ನು ರಾಜ ಬಿಂಬಸಾರನು ಭಗವಾನರಲ್ಲಿಗೆ ಬಂದು ತಿಳಿಸಿದನು. ಭಗವಾನರು ಸತ್ಯದರ್ಶನ ಮಾಡಿಸುವುದಕ್ಕಾಗಿ, ಬಿಂಬಸಾರನಿಗೆ 3 ದಿನಗಳ ಕಾಲ ಆಕೆಯ ಶವವನ್ನು ಸಂಸ್ಕಾರ ಮಾಡದಿರುವಂತೆ ಬುದ್ಧಿವಾದ ನೀಡಿದರು. 4ನೆಯ ದಿನ ಆಕೆಯ ಶರೀರವು ಬಣ್ಣಗೆಟ್ಟು ಊದಿ, ಹುಳುಗಳು ಹೊರಬರಲಾರಂಭಿಸಿತು. ಆಗ ರಾಜನು ಸಿರಿಮಾಳನ್ನು 1000 ರೂ.ಗೆ ಮಾರಾಟ ಘೋಷಿಸಿ ಯಾರು ಬೇಕಾದರೂ ಪಡೆಯಬಹುದೆಂದು ಡಂಗೂರ ಸಾರಿದನು. ಆದರೆ ಯಾರೂ ಬರಲಿಲ್ಲ. ಕೊನೆಗೆ ಪುಕ್ಕಟೆಯಾಗಿ ಆಕೆ ಶವ ಸಿಗುವುದೆಂದು ಡಂಗೂರ ಸಾರಿದನು. ಯಾರಿಗೂ ಸಹ ಆಕೆಯ ಶರೀರ ಬೇಕಾಗಿರಲಿಲ್ಲ. ಎಲ್ಲರೂ ಆಕೆ ಬದುಕಿದ್ದಾಗ ಎಷ್ಟು ಆಸೆ ಪಡುತ್ತಿದ್ದರೋ ಸತ್ತಾಗ ಅಷ್ಟೇ ಅಸಹ್ಯಪಡುತ್ತಿದ್ದರು.

ಯುವಕ ಭಿಕ್ಷುವಿಗೆ ಸಿರಿಮಾ ಸತ್ತಳೆಂದು ಇನ್ನೂ ತಿಳಿದಿರಲಿಲ್ಲ. ಬುದ್ಧರು ಮತ್ತು ಭಿಕ್ಷುಗಳು ಸಿರಿಮಾಳನ್ನು ಕಾಣಲು ಹೋಗುತ್ತಿದ್ದಾರೆಂದು ಆತನು ಸಂತೋಷದಿಂದ ಅವರೊಂದಿಗೆ ಹೋದನು. 

ಆಗ ಭಗವಾನರು ಆಕೆಯ ಶವವನ್ನು ತೋರಿಸಿ ಭಿಕ್ಷುಗಳೊಂದಿಗೆ ಹೀಗೆ ಹೇಳಿದರು: ಭಿಕ್ಷುಗಳೇ ನೋಡಿ, ಆಕೆ ಜೀವಂತವಾಗಿದ್ದಾಗ ಆಕೆಯನ್ನು ಪಡೆಯಲು ಸಹಸ್ರ ಸಹಸ್ರ ರೂಪಾಯಿಗಳನ್ನು ಸುರಿಯಲು ಸಿದ್ಧರಾದವರು ಈಗ ಪುಕ್ಕಟೆಯಾಗಿ ಪಡೆಯಲು ಸಿದ್ಧವಿಲ್ಲ. ಏಕೆಂದರೆ ಶರೀರವು ಅನಿತ್ಯವಾದುದು. ಕೊಳೆಯುವಂತಹದು. ಅಶುಭವು, ಮರಣದಲ್ಲಿ ಅಂತ್ಯವಾಗುವಂತಹುದು. 

ಚಿತ್ತಾಕರ್ಷವಾದ ಈ ಸುಂದರ ಶರೀರವನ್ನು ನೋಡಿ, 

ನೋಡಿ ಈ ಹುಣ್ಣುಗಳ ರಾಶಿ, ಅಸಹ್ಯತೆಯ ಗುಡ್ಡೆ, ರೋಗಗ್ರಸ್ತವು, 

ದ್ರುವವಲ್ಲದ್ದು, ಸ್ಥಿರವಲ್ಲದ ಈ ದೇಹವನ್ನು ಗಮನಿಸಿ. (147)

ಈ ಸುಂದರವಾದ ಶರೀರವನ್ನು ಗಮನಿಸಿ, ಹುಣ್ಣುಗಳ ರಾಶಿ, ಅಸಹ್ಯತೆ ಗುಡ್ಡೆ, ರೋಗಗ್ರಸ್ತವು, ದ್ರುವವಲ್ಲದ, ಸ್ಥಿರವಲ್ಲದ ದೇಹವಿದು.  ನಂತರ ಹಾಗೆ ಬೋಧನೆಯನ್ನು ಮುಂದುವರೆಸಿದರು. ನಂತರ ಬೋದನೆಯ ಅಂತ್ಯದಲ್ಲಿ 84000 ಮಾನವರು ಧಮ್ಮವನ್ನು ಅರಿತರು. ಹಾಗೂ ಇದನ್ನು ಕೇಳಿದಾಗ, ನೋಡಿದಾಗ ಆ ಯುವಕ ಭಿಕ್ಷುವು ಆಸಕ್ತಿಗಳನ್ನು ತೊರೆದು ಸ್ಥಿರಚಿತ್ತನಾದನು. ಹಾಗೂ  ಆತನು ಅರಹಂತನಾದನು.ಸಿರಿಮಾಳು ಸಹಾ ಸಾವಿನ ನಂತರ ತಾವತಿಂಸ ದೇವಲೋಕದಲ್ಲಿ ಉಗಮಿಸಿದಳು.

5.9.3 ಸಾಲಾ ಹೂಗಳ ಸಮರ್ಪಣೆ 

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಕೆಂಪು ಸ್ಫಟಿಕದ ವಿಮಾನವನ್ನು ನೋಡಿದರು. ಅದರ ಮುಂದೆ ಸಾಲವೃಕ್ಷಗಳು ಹಾಗೂ ಅಲ್ಲಿನ ನೆಲವು ಸ್ವರ್ಣದ್ದಾಗಿತ್ತು.ಆಗ ಅಲ್ಲಿ ವಾಸಿಸುತ್ತಿದ್ದಂತಹ ದೇವತೆಗೆ ಮೊಗ್ಗಾಲಾನರು ಮಾತಾನಾಡಿಸಿ ಆಕೆಯ ಈ ವೈಭವದ ಕಾರಣವನ್ನು ಕೇಳಿದರು. ಆಗ ಆಕೆಯು ಈ ರೀತಿಯಲ್ಲಿ ಉತ್ತರಿಸಿದಳು. ನಾನು ಹಿಂದಿನ ಜನ್ಮದಲ್ಲಿ ಮಾನವಳಾಗಿದ್ದಾಗ ಗುಲಾಮರ ಹುಡುಗಿಯಾಗಿದ್ದೆನು ಒಮ್ಮೆ  ಭಗವಾನರು ಕುಳಿತಿರುವಾಗ ಶ್ರದ್ಧೆಯಿಂದ ಸಾಲಾ ವೃಕ್ಷಗಳ ಹೂಗಳನ್ನು ಅವರ ಮೇಲೆ ಹಾಕಿದೆನು. ಹಾಗೇಯೇ ಸಾಲಾ ವೃಕ್ಷದಿಂದಾದ ಹಾರವನ್ನು ಭಗವಾನರಿಗೆ ಸಮಪರ್ಿಸಿದೆನು. ಇದರಿಂದ ಭಗವಾನರು ನನಗೆ ಪ್ರಶಂಸಿಸಿದರು ಅದರ ಪರಿಣಾಮವೇ ಈ ಎಲ್ಲ ವೈಭೋಗ  ಎಂದು ಆಕೆಯು ನುಡಿದಳು.

5.9.4 ಔಷಧಿಯ ಪುಣ್ಯ ಫಲ

   ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಅಲ್ಲಿ ತೇಜಸ್ವಿಯಾದ ಎಲ್ಲಾ ಬಗೆಯ ವೈಭವಗಳನ್ನು ಹೊಂದಿದ್ದಂತಹ ದೇವತೆಯನ್ನು ನೋಡಿದರು ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ಹೀಗೆ ಉತ್ತರಿಸಿದಳು. 

  ನಾನು ಅಂದಕೋವಿಂದ ನಗರದಲ್ಲಿದ್ದಾಗ ವೈದ್ಯರ ಮಗಳಾಗಿದ್ದೆನು.ಅಲ್ಲಿಗೆ ಪೂಜ್ಯ ಆನಂದರು ಗಂಜಿಗಾಗಿ ಬಂದಿದ್ದರು. ಅವರು ಭಗವಾನರಿಗೆ ವಾತದೋಷ ಉಂಟಾಗಿದ್ದರಿಂದಾಗಿ ಔಷಧಿಗೆಂದು ಬಂದಿದ್ದರು.ಆ ಪಿಂಡಪಾತ್ರೆಯನ್ನು ಗಮನಿಸಿ ಖಂಡಿತವಾಗಿ ಅದು ಭಗವಾನರದ್ದೆ ಎಂದು ಭಾಸವಾಗಿ ಅವರಿಗೆ  ಜುಜುಬಿಯಿಂದಾದ ಗಂಜಿಯಲ್ಲಿ ಎಣ್ಣೆಯನ್ನು ಹಾಗೂ ಸಂಬಾರವಸ್ತುಗಳಾದ ಕರಿಮೆಣಸು, ಶುಂಠಿ ಜೊತೆಗೆ ಲಾಮಜ್ಜಕವನ್ನು ಬೆರಸಿ ಸ್ವಾದಿಷ್ಟಯುತವಾದ ಆಹಾರ ನೀಡಿದೆನು.. ನಂತರ ಕಾರಾಣಾಂತರವಾಗಿ ತೀರಿಹೋಗಿ ಇಲ್ಲಿ ಈ ತಾವತಿಂಸ ಲೋಕದಲ್ಲಿ ಈ ರೀತಿಯ ವೈಭವಯುತವಾಗಿದ್ದೇನೆ. ಎಂದಳು.

5.9.5  ಅಂಬ ವಿಮಾನ : 

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಅಲ್ಲಿ ತೇಜಸ್ವಿಯಾದ ಎಲ್ಲಾ ಬಗೆಯ ವೈಭವಗಳನ್ನು ಹೊಂದಿದ್ದಂತಹ ದೇವತೆಯನ್ನು ನೋಡಿದರು ವಿಶೇಷವಾಗಿ ಆಕೆಯ ವಿಮಾನದಲ್ಲಿ ಮಾವಿನ ವೃಕ್ಷಗಳು ಸಹಾ ಇದ್ದವು. ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ಹೀಗೆ ಉತ್ತರಿಸಿದಳು. 

ನಾನೂ ಮಾವಿನ ವೃಕ್ಷಗಳ ಸಹಿತ ಒಂದು ವಿಹಾರವನ್ನು ಕಟ್ಟಿ ಅದನ್ನು ಭಗವಾನರಿಗೆ ಸಮಪರ್ಿಸಿದೆನು. ಅದರ ಫಲಿತವೇ ಈ ಎಲ್ಲಾ ವೈಭವ. 

5.9.6  ವಂದನಾ ವಿಮಾನ :

ಒಮ್ಮೆ ಮೊಗ್ಗಲಾನರು ತಾವತಿಂಸ ದೇವಲೋಕಕ್ಕೆ ಹೋಗಿದ್ದಾಗ ಅಲ್ಲಿ ತೇಜಸ್ವಿಯಾದ ಎಲ್ಲಾ ಬಗೆಯ ವೈಭವಗಳನ್ನು ಹೊಂದಿದ್ದಂತಹ ದೇವತೆಯನ್ನು ನೋಡಿದರು ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ಹೀಗೆ ಉತ್ತರಿಸಿದಳು. ಒಮ್ಮೆ ಭಗವಾನರು ಶ್ರಾವಸ್ಥಿಗೆ ಹೋಗುವ ದಾರಿಯಲ್ಲಿ ಹಳ್ಳಿಯಿಂದ ಹಾದು ಹೋಗುತ್ತಿರುವಾಗ ಅವರನ್ನು ಕಂಡು ಭಕ್ತಿಯಿಂದ ವಂದಿಸಿದೆನು. ಅಪಾರ ಶ್ರದ್ಧೆಯಿಂದ ಕೂಡಿದೆನು. ಆ ಆನಂದದಿಂದಲೇ ಇದ್ದೆನು. ಕಾಲಾನಂತರ ಕಾರಣಾಂತರದಿಂದ ಮರಣ ಹೊಂದಿದೆನು ನಂತರ ಆ ಬುದ್ಧವಂದನೆಯ ಪರಿಣಾಮದಿಂದಲೇ ಹೀಗೆ ಇಲ್ಲಿ ಇಂತಹ ವೈಭವದಿಂದ ಇರುವೆನು.

5.9.7 ರಜ್ಝುಮಾಲ ವಿಮಾನ :  

ಬುದ್ಧಭಗವಾನರು ತಮ್ಮ ಅಸಾಧಾರಣವಾದ ಜ್ಞಾನದಿಂದ ಜನರಿಗೆ ಸಹಾಯ ಮಾಡುತ್ತಿದ್ದರು. ಜನರು ತಮ್ಮ ಅಜ್ಞಾನದ ಕಾರ್ಯಗಳಿಂದ ಮತ್ತೆ ಹೆಚ್ಚು ದುಃಖ ಅನುಭವಿಸುವುದನ್ನು ತಡೆಯಲು ಅವರಿಗೆ ಸಮ್ಮಾದೃಷ್ಟಿ ನೀಡುತ್ತಿದ್ದರು.

ಅಂತಹುದೇ ಈ ಘಟನೆ ರಜ್ಜುಮಾಲಾಳದು. ಆಕೆಯು ಗಯಾ ಸಮೀಪದ ಹಳ್ಳಿಯಲ್ಲಿ ಗುಲಾಮಳಾಗಿದ್ದಳು. ಆಕೆಯ ಒಡತಿಗೆ ರಜ್ಜುಮಾಲಾಳೆಂದರೆ ಅಸಹ್ಯವಾಗುತ್ತಿತ್ತು.  ಅದ್ದರಿಂದ ಆಕೆಯು ಸದಾ ರಜ್ಜುಮಾಲಾಳೊಂದಿಗೆ ಕೆಟ್ಟ ರೀತಿಯಲ್ಲಿ ವತರ್ಿಸುತ್ತಿದ್ದಳು.  ಕೆಲವೊಮ್ಮೆ ಆಕೆಯ ತಲೆಗೂದಲನ್ನು ಎಳೆದು ಹಾಕಿದ್ದುಂಟು.  ಒಂದುದಿನ ರಜ್ಜುಮಾಲಾಳು ತಲೆ ಬೋಡಿಸಿಕೊಂಡು ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದ್ದುಂಟು. ಆದರೆ ಆಕೆಯ ಕ್ರೂರಿ ಒಡತಿ ಆಕೆಯ ಕತ್ತಿನ ಸುತ್ತಲು ಹಗ್ಗವನ್ನು ಹಾಕಿ ಎಳೆದಾಡುತ್ತಿದ್ದಳು. 

ರಜ್ಜುಮಾಲಾಳಿಗೆ ಜೀವಿಸುವುದೇ ಅಸಾಧ್ಯವಾಯಿತು ಮತ್ತು ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದಳು. ಆದರೆ ಆಕೆಯ ಹಳ್ಳಿಯ ಮಾರ್ಗದಲ್ಲಿ ಬುದ್ಧರು ಆಕೆಗಾಗಿ ಕಾಯುತ್ತಿರುವುದನ್ನು ಕಂಡಳು. ಪ್ರಜ್ಞಾನಾಥ ತಥಾಗತರು ಆದ ಬುದ್ಧರು ಆಕೆಗೆ ಧಮ್ಮವನ್ನು ಬೋಧಿಸಿದರು. ಧಮ್ಮವನ್ನು ಪರಿಶುದ್ಧವಾಗಿ ಹೀರಿಕೊಂಡು ಆಕೆಯು ಸೋತಪನ್ನಳಾದಳು. ಆಕೆ ಲೋಕ ಕರುಣಿಕರ ಹಿಂಬಾಲಕಳಾದಳು. 

ಆಕೆ ಹಿಂತಿರುಗಿ ತನ್ನ ಒಡತಿಗೆ ಏನಾಯಿತೆಂದು ಹೇಳಿದಳು. ಆಕೆಯ ಒಡತಿ ಈ ವಿಷಯ ಕೇಳಿ ಬುದ್ಧರನ್ನು ದಶರ್ಿಸಿ ಅವರ ಬೋಧನೆಯನ್ನು ಆಲಿಸಿದಳು. ನಂತರ ಆಕೆಯೂ ಸಹ ಸೋತಪನ್ನಳಾಗಿ ವಿಧ್ಯಾಚರಣ ಸಂಪನ್ನರ ಹಿಂಬಾಲಕಳಾದಳು.

ನಂತರ ಬುದ್ಧಭಗವಾನರು ಅವರಿಗೆ ಹಿಂದಿನ ಜನ್ಮಗಳ ವೃತ್ತಾಂತವನ್ನು ತಿಳಿಸಿದರು. ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಒಡತಿಯಾಗಿದ್ದಳು. ಈಗಿರುವ ಒಡತಿ ಆಗ ಸೇವಕಿಯಾಗಿದ್ದಳು (ಗುಲಾಮಳು). ಆ ಹಿಂದಿನ ಜನ್ಮದಲ್ಲಿ ರಜ್ಜುಮಾಲಾಳು ಆ ಗುಲಾಮಳಿಗೆ ಬಹಳ ಹಿಂಸೆ ನೀಡಿದ್ದಳು. ಆ ಸೇವಕಿಯು ಸೇಡಿಗಾಗಿ ಪ್ರತಿಜ್ಞೆ ಮಾಡಿದ್ದಳು. ಫಲವಾಗಿ ಈಗ ಸೇವಕಿಯು ಒಡತಿಯಾಗಿ, ಒಡತಿ ಸೇವಕಿಯಾಗಿರುವಳು. ಕೊನೆಗೆ ಬುದ್ಧಭಗವಾನರು ಕರುಣಾಶಕ್ತಿಯಿಂದ ಅವರಿಬ್ಬರು ಮತ್ತೆ ಪಾಪ ಮಾಡುವುದು ತಪ್ಪಿತು. ದ್ವೇಷಿಸುವುದು ತಪ್ಪಿತು. ಅಷ್ಟೇ ಅಲ್ಲದೆ ಈಗ ಬಾಂಧವ್ಯದಿಂದ ಇರುವುದು ಆಯಿತು.

ಕಾಲನಂತರ ರಜ್ಜುಮಾಲಳು ನಿಧನಳಾದಳು ನಂತರ ಆಕೆಯು ತಾವತಿಂಸ  ದೇವಲೋಕದಲ್ಲಿ ಉಗಮಿಸಿದಳು. ಅಲ್ಲಿ ಆಕೆಯು ಭವ್ಯವಾದ ವಿಮಾನದಲ್ಲಿ ವಾಸಿಸುತ್ತಿದ್ದಳು ಆಕೆಯನ್ನು ಕಂಡಂತಹ ಮೊಗ್ಗಲಾನರು ಆಕೆಯ ಬಗ್ಗೆ ಹಾಗೂ ಆಕೆಯ ಪುಣ್ಯಾಚರಣೆಯ ಬಗ್ಗೆ ವಿಚಾರಿಸಿದರು. ಆಗ ಆಕೆಯು ತನ್ನ ಪೂರ್ವಜನ್ಮದ ಕಥೆಯನ್ನು ಹೇಳಿದಳು ಹಾಗೂ ಭಗವಾನರಿಗೆ ಶರಣು, ದಾನ, ಶೀಲ, ಕೋಪರಹಿತತೆ ಇತ್ಯಾದಿ ಪುಣ್ಯಗಳ ಫಲಿತಾಂಶವೇ ಈ ವೈಭವವೆಂದಳು.

5.9.8  ಬ್ರಹ್ಮಲೋಕಕ್ಕೆ ಯಾನ

ಒಮ್ಮೆ ಭಗವಾನರು ಶ್ರಾವಸ್ಥಿಯ ಜೇತವನದ ಆನಾಥಪಿಂಡಿಕನ ವಿಹಾರದಲ್ಲಿದ್ದರು.ಆಗ ಬ್ರಹ್ಮನೊಬ್ಬನಿಗೆ ಈ ರೀತಿಯ ದೃಷ್ಟಿಕೋನವು ಉಂಟಾಯಿತು. ಇಲ್ಲಿಗೆ ಯಾವುದೇ ಬ್ರಾಹ್ಮಣನಾಗಲಿ ಅಥವಾ ಸಮಣನಾಗಲಿ ಯಾರೊಬ್ಬ ಭಿಕ್ಖುವು ಸಹಾ ಇಲ್ಲಿಗೆ ಬರಲಾರನು. ಆಗ ಭಗವಾನರಿಗೆ ಆತನಲ್ಲಿ ಉಂಟಾದ ದಿಟ್ಟಿಯು ಮನಸ್ಸನ್ನು ಆತನ ಬಳಿಗೆ ಹರಿಸಿದಾಗ ಅರಿವಿಗೆ ಬಂದಿತು. ತಕ್ಷಣ ಭಗವಾನರು ಅಲ್ಲಿಂದ ಅದೃಷ್ಯರಾಗಿ ಆ ಬ್ರಹ್ಮನ ಬಳಿಯಲ್ಲಿ ಪ್ರತ್ಯಕ್ಷರಾದರು. ಆಗ ಭಗವಾನರು ತೇಜೋ ಧಾತುವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

  ಅದೇ ಸಮಯದಲ್ಲಿ ಮೊಗ್ಗಲಾನರು ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಮೊಗ್ಗಲಾನರು ಸಹಾ ಮರುಕ್ಷಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ಪೂರ್ವದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮೊಗ್ಗಲಾನರು ತೇಜೋ ಧಾತುವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

ಅದೇ ಸಮಯದಲ್ಲಿ ಮಹಾಕಸ್ಸಪರವರು ಸಹಾ ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಮಹಾಕಸ್ಸಪರವರು ಸಹಾ ಮರುಕ್ಞಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ದಕ್ಷಿಣ ದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮಹಾಕಸ್ಸಪರವರುತೇಜೋ ಧಾತುವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

ಅದೇ ಸಮಯದಲ್ಲಿ ಅನುರುದ್ಧರವರು  ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಅನುರುದ್ಧರವರು  ಸಹಾ ಮರುಕ್ಷಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ಉತ್ತರ ದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮಹಾಕಸ್ಸಪರವರು ತೇಜೋ ಧಾತವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು.

ಅದೇ ಸಮಯದಲ್ಲಿ ಮಹಾಕಪ್ಪಿನರವರು   ಭಗವಾನರು ಈಗ ಎಲ್ಲಿಹರು ಎಂದು ಗಮನ ಹರಿಸಿದಾಗ ಭಗವಾನರು ಬ್ರಹ್ಮನ ಮೇಲೆ ಪದ್ಮಾಸಿನರಾಗಿ ಆಕಾಶದಲ್ಲೇ ಕುಳಿತಿರುವುದನ್ನು ಕಂಡರು. ತಕ್ಷಣ ಮಹಾಕಪ್ಪಿನರವರು  ಸಹಾ ಮರುಕ್ಷಣದಲ್ಲೇ ಅಲ್ಲಿಂದ ಮರೆಯಾಗಿ ಅವರು ಸಹಾ ಬ್ರಹ್ಮನ ಬಳಿಯಲ್ಲಿ ಪಶ್ಚಿಮ ದಿಕ್ಕಿನಲ್ಲಿ ಪ್ರತ್ಯಕ್ಷರಾದರು. ಆಗ ಮಹಾಕಸ್ಸಪರವರು ತೇಜೋ ಧಾತವಿನಲ್ಲಿ ಗಮನಕೊಟ್ಟು ಇದನ್ನು ಮಾಡಿದರು. 

ಇದರಿಂದಾಗಿ ಆ ಬ್ರಹ್ಮನಿಗೆ ತನ್ನ ದೃಷ್ಟಿಕೋನವು ತಪ್ಪಾದುದು ಎಂದು ಅರಿವಾಯಿತು. ಏಕೆಂದರೆ ಬುದ್ಧರು ಮಾತ್ರವಲ್ಲದೆ ಅವರ ಶಿಷ್ಯರು ಸಹಾ ಆತನ ಮನಸ್ಸನ್ನು ಓದಿದುದಲ್ಲದೇ ಆತನಿಗಿಂತ ಉನ್ನತ ಆಸನದಲ್ಲಿ ಕುಳಿತರು .ಅವರು ಪ್ರತ್ಯಕ್ಷ ಹಾಗೂ ಅದೃಷ್ಯರಾಗುವ ವೇಗವು ಸಹಾ ಆಶ್ಚರ್ಯ ತಂದಿತ್ತು. ಅದರೂ ಆತನಲ್ಲಿ ತಾನು ನಿತ್ಯ ಹಾಗೂ ನಿರಂತರ ಎಂಬ ದೃಷ್ಟಿಕೋನವು ಇನ್ನೂ ಉಳಿದಿತ್ತು. ನಂತರ ಬುದ್ಧರ ಬೋಧನೆಯಿಂದ ಅದು ಸಹಾ ದೂರಾಯಿತು.

5.10  ಸರ್ವವನ್ನು ಕಂಪನ ಹಾಗೂ ಚಲಿಸುವಂತೆ ಮಾಡುವವರು 

(ದೂರಸ್ಥಚಲನೆಕಾರ)

5.10.1 ಮಿಗಾರ ಭವನದ ಕಂಪನ 

ಮೊಗ್ಗಲಾನರಿಗೆ ಸರ್ವಧಾತುಗಳ ಮೇಲೆ ಹಾಗೂ ಸರ್ವ ವಸ್ತುಗಳ ಮೇಲೆ ಹಾಗೂ ಅವುಗಳ ಸ್ಥಿತಿಗಳ ಮೇಲೆ ಸವರ್ೊಚ್ಛ ಪ್ರಭುತ್ವವಿತ್ತು. ಒಮ್ಮೆ ಕೆಲ ಭಿಕ್ಖುಗಳು ವಿಹಾರದಲ್ಲಿದ್ದಾಗ  ನಿರ್ಲಕ್ಷ ಹೊಂದಿ ಪಾ ್ರಪಂಚಿಕ ವಿಷಯಗಳಲ್ಲಿ ಅತಿಯಾದ ಅಸಕ್ತಿ ಮಾತುಕತೆಗಳಲ್ಲಿ ತೊಡಗಿದ್ದರು . ಹಾಸ್ಯ ತಮಾಷೆೆಗಳಲ್ಲಿ ತೊಡಗಿದ್ದರು. ಆಗ ಭಗವಾನರು  ಮೊಗ್ಗಲಾನರಿಗೆ ಅವರನ್ನು ಸರಿಹಾದಿಗೆ ತರುವಂತೆ ನುಡಿದಾಗ ಮೊಗ್ಗಲಾನರು ತಮ್ಮ ಹೆಬರ್ಬಳಿನಿಂದ ಭೂಮಿಯನ್ನು ಒತ್ತಿದಾಗ ಆ ಭಿಕ್ಖುಗಳು ವಾಸವಿದ್ದ ಮಿಗಾರ ಭವನವೇ ಭೂಕಂಪನವಾದಂತೆ ಅಲುಗಾಡಿತು . ಆಗ ಭಿಕ್ಕೂಗಳೆಲ್ಲಾ ಭಯಭೀತರಾಗಿ ಹೊರಗೇ ಓಡಿ ಬಂದರು. ನಂತರ ತಮ್ಮ ಕರ್ತವ್ಯವನ್ನು ನೆನೆಸಿಕೊಂಡು ಸರಿಹಾದಿಗೆ ಬಂದರು. ಆಗ ಅವರಿಗೆ ಈ ಅತಿಮಾನಸ ಶಕ್ತಿಯ ಬಗೆಗೆ ಆಸಕ್ತಿ ಬಂದು ಭಗವಾನರಲ್ಲಿ ಕೇಳಿದಾಗ ಭಗವಾನರು ಅವರಿಗೆ ಅತಿಮಾನಸ ಶಕ್ತಿಗಳಿಗೆ ಆಧಾರವಾಗಿರುವ ಇದ್ಧಿಪಾದಗಳ ಬಗ್ಗೆ ಬೋಧನೆ ಮಾಡಿದರು (ಸಂ.ನಿ.51.14: ಜಾ299)

5.10.2 ವೈಜಯಂತ ಭವನದ ಕಂಪನ

ಒಮ್ಮೆ ಮೊಗ್ಗಲಾನರು ತಾವತಿಂಸ ಸ್ವರ್ಗಕ್ಕೆ ಹೋಗಿರುವಾಗ ದೇವೆಂದ್ರ ಸಕ್ಕನು ಧಮ್ಮವನ್ನು ಮರೆತು ಕೇವಲ ಸ್ವಗರ್ೀಯ ಸುಖಗಳಲ್ಲಿ ತಲ್ಲಿನನಾಗಿರುವಂತೆ ಕಂಡು ಬಂದಿತು. ಆಗ ಮೊಗ್ಗಲಾನರು ಇಂದ್ರನನ್ನೆ ಸರಿಹಾದಿಗೆ ತರಲು ವೈಜಯಂತ ಭವನವನ್ನೇ ತಮ್ಮ ಹೆಬ್ಬೆರಳಿನಿಂದ ಅದುಮಿ ನಡುಗಿಸಿದರು. ಈ ಘಟನೆಯಿಂದ ವಿಚಲಿತನಾದ ಸಕ್ಕರು ಅಹಂಕಾರದಿಂದ ವಿಮುಖರಾಗಿ ,ಬಹು ದಿನದ ಹಿಂದೆ ಆಲಿಸಿದ್ದಂತಹ ದುಃಖಕ್ಕೆ ಕಾರಣವಾದ ತೃಷ್ಣಕ್ಷಯದ ಬೋಧನೆಯನ್ನು ನೆನೆಪಿಸಿಕೊಂಡು ಮೊಗ್ಗಲಾನರಲ್ಲಿ ಕ್ಷಮೆ ಯಾಚಿಸಿದರು. ಮೊಗ್ಗಲಾನರು ಸಕ್ಕನಿಗೆ ಅದೇ ಬೋಧನೆಯನ್ನು ಪುನಃ ನೆನೆಪಿಸಲು ಹಾಗೂ ಪುನನಾರರ್ವತಿಸಲು ಕಾರಣವಿತ್ತು ಅವರು ಸಹಾ ಭಗವಾನರಿಂದ ಅದೇ ಸುತ್ತವನ್ನು ಆಲಿಸಿ ಅರಹಂತರಾಗಿದ್ದರು.. ಮೊಗ್ಗಲಾನರಿಗೆ ಆ ಸುತ್ತವು ಸಕ್ಕನ ಮೇಲೆ ಯಾವ ರೀತಿ ಪರಿಣಾಮ ಬೀರಿರಬಹುದು ಎಂಬ ಕುತೂಹಲವೂ ಇತ್ತು.

5.10.3 ಕ್ಷಾಮನಿವಾರಣೆಗೆ ಇದ್ದಿ ಶಕ್ತಿ

ಒಮ್ಮೆ ಭಗವಾನರು ಹಾಗೂ ಸಂಘವಿದ್ದ ಕಡೆಯಲ್ಲಿ ಬೀಕರ ಕ್ಷಾಮವಿತ್ತು, ಭಿಕ್ಖುಗಳಿಗೆ ಸಾಕಷ್ಟು ಆಹಾರ ಸಿಗುತ್ತಿರಲ್ಲಿಲ್ಲ. ಆಗ ಮೊಗ್ಗಲಾನರು ಭಗವಾನರಿಂದ ಈ ರೀತಿ ಅನುಮತಿ ಕೇಳಿದರು.  ಭಗವಾನ್ ಈ ಭೂಮಿಯ ಕೆಲ ಕೆಳಪದರುಗಳಲ್ಲಿ ಹೇರಳವಾದ ಆಹಾರವಿದೆ. ನಾನು ಆ ಪದರಗಳನ್ನು ಬುಡಮೇಲು ಮಾಡಲೇ, ಮೇಲ್ಬಾಗಕ್ಕೆ ತರಲೇ ,ಹಾಗೂ ಈ ಮೇಲ್ಭಾಗವನ್ನು ಕೆಳಗೆ ಹಾಕಲೇ ?

ಬೇಡ ಮೊಗ್ಗಲಾನ ಅದರಿಂದಾಗಿ ಅಪಾರ ಸಂಖ್ಯೆಯ ಜೀವಿಗಳಿಗೆ ಹಾನಿಯಾಗುವುದು. ಹೀಗೆ ಭಗವಾನರು ಅದಕ್ಕೆ ಅನುಮತಿ ನೀಡಲಿಲ್ಲ.

ಹಾಗಾದರೇ ಭಗವಾನ್ ನಾನು ಇದ್ಧಿಶಕ್ತಿಯಿಂದ  ಕ್ಷಾಮವಿಲ್ಲದ ಉತ್ತರ ಕುರು ರಾಜ್ಯಕ್ಕೆ ನೇರವಾಗಿ ರಸ್ತೆ ನಿಮರ್ಿಸಲೇ ? ಅದರಿಂದಾಗಿ ಭಿಕ್ಖುಗಳಿಗೆ ಸುಲಭವಾಗಿ ಆಹಾರ ಸಿಗುವಂತಾಗುವುದು.  ಅದರೇ ಭಗವಾನರು ಅದಕ್ಕೂ ಸಹಾ ನಿರಾಕರಿಸಿದರು. ಅದರೆ ಮುಂದೆ ಸ್ವಲ್ಪಕಾಲದಲ್ಲೇ ಕ್ಷಾಮ ದೂರಾಯಿತು. ಎಲ್ಲರೂ ಕ್ಷೇಮವಾಗಿ ಉಳಿದರು. ಅತಿಮಾನಸಶಕ್ತಿಯ ಅಗತ್ಯವಿಲ್ಲದೆಯೇ ಎಲ್ಲವೂ ಸರಿಹೋಯಿತು. ಬಹುಷಃ ಮೊಗ್ಗಲಾನರ ಸಲಹೆ ನಿರಾಕರಿಸಿದ ಏಕೈಕ ಘಟನೆ ಇದಾಗಿತ್ತು. (ವಿನಯ ಪಿಟಿಕ ,ಪಾರಾಜಿಕ1 , 2)

5.10.4  ಹಿಮಾಲಯದಿಂದ ಔಷಧಿ ರವಾನೆ

    ಒಮ್ಮೆ ಸಾರಿಪುತ್ತರು ಕಾಯಿಲೆ ಬಿದ್ದರು ಅವರ ಗುಣಮುಖಕ್ಕಾಗಿ ಹಿಮಾಲಯದ ಒಂದು ವಿಶಿಷ್ಟ ಕಮಲದ ದಂಟಿನ ಅಗತ್ಯವಿತ್ತು. ಆಗ ಮೊಗ್ಗಲಾನರು ಆ ದಂಟನ್ನು ತಾವು ಇದ್ದ ಕಡೆಯಿಂದಲೇ ಆ ಸ್ಥಾನದಿಂದ ಇಲ್ಲಿಗೆ ಬರುವಂತೆ ಸ್ಥಾನಪಲ್ಲಟಗೊಳಿಸಿದರು..  ಅದನ್ನು ಸಾರಿಪುತ್ತರಿಗೆ ನೀಡಿದರು. (ಮಹಾವಗ್ಗ 4.20)

5.10.5  ಆನಂದ ಬೋಧಿ ವೃಕ್ಷವನ್ನು ತಂದವರು

ಮಹಾಮೊಗ್ಗಲಾನರು ಮಹಾಬೋಧಿ ವೃಕ್ಷದ ಹಣ್ಣನ್ನು ತರಲು ಆಕಾಶ ಮಾರ್ಗದಿಂದ ಹೊರಟರು. ಹಾಗೂ ಅಲ್ಲಿ ದಂಡದಿಂದ ಹಣ್ಣನ್ನು ಬೀಳಿಸಿ ಅದನ್ನು ನೆಲಕ್ಕೆ ಬೀಳಿಸದೆ ಬಟ್ಟೆಯಿಂದ ಮುಚ್ಚಿಕೊಂಡು ತೆಗೆದುಕೊಂಡು ಬಂದರು. ಇಲ್ಲಿ ರಾಜರ ಅನುಮತಿಯಿಂದ ಜೇತವನದ ದ್ವಾರದ ಬಳಿಯಲ್ಲಿ ಗುಂಡಿಯನ್ನು ತೋಡಿದರು. ಅಲ್ಲಿನ ಮಣ್ಣಿಗೆ ಬಂಗಾರ ಪುಡಿಯನ್ನು ಹಾಗೂ ಸುಗಂಧಿತ ದ್ರವ್ಯಗಳನ್ನು ಬೆರೆಸಲಾಯಿತು. ಅಲ್ಲಿ ಸಮಸ್ತ ಗಣ್ಯರು ನೆರೆದಿದ್ದರು, ಬಂಗಾರದ ದೊಡ್ಡ ಪಾತ್ರೆಗೆ ಕೆಳಗೆ ಅಪಾರ ರಂದ್ರಗಳನ್ನು ಮಾಡಿಸಿ, ಅದಕ್ಕೆ ಸುಗಂದಿತ ಮಣ್ಣನ್ನು ಹಾಕಿ ಅದಕ್ಕೆ ಬೀಜ ಹಾಕಲು ರಾಜ ಪಸೇನದಿಯನ್ನು ಕೇಳಿಕೊಂಡರು ಅದರೆ ಸದಾ ರಾಜ್ಯವೂ ತನ್ನ ಅಧೀನದಲ್ಲಿ ಇರುವುದಿಲ್ಲ ಹೀಗಾಗಿ ಇದಕ್ಕೆ ಆನಾಥಪಿಂಡಿಕರೇ ಸೂಕ್ತರೆಂದು ರಾಜರು ಹೇಳಿದಾಗ ಅವರು ಒಪ್ಪಿದರು. 

ನಂತರ ಆ ಜೀಜವನ್ನು ಅದರಲ್ಲಿ ಹಾಕಿ ನಂತರ ಮಣ್ಣನ್ನು ಮುಚ್ಚಿದರು. ತಕ್ಷಣ ಅಲ್ಲಿ ಅದ್ಭುತವು ನಡೆಯಿತು. ಆ ಬೋಧಿವೃಕ್ಷವೂ ಆ ಕ್ಷಣವೇ ಬೆಳೆಯತೊಡಗಿತು. ಹಾಗೆಯೇ ಬೇಳೆಯುತ್ತ ಸುಮಾರು 50 ಕೈಗಳ ಎತ್ತರಕ್ಕೆ ಬೆಳೆಯಿತು. ಹಾಗೇಯೇ 50 ಕೈಗಳಷ್ಟು ಅಗಲದಷ್ಟು ಅದರ ಶಾಖೆಗಳು ಅಗಲವಾಯಿತು. ಅಲ್ಲಿ ಒಂದು ಬೃಹತ್ ವೃಕ್ಷದ ನಿಮರ್ಾಣವಾಗಿಬಿಟ್ಟಿತು. ಎಲ್ಲರೂ ಆಶ್ಚರ್ಯಗಳಿಂದ ಆನಂದಿತರಾದರು. ಆಗ ಪಸೇನದಿಯು ಆ ವೃಕ್ಷದ ಸುತ್ತಲೂ ಸ್ವರ್ಣದ ಮಿಶರ್ಿತ ಮಣ್ಣಿನಿಂದ ಸಮ ಮಾಡಿದನು. ಹಾಗೇಯೆ ಸ್ವರ್ಣದ ಹಾಗೂ ಬೆಳ್ಳಿಯ ಬಿಂದಿಗೆಗಳಲ್ಲಿ ನೀರು ಹಾಗೂ ಸುಗಂಧಿತ ದ್ರವ್ಯಗಳನ್ನು ವ್ಯವಸ್ಥೆ ಮಾಡಿದನು. ಅದರ ಸುತ್ತಲೂ ಭವ್ಯವಾದ ರತ್ನಮಯ ಅಂಗಣವನ್ನು ಹಾಗೆಯೇ ಅದಕ್ಕೆ 7 ಭವ್ಯವಾದ ರತ್ನಮಯ ದ್ವಾರಗಳನ್ನು ನಿಮರ್ಿಸಿದನು. ಅದನ್ನು ಅತ್ಯಂತ ಸುಂದರ ಹಾಗೂ ಪೂಜ್ಯನೀಯ ವಾತಾವರಣ ನಿಮರ್ಾಣ ಮಾಡಿದನು.

ಇದಾದ ನಂತರ ಆನಂದರು ಭಗವಾನರಲ್ಲಿಗೆ ಬಂದು ಬೋಧಿವೃಕ್ಷದ ಕೆಳಗೆ ಧ್ಯಾನ ಮಾಡಿದಂತೆ ಇಲ್ಲೂ ಸಹಾ ಮಾಡಿ ಎಂದು ಕೇಳಿಕೊಂಡರು. ಅದರೆ ಭಗವಾನರು ಗಯಾದಲ್ಲಿನ ಆ ಬೋಧಿವೃಕ್ಷದ ಸ್ಥಳದ ವಿನಃ ಬೇರೆ ಯಾವ ಸ್ಥಳವೂ ಆದನ್ನು ಸಹಿಸಲಾರದು ಎಂದು ನುಡಿದರು. ಆಗ ಆನಂದರು ಸರ್ವರ ಮಂಗಳಕ್ಕಾಗಿಯಾದರೂ ಈ ಸ್ಥಳದ ಭೂ ಸಾಮಾಥ್ರ್ಯಕ್ಕೆ ಅನುಸಾರವಾಗಿಯಾದರೂ ಈ ಸ್ಥಳದಲ್ಲಿ ಧ್ಯಾನಿಸಿ ಎಂದು ಕೇಳಿಕೊಂಡರು. ಆಗ ಭಗವಾನರು ಅದಕ್ಕೆ ಒಪ್ಪಿ ಅಲ್ಲಿ ಧ್ಯಾನಿಸಿದರು.

ಅಂದಿನಿಂದ ಆ ಸ್ಥಳಕ್ಕೆ ಆನಂದ ಬೋಧಿ ಎಂದು ಕರೆಯುತ್ತಾರೆ. ಈ ವೃಕ್ಷಕ್ಕೆ ಮಹಾಮೊಗ್ಗಲಾನರೇ ಬೀಜವನ್ನು ಆಕಾಶ ಮಾರ್ಗದಿಂದ ತಂದಿದ್ದರು. 


- ಂ0ಂ  

12. ಪರಿನಿಬ್ಬಾಣದ ನಂತರ

 12. ಪರಿನಿಬ್ಬಾಣದ ನಂತರ  12.1 ಉಕ್ಕಚೆಲಾ ಸುತ್ತ: ಆಗ ಭಗವಾನರು ವಜ್ಜಿಗಳ ರಾಜ್ಯದಲ್ಲಿ ವಿಹರಿಸುತ್ತಿದ್ದರು. ಗಂಗಾನದಿಯ ತೀರದ ಉಕ್ಕಚೆಲಾದಲ್ಲಿ ಇದ್ದರು. ಆಗಷ್ಟೇ ಸಾರ...